AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಸ್ತೆಯಲ್ಲಿ ನಿಂತ ಮಳೆ ನೀರಿಗೆ ಬಿದ್ದ ಐಫೋನ್;‌ ದುಬಾರಿ ಫೋನ್‌ ಹೋಯ್ತಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಯುವಕ

ರಸ್ತೆಯಲ್ಲಿ ಮಳೆ ನೀರು ನಿಂತ್ರೆ, ವಾಹನ ಸವಾರರು ಪ್ರಯಾಣಿಸಲು ಸಾಕಷ್ಟು ಪರದಾಟ ನಡೆಸಬೇಕಾಗುತ್ತದೆ. ಇನ್ನೂ ರಸ್ತೆಯಲ್ಲಿ ಹೊಂಡಗಳಿದ್ರೆ, ಸವಾರರ ಪಾಡು ಕೇಳುವುದೇ ಬೇಡ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಮಳೆ ನೀರಿದ್ದ ಕಾರಣ ದಾರಿ ಕಾಣದೆ ಯುವಕನೊಬ್ಬನ ಗಾಡಿ ರಸ್ತೆ ಗುಂಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆತನ ದುಬಾರಿ ಬೆಲೆಯ ಫೋನ್‌ ನೀರಿಗೆ ಬಿದ್ದಿದ್ದು, ನನ್ನ ಐಫೋನ್‌ ನೀರಲ್ಲಿ ಹೋಮ ಆಯ್ತೆಂದು ಆತ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Video: ರಸ್ತೆಯಲ್ಲಿ ನಿಂತ ಮಳೆ ನೀರಿಗೆ ಬಿದ್ದ ಐಫೋನ್;‌ ದುಬಾರಿ ಫೋನ್‌ ಹೋಯ್ತಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಯುವಕ
ಕಳೆದು ಹೋದ ಫೋನ್‌ ಹುಡುಕಾಟದಲ್ಲಿ ಯುವಕ Image Credit source: Social Media
ಮಾಲಾಶ್ರೀ ಅಂಚನ್​
|

Updated on: Jul 12, 2025 | 3:10 PM

Share

ರಾಜಸ್ಥಾನ, ಜುಲೈ, 12: ದುಬಾರಿ ಬೆಲೆಯ ಐಫೋನ್‌ (iPhone) ಎಂದ್ರೆ ಯುವಕರಿಗಂತೂ ಪಂಚ ಪ್ರಾಣ. ಹಣ ಇಲ್ಲದಿದ್ರೆ ಏನಂತೆ ಸಾಲ ಮಾಡಿಯಾದ್ರೂ ಈ ದುಬಾರಿ ಫೋನ್‌ ಖರೀದಿಸುವವರಿದ್ದಾರೆ. ಹೀಗೆ ಅದೆಷ್ಟೋ ಜನ ಈಎಮ್‌ಐ ಮೂಲಕ ಐಫೋನ್‌ ಖರೀದಿಸಿದ್ದಾರೆ. ಹೀಗಿರುವಾಗ ಈ ದುಬಾರಿ  ಫೋನ್‌ ಕಳೆದು ಹೋದ್ರೆ ಜೀವವೇ ಹೋದಂತಾಗುತ್ತದೆ ಅಲ್ವಾ. ಇಂತಹದ್ದೇ ಹೃದಯ ವಿದ್ರಾವಕ ಘಟನೆಯೊಂದು ಜೈಪುರದಲ್ಲಿ (Jaipur) ನಡೆದಿದ್ದು, ಐಫೋನ್‌ ಕಳೆದು ಹೋಯ್ತೆಂದು ಯುವಕನೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಹೌದು ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ದಾರಿ ಕಾಣದೆ ಆಕ್ಟಿವಾದಲ್ಲಿ ಹೋಗುತ್ತಿದ್ದ ಆ ಯುವಕ ರಸ್ತೆ ಗುಂಡಿಗೆ ಬಿದ್ದಿದ್ದಾನೆ. ಜೊತೆಗೆ ಆತನ ಮೊಬೈಲ್‌ ನೀರಲ್ಲಿ ಕಳೆದು ಹೋಗಿದ್ದು, ಎಷ್ಟೇ ಹುಡುಕಿದರೂ ಮೊಬೈಲ್‌ ಸಿಗದೇ ಹೋದಾಗ ಬೇಸರಗೊಂಡ ಯುವಕ ಕಣ್ಣೀರು ಸುರಿಸಿದ್ದಾನೆ. ಈ ದೃಶ್ಯ ಇದೀಗ ವೈರಲ್‌ ಆಗುತ್ತಿದೆ.

ದುಬಾರಿ ಫೋನ್‌ ಹೋಯ್ತಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಯುವಕ:

ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಫೋನ್‌ ನೀರಲ್ಲಿ ಹೋಯ್ತು ಎಂದು ಯುವಕನೊಬ್ಬ ಅತ್ತಿದ್ದಾನೆ. ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಆ ಯುವಕನ ಆಕ್ಟಿವಾ ರಸ್ತೆ ಗುಂಡಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆತನ ಜೋಬಿನಲ್ಲಿದ್ದ ಮೊಬೈಲ್‌ ನೀರಿಗೆ ಬಿದ್ದಿದೆ. ಕಷ್ಟಪಟ್ಟು ಖರೀದಿಸಿದ್ದ ಮೊಬೈಲ್‌ ಹೋಯ್ತಲ್ಲ ಎಂದು ಆ ಯುವಕ ರಸ್ತೆ ಮಧ್ಯದಲ್ಲೇ ನಿಂತು ಗಳಗಳನೆ ಕಣ್ಣೀರು ಸುರಿಸಿದ್ದಾನೆ.

ಇದನ್ನೂ ಓದಿ
Image
ವೈದ್ಯರೇ ಪತ್ತೆ ಮಾಡಲು ಆಗದ ಕಾಯಿಲೆ, ಚಾಟ್ ಜಿಟಿಪಿಯಿಂದ ಪತ್ತೆಯಾಯ್ತು
Image
2BHK ಮನೆ, ಸಿಂಪಲ್​​ ಲೈಫ್, ನಿವೃತ್ತಿ ವೇಳೆಗೆ 4.7 ಕೋಟಿ ರೂ ಸಂಪಾದನೆ
Image
ಟ್ರಾಫಿಕ್ ಜಾಮ್ ನಡುವೆ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಉದ್ಯಮಿ
Image
ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ

ವರದಿಗಳ ಪ್ರಕಾರ, “ಹಲ್ದಾರ್‌ ಎಂಬ  ಯುವಕ ತನ್ನ ಆಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಆತನ ಮೊಬೈಲ್‌ ರಸ್ತೆಯಲ್ಲಿ ನಿಂತ ನೀರಿಗೆ ಬಿದ್ದಿದೆ. ಎಷ್ಟೇ ಹುಡುಕಿದರೂ ಫೋನ್‌ ಸಿಗದೇ ಹೋದಾಗ ಆತ ಹತಾಶನಾಗಿ ಕಣ್ಣೀರು ಸುರಿಸಿದ್ದು, ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಜನ ಪಾಪ ಪರದಾಡಬೇಕಿದೆ ಎಂದು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.

ವೈರಲ್‌  ಪೋಸ್ಟ್ ಇಲ್ಲಿದೆ ನೋಡಿ:

Ghar Ke Kalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ತನ್ನ ಫೋನ್‌ಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯವನ್ನು ಕಾಣಹುದು. ಎಷ್ಟೇ ಹುಡುಕಿದರೂ ಫೋನ್‌ ಸಿಗದೇ ಹೋದಾಗ, ಅಯ್ಯೋ ನನ್ನ ಫೋನ್‌ ಹೋಯ್ತು, ನಾನು ಏನ್‌ ಮಾಡ್ಲಿ ಈಗ ಎಂದು ಅಲ್ಲೇ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ಇದನ್ನೂ ಓದಿ: ನೋ ಮೋರ್‌ ಬ್ಯಾಕ್‌ ಬೆಂಚರ್ಸ್‌; ಸಿನಿಮಾದಿಂದ ಪ್ರೇರಣೆ ಪಡೆದು ಹೊಸ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೇರಳದ ಶಾಲೆಗಳು

ಜುಲೈ 10 ರಂದು ಶೇರ್‌ ಮಾಡಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಮೂಲ್ಯ ವಸ್ತುಗಳು ಕಳೆದು ಹೋದ್ರೆ ಎಷ್ಟು ನೋವಾಗುತ್ತೆ ಎಂದು ನನಗೂ ತಿಳಿದಿದೆ. ಈ ಭ್ರಷ್ಟ ನಾಯಕರು ಹಾಗೂ ಕಳಪೆ ವ್ಯವಸ್ಥೆಯಿಂದ ಜನಸಾಮಾನ್ಯರು ನೋವು ಅನುಭವಿಸುವಂತಾಗಿದೆʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಅಮಾಯಕರು ಈ ರೀತಿ ರಸ್ತೆ ಮಧ್ಯೆ ನಿಂತು ಅಳುವುದಕ್ಕೆ ನಾವು ಇಷ್ಟೊಂದೆಲ್ಲಾ ತೆರಿಗೆ ಪಾವತಿ ಮಾಡುತ್ತಿದ್ದೇವೆʼ ಎಂದು ವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ