ಕೋಪ ಮಾಡಿಕೊಳ್ಳಬೇಡ ಕೃಷ್ಣ: ಮುಂದಿನ ವರ್ಷ ಮೋದಿ ಮಥುರಾದಲ್ಲಿ ನಿನ್ನ ಮಂದಿರ ಕಟ್ತಾರೆ; ಹೀಗೊಂದು ಫೋಟೋ ವೈರಲ್ 

ರಾಮ ಮಂದಿರದ ನಿರ್ಮಾಣವು ಕೋಟ್ಯಾಂತರ ರಾಮ ಭಕ್ತರ ಕನಸಾಗಿದ್ದು, ರಾಮಮಂದಿರದ  ಕನಸು  ಇನ್ನೂ ಕೆಲವೇ ದಿನಗಳಲ್ಲಿ ನನಸಾಗುತ್ತಿದೆ. ಈ ನಡುವೆ  ಮುಂದಿನ ವರ್ಷ ಮೋದಿಯವರು  ಮಥುರಾದಲ್ಲಿ ಕೃಷ್ಣ ಮಂದಿರವನ್ನು ನಿರ್ಮಾಣ ಮಾಡ್ತಾರೆ ಆಯ್ತಾ, ಕೋಪ ಮಾಡ್ಕೋಬೇಡಾ ಕೃಷ್ಣ… ಅಂತ ಹೇಳುವ ಮುದ್ದಾದ ಫೋಟೋವೊಂದು ಒಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದೆ.

ಕೋಪ ಮಾಡಿಕೊಳ್ಳಬೇಡ ಕೃಷ್ಣ: ಮುಂದಿನ ವರ್ಷ ಮೋದಿ ಮಥುರಾದಲ್ಲಿ ನಿನ್ನ ಮಂದಿರ ಕಟ್ತಾರೆ; ಹೀಗೊಂದು ಫೋಟೋ ವೈರಲ್ 
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 10, 2024 | 6:52 PM

ಭವ್ಯ ರಾಮ ಮಂದಿರದ ನಿರ್ಮಾಣವು ಕೋಟ್ಯಾಂತರ ರಾಮ ಭಕ್ತರ ಕನಸಾಗಿದ್ದು, ಈ ಕನಸು  ಇನ್ನೂ ಕೆಲವೇ ದಿನಗಳಲ್ಲಿ ನನಸಾಗುತ್ತಿದೆ. ಈ ನಡುವೆ ಮುದ್ದಾದ ಫೋಟೋವೊಂದು ವೈರಲ್ ಆಗಿದ್ದು, ಅಯೋಧ್ಯೆ ನಗರಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ್ದೀರಿ ಅಲ್ವಾ, ನನ್ನ ಜನ್ಮಸ್ಥಳವಾದ ಮಥುರಾದಲ್ಲಿ ಕೃಷ್ಣ ಮಂದಿರವನ್ನು ಯಾವಾಗ ನಿರ್ಮಾಣ ಮಾಡುತ್ತೀರಾ ಎಂದು  ಬಾಲ ಕೃಷ್ಣ  ಹುಸಿ ಕೋಪದಲ್ಲಿ ಕುಳಿತಿರುವಂತ ಮುದ್ದಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  (AI) ಚಿತ್ರವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಪೋಸ್ಟ್ ಅನ್ನು ಚಕ್ರವರ್ತಿ ಸುಲಿಬೆಲೆ (@Chakravarty Sulinele)   ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ನೀನು ಏಕೆ ಕೋಪಗೊಂಡಿದ್ದೀಯಾ ಕೃಷ್ಣಾ, ಮುಂದಿನ ವರ್ಷ ಮೋದಿಯವರು ಮಥುರಾದಲ್ಲಿ ನಿಮ್ಮ ಮಂದಿರವನ್ನು ಸಹ ಕಟ್ಟಿಸುತ್ತಾರೆ ಸ್ವಲ್ಪ ನಗು ನೋಡೋಣ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್  ಫೋಟೋದಲ್ಲಿ   ಬೇಜಾರಿನಲ್ಲಿ ಕುಳಿತಿರುವಂತಹ ಬಾಲ ಕೃಷ್ಣನನ್ನು ತಾಯಿ ಸಮಾಧಾನ ಪಡಿಸುವ  ಮುದ್ದಾದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಿಮಾನದೊಳಗೆ ಹೋಗುತ್ತಿದ್ದಂತೆ ತಾಯಿ-ಮಗಳಿಗೆ ಕಾದಿತ್ತು ಅಚ್ಚರಿ, ಅದೃಷ್ಟ ಅಂದ್ರೆ ಇದಪ್ಪ

ಜನವರಿ 10ರಂದು ಹಂಚಿಕೊಳ್ಳಲಾದ ಈ ಫೊಸ್ಟ್ 34 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಲೈಕ್ಸ್ ಮತ್ತು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರುʼಬಹಳ ಸುಂದರವಾದ ಶೀರ್ಷಿಕೆಯನ್ನು ಬರೆದುಕೊಂಡಿದ್ದೀರಾʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಆದಷ್ಟು ಬೇಗ ಆಗಲಿ ಎಂದು ನಾನು ಬಯಸುತ್ತೇನೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಬಾಲ ಕೃಷ್ಣನ ಫೋಟೋ ಬಹಳ ಮುದ್ದಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಪೋಸ್ಟ್ಗೆ ಮೆಚ್ಚುಗೆಯನ್ನು ನೀಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ