AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅನಾಥ ಕಂದಮ್ಮನ ಹಸಿವು ನೀಗಿಸಿದ ಮಹಿಳಾ ಪೊಲೀಸ್ ಪೇದೆ, ಇದೇ ನೋಡಿ ತಾಯಿ ಪ್ರೀತಿ

ಬುಲ್ಧಾನಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೊಲೀಸ್ ಪೇದೆಯೊಬ್ಬರು ಒಂದು ದಿನದ ಹಸಿದ ಅಪರಿಚಿತ ಅನಾಥ ಮಗುವಿಗೆ ಹಾಲುಣಿಸಿ ಹಸಿವು ನೀಗಿಸಿದ ಘಟನೆಯೊಂದು ಬುಲ್ಧಾನಾ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಮಹಿಳಾ ಪೊಲೀಸ್ ಪೇದೆಯ ಹೆಸರು ಯೋಗಿತಾ ಶಿವಾಜಿ ದುಕ್ರೆ ಎನ್ನಲಾಗಿದ್ದು, ಇವರ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Viral: ಅನಾಥ ಕಂದಮ್ಮನ ಹಸಿವು ನೀಗಿಸಿದ ಮಹಿಳಾ ಪೊಲೀಸ್ ಪೇದೆ, ಇದೇ ನೋಡಿ ತಾಯಿ ಪ್ರೀತಿ
ಪೊಲೀಸ್ ಪೇದೆ ಯೋಗಿತಾ ಶಿವಾಜಿ ದುಕ್ರೆ
ಸಾಯಿನಂದಾ
| Edited By: |

Updated on: Sep 14, 2024 | 2:48 PM

Share

ತಾಯಿಯ ಪ್ರೀತಿಯೇ ಹಾಗೆ, ಯಾರದ್ದೇ ಮಗು ಆಗಿರಲಿ, ಮಗುವು ಹಸಿವಿನಿಂದ ಬಳಲುತ್ತಿದೆ ಎಂದರೆ ತಾಯಿ ಕರುಳು ಸುಮ್ಮನೆ ಇರಲ್ಲ. ಅನಾಥ ಮಗುವು ಹಸಿವಿನಿಂದ ಅಳುವುದನ್ನು ಕಂಡು ಮಹಿಳಾ ಪೊಲೀಸ್ ಪೇದೆಯ ಹೃದಯವು ಮಿಡಿದಿದೆ. ಹೌದು, ಮಹಿಳಾ ಪೊಲೀಸ್ ಪೇದೆ ಯೋಗಿತಾ ಶಿವಾಜಿ ದುಕ್ರೆಯವರು ಹಸಿವಿನಿಂದ ಬಳಲುತ್ತಿದ್ದ ಮಗುವಿಗೆ ಹಾಲುಣಿಸಿದ್ದಾರೆ.

ಬುಲ್ಧಾನಾದ ಲೋನಾರ್‌ನಲ್ಲಿರುವ ಅನಾಥಾಶ್ರಮಕ್ಕೆ ಮಹಿಳೆಯೊಬ್ಬರು ಒಂದು ದಿನದ ಮಗುವಿನೊಂದಿಗೆ ಬಂದಿದ್ದರು. ಈ ಹೆಣ್ಣು ಮಗುವನ್ನು ಅನಾಥಶ್ರಮಕ್ಕೆ ಸೇರಿಸುವಂತೆ ಮಹಿಳೆಯು ವಿನಂತಿಸಿದ್ದಾಳೆ. ಆದರೆ ಮೊದಲು ಠಾಣೆಗೆ ತೆರಳಿ ದೂರು ನೀಡಿ, ಬಳಿಕ ಪೊಲೀಸರ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅನಾಥಾಶ್ರಮದ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ. ಆ ಬಳಿಕ ಮಹಿಳೆ ಬುಲ್ಧಾನಾ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆಯಲ್ಲಿ ನಾನು ಬೆಳಿಗ್ಗೆಯಿಂದ ಈ ಒಂದು ದಿನದ ಮಗುವಿನಿಂದ ಅಲೆದಾಡುತ್ತಿದ್ದೇನೆ ಎಂದು ಹೇಳಿದ್ದಾಳೆ.

ಆದರೆ ಆ ಮಗುವು ಹಸಿವಿನಿಂದ ಅಳುತ್ತಿದ್ದು, ಇದನ್ನು ಬುಲ್ಧಾನಾ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರು ಮಗುವು ಅಳುವುದನ್ನು ಗಮನಿಸಿದ್ದಾರೆ. ಈ ವೇಳೆಯಲ್ಲಿ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರಿಗೆ ತನ್ನ ಒಂದೂವರೆ ವರ್ಷದ ಮಗನ ನೆನಪಾಗಿದೆ. ಆ ತಕ್ಷಣವೇ ಎಲ್ಲರ ಅನುಮತಿ ಪಡೆದು ಹಸಿವಿನಿಂದ ಅಳುತ್ತಿರುವ ಮಗುವಿಗೆ ಹಾಲುಣಿಸಿ ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ: ಭಿಕ್ಷೆ ಬೇಡುವ ಹುಡುಗಿಯ ಇಂಗ್ಲಿಷ್​​​ಗೆ ವಿದೇಶಿಗ ಫುಲ್ ಫಿದಾ, ವಿಡಿಯೋ ವೈರಲ್

ಮಗುವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಹೆಣ್ಣು ಮಗುವು ಆರೋಗ್ಯವಾಗಿದ್ದಾಳೆ. ತೂಕ ಕಡಿಮೆ ಇರುವ ಕಾರಣ ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಭಗವತ್ ಭೂಸಾರಿ ಮಾಹಿತಿ ನೀಡಿದ್ದಾರೆ. ಈ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್