AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ

Meghana Goankar : ರಕ್ಷಿತ್​ ಶೆಟ್ಟಿ ನಿಮಗಾಗಿ ಕಾಯುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದಿಂದ ಇಂಥ ರೀಲ್ ಅನ್ನು ಈತನಕ ಯಾರೂ ಮಾಡಿರಲಿಲ್ಲ. ಓಹ್​ ಕಲಬುರ್ಗಿಯ ನಮ್ಮ ಶಾಲೆಯಲ್ಲಿಯೇ ನೀವು ಓದಿರುವುದು! ಅಂತೆಲ್ಲ ಪ್ರತಿಕ್ರಿಯೆಗಳಿವೆ.

Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ
ಇಳಕಲ್ ಸೀರೆಯಲ್ಲಿ ನಟಿ ಮೇಘನಾ ಗಾಂವಕರ್ (Meghana Gaonkar)
TV9 Web
| Edited By: |

Updated on:Jun 08, 2023 | 1:32 PM

Share

Kannada Actress : ನಮ್ ಏರಿಯಾಲ್ಲೊಂದಿನ, ವಿನಾಯಕ ಗೆಳೆಯರ ಬಳಗ, ತುಘಲಕ್​, ಚಾರ್​ ಮಿನಾರ್, ಸಿಂಪಲ್ಲಾಗೊಂದು ಇನ್ನೊಂದು ಲವ್​ ಸ್ಟೋರಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಮೇಘನಾ ಗಾಂವಕರ್ (Meghana Goankar)​ ಹೊಸ ರೀಲ್​ ಮೂಲಕ ಟ್ವಿಟರ್​ ಟ್ರೆಂಡಿಂಗ್​ನಲ್ಲಿದ್ದಾರೆ; ಪಾಚಿಹಸಿರಿನ ಪರಾಸ್ಪೇಟ್​ ದಡಿಯ ವಿಸ್ಕೋಸ್​ ಇಳಕಲ್​ ಸೀರೆಯುಟ್ಟು, ಗುಳೇದಗುಡ್ಡದ ಪಂಚರಂಗೀ ಕಣ ತೊಟ್ಟು, ಮೂಗಿಗೆ ಗಾಡೆ ಹಾಕಿಕೊಂಡು, ತುರುಬಿಗೆ ಮಲ್ಲಿಗೆ ಮುಡಿದು, ಕೈಯಲ್ಲಿ ಕಮಲದ ಮೊಗ್ಗು ಹಿಡಿದು…

ಸುಮಾರು 65,000 ಜನರು ಮೇಘನಾ ಟ್ವೀಟ್ ಮಾಡಿದ ಈ ರೀಲ್ ನೋಡಿದ್ದಾರೆ. ಅನೇಕರು ಆಹಾ ನಮ್ಮ ಇಳಕಲ್ ಸೀರೆಯಲ್ಲಿ ಎಷ್ಟು ಛಂದ ಕಾಣ್ತೀರಿ ಎಂದು ಉದ್ಗರಿಸಿದ್ದಾರೆ. ಅಂದಹಾಗೆ ಮೇಘನಾ ಹುಟ್ಟಿದ್ದು ಕಲಬುರ್ಗಿಯಲ್ಲಿ. ಇಲ್ಲಿಯ ಶ್ರೀ ಶರಣಬಸವೇಶ್ವರ ವಸತಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ ನಂತರ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು.

ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಆದರ್ಶ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ಡಿಪ್ಲೋಮೋ ಇನ್ ಆ್ಯಕ್ಟಿಂಗ್​ ಅಂಡ್ ಮೇಕಿಂಗ್​ ಕೋರ್ಸ್ ಪೂರೈಸಿದರು. ನಂತರ ಧಾರಾವಾಹಿ ”ಕುಮುದ” ಮೂಲಕ ಕಿರುತೆರೆ ಪ್ರವೇಶಿಸಿದರು. ರಿಯಾಲಿಟಿ ಷೋ ಮೂಲಕ ಪ್ರತಿಭೆ ಸಾಬೀತುಪಡಿಸಿದರು. ”ಚಾರ್​ ಮಿನಾರ್​” ಸಿನೆಮಾದ ಮೂಲಕ ಮುನ್ನೆಲೆಗೆ ಬಂದರು.

ಈ ಇಳಕಲ್​ ಸೀರೆ ಮೇಘನಾರನ್ನು ಹೊಸ ಅವಕಾಶದೆಡೆ ಕರೆದೊಯ್ದೀತೆ? ಇವರ ನಟನಾ ಸಾಮರ್ಥ್ಯಕ್ಕೆ ಹೊಸ ದಿಕ್ಕು ತೋರಿಸೀತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 12:20 pm, Thu, 8 June 23

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ