AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!

Viral Video: 9ನೇ ಮಹಡಿಯಲ್ಲಿರುವ ಮನೆಗೆ ಬೀಗ ಹಾಕಲಾಗಿತ್ತು. ಆ ಮನೆಯ ಬಾಲ್ಕನಿಯಲ್ಲಿ 10ನೇ ಮಹಡಿಯಲ್ಲಿದ್ದವರ ಬೆಡ್​ಶೀಟ್ ಹಾರಿ ಬಿದ್ದಿತ್ತು. ಆ ಬಟ್ಟೆಯನ್ನು ತೆಗೆಯಲು ತಾಯಿ ತನ್ನ ಮಗನನ್ನು ಸೀರೆಯಲ್ಲಿ ಕಟ್ಟಿ ತನ್ನ ಮನೆಯ ಬಾಲ್ಕನಿಯಿಂದ ನೇತಾಡಿಸಿದ್ದಾಳೆ.

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!
ಮಗನನ್ನು ಸೀರೆಗೆ ಕಟ್ಟಿ ಕೆಳಗೆ ಇಳಿಸುತ್ತಿರುವ ತಾಯಿ
TV9 Web
| Edited By: |

Updated on:Feb 12, 2022 | 8:44 PM

Share

ನವದೆಹಲಿ: ಕೆಳಗಿನ ಫ್ಲೋರ್​​ನಲ್ಲಿ ಬಿದ್ದಿದ್ದ ಬಟ್ಟೆಯನ್ನು ಮೇಲೆತ್ತಿಕೊಂಡು ಬರಲು ತನ್ನ ಮಗನ ಕಾಲಿಗೆ ಸೀರೆಯನ್ನು ಕಟ್ಟಿ ಕೆಳಗೆ ಇಳಿಬಿಟ್ಟ ವಿಡಿಯೋ ಭಾರೀ ವೈರಲ್ (Viral Video) ಆಗಿದೆ. ದೆಹಲಿಯ ಎನ್​ಸಿಆರ್​​ನ ಫರಿದಾಬಾದ್​ನಲ್ಲಿ ಮಹಿಳೆಯೊಬ್ಬರು 10ನೇ ಮಹಡಿಯಿಂದ ತನ್ನ ಮಗುವನ್ನು ಕೆಳಗೆ ನೇತಾಡಿಸಿರುವ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು ಆ ಅಪಾರ್ಟ್​ಮೆಂಟ್​ನ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಆ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವರದಿಯ ಪ್ರಕಾರ, 9ನೇ ಮಹಡಿಯಲ್ಲಿರುವ ಮನೆಗೆ ಬೀಗ ಹಾಕಲಾಗಿತ್ತು. ಆ ಮನೆಯ ಬಾಲ್ಕನಿಯಲ್ಲಿ 10ನೇ ಮಹಡಿಯಲ್ಲಿದ್ದವರ ಬೆಡ್​ಶೀಟ್ ಹಾರಿ ಬಿದ್ದಿತ್ತು. ಆ ಬಟ್ಟೆಯನ್ನು ತೆಗೆಯಲು ತಾಯಿ ತನ್ನ ಮಗನನ್ನು ಸೀರೆಯಲ್ಲಿ ಕಟ್ಟಿ ತನ್ನ ಮನೆಯ 10ನೇ ಮಹಡಿಯ ಬಾಲ್ಕನಿಯಿಂದ ಕೆಳಗಿನ ಮಹಡಿಯ ಬಾಲ್ಕನಿಗೆ ನೇತಾಡಿಸಿದ್ದಾಳೆ. ತಲೆ ಕೆಳಗಾಗಿ ಇಳಿದ ಆತ ಅಲ್ಲಿ ಬಿದ್ದಿದ್ದ ಬೆಡ್​ಶೀಟ್ ತೆಗೆದುಕೊಂಡ ನಂತರ ಮಗನನ್ನು ಸೀರೆಯಿಂದ ಮೇಲೆಳೆದುಕೊಂಡಿದ್ದಾಳೆ.

ಕಳೆದ ವಾರ ಸೆಕ್ಟರ್ 82ರಲ್ಲಿ ಫರಿದಾಬಾದ್‌ನ ಫ್ಲೋರಿಡಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಈ ಶಾಕಿಂಗ್ ವಿಡಿಯೋ ಭಾರೀ ವೈರಲ್ ಆಗಿದೆ. ನೆರೆಹೊರೆಯವರು ತಮ್ಮ ಮೊಬೈಲ್‌ನಿಂದ ಈ ಸಂಪೂರ್ಣ ಘಟನೆಯ ವೀಡಿಯೋ ಮಾಡಿ ಹರಿಬಿಡುತ್ತಿದ್ದಂತೆ ಆ ಮಹಿಳೆ ತನ್ನ ತಪ್ಪು ಒಪ್ಪಿಕೊಂಡಿದ್ದು, ವಿಷಾದ ವ್ಯಕತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಗೆಳತಿಯನ್ನು ಸೂಟ್​ಕೇಸ್​ನಲ್ಲಿಟ್ಟು ಹಾಸ್ಟೆಲ್​ನೊಳಗೆ ಕರೆದೊಯ್ದ ವಿದ್ಯಾರ್ಥಿ; ಮಣಿಪಾಲ್ ಗರ್ಲ್ ವಿಡಿಯೋ ವೈರಲ್

Shocking Video: ಉದ್ಯಮಿಗೆ ಡಿಕ್ಕಿ ಹೊಡೆದು ಬಾನೆಟ್ ಮೇಲೆ ಎಳೆದುಕೊಂಡು ಹೋದ ಕಾರು; ಮಾಜಿ ಐಎಎಸ್​ ಅಧಿಕಾರಿ, ಮಗನ ಬಂಧನ

Published On - 8:43 pm, Sat, 12 February 22

Follow Us
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು