AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿಗರೇ… ಈ ದೀಪಾವಳಿಗೆ ಮುಗ್ಧ ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ ಬಣ್ಣದ ಹಣತೆಗಳನ್ನು ಖರೀದಿಸಿ

ದೀಪಾವಳಿ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ದೀಪದ ಹಬ್ಬದಲ್ಲಿ ಹಣತೆಗಳಿಗೆ ಬಹಳನೇ ಪ್ರಾಧಾನ್ಯತೆ ಇದ್ದು, ಈಗಾಗ್ಲೇ ಅನೇಕರು ಮಾಲ್‌, ಅಂಗಡಿಗಳಲ್ಲಿ ಸುತ್ತಾಡಿ ವಿವಿಧ ಡಿಸೈನ್‌, ವಿವಿಧ ಬಣ್ಣಗಳ ದೀಪಗಳನ್ನು ಖರೀಸುವ ಪ್ಲಾನ್‌ ಮಾಡಿರ್ತಾರೆ. ನೀವೇನಾದ್ರೂ ಮಂಗಳೂರಿನವರಾದ್ರೇ ಮಾಲ್‌, ಇತ್ಯಾದಿ ಅಂಗಡಿಗಳಲ್ಲಿ ದೀಪಗಳನ್ನು ಖರೀದಿಸುವ ಬದಲು ಇಲ್ಲೊಂದು ವಿಶೇಷ ಚೇತನ ಮಕ್ಕಳು ಬಹಳ ಪ್ರೀತಿಯಿಂದ ತಯಾರಿಸಿದಂತಹ ಬಣ್ಣದ ಹಣತೆಗಳನ್ನು ಖರೀದಿಸಿ.

ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 22, 2024 | 12:23 PM

Share

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನೂ ದಿನಗಣನೆ ಶುರುವಾಗಿದೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಹೀಗಾಗಿ ದೀಪಗಳು ಈ ಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಹೆಚ್ಚಿನ ಜನರು ಮಣ್ಣಿನ ದೀಪಗಳನ್ನು ಖರೀದಿಸುವ ಬದಲು ವಿವಿಧ ಡಿಸೈನ್‌ಗಳ ದೀಪಗಳು ಬೇಕೆಂದು ಮಣ್ಣಿನ ಹಣತೆಯ ಬದಲು ಪಿಂಗಾಣಿ, ಪಿಒಪಿ ಹಣತೆಗಳನ್ನು ಖರೀದಿಸುತ್ತಾರೆ. ಈ ಬಾರಿಯ ಹಬ್ಬಕ್ಕೂ ಅನೇಕರು ಮಾಲ್‌, ಅಂಗಡಿಗಳಲ್ಲಿ ಸುತ್ತಾಡಿ ವಿವಿಧ ಡಿಸೈನ್‌, ವಿವಿಧ ಬಣ್ಣಗಳ ದೀಪಗಳನ್ನು ಖರೀಸುವ ಪ್ಲಾನ್‌ ಮಾಡಿರ್ತಾರೆ. ನೀವೇನಾದ್ರೂ ಮಂಗಳೂರಿನಲ್ಲಿದ್ದರೆ ಮಾಲ್‌, ಇತ್ಯಾದಿ ಅಂಗಡಿಗಳಲ್ಲಿ ಪಿಂಗಾಣಿ ಇತ್ಯಾದಿ ದೀಪಗಳನ್ನು ಖರೀದಿಸುವ ಬದಲು ಇಲ್ಲೊಂದು ವಿಶೇಷ ಚೇತನ ಮಕ್ಕಳು ಬಹಳ ಪ್ರೀತಿಯಿಂದ ತಯಾರಿಸಿದಂತಹ ಬಣ್ಣದ ಹಣತೆಗಳನ್ನು ಖರೀದಿಸಿ.

ಮಂಗಳೂರು ನಗರದ ಕೊಡಿಯಾಲ್‌ಬೈಲ್‌ನಲ್ಲಿ ಸೇವಾಭಾರತಿ ಸಂಸ್ಥೆ ನಿರ್ವಹಿಸುತ್ತಿರುವ ಚೇತನಾ ಬಾಲ ವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳು ಈ ಬಣ್ಣದ ಹಣತೆಗಳನ್ನು ತಯಾರಿಸುತ್ತಿದ್ದು, ಈ ಮುದ್ದು ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ ದೀಪಗಳನ್ನು ಸಂಸ್ಥೆಯವರು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯವಾಗಿ ತಯಾರಾದ ಮಣ್ಣಿನ ಹಣತೆಗಳನ್ನು ತಂದು ಈ ವಿಶೇಷ ಚೇತನ ಮಕ್ಕಳ ಕೈಗೆ ನೀಡಲಾಗುತ್ತದೆ. ಗುರುಗಳು ಮತ್ತು ತಮ್ಮ ಮೆಂಟರ್‌ಗಳ ಸಹಾಯದಿಂದ ಈ ಮಕ್ಕಳು ಮಣ್ಣಿನ ದೀಪಗಳಿಗೆ ತಮ್ಮಿಷ್ಟದ ಬಣ್ಣ ಬಳಿದು ಬಣ್ಣದ ಹಣತೆಯನ್ನು ತಯಾರಿಸ್ತಾರೆ. ಎಲ್ಲೆಲ್ಲೋ ಚೌಕಾಸಿ ಮಾಡಿ ಹಣತೆಗಳನ್ನು ಖರೀದಿಸುವ ಬದಲು ಈ ಮುಗ್ಧ ಮನಸ್ಸುಗಳು ಬಹಳ ಪ್ರೀತಿಯಿಂದ ತಯಾರಿಸಿದ ಶ್ರೇಷ್ಠ ಹಣತೆಗಳನ್ನು ಖರೀದಿಸುವುದು ಸೂಕ್ತ ಅಲ್ವಾ.

ಇದನ್ನೂ ಓದಿ: ಕೌಟುಂಬಿಕ ಕಲಹ… ಹೆಂಡತಿ-ಮಗಳಿಂದಲೇ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ; ವಿಡಿಯೋ ವೈರಲ್

ಈ ಕುರಿತ ಪೋಸ್ಟ್‌ ಪೋಸ್ಟ್‌ ಒಂದನ್ನು HarryDS46144044 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಂಗಳೂರಿನ ಮಿತ್ರರೇ, ದಯವಿಟ್ಟು ಸ್ವಲ್ಪ ಬಿಡಿವು ಮಾಡಿಕೊಂಡು ಇಲ್ಲಿಂದಲೇ ಖರೀದಿಸುವ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ವಿಶೇಷ ಚೇತನ ಮಕ್ಕಳು ಬಣ್ಣ ಬಣ್ಣದ ಸುಂದರ ಹಣತೆಗಳನ್ನು ತಯಾರಿಸುವ ಅದ್ಭುತ ದೃಶ್ಯವನ್ನು ಕಾಣಬಹುದು. ಅಂಗಡಿಗಳಲ್ಲಿ ದೀಪಗಳನ್ನು ಖರೀದಿಸುವ ಬದಲು ಈ ಮುಗ್ಧ ಮನಸ್ಸುಗಳು ತಯಾರಿಸಿದ ದೀಪಗಳನ್ನು ಖರೀದಿಸಿಸುವ ಮೂಲಕ ಈ ಬಾರಿಯ ಬೆಳಕಿನ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿರಿ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್