AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ; ಭಯಾನಕ ದೃಶ್ಯದ ಹಿಂದಿನ ಸತ್ಯವೇನು?

ಭಯಾನಕ ದೃಶ್ಯದ ಕುರಿತಾಗಿ ಸ್ಥಳೀಯರು ತಿಳಿದಿರುವಂತೆ ತೋರುತ್ತಿದ್ದಾರೆ. ಆದರೆ ಯಾರೂ ಕೂಡಾ ನಿಜವಾಗಿಯೂ ನಿಗೂಢ ಗೊಂಬೆಯ ಕುರಿತಾಗಿ ಮಾತನಾಡಲು ಮುಂದೆಬರುತ್ತಿಲ್ಲ.

Viral Photo: ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ; ಭಯಾನಕ ದೃಶ್ಯದ ಹಿಂದಿನ ಸತ್ಯವೇನು?
ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ
Follow us
TV9 Web
| Updated By: shruti hegde

Updated on:Jun 03, 2021 | 11:11 AM

ಕತ್ತಲೆಯಲ್ಲಿ ಕೆಲವು ಆಕೃತಿಗಳನ್ನು ನೋಡಿದರೆ ನಾವು ಭಯಗೊಳ್ಳುವುದು ಸಮಾನ್ಯ. ಕೆಲವು ಬಾರಿ ಯಾವುದೋ ವಸ್ತುವಿನ ನೆರಳು ಕೂಡಾ ಒಂದು ರೀತಿಯ ವಿಕಾರ ಆಕೃತಿಯಂತೆ ಕಂಡು ಭಯಗೊಂಡ ಸನ್ನಿವೇಶವೂ ನಡೆದಿರುತ್ತದೆ. ಆದರೆ ನಿಜವಾಗಿಯೂ ಮರದ ಕೊಂಬೆಗೆ ಗೊಂಬೆಯು ಒಂದು ಜೋಕಾಲಿಯ ಮೇಲೆ ಕೂತಿರುವ ದೃಶ್ಯವನ್ನು ಕತ್ತಲೆಯಲ್ಲಿ ನೋಡಿದರೆ ಹೇಗಾಗಬಹುದು? ಅಂತಹುದೇ ಒಂದು ದೃಶ್ಯ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ.

ಮ್ಯಾಂಗ್ರೋವ್​ ಜೌಗು ಪ್ರದೇಶದಲ್ಲಿ ಮರದ ಕೊಂಬೆಗೆ ನಿಗೂಢ ಗೊಂಬೆಯೊಂದು ಜೋಕಾಲಿಯ ಮೇಲೆ ಕುಳಿತಿರುವ ದೃಶ್ಯವೊಂದು ಕಂಡು ಬಂದಿದೆ. ಆದರೆ ಪಟ್ಟಣದ ಎಲ್ಲಾ ನಿವಾಸಿಗಳಿಗೆ ಗೊಂಬೆಯ ಕುರಿತಾಗಿ ಚೆನ್ನಾಗಿ ತಿಳಿದಿದೆ. ಆದರೆ ಗೊಂಬೆಯನ್ನು ಮುಟ್ಟಲು ಅಥವಾ ತನಿಖೆ ನಡೆಸಲು ಯಾರೂ ಕೂಡಾ ಮುಂದಾಗುತ್ತಿಲ್ಲ. ಎಂದು ವರದಿಗಳು ತಿಳಿಸಿವೆ.

ಇದಾಗ್ಯೂ ಕೂಡಾ ಗೊಂಬೆಯ ಸುತ್ತಲಿನ ಕಥೆಗಳ ಕುರಿತಾಗಿ ಸ್ಥಳೀಯ ಸಂಸದರಿಗೆ ಚೆನ್ನಾಗಿ ತಿಳಿದಿದೆ. ಇದು ಗೊಂದಲಕ್ಕೆ ಸೃಷ್ಟಿಯಾಗಿದ್ದು ಚರ್ಚೆಗೆ ಕಾರಣವಾಗಿದೆ.

ಅಲ್ಲಿನ ಪ್ರತಿಯೊಬ್ಬರೂ ಕೂಡಾ ಗೊಂಬೆಯ ಕುರಿತಾಗಿ ತಿಳಿದಿರುವಂತೆ ತೋರುತ್ತಿದ್ದಾರೆ. ಆದರೆ ಯಾರೂ ಕೂಡಾ ನಿಜವಾಗಿಯೂ ನಿಗೂಢ ಗೊಂಬೆಯ ಕುರಿತಾಗಿ ಮಾತನಾಡಲು ಮುಂದೆಬರುತ್ತಿಲ್ಲ. ‘ಇದು ಆಧುನಿಕ ಸನ್ನಿವೇಶದ ಕಥೆಯಾಗಿರಬಹುದು ಆದರೆ ನಾನು ಖಂಡಿತವಾಗಿಯೂ ಈ ಕುರಿತಾಗಿ ತಮಾಷೆ ಮಾಡಲು ಸಿದ್ಧನಿಲ್ಲ. ಗೊಂಬೆಯ ದೃಶ್ಯ ಉತ್ತರಗಳಿಗಿಂತ, ಪ್ರಶ್ನೆಗಳನ್ನು ಹೆಚ್ಚು ಹುಟ್ಟುಹಾಕಿದೆ ಎಂದು ’ ಎಂದು ಸ್ಥಳೀಯ ರಾಜಕೀಯ ಪ್ರತಿನಿಧಿ ನಿಕ್​ ಡಮೆಟ್ಟೊ ಹೇಳಿದ್ದಾರೆ.

ಈ ಕುರಿತಂತೆ ಒಬ್ಬ ವ್ಯಾಪಾರಿ ಸ್ಥಳೀಯ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದು, ಯಾರೋ ದಂಪತಿ ಮರಕ್ಕೆ ಜೋಕಾಲಿ ಕಟ್ಟಿ ಗೊಂಬೆಯನ್ನು ಇರಿಸಿದ್ದಾರೆಂದು ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: 

Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು

ಭಯಾನಕ ಕಥೆಗೆ ಸುಖಾಂತ್ಯ; ‘ಕನ್ನಡತಿ’ ತಂಡ ಹರಿಬಿಡ್ತು ಹೊಸ ವಿಡಿಯೋ  

Published On - 11:10 am, Thu, 3 June 21

ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್