AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃತಕ ಸೂರ್ಯನ ತಯಾರಿಸಿದ ಚೀನಾ! ಇದು ಸೂರ್ಯನಿಗಿಂತ 10 ಪಟ್ಟು ಹೆಚ್ಚು ಶಾಖ ಕೊಡುತ್ತದೆ..

ಪರಮಾಣು ಅಧ್ಯಯನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಚೀನಾ ಇದೀಗ 'ಕೃತಕ ಸೂರ್ಯ ಎಂದು ಕರೆಯಲ್ಪಡುವ ಪರಮಾಣು ಸಮ್ಮಿಳನ(nuclear fusion) ರಿಯಾಕ್ಟರ್ ಸಿದ್ಧಪಡಿಸಿದೆ.

ಕೃತಕ ಸೂರ್ಯನ ತಯಾರಿಸಿದ ಚೀನಾ! ಇದು ಸೂರ್ಯನಿಗಿಂತ 10 ಪಟ್ಟು ಹೆಚ್ಚು ಶಾಖ ಕೊಡುತ್ತದೆ..
ಟೊಕಮಕ್
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 05, 2020 | 2:13 PM

Share

ಬೀಜಿಂಗ್: ಪರಮಾಣು ಅಧ್ಯಯನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಚೀನಾ ಇದೀಗ ಕೃತಕ ಸೂರ್ಯ ಎಂದು ಕರೆಯಲ್ಪಡುವ ಪರಮಾಣು ಸಮ್ಮಿಳನ (nuclear fusion) ರಿಯಾಕ್ಟರ್ ಸಿದ್ಧಪಡಿಸಿದೆ.

ಹೆಚ್ಎಲ್– 2ಎಂ ಟೊಕಮಕ್ ರಿಯಾಕ್ಟರ್ ಚೀನಾದ ಅತೀ ದೊಡ್ಡ ಮತ್ತು ಆಧುನಿಕ ನ್ಯೂಕ್ಲಿಯರ್ ಫ್ಯೂಷನ್ ಪರೀಕ್ಷಾರ್ಥ ಅಧ್ಯಯನ ಸಾಧನವಾಗಿದ್ದು, ಇದು ಪ್ರಬಲ ಮತ್ತು ಸ್ವಚ್ಛ ಚೈತನ್ಯದ ಮೂಲವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೇಗೆ ಕಾರ್ಯವೆಸಗುತ್ತದೆ?

ಬಿಸಿ ಪ್ಲಾಸ್ಮಾವನ್ನು ಕರಗಿಸಲು ಇಲ್ಲಿ ಪ್ರಬಲವಾದ ಕಾಂತೀಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್) ಬಳಸಲಾಗುತ್ತದೆ. ಪೀಪಲ್ಸ್ ಡೈಲಿ ಪ್ರಕಾರ ಇಲ್ಲಿ 150 ದಶಲಕ್ಷ ಡಿಗ್ರಿ ಸೆಲ್ಶಿಯಸ್ ಗಿಂತಲೂ ಹೆಚ್ಚು ಶಾಖ ಉತ್ಪಾದನೆ ಮಾಡಬಹುದಾಗಿದೆ. ಅಂದರೆ ಸೂರ್ಯನ ಶಾಖಕ್ಕಿಂತ ಅಂದಾಜು 10 ಪಟ್ಟು ಹೆಚ್ಚು.

ನೈಋತ್ಯ ಸಿಯಾಚಿನ್ ಪ್ರದೇಶದಲ್ಲಿರುವ ಈ ರಿಯಾಕ್ಟರ್​ನ ಕೆಲಸ ಕಳೆದ ವರ್ಷ ಪೂರ್ಣಗೊಂಡಿತ್ತು. ಅಧಿಕ ಶಾಖ ಮತ್ತು ಚೈತನ್ಯ ಉತ್ಪಾದಿಸುವ ರಿಯಾಕ್ಟರ್ ಇದಾಗಿರುವುದರಿಂದ ಇದನ್ನು ಕೃತಕ ಸೂರ್ಯ ಎಂದು ಕರೆಯಲಾಗಿದೆ.

2006ರಿಂದಲೇ ಚೀನಾದ ವಿಜ್ಞಾನಿಗಳು ನ್ಯೂಕ್ಲಿಯರ್ ಫ್ಯೂಷನ್ ರಿಯಾಕ್ಟರ್ ಗಳ ಚಿಕ್ಕ ಆವೃತ್ತಿಗಳನ್ನು ಅಭಿವೃದ್ಧಿ ಪಡಿಸಲು ಆರಂಭಿಸಿದ್ದರು.

ಚೀನಾದ ರಾಷ್ಟ್ರೀಯ ಪರಮಾಣು ಕಾರ್ಪೊರೇಷನ್ (ಸಿಎನ್​​ಎನ್​ಸಿ) ಪ್ರಕಾರ ಎಚ್ಎಲ್ – 2ಎಂ ಟೊಕಮಕ್ ಈ ಹಿಂದಿನ ಆವೃತ್ತಿ ಎಚ್ಎಲ್– 2ಎಗಿಂತ ಮೂರು ಪಟ್ಟು ಉಷ್ಣತೆಯಿಂದ ಕೂಡಿದೆ.

ಹೈಡ್ರೋಜನ್ ಮತ್ತು ಡ್ಯೂಟೇರಿಯಂ ಅನಿಲಗಳಿಂದ ಸೂರ್ಯನಲ್ಲಿ ಶಾಖ ಉತ್ಪಾದಿಸಲ್ಪಡುವಂತೆ ಪರಮಾಣು ಸಮ್ಮಿಳನದ ಮೂಲಕ ಇಲ್ಲಿ ಶಾಖ ಉತ್ಪಾದಿಸಲ್ಪಡುತ್ತದೆ.

ದಕ್ಷಿಣ ಫ್ರಾನ್ಸ್​ನಲ್ಲಿ ನಿರ್ಮಾಣ ಹಂತದಲ್ಲಿರುವ ದಿ ಇಂಟರ್ ನ್ಯಾಷನಲ್ ಥರ್ಮೊನ್ಯೂಕ್ಲಿಯರ್ ಎಕ್ಸ್​ಪರಿಮೆಂಟಲ್ ರಿಯಾಕ್ಟರ್ (ಐಟಿಇಆರ್) 150 ದಶಲಕ್ಷ ಡಿಗ್ರಿ ಸೆಲ್ಶಿಯಸ್ ಉಷ್ಣತೆಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Published On - 1:20 pm, Sat, 5 December 20

ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ