AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಭಯಪಡಬೇಡ ಕಂದ, ನಾನಿದ್ದೇನೆ ಎಂದು ಪಟಾಕಿಗೆ ಭಯಪಟ್ಟ ಶ್ವಾನದ ಕಿವಿ ಮುಚ್ಚಿದ ಪುಟ್ಟ ಹುಡುಗಿ

ಸಾಮಾನ್ಯವಾಗಿ ಪಕ್ಷಿಗಳು ಮತ್ತು ಪ್ರಾಣಿಗಳು ಪಟಾಕಿಗಳ ಸದ್ದಿಗೆ ಹೆಚ್ಚಾಗಿ ಭಯಪಟ್ಟುಕೊಳ್ಳುತ್ತದೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಯಾರೋ ಪಟಾಕಿ ಸಿಡಿಸಿದಾಗ ಶ್ವಾನವೊಂದು  ಆ ಸದ್ದಿಗೆ ಭಯಪಟ್ಟು ಕುಳಿತಿತ್ತು. ಪಟಾಕಿ ಸದ್ದಿಗೆ ಸಾಕು ನಾಯಿ ಹೆದರಿಕೊಂಡಿದೆ ಎಂದು ಅರಿತ ಬಾಲಕಿಯೊಬ್ಬಳು ಪಟಾಕಿ ಸದ್ದು ಕೇಳಿಸಬಾರದೆಂದು ತನ್ನ ಪುಟ್ಟ ಕೈಗಳಿಂದ ಶ್ವಾನದ ಕಿವಿಯನ್ನು ಮುಚ್ಚಿ ಹಿಡಯುತ್ತಾ, ಪಟಾಕಿ ಸದ್ದಿಗೆ ಭಯಪಟ್ಟ ಶ್ವಾನವನ್ನು ರಕ್ಷಿಸಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ  ಇದೀಗ ಸಖತ್ ವೈರಲ್ ಆಗಿದೆ. 

Viral Video: ಭಯಪಡಬೇಡ ಕಂದ, ನಾನಿದ್ದೇನೆ ಎಂದು ಪಟಾಕಿಗೆ ಭಯಪಟ್ಟ ಶ್ವಾನದ ಕಿವಿ ಮುಚ್ಚಿದ ಪುಟ್ಟ ಹುಡುಗಿ
ಮಾಲಾಶ್ರೀ ಅಂಚನ್​
| Edited By: |

Updated on: Jan 10, 2024 | 12:59 PM

Share

ಮಕ್ಕಳ ಮುಗ್ದತೆ, ಅವರ ಕಾಳಜಿ ದೊಡ್ಡವರಿಗಿಂತೇನು ಕಮ್ಮಿಯಿಲ್ಲ. ಕಷ್ಟದಲ್ಲಿರುವವರಿಗೆ ಪುಟ್ಟ ಮಕ್ಕಳು ಸಹಾಯ ಮಾಡುವುದು, ಸಹಾಯಕ್ಕೆ ಮುಂದಾಗುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರಲ್ಲೂ ಮಕ್ಕಳು ಯಾವುದೇ ಸ್ವಾರ್ಥವನ್ನು ಇಟ್ಟುಕೊಳ್ಳದೆ, ನಿಷ್ಕಲ್ಮಶ ಮನಸ್ಸಿನಿಂದ ಸಹಾಯ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಪಟಾಕಿ ಸದ್ದಿಗೆ ಭಯಪಟ್ಟು ಕುಳಿತಿದ್ದಂತಹ ಶ್ವಾನಕ್ಕೆ ಧೈರ್ಯವನ್ನು ತುಂಬುತ್ತಾ, ಭಯ ಪಡ್ಬೇಡಾ ನಾನಿದ್ದೇನೆ ಅಲ್ವಾ ಎನ್ನುತ್ತಾ  ಬಾಲಕಿಯೊಬ್ಬಳು ಪಟಾಕಿ ಸದ್ದು ಕೇಳಿಸಬಾರದೆಂದು ತನ್ನ ಪುಟ್ಟ ಕೈಗಳಿಂದ ಶ್ವಾನದ ಕಿವಿಯನ್ನು ಮುಚ್ಚಿ ಹಿಡಯುತ್ತಾ, ಪಟಾಕಿ ಸದ್ದಿಗೆ ಭಯಪಟ್ಟ ಶ್ವಾನವನ್ನು ರಕ್ಷಿಸುತ್ತಾಳೆ. ಈ ಹೃದಯಸ್ಪರ್ಶಿ ವಿಡಿಯೋ  ಇದೀಗ ಸಖತ್ ವೈರಲ್ ಆಗಿದ್ದು, ಆ ಪುಟ್ಟ ಪೋರಿಯ ಮುಗ್ದತೆಗೆ ನೆಟ್ಟಿಗರು ಮನಸೋತಿದ್ದಾರೆ.

@ThebestFigen ಎಂಬ  X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು,  ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು  ಪಟಾಕಿ ಸದ್ದಿಗೆ ಹೆದರಿಕೊಂಡಂತಹ ಸಾಕು ನಾಯಿಯ ಕಿವಿಯನ್ನು ತನ್ನ ಕೈಗಳಿಂದ ಮುಚ್ಚಿ ಹಿಡಿದುಕೊಳ್ಳುವ ಮೂಲಕ ಶ್ವಾನವನ್ನು ರಕ್ಷಿಸುವ  ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿ ಪುಟ್ಟ ಬಾಲಕಿಯೊಬ್ಬಳು, ತನ್ನ ನಾಯಿ ಮರಿಯನ್ನು ಮುದ್ದು ಮಾಡುತ್ತಾ ನಿಂತಿದ್ದಳು.  ಅಷ್ಟರಲ್ಲಿ ಜೋರಾಗಿ ಪಟಾಕಿ ಸಿಡಿಸುವ ಸದ್ದು ಕೇಳಿಸುತ್ತೆ. ಅಯ್ಯೋ ನನ್ನ ಮುದ್ದು ನಾಯಿ ಮರಿ ಪಟಾಕಿ ಸದ್ದಿಗೆ ಭಯಪಡುತ್ತೆ ಎನ್ನುತ್ತಾ ಆ ಬಾಲಕಿ ತನ್ನ ಪುಟ್ಟ ಕೈಗಳಿಂದ ಸಾಕು ನಾಯಿಯ ಕಿವಿಯನ್ನು ಹಿಡಿದುಕೊಳ್ಳುತ್ತಾಳೆ. ನಂತರ ನಾನಿದ್ದೇನೆ ಭಯಪಡಬೇಡ ಎಂದು ತಲೆ ಸವರುತ್ತಾ ಶ್ವಾನವನ್ನು ಮುದ್ದು ಮಾಡುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತನ್ನ ಮೇಲೆ ದಾಳಿ ಮಾಡಲು ಬಂದ ಸಿಂಹವನ್ನೇ ಗಢ ಗಢ ನಡುಗಿಸಿದ ಮುಂಗುಸಿ

ಜನವರಿ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.5  ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡದುಕೊಂಡಿದೆ. ಒಬ್ಬ ಬಳಕೆದಾರರು ʼಆ ಪುಟ್ಟ ಮುಗುವಿಗೆ ತುಂಬಾ ಸಹಾನೂಭೂತಿ ಮತ್ತು ದಯೆಯ ಮನೋಭಾವವಿದೆ. ಆದ್ರೆ ದೊಡ್ಡವರಾದ ನಾವು ಪ್ರಾಣಿಗಳು ಪಟಾಕಿ ಸದ್ದಿಗೆ ಭಯಪಡುತ್ತವೆ ಎಂದು ಗೊತ್ತಿದ್ರೂ ಪಟಾಕಿ ಸಿಡಿಸುತ್ತೇವೆ, ಇದು ನಾಚಿಕೆಗೇಡಿನ ಸಂಗತಿʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಂತಹ ಸುಂದರ ಬಂಧ. ಆ ಬಾಲಕಿಗೆ ಆಕೆಯ ಪೋಷಕರು ಉತ್ತಮ ಜೀವನ ಪಾಠವನ್ನು ಕಲಿಸಿಕೊಟ್ಟಿದ್ದಾರೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಇರಿಬ್ಬರ ಬಂಧ ಎಷ್ಟು ಮುದ್ದಾಗಿದೆಯಲ್ವಾ ಅಂತ ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್