AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ

Meghana Goankar : ರಕ್ಷಿತ್​ ಶೆಟ್ಟಿ ನಿಮಗಾಗಿ ಕಾಯುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದಿಂದ ಇಂಥ ರೀಲ್ ಅನ್ನು ಈತನಕ ಯಾರೂ ಮಾಡಿರಲಿಲ್ಲ. ಓಹ್​ ಕಲಬುರ್ಗಿಯ ನಮ್ಮ ಶಾಲೆಯಲ್ಲಿಯೇ ನೀವು ಓದಿರುವುದು! ಅಂತೆಲ್ಲ ಪ್ರತಿಕ್ರಿಯೆಗಳಿವೆ.

Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ
ಇಳಕಲ್ ಸೀರೆಯಲ್ಲಿ ನಟಿ ಮೇಘನಾ ಗಾಂವಕರ್ (Meghana Gaonkar)
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 08, 2023 | 1:32 PM

Kannada Actress : ನಮ್ ಏರಿಯಾಲ್ಲೊಂದಿನ, ವಿನಾಯಕ ಗೆಳೆಯರ ಬಳಗ, ತುಘಲಕ್​, ಚಾರ್​ ಮಿನಾರ್, ಸಿಂಪಲ್ಲಾಗೊಂದು ಇನ್ನೊಂದು ಲವ್​ ಸ್ಟೋರಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಮೇಘನಾ ಗಾಂವಕರ್ (Meghana Goankar)​ ಹೊಸ ರೀಲ್​ ಮೂಲಕ ಟ್ವಿಟರ್​ ಟ್ರೆಂಡಿಂಗ್​ನಲ್ಲಿದ್ದಾರೆ; ಪಾಚಿಹಸಿರಿನ ಪರಾಸ್ಪೇಟ್​ ದಡಿಯ ವಿಸ್ಕೋಸ್​ ಇಳಕಲ್​ ಸೀರೆಯುಟ್ಟು, ಗುಳೇದಗುಡ್ಡದ ಪಂಚರಂಗೀ ಕಣ ತೊಟ್ಟು, ಮೂಗಿಗೆ ಗಾಡೆ ಹಾಕಿಕೊಂಡು, ತುರುಬಿಗೆ ಮಲ್ಲಿಗೆ ಮುಡಿದು, ಕೈಯಲ್ಲಿ ಕಮಲದ ಮೊಗ್ಗು ಹಿಡಿದು…

ಸುಮಾರು 65,000 ಜನರು ಮೇಘನಾ ಟ್ವೀಟ್ ಮಾಡಿದ ಈ ರೀಲ್ ನೋಡಿದ್ದಾರೆ. ಅನೇಕರು ಆಹಾ ನಮ್ಮ ಇಳಕಲ್ ಸೀರೆಯಲ್ಲಿ ಎಷ್ಟು ಛಂದ ಕಾಣ್ತೀರಿ ಎಂದು ಉದ್ಗರಿಸಿದ್ದಾರೆ. ಅಂದಹಾಗೆ ಮೇಘನಾ ಹುಟ್ಟಿದ್ದು ಕಲಬುರ್ಗಿಯಲ್ಲಿ. ಇಲ್ಲಿಯ ಶ್ರೀ ಶರಣಬಸವೇಶ್ವರ ವಸತಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ ನಂತರ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು.

ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಆದರ್ಶ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ಡಿಪ್ಲೋಮೋ ಇನ್ ಆ್ಯಕ್ಟಿಂಗ್​ ಅಂಡ್ ಮೇಕಿಂಗ್​ ಕೋರ್ಸ್ ಪೂರೈಸಿದರು. ನಂತರ ಧಾರಾವಾಹಿ ”ಕುಮುದ” ಮೂಲಕ ಕಿರುತೆರೆ ಪ್ರವೇಶಿಸಿದರು. ರಿಯಾಲಿಟಿ ಷೋ ಮೂಲಕ ಪ್ರತಿಭೆ ಸಾಬೀತುಪಡಿಸಿದರು. ”ಚಾರ್​ ಮಿನಾರ್​” ಸಿನೆಮಾದ ಮೂಲಕ ಮುನ್ನೆಲೆಗೆ ಬಂದರು.

ಈ ಇಳಕಲ್​ ಸೀರೆ ಮೇಘನಾರನ್ನು ಹೊಸ ಅವಕಾಶದೆಡೆ ಕರೆದೊಯ್ದೀತೆ? ಇವರ ನಟನಾ ಸಾಮರ್ಥ್ಯಕ್ಕೆ ಹೊಸ ದಿಕ್ಕು ತೋರಿಸೀತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 12:20 pm, Thu, 8 June 23

ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್