AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: “ಕಚರಾ” ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು

Zomato : “ಲಗಾನ್" ಚಿತ್ರದ “ಕಚರಾ" ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ' ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ. 

Viral: “ಕಚರಾ ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು
ಝೋಮ್ಯಾಟೋದ ''ಕಚರಾ'' ಎಂಬ ಹೊಸ ಜಾಹೀರಾತಿನ ದೃಶ್ಯಗಳು
Follow us
ಶ್ರೀದೇವಿ ಕಳಸದ
|

Updated on: Jun 08, 2023 | 2:15 PM

Advertisement : ಝೊಮ್ಯಾಟೋ (Zomato) ಸಂಸ್ಥೆಯಂತೂ ತನ್ನ ಚಾಲಾಕು ಮಾರ್ಕೆಟಿಂಗ್ ತಂತ್ರ,  ಚತುರೋಕ್ತಿ, ಹಾಸ್ಯಪ್ರವೃತ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ ಉತ್ಪನ್ನ ಹಾಗೂ ಸೇವೆಗಳಿಗೆ ಹೊರತಾಗಿಯೂ ಮಾತುಗಾರಿಕೆಯಿಂದ ಜನಪ್ರಿಯವಾಗಿದೆ. ಅದರ ಜಾಹೀರಾತುಗಳು ವಿಭಿನ್ನವಾಗಿದ್ದು ಹಲವರಿಗೆ ಮೆಚ್ಚುಗೆಯಾಗಿ, ಕೆಲವರಿಗೆ ಕಿರಿಕಿರಿ ಮಾಡಿ, ಒಟ್ಟಾರೆ ಎಲ್ಲರೂ ಎದ್ದುಕುಳಿತು ಗಮನಿಸುವಂತಿರುತ್ತವೆ. ಮಾಧ್ಯಮ, ಜಾಹೀರಾತು ಕ್ಷೇತ್ರದ ಅನುಭವಸ್ಥರೂ ಇಂಥವುಗಳನ್ನು ವಿಮರ್ಶಕ ದೃಷ್ಟಿಯಿಂದ ಗಮನಿಸಿ ಇವುಗಳಲ್ಲಿನ ಕೌಶಲ ಹಾಗೂ ಜಾಣ್ಮೆಯನ್ನು ಬಿಡಿಸಿ ತೋರಿಸಿದ್ದಾರೆ.

ಆದರೆ ಅತೀ ಜಾಣತನವೂ ಒಮ್ಮೊಮ್ಮೆ ಮುಳುವಾಗುತ್ತದೆ. ಸೃಜನಶೀಲತೆ ಮಾನವ ಸಹಜ ಸೂಕ್ಷ್ಮ ಸಂವೇದನೆಯ ಹಂಗು ತೊರೆದು ಬರೀ ಚಾತುರ್ಯ ಅಥವಾ ಗಿಮಿಕ್ಸ್​ನಿಂದ ಕೂಡಿದ್ದರೆ ನಾಚಿಕೆಗೇಡು ಎಂದೆನ್ನಿಸಿಕೊಳ್ಳುತ್ತದೆ.  ಝೊಮ್ಯಾಟೋ ಬಿಡುಗಡೆ ಮಾಡಿದ ಇತ್ತೀಚಿನ ಜಾಹೀರಾತು ಇಂಥದ್ದೇ. ಸುಮಾರು 20 ವರ್ಷಗಳ ಹಿಂದೆ ದೊಡ್ಡ ಸಂಚಲನ ಮೂಡಿಸಿದ್ದ “ಲಗಾನ್” ಚಿತ್ರದ “ಕಚರಾ” ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ’ ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ.

ಇದನ್ನು ಓದಿ : Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

”ಕಚರಾ ಎಂದು ಶೀರ್ಷಿಕೆ ಕೊಟ್ಟಿದ್ದು ಮೊದಲನೇ ತಪ್ಪು, ಈಗ ಅದನ್ನೇ ಮರುಕಳಿಸಿ ಅದೇ ಪಾತ್ರಧಾರಿಯನ್ನು ತೀರಾ ಅಮಾನವೀಯವಾಗಿ ಚಿತ್ರಿಸಿ, ಅವನಿಂದ ಮನೆಮಂದಿಗೆಲ್ಲ ಚಾಕರಿ ಮಾಡಿಸುವುದನ್ನು ತೋರಿಸಿದ್ದಾರೆ,” “ಇದು ದಲಿತ ಶೋಷಣೆಯ ವಿಜೃಂಭಣೆ; ಸಂವೇದನಾರಹಿತ ಜಾತೀವಾದಿ ಝೊಮ್ಯಾಟೋ” “ಮರುಬಳಕೆಯ ಬಗ್ಗೆ ಎಷ್ಟು ಬಗೆಯಲ್ಲಿ ಎಷ್ಟು ಚೆಂದವಾಗಿ ಹೇಳಬಹುದಿತ್ತು, ಆದರೆ ಝೊಮ್ಯಾಟೋ ಆಯ್ಕೆ ಮಾಡಿಕೊಂಡದ್ದು ಇಂಥ ಕೀಳುಮಟ್ಟವನ್ನು” ಎಂಬ ಉಗ್ರ ಆದರೆ ಸರಿಯಾದ ಪ್ರತಿಕ್ರಿಯೆಗಳು ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ : Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ

ಒಂದು ಜಾಹೀರಾತು ಹೊರಬರಬೇಕೆಂದರೆ ಅದು ಅನೇಕರ ಅವಗಾಹನೆಗೆ ಬಂದು ಅನುಮತಿ ಪಡೆದಿರಬೇಕಾಗುತ್ತದೆ. ಹಾಗಿದ್ದರೆ ಇಡೀ ಝೊಮ್ಯಾಟೋದ ನಾಯಕತ್ವದಲ್ಲಿ ಸಂವೇದನೆ ಇರುವವರು ಒಬ್ಬರೂ ಇಲ್ಲವೇ? ಎಂಬ ಪ್ರಶ್ನೆ ಏಳುತ್ತದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆಯೇ ಬೇಡವೇ? ನಿಮ್ಮ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?