Viral: ಅನಾಥ ಕಂದಮ್ಮನ ಹಸಿವು ನೀಗಿಸಿದ ಮಹಿಳಾ ಪೊಲೀಸ್ ಪೇದೆ, ಇದೇ ನೋಡಿ ತಾಯಿ ಪ್ರೀತಿ

ಬುಲ್ಧಾನಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೊಲೀಸ್ ಪೇದೆಯೊಬ್ಬರು ಒಂದು ದಿನದ ಹಸಿದ ಅಪರಿಚಿತ ಅನಾಥ ಮಗುವಿಗೆ ಹಾಲುಣಿಸಿ ಹಸಿವು ನೀಗಿಸಿದ ಘಟನೆಯೊಂದು ಬುಲ್ಧಾನಾ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಮಹಿಳಾ ಪೊಲೀಸ್ ಪೇದೆಯ ಹೆಸರು ಯೋಗಿತಾ ಶಿವಾಜಿ ದುಕ್ರೆ ಎನ್ನಲಾಗಿದ್ದು, ಇವರ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Viral: ಅನಾಥ ಕಂದಮ್ಮನ ಹಸಿವು ನೀಗಿಸಿದ ಮಹಿಳಾ ಪೊಲೀಸ್ ಪೇದೆ, ಇದೇ ನೋಡಿ ತಾಯಿ ಪ್ರೀತಿ
ಪೊಲೀಸ್ ಪೇದೆ ಯೋಗಿತಾ ಶಿವಾಜಿ ದುಕ್ರೆ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2024 | 2:48 PM

ತಾಯಿಯ ಪ್ರೀತಿಯೇ ಹಾಗೆ, ಯಾರದ್ದೇ ಮಗು ಆಗಿರಲಿ, ಮಗುವು ಹಸಿವಿನಿಂದ ಬಳಲುತ್ತಿದೆ ಎಂದರೆ ತಾಯಿ ಕರುಳು ಸುಮ್ಮನೆ ಇರಲ್ಲ. ಅನಾಥ ಮಗುವು ಹಸಿವಿನಿಂದ ಅಳುವುದನ್ನು ಕಂಡು ಮಹಿಳಾ ಪೊಲೀಸ್ ಪೇದೆಯ ಹೃದಯವು ಮಿಡಿದಿದೆ. ಹೌದು, ಮಹಿಳಾ ಪೊಲೀಸ್ ಪೇದೆ ಯೋಗಿತಾ ಶಿವಾಜಿ ದುಕ್ರೆಯವರು ಹಸಿವಿನಿಂದ ಬಳಲುತ್ತಿದ್ದ ಮಗುವಿಗೆ ಹಾಲುಣಿಸಿದ್ದಾರೆ.

ಬುಲ್ಧಾನಾದ ಲೋನಾರ್‌ನಲ್ಲಿರುವ ಅನಾಥಾಶ್ರಮಕ್ಕೆ ಮಹಿಳೆಯೊಬ್ಬರು ಒಂದು ದಿನದ ಮಗುವಿನೊಂದಿಗೆ ಬಂದಿದ್ದರು. ಈ ಹೆಣ್ಣು ಮಗುವನ್ನು ಅನಾಥಶ್ರಮಕ್ಕೆ ಸೇರಿಸುವಂತೆ ಮಹಿಳೆಯು ವಿನಂತಿಸಿದ್ದಾಳೆ. ಆದರೆ ಮೊದಲು ಠಾಣೆಗೆ ತೆರಳಿ ದೂರು ನೀಡಿ, ಬಳಿಕ ಪೊಲೀಸರ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅನಾಥಾಶ್ರಮದ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ. ಆ ಬಳಿಕ ಮಹಿಳೆ ಬುಲ್ಧಾನಾ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆಯಲ್ಲಿ ನಾನು ಬೆಳಿಗ್ಗೆಯಿಂದ ಈ ಒಂದು ದಿನದ ಮಗುವಿನಿಂದ ಅಲೆದಾಡುತ್ತಿದ್ದೇನೆ ಎಂದು ಹೇಳಿದ್ದಾಳೆ.

ಆದರೆ ಆ ಮಗುವು ಹಸಿವಿನಿಂದ ಅಳುತ್ತಿದ್ದು, ಇದನ್ನು ಬುಲ್ಧಾನಾ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರು ಮಗುವು ಅಳುವುದನ್ನು ಗಮನಿಸಿದ್ದಾರೆ. ಈ ವೇಳೆಯಲ್ಲಿ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರಿಗೆ ತನ್ನ ಒಂದೂವರೆ ವರ್ಷದ ಮಗನ ನೆನಪಾಗಿದೆ. ಆ ತಕ್ಷಣವೇ ಎಲ್ಲರ ಅನುಮತಿ ಪಡೆದು ಹಸಿವಿನಿಂದ ಅಳುತ್ತಿರುವ ಮಗುವಿಗೆ ಹಾಲುಣಿಸಿ ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ: ಭಿಕ್ಷೆ ಬೇಡುವ ಹುಡುಗಿಯ ಇಂಗ್ಲಿಷ್​​​ಗೆ ವಿದೇಶಿಗ ಫುಲ್ ಫಿದಾ, ವಿಡಿಯೋ ವೈರಲ್

ಮಗುವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಹೆಣ್ಣು ಮಗುವು ಆರೋಗ್ಯವಾಗಿದ್ದಾಳೆ. ತೂಕ ಕಡಿಮೆ ಇರುವ ಕಾರಣ ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಭಗವತ್ ಭೂಸಾರಿ ಮಾಹಿತಿ ನೀಡಿದ್ದಾರೆ. ಈ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್