AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಸಾವನ್ನಪ್ಪಿದ ಮುದ್ದಿನ ನಾಯಿಯ ಕಂಚಿನ ಪ್ರತಿಮೆ ನಿರ್ಮಿಸಿದ ಮಾಲೀಕ

ತಮ್ಮ ಮುದ್ದಿನ ನಾಯಿಯ 5ನೇ ಪುಣ್ಯತಿಥಿಯಂದು ಈ ಕಂಚಿನ ಪುತ್ಥಳಿಯನ್ನು ಮಾಲೀಕರು ಉದ್ಘಾಟನೆ ಮಾಡಿದ್ದಾರೆ.

Viral News: ಸಾವನ್ನಪ್ಪಿದ ಮುದ್ದಿನ ನಾಯಿಯ ಕಂಚಿನ ಪ್ರತಿಮೆ ನಿರ್ಮಿಸಿದ ಮಾಲೀಕ
ನಾಯಿಯ ಕಂಚಿನ ಪುತ್ಥಳಿ
TV9 Web
| Edited By: |

Updated on:Jul 23, 2021 | 8:04 PM

Share

ನಾಯಿ, ಬೆಕ್ಕುಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಯಿಂದ ಸಾಕುವವರು ಸಾಕಷ್ಟು ಜನರಿದ್ದಾರೆ. ನಿಯತ್ತಿಗೆ ಮತ್ತೊಂದು ಹೆಸರಾಗಿರುವ ನಾಯಿಗೂ ಹೆಸರಿಟ್ಟು, ಬೇಕಾದ ಬಟ್ಟೆಗಳನ್ನೆಲ್ಲ ತೊಡಿಸಿ, ಸಂಭ್ರಮಿಸುವ ಶ್ವಾನಪ್ರಿಯರ ಸಂಖ್ಯೆಯೇನೂ ಕಡಿಮೆಯಿಲ್ಲ. ಅದೇರೀತಿ ಆಂಧ್ರಪ್ರದೇಶದ ಕುಟುಂಬವೊಂದು ಬಹಳ ಪ್ರೀತಿಯಿಂದ ನಾಯಿಮರಿಯನ್ನು ಸಾಕಿಕೊಂಡಿತ್ತು. ಆ ನಾಯಿಮರಿ ದೊಡ್ಡದಾಗಿ ಮನೆಯವರಲ್ಲಿ ಒಂದಾಗಿ ಬದುಕುತ್ತಿತ್ತು. ಆದರೆ, 5 ವರ್ಷಗಳ ಹಿಂದೆ ಆ ನಾಯಿ ಸಾವನ್ನಪ್ಪಿತ್ತು. ಆ ದುಃಖದಿಂದ ಹೊರಬರಲು ಇನ್ನೂ ಪ್ರಯತ್ನಿಸುತ್ತಲೇ ಇರುವ ಆ ಕುಟುಂಬಸ್ಥರು ತಮ್ಮ ಮುದ್ದಿನ ನಾಯಿಯ ನೆನಪಿಗಾಗಿ ಮನೆಯ ಪಕ್ಕದಲ್ಲಿ ಆ ನಾಯಿಯ ಕಂಚಿನ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಮುದ್ದಿನ ನಾಯಿಯ 5ನೇ ಪುಣ್ಯತಿಥಿಯಂದು ಈ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಜ್ಞಾನಪ್ರಕಾಶ್ ರಾವ್ ಎಂಬ ವ್ಯಕ್ತಿ ತಮ್ಮ ಮುದ್ದಿನ ನಾಯಿಯ ನೆನಪಿನಲ್ಲಿ ಕಂಚಿನ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಆ ನಾಯಿ ಸಾವನ್ನಪ್ಪಿದ ದಿನ ಎಲ್ಲ ರೀತಿಯ ಶಾಸ್ತ್ರಗಳನ್ನೂ ನೆರವೇರಿಸಿದ್ದಾರೆ. 9 ವರ್ಷ ಸಾಕಿದ್ದ ನಾಯಿಯ ನೆನಪನ್ನು ಪುತ್ಥಳಿಯ ಮೂಲಕ ಗಟ್ಟಿಯಾಗಿಸಿಕೊಂಡಿದ್ದಾರೆ ಆ ನಾಯಿಯ ಒಡೆಯ.

ಹೊಸದಾಗಿ ನಿರ್ಮಿಸಲಾದ ನಾಯಿಯ ಪ್ರತಿಮೆಗೆ ಪೂಜೆಯನ್ನೂ ಸಲ್ಲಿಸಿದ್ದಾರೆ. ಆ ಪ್ರತಿಮೆಗೆ ಕಲಶಾಭಿಷೇಕ ಮಾಡಿ ಕಾರ್ಯಕ್ರಮಕ್ಕೆ ಬಂದವರಿಗೆ ಸಿಹಿಯೂಟ ಹಾಕಿಸಿದ್ದಾರೆ.

dog statue

ನಾಯಿಯ ಕಂಚಿನ ಪುತ್ಥಳಿ

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(Andhra Pradesh Man Erects Bronze Statue of His Late Pet Dog on 5th Death Anniversary)

Published On - 8:03 pm, Fri, 23 July 21

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ