AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: “ಕಚರಾ” ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು

Zomato : “ಲಗಾನ್" ಚಿತ್ರದ “ಕಚರಾ" ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ' ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ. 

Viral: “ಕಚರಾ ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು
ಝೋಮ್ಯಾಟೋದ ''ಕಚರಾ'' ಎಂಬ ಹೊಸ ಜಾಹೀರಾತಿನ ದೃಶ್ಯಗಳು
ಶ್ರೀದೇವಿ ಕಳಸದ
|

Updated on: Jun 08, 2023 | 2:15 PM

Share

Advertisement : ಝೊಮ್ಯಾಟೋ (Zomato) ಸಂಸ್ಥೆಯಂತೂ ತನ್ನ ಚಾಲಾಕು ಮಾರ್ಕೆಟಿಂಗ್ ತಂತ್ರ,  ಚತುರೋಕ್ತಿ, ಹಾಸ್ಯಪ್ರವೃತ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ ಉತ್ಪನ್ನ ಹಾಗೂ ಸೇವೆಗಳಿಗೆ ಹೊರತಾಗಿಯೂ ಮಾತುಗಾರಿಕೆಯಿಂದ ಜನಪ್ರಿಯವಾಗಿದೆ. ಅದರ ಜಾಹೀರಾತುಗಳು ವಿಭಿನ್ನವಾಗಿದ್ದು ಹಲವರಿಗೆ ಮೆಚ್ಚುಗೆಯಾಗಿ, ಕೆಲವರಿಗೆ ಕಿರಿಕಿರಿ ಮಾಡಿ, ಒಟ್ಟಾರೆ ಎಲ್ಲರೂ ಎದ್ದುಕುಳಿತು ಗಮನಿಸುವಂತಿರುತ್ತವೆ. ಮಾಧ್ಯಮ, ಜಾಹೀರಾತು ಕ್ಷೇತ್ರದ ಅನುಭವಸ್ಥರೂ ಇಂಥವುಗಳನ್ನು ವಿಮರ್ಶಕ ದೃಷ್ಟಿಯಿಂದ ಗಮನಿಸಿ ಇವುಗಳಲ್ಲಿನ ಕೌಶಲ ಹಾಗೂ ಜಾಣ್ಮೆಯನ್ನು ಬಿಡಿಸಿ ತೋರಿಸಿದ್ದಾರೆ.

ಆದರೆ ಅತೀ ಜಾಣತನವೂ ಒಮ್ಮೊಮ್ಮೆ ಮುಳುವಾಗುತ್ತದೆ. ಸೃಜನಶೀಲತೆ ಮಾನವ ಸಹಜ ಸೂಕ್ಷ್ಮ ಸಂವೇದನೆಯ ಹಂಗು ತೊರೆದು ಬರೀ ಚಾತುರ್ಯ ಅಥವಾ ಗಿಮಿಕ್ಸ್​ನಿಂದ ಕೂಡಿದ್ದರೆ ನಾಚಿಕೆಗೇಡು ಎಂದೆನ್ನಿಸಿಕೊಳ್ಳುತ್ತದೆ.  ಝೊಮ್ಯಾಟೋ ಬಿಡುಗಡೆ ಮಾಡಿದ ಇತ್ತೀಚಿನ ಜಾಹೀರಾತು ಇಂಥದ್ದೇ. ಸುಮಾರು 20 ವರ್ಷಗಳ ಹಿಂದೆ ದೊಡ್ಡ ಸಂಚಲನ ಮೂಡಿಸಿದ್ದ “ಲಗಾನ್” ಚಿತ್ರದ “ಕಚರಾ” ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ’ ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ.

ಇದನ್ನು ಓದಿ : Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

”ಕಚರಾ ಎಂದು ಶೀರ್ಷಿಕೆ ಕೊಟ್ಟಿದ್ದು ಮೊದಲನೇ ತಪ್ಪು, ಈಗ ಅದನ್ನೇ ಮರುಕಳಿಸಿ ಅದೇ ಪಾತ್ರಧಾರಿಯನ್ನು ತೀರಾ ಅಮಾನವೀಯವಾಗಿ ಚಿತ್ರಿಸಿ, ಅವನಿಂದ ಮನೆಮಂದಿಗೆಲ್ಲ ಚಾಕರಿ ಮಾಡಿಸುವುದನ್ನು ತೋರಿಸಿದ್ದಾರೆ,” “ಇದು ದಲಿತ ಶೋಷಣೆಯ ವಿಜೃಂಭಣೆ; ಸಂವೇದನಾರಹಿತ ಜಾತೀವಾದಿ ಝೊಮ್ಯಾಟೋ” “ಮರುಬಳಕೆಯ ಬಗ್ಗೆ ಎಷ್ಟು ಬಗೆಯಲ್ಲಿ ಎಷ್ಟು ಚೆಂದವಾಗಿ ಹೇಳಬಹುದಿತ್ತು, ಆದರೆ ಝೊಮ್ಯಾಟೋ ಆಯ್ಕೆ ಮಾಡಿಕೊಂಡದ್ದು ಇಂಥ ಕೀಳುಮಟ್ಟವನ್ನು” ಎಂಬ ಉಗ್ರ ಆದರೆ ಸರಿಯಾದ ಪ್ರತಿಕ್ರಿಯೆಗಳು ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ : Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ

ಒಂದು ಜಾಹೀರಾತು ಹೊರಬರಬೇಕೆಂದರೆ ಅದು ಅನೇಕರ ಅವಗಾಹನೆಗೆ ಬಂದು ಅನುಮತಿ ಪಡೆದಿರಬೇಕಾಗುತ್ತದೆ. ಹಾಗಿದ್ದರೆ ಇಡೀ ಝೊಮ್ಯಾಟೋದ ನಾಯಕತ್ವದಲ್ಲಿ ಸಂವೇದನೆ ಇರುವವರು ಒಬ್ಬರೂ ಇಲ್ಲವೇ? ಎಂಬ ಪ್ರಶ್ನೆ ಏಳುತ್ತದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆಯೇ ಬೇಡವೇ? ನಿಮ್ಮ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್