AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: “ಕಚರಾ” ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು

Zomato : “ಲಗಾನ್" ಚಿತ್ರದ “ಕಚರಾ" ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ' ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ. 

Viral: “ಕಚರಾ ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು
ಝೋಮ್ಯಾಟೋದ ''ಕಚರಾ'' ಎಂಬ ಹೊಸ ಜಾಹೀರಾತಿನ ದೃಶ್ಯಗಳು
ಶ್ರೀದೇವಿ ಕಳಸದ
|

Updated on: Jun 08, 2023 | 2:15 PM

Share

Advertisement : ಝೊಮ್ಯಾಟೋ (Zomato) ಸಂಸ್ಥೆಯಂತೂ ತನ್ನ ಚಾಲಾಕು ಮಾರ್ಕೆಟಿಂಗ್ ತಂತ್ರ,  ಚತುರೋಕ್ತಿ, ಹಾಸ್ಯಪ್ರವೃತ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ ಉತ್ಪನ್ನ ಹಾಗೂ ಸೇವೆಗಳಿಗೆ ಹೊರತಾಗಿಯೂ ಮಾತುಗಾರಿಕೆಯಿಂದ ಜನಪ್ರಿಯವಾಗಿದೆ. ಅದರ ಜಾಹೀರಾತುಗಳು ವಿಭಿನ್ನವಾಗಿದ್ದು ಹಲವರಿಗೆ ಮೆಚ್ಚುಗೆಯಾಗಿ, ಕೆಲವರಿಗೆ ಕಿರಿಕಿರಿ ಮಾಡಿ, ಒಟ್ಟಾರೆ ಎಲ್ಲರೂ ಎದ್ದುಕುಳಿತು ಗಮನಿಸುವಂತಿರುತ್ತವೆ. ಮಾಧ್ಯಮ, ಜಾಹೀರಾತು ಕ್ಷೇತ್ರದ ಅನುಭವಸ್ಥರೂ ಇಂಥವುಗಳನ್ನು ವಿಮರ್ಶಕ ದೃಷ್ಟಿಯಿಂದ ಗಮನಿಸಿ ಇವುಗಳಲ್ಲಿನ ಕೌಶಲ ಹಾಗೂ ಜಾಣ್ಮೆಯನ್ನು ಬಿಡಿಸಿ ತೋರಿಸಿದ್ದಾರೆ.

ಆದರೆ ಅತೀ ಜಾಣತನವೂ ಒಮ್ಮೊಮ್ಮೆ ಮುಳುವಾಗುತ್ತದೆ. ಸೃಜನಶೀಲತೆ ಮಾನವ ಸಹಜ ಸೂಕ್ಷ್ಮ ಸಂವೇದನೆಯ ಹಂಗು ತೊರೆದು ಬರೀ ಚಾತುರ್ಯ ಅಥವಾ ಗಿಮಿಕ್ಸ್​ನಿಂದ ಕೂಡಿದ್ದರೆ ನಾಚಿಕೆಗೇಡು ಎಂದೆನ್ನಿಸಿಕೊಳ್ಳುತ್ತದೆ.  ಝೊಮ್ಯಾಟೋ ಬಿಡುಗಡೆ ಮಾಡಿದ ಇತ್ತೀಚಿನ ಜಾಹೀರಾತು ಇಂಥದ್ದೇ. ಸುಮಾರು 20 ವರ್ಷಗಳ ಹಿಂದೆ ದೊಡ್ಡ ಸಂಚಲನ ಮೂಡಿಸಿದ್ದ “ಲಗಾನ್” ಚಿತ್ರದ “ಕಚರಾ” ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ’ ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ.

ಇದನ್ನು ಓದಿ : Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

”ಕಚರಾ ಎಂದು ಶೀರ್ಷಿಕೆ ಕೊಟ್ಟಿದ್ದು ಮೊದಲನೇ ತಪ್ಪು, ಈಗ ಅದನ್ನೇ ಮರುಕಳಿಸಿ ಅದೇ ಪಾತ್ರಧಾರಿಯನ್ನು ತೀರಾ ಅಮಾನವೀಯವಾಗಿ ಚಿತ್ರಿಸಿ, ಅವನಿಂದ ಮನೆಮಂದಿಗೆಲ್ಲ ಚಾಕರಿ ಮಾಡಿಸುವುದನ್ನು ತೋರಿಸಿದ್ದಾರೆ,” “ಇದು ದಲಿತ ಶೋಷಣೆಯ ವಿಜೃಂಭಣೆ; ಸಂವೇದನಾರಹಿತ ಜಾತೀವಾದಿ ಝೊಮ್ಯಾಟೋ” “ಮರುಬಳಕೆಯ ಬಗ್ಗೆ ಎಷ್ಟು ಬಗೆಯಲ್ಲಿ ಎಷ್ಟು ಚೆಂದವಾಗಿ ಹೇಳಬಹುದಿತ್ತು, ಆದರೆ ಝೊಮ್ಯಾಟೋ ಆಯ್ಕೆ ಮಾಡಿಕೊಂಡದ್ದು ಇಂಥ ಕೀಳುಮಟ್ಟವನ್ನು” ಎಂಬ ಉಗ್ರ ಆದರೆ ಸರಿಯಾದ ಪ್ರತಿಕ್ರಿಯೆಗಳು ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ : Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ

ಒಂದು ಜಾಹೀರಾತು ಹೊರಬರಬೇಕೆಂದರೆ ಅದು ಅನೇಕರ ಅವಗಾಹನೆಗೆ ಬಂದು ಅನುಮತಿ ಪಡೆದಿರಬೇಕಾಗುತ್ತದೆ. ಹಾಗಿದ್ದರೆ ಇಡೀ ಝೊಮ್ಯಾಟೋದ ನಾಯಕತ್ವದಲ್ಲಿ ಸಂವೇದನೆ ಇರುವವರು ಒಬ್ಬರೂ ಇಲ್ಲವೇ? ಎಂಬ ಪ್ರಶ್ನೆ ಏಳುತ್ತದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆಯೇ ಬೇಡವೇ? ನಿಮ್ಮ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್