AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆನೆ- ಘೇಂಢಾಮೃಗದ ಕಾದಾಟ: ಈ ಕಾಳಗದಲ್ಲಿ ಜಯ ಯಾರಿಗೆ?

ಕಾಡಾನೆ ಮತ್ತು ಘೇಂಡಾಮೃಗದ ನಡುವೆ ನಡೆದ ರೋಮಾಂಚನಕಾರಿ ಕಾದಾಟದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುತೂಹಲಕಾರಿ ಕಾದಾಟವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.

Viral Video: ಆನೆ- ಘೇಂಢಾಮೃಗದ ಕಾದಾಟ: ಈ ಕಾಳಗದಲ್ಲಿ ಜಯ ಯಾರಿಗೆ?
ವೈರಲ್ ವೀಡಿಯೊ
ಮಾಲಾಶ್ರೀ ಅಂಚನ್​
| Edited By: |

Updated on: Jun 09, 2023 | 3:38 PM

Share

ಕಾಡುಗಳಲ್ಲಿ ಪ್ರಾಣಿಗಳ ನಡುವೆ ಪರಸ್ಪರ ಕಾದಾಟವು ಸಾಮಾನ್ಯವಾಗಿರುತ್ತವೆ. ಬಲಶಾಲಿ ಪ್ರಾಣಿಗಳು ತಮಗಿಂತ ಬಲಹೀನ ಪ್ರಾಣಿಗಳ ಜೊತೆ ಗುದ್ದಾಡುತ್ತಿರುತ್ತವೆ. ಇದೇನೇ ಇದ್ದರೂ ಕಾಡಿನಲ್ಲಿ ಸಿಂಹ, ಹುಲಿಯಂತಹ ಅದೆಷ್ಟೇ ಬಲಶಾಲಿ ಪ್ರಾಣಿಗಳು ಅಷ್ಟಾಗಿ ಆನೆಗಳ ತಂಟೆಗೆ ಹೋಗುವುದಿಲ್ಲ. ಕಾಡಿನ ಇತರ ಪ್ರಾಣಿಗಳು ಆನೆಯ ಮೇಲೆ ದಾಳಿ ಮಾಡುವುದು ತೀರಾ ವಿರಳ. ಆದರೆ ಇಲ್ಲೊಂದು ಪುಟ್ಟ ಘೇಂಡಾಮೃಗ ದೈತ್ಯ ಆನೆಯ ಜೊತೆಗೆ ಕಾದಡಲು ಹೋಗಿ ಪಜೀತಿಗೆ ಸಿಳುಕಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಇವುಗಳ ಕಾದಾಟದ ವೀಡಿಯೋ ವೈರಲ್ ಆಗಿದ್ದು, ಪುಟ್ಟ ಘೇಂಡಾಮೃಗದ ಧೈರ್ಯವನ್ನು ಮೆಚ್ಚಲೇಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

ಈ ಕಾಡು ಪ್ರಾಣಿಗಳ ಕಾಳಗದ ಈ ವೀಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ದೈತ್ಯ ಆನೆ ಮತ್ತು ಘೇಂಡಾಮೃಗದ ನಡುವೆ ನಡೆಯುವ ಭೀಕರ ಕಾಳಗವನ್ನು ಕಾಣಬಹುದು.

ಯಾವುದೋ ಒಂದು ಕಾಡಿನಲ್ಲಿ ಆನೆ ಮತ್ತು ಘೇಂಢಾಮೃಗ ಮುಖಾಮುಖಿಯಾಗುತ್ತವೆ. ಒಬ್ಬರನ್ನೊಬ್ಬರು ಕಂಡು ಪರಸ್ಪರ ಕೋಪಗೊಂಡು ಕಾಳಗಕ್ಕೆ ಇಳಿಯುತ್ತವೆ. ಮೊದಲಿಗೆ ಆನೆ ಮುಂದೆ ಮುಂದೆ ಹೋಗಿ ತನ್ನ ಸೊಂಡಿಲಿನಿಂದ ಘೇಂಡಾಮೃಗಕ್ಕೆ ದಾಳಿ ಮಾಡಲು ಮುಂದಾಗುತ್ತದೆ. ಆಗ ಪುಟ್ಟ ಘೇಂಢಾಮೃಗವು ನನಗೂ ಶಕ್ತಿಯಿದೆ ಎಂದು ತನ್ನ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿ ಕೊಂಬಿನಿಂದ ಆನೆಯನ್ನು ತಿವಿಯಲು ಹೋಗುತ್ತದೆ. ಇದರಿಂದ ಇನ್ನಷ್ಟು ಕೋಪಗೊಂಡ ಆನೆ ತನ್ನ ಸೊಂಡಿಲಿನಿಂದ ಆ ಘೇಂಡಾಮೃಗವನ್ನು ಹೊಡೆದು ನೆಲಕ್ಕುರುಳಿಸುತ್ತದೆ. ಅಬ್ಬಬ್ಬಾ ಇನ್ನೂ ಜಗಳ ಯಾಕೆ ನನ್ನ ಪ್ರಾಣ ಉಳಿದರೆ ಸಾಕು ಎನ್ನುತ್ತಾ ಘೇಂಢಾಮೃಗವು ಆನೆಯ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತದೆ.

ಇಲ್ಲಿದೆ ನೋಡಿ ವೀಡಿಯೊ:

ಇದನ್ನೂ ಓದಿ: Viral Video: ಕೆ.ಎಲ್-19 ಗಾಡಿ ಸೈಡಿಗೆ ಹಾಕಿ, ಹೇ ಹುಡುಗ ಏನೋ, ಯುವಕನ ತರ್ಲೆ ನೋಡಿ

ಜೂನ್ 8 ರಂದು ಟ್ವಿಟರ್​​ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋ 114.7 ಸಾವಿರ ವೀಕ್ಷಣೆಗಳನ್ನು ಹಾಗೂ 2 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಇಂತಹ ಕಾದಾಟವನ್ನು ನಾನೆಲ್ಲೂ ನೋಡಿಲ್ಲ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಘೇಂಡಾಮೃಗದ ಧೈರ್ಯವನ್ನು ಮೆಚ್ಚಲೇಬೇಕು. ಆ ಪ್ರಾಣಿ ಪುಟ್ಟದಾಗಿದ್ದರು, ದೈತ್ಯ ಆನೆಯ ಜೊತೆಗೆ ಧೈರ್ಯದಿಂದ ಹೋರಾಡಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅದ್ಭುತ. ಇಂತಹ ಪ್ರಕೃತಿಯ ಸೊಬಗನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ