AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspirational Story: 73ರ ಇಳಿ ವಯಸ್ಸಿನಲ್ಲೂ ಸೈಕಲ್​ನಲ್ಲೇ 2,500 ಕಿ.ಮೀ. ಪ್ರಯಾಣಿಸಿದ ವೃದ್ಧ

Kiran Seth: 73 ವರ್ಷದ ಕಿರಣ್ ಸೇಠ್ ಪದ್ಮಶ್ರೀ ಪುರಸ್ಕೃತರಾಗಿದ್ದು, 5 ರಾಜ್ಯಗಳನ್ನು ದಾಟಿ 2,500 ಕಿ.ಮೀ ದೂರವನ್ನು ಸೈಕಲ್​ನಲ್ಲಿ ಸಂಚರಿಸಿದ್ದಾರೆ.

Inspirational Story: 73ರ ಇಳಿ ವಯಸ್ಸಿನಲ್ಲೂ ಸೈಕಲ್​ನಲ್ಲೇ 2,500 ಕಿ.ಮೀ. ಪ್ರಯಾಣಿಸಿದ ವೃದ್ಧ
ಸೈಕ್ಲಿಂಗ್ ಮಾಡಿದ ಕಿರಣ್ ಸೇಠ್Image Credit source: Times of India
TV9 Web
| Edited By: |

Updated on:Jun 08, 2022 | 12:49 PM

Share

ನವದೆಹಲಿ: ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎಂಬುದಕ್ಕೆ ಉದಾಹರಣೆ ಎಂಬಂತೆ ದೆಹಲಿಯಲ್ಲಿ 73 ವರ್ಷದ ವೃದ್ಧರೊಬ್ಬರು ಬರೋಬ್ಬರಿ 2,500 ಕಿ.ಮೀ. ಸೈಕಲ್​ನಲ್ಲೇ ಪ್ರಯಾಣಿಸಿದ್ದಾರೆ. ದೆಹಲಿಯಿಂದ ಸೈಕಲ್ ಸವಾರಿ (Cycling) ಆರಂಭಿಸಿದ 73 ವರ್ಷ ಕಿರಣ್ ಸೇಠ್ (Kiran Seth) ಭಾನುವಾರ ರಾಜ್​ಘಾಟ್​ಗೆ ಬಂದು ತಲುಪಿದ್ದಾರೆ. 5 ರಾಜ್ಯಗಳಲ್ಲಿ ಸಂಚರಿಸಿರುವ ಅವರು ಇಳಿ ವಯಸ್ಸಿನಲ್ಲೂ ಎರಡೂವರೆ ಸಾವಿರ ಕಿ.ಮೀ. ಸೈಕಲ್ ತುಳಿದು ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ, ಈ ಕಿರಣ್ ಸೇಠ್ ಪದ್ಮಶ್ರೀ ಪುರಸ್ಕೃತರಾಗಿದ್ದು, ಸ್ಪಿಕ್ ಮಕೇ (SPIC MACAY) ಸಂಸ್ಥಾಪಕರಾಗಿದ್ದಾರೆ. ಸೈಕಲ್ ಸವಾರಿಯೆಂದರೆ ಕಿರಣ್ ಸೇಠ್ ಅವರಿಗೆ ಬಹಳ ಇಷ್ಟ. ಪರಿಸರ ಸ್ನೇಹಿಯಾಗಿರುವ ಸೈಕಲನ್ನು ಸಾರ್ವಜನಿಕರು ಸಾರಿಗೆ ವ್ಯವಸ್ಥೆಯಾಗಿ ಹೆಚ್ಚೆಚ್ಚು ಬಳಸಬೇಕೆಂಬುದರ ಬಗ್ಗೆ ಅರಿವು ಮೂಡಿಸಲು ಕಿರಣ್ ಸೇಠ್ ಈ ಅಭಿಯಾನ ಕೈಗೊಂಡಿದ್ದಾರೆ. ಸೈಕಲ್ ಸವಾರಿಯಿಂದ ಆರೋಗ್ಯಕ್ಕೂ ಒಳ್ಳೆಯದು ಎಂದಿರುವ ಅವರು ಸೈಕಲ್ ಬಳಕೆಯಿಂದ ಪೆಟ್ರೋಲ್, ಡೀಸೆಲ್ ಉಳಿಸಲು ಸಹಾಯಕವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Success Story: 71ನೇ ವಯಸ್ಸಿನಲ್ಲೂ ಜೆಸಿಬಿ, ಲಾರಿಯಂತಹ 11 ರೀತಿಯ ವಾಹನಗಳನ್ನು ಚಲಾಯಿಸುತ್ತಾರೆ ಈ ಅಜ್ಜಿ!

ಇದನ್ನೂ ಓದಿ
Image
Viral Video: 100 ವರ್ಷದ ದೈತ್ಯಾಕಾರದ ಕಡಲೇಡಿ ಹಿಡಿದ ಮೀನುಗಾರ!
Image
Viral Video: ಕ್ಲಾಸ್​ರೂಂನಲ್ಲೇ ಮಲಗಿ ಗೊರಕೆ ಹೊಡೆಯುತ್ತಿದ್ದ ಟೀಚರ್​​ಗೆ ಗಾಳಿ ಬೀಸಿದ ವಿದ್ಯಾರ್ಥಿ; ವಿಡಿಯೋ ವೈರಲ್
Image
Trending: ವಿಜಯದ ಸಂಭ್ರಮದ ವೇಳೆ ತನ್ನ ಪತ್ನಿಗೆ ಗುದ್ದಿದ ಸೈಕ್ಲಿಸ್ಟ್
Image
Trending: ಗೆಳತಿಯ ಮೇಲಿನ ಕೋಪಕ್ಕೆ 40 ಕೋಟಿ ಮೌಲ್ಯದ ವಸ್ತುಗಳು ಢಮಾರ್!

ಮಾರ್ಚ್​ 11ರಂದು ದೆಹಲಿಯಿಂದ ತಮ್ಮ ಸೈಕಲ್ ಪ್ರಯಾಣವನ್ನು ಆರಂಭಿಸಿದ ಕಿರಣ್ ಸೇಠ್ ಮೊದಲು ಜೈಪುರದವರೆಗೆ ಸೈಕಲ್​ನಲ್ಲಿ ಪ್ರಯಾಣಿಸಬೇಕೆಂದು ಪ್ಲಾನ್ ಮಾಡಿದ್ದರು. ಆದರೆ, ಜೈಪುರಕ್ಕೆ ತಲುಪಿದ ನಂತರ ಇನ್ನೂ ಮುಂದುವರೆಯಲು ನಿರ್ಧರಿಸಿದರು. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣದ ಜಿಲ್ಲೆಗಳನ್ನು ದಾಟಿ ಭಾನುವಾರ ರಾಜ್​ಘಾಟ್​ ತಲುಪಿದ್ದಾರೆ.

‘ಸೈಕ್ಲಿಂಗ್ ಎಂದರೆ ಧ್ಯಾನವಿದ್ದಂತೆ. ಅದರಿಂದ ಆರೋಗ್ಯ ಹೆಚ್ಚಾಗುವುದು ಮಾತ್ರವಲ್ಲದೆ ಮನಸಿನ ನೆಮ್ಮದಿಯೂ ಹೆಚ್ಚುತ್ತದೆ. ನಾನು ದಿನವೂ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸೈಕ್ಲಿಂಗ್ ಮಾಡುತ್ತಿದ್ದೆ. ಆಮೇಲೆ ಬಿಸಿಲು ಹೆಚ್ಚಾಗುತ್ತಿದ್ದುದರಿಂದ ಸೈಕ್ಲಿಂಗ್ ನಿಲ್ಲಿಸುತ್ತಿದ್ದೆ. ನಾನು ಗಂಟೆಗೆ 15 ಕಿ.ಮೀ. ದೂರವನ್ನು ಸೈಕಲ್​ನಲ್ಲಿ ಪ್ರಯಾಣಿಸುತ್ತಿದ್ದೆ. ಹೀಗೆ ದಿನಕ್ಕೆ 40ರಿಂದ 50 ಕಿ.ಮೀ. ಸೈಕ್ಲಿಂಗ್ ಮಾಡುತ್ತಿದ್ದೆ’ ಎಂದು ಕಿರಣ್ ಸೇಠ್ ಹೇಳಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Wed, 8 June 22

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ