AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನೀನೆಂಥ ಕೆಟ್ಟ ಮೋಸಗಾರ ಎಂದು ಈಗ ಇಡೀ ಊರಿಗೆ ತಿಳಿಯುತ್ತದೆ!

Boyfriend Cheated: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ನೀಚತನವನ್ನು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಬಹಿರಂಗಪಡಿಸಿದ್ದಾಳೆ. ಇದು ತಮಾಷೆಗಾಗಿ ಮಾಡಿದ್ದಲ್ಲ.

Viral: ನೀನೆಂಥ ಕೆಟ್ಟ ಮೋಸಗಾರ ಎಂದು ಈಗ ಇಡೀ ಊರಿಗೆ ತಿಳಿಯುತ್ತದೆ!
Source : India Today
TV9 Web
| Edited By: |

Updated on:Aug 12, 2022 | 3:50 PM

Share

Cheating in Relationship : ಪ್ರೇಮ ಸಂಬಂಧದಲ್ಲಿ ಮೋಸ ಹೋಗುವುದು, ಬ್ರೇಕ್​ಅಪ್​ಗೆ ಒಳಗಾಗುವುದು ಅನೇಕ ಜನರ ಮನಸ್ಸಿನ ಮೇಲೆ ಆಳಗಾಯ ಮಾಡುತ್ತದೆ ನಿಜ. ಬ್ರೇಕ್​ ಅಪ್​ನ ನಂತರ ಕೆಲವರು ಮೌನವಾಗಿದ್ದುಬಿಡುತ್ತಾರೆ. ಇನ್ನೂ ಕೆಲವರು ಅದರಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಮತ್ತೂ ಕೆಲವರು ಇದನ್ನು ಬೇರೊಂದು ಹಂತದಲ್ಲಿ ತಮಗಾದ ನೋವನ್ನು ವ್ಯಕ್ತಪಡಿಸಲು ನೋಡುತ್ತಾರೆ. ಡೈಲಿ ಮೇಲ್​ನಲ್ಲಿ ಪ್ರಕಟವಾದ ವರದಿಯಲ್ಲಿ, ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ‘ನೀಚ’ ಕೃತ್ಯವನ್ನು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಬಹಿರಂಗಪಡಿಸಿದ್ದಾಳೆ. ಇದು ತಮಾಷೆಗಾಗಿ ಮಾಡಿದ್ದಲ್ಲ. ಜೆನ್ನಿ ನೀಡಿದ ಈ ಜಾಹೀರಾತು Mackay and Whitsunday Life​ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಜಾಹಿರಾತಿನ ಒಕ್ಕಣೆಯನ್ನು ಓದಿ; ‘ಆತ್ಮೀಯ ಸ್ಟೀವ್, ನೀನು ಅವಳೊಂದಿಗೆ ಖುಷಿಯಿಂದ ಇದ್ದೀಯೆಂದು ಭಾವಿಸುತ್ತೇನೆ. ಈಗ ನೋಡು ನೀನು ಎಂಥ ಮೋಸಗಾರ, ಕೆಟ್ಟವ ಎನ್ನುವುದು ಇಡೀ ಊರಿಗೇ ತಿಳಿಯುತ್ತದೆ. ವಿ.ಸೂ – ಈ ಜಾಹೀರಾತನ್ನು ನಿನ್ನ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ನೀಡಿದ್ದೇನೆ.’

Mackay and Whitsunday Life​ ಪತ್ರಿಕೆಯು ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ, ‘ಮ್ಯಾಕೆ ಲೈಫ್‌ನ 4ನೇ ಪುಟದಲ್ಲಿ ಬಂದ ಈ ಜಾಹೀರಾತಿನ ಕುರಿತಾಗಿ ಬರುತ್ತಿರುವ ಸಂದೇಶಗಳಿಗೆ ಉತ್ತರಿಸಲಾಗದಷ್ಟು ಪ್ರಶ್ನೆಗಳಿಂದ ನಾವು ಮುಳುಗಿ ಹೋಗುತ್ತಿದ್ದೇವೆ, ಹಾಗಾಗಿ ಇಲ್ಲಿಯೇ ಆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇವೆ; ಸ್ಟೀವ್ ಯಾರೆಂದು ನಮಗೆ ಗೊತ್ತಿಲ್ಲ. ಆದರೆ ಆತ ಕೆಟ್ಟ ವ್ಯಕ್ತಿಯಂತೂ ಹೌದು. ಅಲ್ಲದೆ ಜೆನ್ನಿಯ ವಿಷಯವಾಗಿ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾರೆವು.’ ಈ ಪೋಸ್ಟ್​ ಇದೀಗ ವೈರಲ್ ಆಗಿದ್ದು, 4,000 ಲೈಕ್ಸ್​, 2,500 ಪ್ರತಿಕ್ರಿಯೆ, 1,400 ಶೇರ್ ಆಗಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ನೆಟ್ಟಿಗರೊಬ್ಬರು, ‘ನಾನು ಜೆನ್ನಿಯ ಪರವಾಗಿ ಇದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಯಾಕೆ ನೀವು ಕ್ರೆಡಿಟ್ ಕಾರ್ಡ್​ ಗೆ ಚಾರ್ಜ್​ ಮಾಡಿಲ್ಲ. ಸಾರ್ವಜನಿಕರಿಗಾಗಿ ಉಚಿತ ಸೇವೆ ನೀಡುತ್ತಿದ್ದೀರಾ?’ ಎಂದು ಪತ್ರಿಕೆಯವರಿಗೆ ಇನ್ನೊಬ್ಬ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:47 pm, Fri, 12 August 22

Follow Us
ಕಾನ್ಸ್‌ಟೇಬಲ್‌ ಜತೆ ಎಂಗೇಜ್ಮೆಂಟ್‌ ಆಗಿ ಮೂರೇ ತಿಂಗಳಿಗೆ ಯುವತಿ ದುರಂತ ಸಾವು
ಕಾನ್ಸ್‌ಟೇಬಲ್‌ ಜತೆ ಎಂಗೇಜ್ಮೆಂಟ್‌ ಆಗಿ ಮೂರೇ ತಿಂಗಳಿಗೆ ಯುವತಿ ದುರಂತ ಸಾವು
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ವೈಕೋ ಮನೆಗೆ ಹೋದ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್
ವೈಕೋ ಮನೆಗೆ ಹೋದ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಅಗತ್ಯಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ
ಅಗತ್ಯಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು