AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pillow fighting: ಹೀಗೊಂದು ದಿಂಬಿನ ಕುಸ್ತಿ; ಹೊಸ ಆಟದ ಸ್ಪರ್ಧೆ ನೋಡಲು ಮುಗಿಬಿದ್ದ ಜನ

ಪ್ಲೋರಿಡಾದಲ್ಲಿ ಈ ದಿಂಬಿನ ಹೊಡೆದಾಟವನ್ನು ಕುಸ್ತಿಯ ರೀತಿ  ಸ್ಪರ್ಧೆಯನ್ನಾಗಿ ಆಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿಂಬಿನ ಕುಸ್ತಿಯ ವಿಡಿಯೋ ಸಖತ್​ ವೈರಲ್​ ಆಗಿದೆ.

Pillow fighting: ಹೀಗೊಂದು ದಿಂಬಿನ ಕುಸ್ತಿ; ಹೊಸ ಆಟದ ಸ್ಪರ್ಧೆ ನೋಡಲು ಮುಗಿಬಿದ್ದ ಜನ
ದಿಂಬಿನ ಹೊಡೆದಾಟ
TV9 Web
| Edited By: |

Updated on: Feb 02, 2022 | 1:05 PM

Share

ಸಾಮಾನ್ಯವಾಗಿ ದಿಂಬಿನಿಂದ ಚಿಕ್ಕ ಮಕ್ಕಳು ತಮಾಷೆಗಾಗಿ ಹೊಡೆದಾಡುಕೊಳ್ಳುತ್ತಾರೆ. ಮನರಂಜನೆಗಾಗಿ ಮಾಡುವ ಈ ಹೊಡೆದಾಟ ಮಕ್ಕಳಿಗೆ ಒಂದು ರೀತಿಯ ವ್ಯಾಯಾಮ ಎಂದೇ ಹೇಳುತ್ತಾರೆ. ಆದರೆ ಈಗ ಪ್ಲೋರಿಡಾದಲ್ಲಿ ಈ ದಿಂಬಿನ ಹೊಡೆದಾಟವನ್ನು (Pillow fighting) ಕುಸ್ತಿಯ ರೀತಿ  ಸ್ಪರ್ಧೆಯನ್ನಾಗಿ ಆಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿಂಬಿನ ಕುಸ್ತಿಯ ವಿಡಿಯೋ ಹರಿದಾಡುತ್ತಿದ್ದು ಸಖತ್  ವೈರಲ್​ ಆಗಿದೆ. ದಿಂಬಿನ ಕುಸ್ತಿಯನ್ನು ಫ್ಲೋರಿಡಾದಲ್ಲಿ ಜನವರಿಯಲ್ಲಿ ಆಯೋಜಿಸಲಾಗಿತ್ತು. professional Pillow Fighting Championship (PFC) ಎನ್ನುವ ಸಂಸ್ಥೆ  ಸ್ಪರ್ಧೆಯನ್ನು  ಆಯೋಜಿಸಿತ್ತು. ಇದರ ವಿಡಿಯೋವನ್ನು ರಾಯಿಟರ್ಸ್​ ಹಂಚಿಕೊಂಡಿದೆ.

ಜನವರಿಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 24 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಅವರಲ್ಲಿ 8 ಮಹಿಳೆಯರು ಮತ್ತು 16 ಮಂದಿ ಪುರುಷರು ಭಾಗವಹಿಸಿದ್ದರು. ವಿಡಿಯೋದಲ್ಲಿ ಈ ದಿಂಬಿನ ಕುಸ್ತಿಯನ್ನು ಹೇಗೆ ಮಾಡಿದ್ದಾರೆ ಎನ್ನುವುದನ್ನು ಕಾಣಬಹುದು. ವಿಡಿಯೋದಲ್ಲಿ ಬಣ್ಣ ಬಣ್ಣದ ದಿಂಬುಗಳನ್ನು ಹಿಡಿದುಕೊಂಡು ಇಬ್ಬರು ಸ್ಪರ್ಧಾಳುಗಳು ಕುಸ್ತಿ ಅಂಗಳದಲ್ಲಿ ಹೊಡೆದಾಡುವುದನ್ನು ಕಾಣಬಹುದು.

ಈ ಸ್ಪರ್ಧೆಯಲ್ಲಿ ಇಸ್ಟೆಲಾ ನ್ಯೂನ್ಸ್ ಎನ್ನುವ ಮಹಿಳೆ ಕೆಂಡಾಲ್ ವೋಲ್ಕರ್ ಎನ್ನುವ ಸ್ಪರ್ಧಿಯನ್ನು ಸೋಲಿಸಿ ಗೆಲುವು ಪಡೆದಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಮಾರ್ಕಸ್ ಬ್ರಿಮೇಜ್ ಅವರನ್ನು ಸೋಲಿಸಿ ಹೌಲಿ ಟಿಲ್ಮನ್ ಎನ್ನುವವರು ಗೆಲುವನ್ನು ಸಾಧಿಸಿದ್ದಾರೆ. ಇಬ್ಬರೂ ವಿನ್ನರ್​ಗಳು 5 ಸಾವಿರ ಯುಎಸ್​ ಡಾಲರ್​ ಮತ್ತು ಒಂದು ಬೆಲ್ಟ್​ಅನ್ನು ಬಹುಮಾನವಾಗಿ ಪಡೆದಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ತಿಳಿಸಿದೆ.

ಸದ್ಯ ವಿಡಿಯೋ ನೋಡಿ ಬಳಕೆದಾರರೊಬ್ಬರು ಮುಂದಿನ ದಿನಗಳಲ್ಲಿ ದಿಂಬಿನ ಕುಸ್ತಿ ಅಧಿಕೃತವಾಗಿ ಜಾರಿಗೆ ಬರಬಹುದು. ಏಕೆಂದರೆ ಜನ ಈ ಹೊಸ ಕ್ರೀಡೆಯನ್ನು  ಮೆಚ್ಚಿಕೊಂಡಿದ್ದು, ತಾವೂ ಆಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:

ನಾಯಿಗೆ ಕೆಂಪು ಬಣ್ಣ ಬಳಿದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಯುವತಿ; ವಿಡಿಯೋ ವೈರಲ್

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು