AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾ.. ನಿನ್ನನ್ನು ತಾಯಿ ಹತ್ರ ಕರ್ಕೊಂಡು  ಹೋಗ್ತೀನಿ; ನಿಷ್ಕಲ್ಮಶ ಮನಸ್ಸುಗಳ ಸುಂದರ ಬಾಂಧವ್ಯ

ಅಯೋಧ್ಯೆಯ ಸರಯೂ ನದಿ ತಟದಲ್ಲಿ  ಪುಟ್ಟ ಮಗುವೊಂದು, ಬೀದಿ ನಾಯಿ ಮರಿಯೊಂದಿಗೆ ಆಟವಾಡುತ್ತಾ, ಬಾ ನಾನು ನಿನ್ನನ್ನು ತಾಯಿಯ ಹತ್ರ ಕರ್ಕೊಂಡು ಹೋಗ್ತೀನಿ  ಎನ್ನುತ್ತಾ, ಆ ಬಾಲಕ  ಬಹಳ ಕಾಳಜಿಯಿಂದ  ತನ್ನ ಪುಟಾಣಿ ಕೈಗಳಿಂದ ನಾಯಿ ಮರಿಯನ್ನು ಪುಟ್ಟ ಮಗುವಿನಂತೆ ಎತ್ತಿಕೊಂಡು ಹೋಗಿ ತಾಯಿ ಶ್ವಾನದ ಬಳಿ ನಾಯಿ ಮರಿಯನ್ನು ಜೋಪಾನವಾಗಿ ಬಿಟ್ಟು ಬಂದಿದ್ದಾನೆ. ಶ್ವಾನ ಮತ್ತು ಮಗುವಿನ ಈ ಸುಂದರ ಬಾಂಧವ್ಯದ ಈ  ವಿಡಿಯೋ ಕ್ಲಿಪ್  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ನಿಷ್ಕಲ್ಮಶ ಮನಸ್ಸುಗಳ ಈ ಮುದ್ದಾದ ವಿಡಿಯೋ ನೋಡುಗರನ್ನು  ಮಂತ್ರಮುಗ್ಧರನ್ನಾಗಿಸಿದೆ. 

Viral Video: ಬಾ.. ನಿನ್ನನ್ನು ತಾಯಿ ಹತ್ರ ಕರ್ಕೊಂಡು  ಹೋಗ್ತೀನಿ; ನಿಷ್ಕಲ್ಮಶ ಮನಸ್ಸುಗಳ ಸುಂದರ ಬಾಂಧವ್ಯ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2024 | 6:38 PM

ಶ್ವಾನಗಳೆಂದರೆ ಮಕ್ಕಳಿಗೆ ತುಂಬಾನೇ ಪ್ರೀತಿ.  ಮನೆಯ ಸಾಕು ನಾಯಿಗಳೊಂದಿಗೆ ಪುಟಾಣಿಗಳು ಬಲು ಆಪ್ತವಾಗಿರುತ್ತಾರೆ. ಅವುಗಳೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಅಷ್ಟೇ ಅಲ್ಲದೇ ಎಲ್ಲೇ ಶ್ವಾನಗಳನ್ನು  ಕಂಡರೂ ಈ ಪುಟಾಣಿ ಮಕ್ಕಳು ಅವುಗಳ ಜೊತೆ ಆಟವಾಡಲು ಇಷ್ಟ ಪಡುತ್ತಾರೆ. ಹೀಗೆ ಶ್ವಾನಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ  ಸುಂದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ  ಹರಿದಾಡುತ್ತಿರುತ್ತವೆ.  ಇಂತಹ ಕ್ಯೂಟ್ ವಿಡಿಯೋಗಳು ನಮ್ಮ ಮನಸ್ಸಿನ ಬೇಸರವನ್ನು ದೂರ ಮಾಡಿ ಮನಸ್ಸು ಉಲ್ಲಾಸಗೊಳ್ಳುವಂತೆ  ಮಾಡುತ್ತದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅಯೋಧ್ಯೆಯ ಸರಯೂ ನದಿ ತಟದಲ್ಲಿ ಪುಟ್ಟ ಹುಡುಗನೊಬ್ಬ ಬೀದಿ ನಾಯಿಯ ಮರಿಯೊಂದಿಗೆ ಆಟವಾಡುತ್ತಾ, ಬಾ ನಾನು ನಿನ್ನನ್ನು ನಿನ್ನ ತಾಯಿಯ ಬಳಿಗೆ ಕರ್ಕೊಂಡು ಹೋಗ್ತೀನಿ  ಎನ್ನುತ್ತಾ, ತನ್ನ ಪುಟ್ಟ ಕೈಗಳಲ್ಲಿ ನಾಯಿ ಮರಿಯನ್ನು ಜೋಪಾನವಾಗಿ ಎತ್ತಿಕೊಂಡು ಹೋಗಿ ತಾಯಿ ಶ್ವಾನದ ಬಳಿ ಬಿಟ್ಟು ಬಂದಿದ್ದಾನೆ. ಈ ಹೃದಯಸ್ಪರ್ಶಿ  ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಶಿಶಿರ್ ವ್ಯಾಸ್ (@_shishir_vyas) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸರಯೂ ನದಿ ದಡದಲ್ಲಿ ಕಂಡಂತಹ ಮಧುರವಾದ ದೃಶ್ಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ನಾಯಿ ಮರಿಯನ್ನು ಎತ್ತಿಕೊಂಡು ಬಂದು ಅದರ ತಾಯಿಯ ಜೊತೆಗೆ ಸೇರಿಸುವ ಮಧುರವಾದ ದೃಶ್ಯವನ್ನು  ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಪುಟ್ಟ ಮಗುವೊಂದು ಅಲ್ಲೇ ಇದ್ದಂತಹ ನಾಯಿ ಮರಿಯ ಜೊತೆಗೆ ಆಟವಾಡುತ್ತಿರುತ್ತಾನೆ, ಅಲ್ಲೇ ಸ್ವಲ್ಪ ದೂರದಲ್ಲಿ ಆ ನಾಯಿ ಮರಿಯ  ತಾಯಿ ಇರುವುದನ್ನು ಗಮನಿಸಿದ ಈ ಪುಟ್ಟ ಬಾಲಕ, ಬಾ ನಾನು ನಿನ್ನನ್ನು ನಿನ್ನ  ತಾಯಿ ಬಳಿ ಬಿಟ್ಟು ಬರುತ್ತೇನೆ ಎನ್ನುತ್ತಾ, ತನ್ನ ಪುಟ್ಟ ಕೈಗಳಲ್ಲಿ ನಾಯಿ ಮರಿಯನ್ನು ಮೆಲ್ಲದೆ ಎತ್ತಿಕೊಂಡು ಹೋಗಿ ಜೋಪಾನವಾಗಿ  ತಾಯಿ ಶ್ವಾನದ ಬಳಿ ಬಿಟ್ಟು ಬರುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವೈರಲ್ ಆಯಿತು ಯೋಧ-ಡಾಕ್ಟರ್ ಜೋಡಿಯ ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ 

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  5 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼಅಯ್ಯಯ್ಯೋ ಎಷ್ಟು ಮುದ್ದಾಗಿದೆ ಈ ದೃಶ್ಯʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಜವಬ್ದಾರಿಯುತ ಭಾರತೀಯ ಮಗುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಒಂದು ಮಗು ಇನ್ನೊಂದು ಮಗುವಿನ ಕಾಳಜಿ ವಹಿಸುವ ದೃಶ್ಯ ಬಹಳ ಅದ್ಭುತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ನಿಷ್ಕಲ್ಮಶ ಮನಸ್ಸುಗಳ ಈ ಸುಂದರ ಬಂಧವನ್ನು ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ