AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಸ್​ ಮೇಲೆ ಹತ್ತಿ ಡಾನ್ಸ್ ಮಾಡಿ ನಕ್ಕು ನಗಿಸಿದ ಸ್ಪೈಡರ್ ಮ್ಯಾನ್, ವೈರಲ್ ವಿಡಿಯೋ ಇಲ್ಲಿದೆ

ಬಸ್ ಮೇಲೆ ಹತ್ತಿದ ಸ್ಪೈಡರ್ ಮ್ಯಾನ್ ವೇಷದಾರಿ ಡಾನ್ಸ್ ಮಾಡಿ ನೋಡುಗರನ್ನು ನಕ್ಕು ನಗಿಸಿದ್ದಾನೆ. ಇದರ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ.

Viral Video: ಬಸ್​ ಮೇಲೆ ಹತ್ತಿ ಡಾನ್ಸ್ ಮಾಡಿ ನಕ್ಕು ನಗಿಸಿದ ಸ್ಪೈಡರ್ ಮ್ಯಾನ್, ವೈರಲ್ ವಿಡಿಯೋ ಇಲ್ಲಿದೆ
ಬಸ್ ಮೇಲೆ ಡಾನ್ಸ್ ಮಾಡಿದ ಸ್ಪೈಡರ್ ಮ್ಯಾನ್
TV9 Web
| Edited By: |

Updated on:Jul 17, 2022 | 6:10 PM

Share

ಜೇಡದಂತಹ ಅವತಾರದಲ್ಲಿ ಕಾಣಸಿಗುವವನೇ ಸ್ಪೈಡರ್ ಮ್ಯಾನ್ (Spider-Man) ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ತನ್ನ ಕೈ ಮೂಲಕ ಪ್ರಬಲವಾದ ಜೇಡದ ಬಲೆಯನ್ನು ಬೀಸುತ್ತಾನೆ, ಆ ಜೇಡದ ಬಲೆಯಲ್ಲೇ ನೇತಾಡುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತಾನೆ, ಶತ್ರಗಳ ವಿರುದ್ಧ ಫೈಟ್ ಮಾಡುವಾಗಲೂ ಪ್ರಬಲ ಬಲೆಯನ್ನು ಬೀಸುತ್ತಾನೆ, ಇಂತಹ ಅನೇಕ ದೃಶ್ಯಗಳನ್ನು ಸ್ಪೈಡರ್ ಮ್ಯಾನ್ ಸಿನಿಮಾದಲ್ಲಿ ಕಾಣಬಹುದು. ಇಂತಹ ಸ್ಪೈಡರ್ ಮ್ಯಾನ್​ನ ವೇಷವನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡು ವಿಚಿತ್ರವಾಗಿ ವರ್ತಿಸಿದರೆ ಹೇಗೆ? ಇಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಸ್​ನ ಮೇಲೆ ಸ್ಪೈಡರ್ ಮ್ಯಾನ್ ಡಾನ್ಸ್ (Dance) ಮಾಡಿ ಕೀಟಲೆ ಕೊಡುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಬಸ್​ನ ಮೇಲೆ ಸ್ಪೈಡರ್​ ಮ್ಯಾನ್ ವೇಷ ಧರಿಸಿರುವ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಆತ ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸಾಹಸಗಳನ್ನು ಮಾಡುತ್ತಾನೆ ಎಂದು ವಿಡಿಯೋ ನೋಡುವಾಗ ಯೋಚಿಸಿದರೆ, ಆತ ಮಾಡಿದ್ದೇ ಬೇರೆ. ಅಷ್ಟಕ್ಕೂ ಆತ ಬಸ್​ನ ಮೇಲ್ಛಾವಣಿ ಮೇಲೆ ನಿಂತು ಮಾಡಿದ್ದ ಡಾನ್ಸ್. ಬಸ್​ನ ಮೇಲೆ ಮಲಗಿ ಕಿಟಕಿಯಲ್ಲಿ ಇಣುಕುವುದನ್ನು ಮಾಡಿದ ಸ್ಪೈಡರ್ ಮ್ಯಾನ್, ನಂತರ ಫನ್ನಿಯಾಗಿ ಡಾನ್ಸ್ ಮಾಡಿ ನೋಡುಗರನ್ನು ನಕ್ಕು ನಗಿಸಿದ್ದಾನೆ. ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸಾಹಸಗಳನ್ನು ಮಾಡದಿದ್ದರೂ ಕೆಲವೊಂದು ಸ್ಪೈಡರ್ ಮ್ಯಾನ್ ಸನ್ನೆಗಳನ್ನು ಮಾಡಿದ್ದಾನೆ.

comedynation.teb ಎಂಬ ಟ್ವಿಟರ್ ಖಾತೆಯಲ್ಲಿ ಈ ಸ್ಪೈಡರ್ ಮ್ಯಾನ್ ವಿಡಿಯೋವನ್ನು ಹಂಚಿಕೊಂಡಿದ್ದು, “ಸ್ಪೈಡರ್ ಮ್ಯಾನ್ ಭಾರತಕ್ಕೆ ಬಂದಾಗ” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ವೈರಲ್ ಪಡೆದಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ.

Published On - 6:10 pm, Sun, 17 July 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್