AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗಳಿಗೆ ಹಾಸ್ಯ ಪ್ರಜ್ಞೆ ಇಲ್ಲವೆ? ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹೂ ಕೇಳುತ್ತಿದ್ದಾರೆ, ನೆಟ್ಟಿಗರ ಉತ್ತರವೇನು?

Viral Video : ಸ್ಮಾರ್ಟ್​ ಜನರು ಹೀಗೇ ಜಾರಿಕೊಳ್ಳುವುದು ಮೇಡಮ್​ ಎಂದು ಒಬ್ಬರು. ಈ ವಿಡಿಯೋ ನೋಡಿದ ಮೇಲೆ ಆನೆಗಳಿಗೆ ಹಾಸ್ಯಪ್ರಜ್ಞೆ ಇಲ್ಲವೆಂದು ಯಾವತ್ತೂ ಹೇಳುವುದಿಲ್ಲ ಬಿಡಿ ಮೇಡಮ್​ ಎಂದು ಇನ್ನೊಬ್ಬರು. ನೀವೇನಂತೀರಿ?

ಆನೆಗಳಿಗೆ ಹಾಸ್ಯ ಪ್ರಜ್ಞೆ ಇಲ್ಲವೆ? ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹೂ ಕೇಳುತ್ತಿದ್ದಾರೆ, ನೆಟ್ಟಿಗರ ಉತ್ತರವೇನು?
ಆನೆಮರಿ ಮಣ್ಣಿನ ದಿಬ್ಬದಿಂದ ಜಾರಿ ಬಂದಿರುವುದು
TV9 Web
| Edited By: |

Updated on:Jan 04, 2023 | 1:17 PM

Share

Viral Video : ಮಣ್ಣಾಟದಲ್ಲಿ ಈ ಆನೆಗಳ ಹಿಂಡು ಮುಳುಗಿದೆ. ಈ ವಿಡಿಯೋ ಟ್ವೀಟ್ ಮಾಡಿದ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹೂ, ‘ಯಾರು ಹೇಳಿದ್ದು ಆನೆಗಳಿಗೆ ಹಾಸ್ಯ ಪ್ರಜ್ಞೆ ಇಲ್ಲವೆಂದು?’ ಹೀಗಂತ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಮರಿಯಾನೆಯೊಂದು ಈ ಚಿಕ್ಕ ಮಣ್ಣಿನ ದಿಬ್ಬವನ್ನು ಇಳಿಯಲು ನೌಟಂಕಿ ಮಾಡಿದೆ ಎನ್ನುವುದು ಸುಪ್ರಿಯಾ ಅವರ ಗ್ರಹಿಕೆ. ಅನೇಕರು ಹೌದೆಂದಿದ್ದಾರೆ ಇನ್ನೂ ಹಲವರು ಇದನ್ನು ಒಪ್ಪಿಲ್ಲ. ಒಟ್ಟಾರೆಯಾಗಿ ಈ ವಿಡಿಯೋ ಸಾಕಷ್ಟು ಜನರನ್ನು ನಗೆಗಡಲಿಗಂತೂ ದೂಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಈತನಕ ಸುಮಾರು 65,000 ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದು ತಮಾಷೆಯಾಗಿದೆ. ಆನೆಗಳು ಹೀಗೆಲ್ಲ ತಮಾಷೆ ಮಾಡುತ್ತವೆ ಎಂದಿದ್ದಾರೆ ಹಲವರು. ಇದನ್ನು ನೋಡಿ ಬಹಳ ಖುಷಿಯಾಯಿತು. ಆದರೆ ಇದು ತಮಾಷೆಗಾಗಿ ಹೀಗೆಲ್ಲ ಮಾಡುತ್ತಿಲ್ಲ ಎಂದಿದ್ಧಾರೆ ಅನೇಕರು.

ಇದನ್ನೂ ಓದಿ : ಓರಿಯನ್ ಮಾಲ್​ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ

ದೇವರು ಎಲ್ಲ ಜೀವಿಗಳಿಗೂ ಎಲ್ಲಾ ರೀತಿಯ ಪ್ರಜ್ಞೆಯನ್ನು ದಯಪಾಲಿಸಿರುತ್ತಾನೆ ಎಂದಿದ್ದಾರೆ ಒಬ್ಬರು. ಇದು ಆನೆಮರಿ, ನಾಲ್ಕು ಕಾಲಿನ ಪ್ರಾಣಿಗಳಿಗೆ ಇಳಿಜಾರನ್ನು ಇಳಿಯುವುದು ತುಸು ಕಷ್ಟವೇ. ಇಳಿಯಲು ಹೋಗಿ ಉತುಳಿದೆ, ಇದರಲ್ಲಿ ಹಾಸ್ಯಪ್ರಜ್ಞೆ ಏನು ಬಂತು ಎಂದು ಕೇಳಿದ್ದಾರೆ ಕೆಲವರು. ಈ ವಿಡಿಯೋ ನೋಡಿದ ಮೇಲೆ ಆನೆಗಳಿಗೆ ಹಾಸ್ಯಪ್ರಜ್ಞೆ ಇಲ್ಲವೆಂದು ಇನ್ನು ಯಾವತ್ತೂ ಹೇಳುವುದಿಲ್ಲ ಮೇಡಮ್​ ಎಂದು ನಗುವ ಎಮೋಟಿಕಾನ್​ ಹಾಕಿದ್ದಾರೆ ಮತ್ತೂ ಒಬ್ಬರು.

ಇದನ್ನೂ ನೋಡಿ : ಆನೆಗಳ ಉಪಹಾರ ಗೃಹ; ಮುದುಮಲೈನ ತೆಪ್ಪಕಾಡಿನಲ್ಲಿರುವ ಶಿಬಿರಕ್ಕೆ ಬನ್ನಿ

ಎರಡನೇ ಆನೆಯು ತನ್ನ ಶಕ್ತಿಯನ್ನು ಉಳಿಸಿಕೊಳ್ಳುವ ತಂತ್ರವನ್ನು ಹೂಡಿದೆ ಎಂದಿದ್ದಾರೆ ಒಬ್ಬರು. ಸ್ಮಾರ್ಟ್​ ಜನರು ಹೀಗೇ ಜಾರಿಕೊಳ್ಳುವುದು! ಎಂದಿದ್ದಾರೆ ಮತ್ತೊಬ್ಬರು. ಪ್ರತಿಯೊಂದು ಜೀವಿಗೂ ಚಲಿಸಲು ಅದರದೇ ಆದ ತಂತ್ರಗಳಿರುತ್ತವೆ ಎಂದಿದ್ದಾರೆ ಮಗದೊಬ್ಬರು. ಆನೆಗಳು ಅತ್ಯಂತ ಬುದ್ಧಿಶಾಲಿಗಳಿ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:01 pm, Wed, 4 January 23

ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ