AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೊನಾಲ್ಡ್​ ಟ್ರಂಪ್ ಕೊಂದವರಿಗೆ 84 ಕೋಟಿ ರೂ. ಕೊಡುತ್ತೇವೆ ಎಂದು ಬಹುಮಾನ ಘೋಷಿಸಿದ ಇರಾಕಿ ಉಗ್ರ ಸಂಘಟನೆ

ಇರಾಕಿ ಉಗ್ರ ಸಂಘಟನೆ ಡೊನಾಲ್ಡ್ ಟ್ರಂಪ್ ಹತ್ಯೆಗೆ $10 ಮಿಲಿಯನ್ (84 ಕೋಟಿ ರೂ.) ಬಹುಮಾನ ಘೋಷಿಸಿದೆ. 2020ರಲ್ಲಿ ಟ್ರಂಪ್ ಆದೇಶದ ಮೇರೆಗೆ ಸುಲೈಮಾನಿ ಹತ್ಯೆ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕ್ರಮ. ಅಮೆರಿಕದಲ್ಲಿ ಟ್ರಂಪ್ ಭದ್ರತೆ ಬಿಗಿಗೊಳಿಸಲಾಗಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ. ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಡೊನಾಲ್ಡ್​ ಟ್ರಂಪ್ ಕೊಂದವರಿಗೆ 84 ಕೋಟಿ ರೂ. ಕೊಡುತ್ತೇವೆ ಎಂದು ಬಹುಮಾನ ಘೋಷಿಸಿದ ಇರಾಕಿ ಉಗ್ರ ಸಂಘಟನೆ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Jul 17, 2026 | 7:55 AM

Share

ಇರಾಕ್, ಜುಲೈ 17: ಅಮೆರಿಕ ಮತ್ತು ಮಧ್ಯಪ್ರಾಚ್ಯದ ನಡುವಿನ ಯುದ್ಧದ ಜ್ಚಾಲೆಗಳು ಈಗ ಅತ್ಯಂತ ವಿಕೋಪಕ್ಕೆ ತಿರುಗಿದೆ. ಇರಾಕ್(Iraq)​ನಲ್ಲಿ ಸಕ್ರಿಯವಾಗಿರುವ ಇರಾನ್ ಬೆಂಬಲಿತ ಪ್ರಬಲ ಸಶಸ್ತ್ರ ಸಂಘಟನೆ ‘ಇಸ್ಲಾಮಿಕ್ ರೆಸಿಸ್ಟೆನ್ಸ್’ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಂದವರಿಗೆ ಬರೋಬ್ಬರಿ 10 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 84 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ತಮ್ಮ ಸಂಘಟನೆಯ ಅಧಿಕೃತ ಸಾಮಾಜಿಕ ಮಾಧ್ಯಮ ಮತ್ತು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಬಿಡುಗಡೆ ಮಾಡಿರುವ ಆಘಾತಕಾರಿ ಹೇಳಿಕೆಯಲ್ಲಿ ಇದನ್ನು ಘೋಷಿಸಲಾಗಿದೆ.

ಇಸ್ಲಾಮಿಕ್ ಕಿಸಾಸ್ ನಿಯಮದ ಉಲ್ಲೇಖ

ಈ ಉಗ್ರಗಾಮಿ ಸಂಘಟನೆಯು ತನ್ನ ಅಧಿಕೃತ ಪ್ರಕಟಣೆಯನ್ನು ಪರಮ ದಯಾಳು, ಕರುಣಾಮಯಿ ಅಲ್ಲಾಹನ ಹೆಸರಿನಲ್ಲಿ ಎಂಬ ಇಸ್ಲಾಮಿಕ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದೆ. ಅಲ್ಲದೆ, ಪವಿತ್ರ ಕುರಾನ್‌ನ ವಚನವಾದ ಕಿಸಾಸ್ ಅನ್ನು ಉಲ್ಲೇಖಿಸಿ ಟ್ರಂಪ್ ಹತ್ಯೆಯನ್ನು ಸಮರ್ಥಿಸಿಕೊಂಡಿದೆ.

ಅಮೆರಿಕದ ಅಧ್ಯಕ್ಷ ಟ್ರಂಪ್ ತನ್ನ ದುರಹಂಕಾರದಿಂದ ನಮ್ಮ ಹೆಮ್ಮೆಯ ಹುತಾತ್ಮ ಕಮಾಂಡರ್‌ಗಳಾದ ಹಾಜಿ ಖಾಸಿಮ್ ಸೊಲೈಮಾನಿ ಮತ್ತು ಹಾಜಿ ಅಬು ಮಹ್ದಿ ಅಲ್ ಮುಹಂದಿಸ್ ಅವರ ರಕ್ತ ಹರಿಸಿದ್ದಾನೆ. ಇರಾಕಿನ ರಕ್ತವನ್ನು ಚೆಲ್ಲಿದ, ನಮ್ಮ ನಾಯಕರನ್ನು ಮತ್ತು ಮಕ್ಕಳನ್ನು ಕೊಂದ ಈ ಅಪರಾಧಿ ಟ್ರಂಪ್‌ನನ್ನು ಜಗತ್ತಿನ ಸ್ವತಂತ್ರ ಜನರು ಶಾಂತಿಯಿಂದ ಬದುಕಲು ಬಿಡುವುದಿಲ್ಲ. ಆತನ ತಲೆಗೆ ನಾವು 10 ಮಿಲಿಯನ್ ಡಾಲರ್ ಇನಾಮು ಇಟ್ಟಿದ್ದೇವೆ ಎಂದು ಸಂಘಟನೆ ಗುಡುಗಿದೆ. ದಬ್ಬಾಳಿಕೆಯ ಅಮೆರಿಕದ ಸಿಂಹಾಸನ ಉರುಳುವವರೆಗೂ ಈ ಹಗೆತನ ಮುಂದುವರಿಯಲಿದೆ ಎಂದು ಉಗ್ರರು ಶಪಥ ಮಾಡಿದ್ದಾರೆ.

ಹಗೆತನಕ್ಕೆ ಮೂಲ ಕಾರಣವೇನು? ಈ ಭೀಕರ ಹತ್ಯೆಯ ಬೆದರಿಕೆಯ ಹಿಂದೆ 6 ವರ್ಷಗಳ ಹಳೆಯ ಸೇಡಿನ ಇತಿಹಾಸವಿದೆ.

ಬಾಗ್ದಾದ್ ಡ್ರೋನ್ ದಾಳಿ: 2020 ರ ಜನವರಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ನೇರ ಆದೇಶದ ಮೇರೆಗೆ, ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕದ ಸೇನೆ ಭೀಕರ ಡ್ರೋನ್ ದಾಳಿ ನಡೆಸಿತ್ತು.

ಮತ್ತಷ್ಟು ಓದಿ: Iran ಮೇಲೆ ಮತ್ತೊಂದು ಭೀಕರ ದಾಳಿಗೆ ಡೊನಾಲಡ್​ ಟ್ರಂಪ್ ಸಿದ್ಧತೆ: ಸಂಯಮ ಕಾಯ್ದುಕೊಳ್ಳಲು ಭಾರತದ ತುರ್ತು ಕರೆ

ಖಾಸಿಂ ಸುಲೈಮಾನಿ ಅಂತ್ಯ: ಈ ದಾಳಿಯಲ್ಲಿ ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಕಮಾಂಡರ್ ಜನರಲ್ ಖಾಸೆಮ್ ಸೊಲೈಮಾನಿ ಮತ್ತು ಇರಾಕಿನ ಮಿಲಿಟಿಯಾ ನಾಯಕ ಅಬು ಮಹ್ದಿ ಅಲ್ ಮುಹಂದಿಸ್ ಸ್ಥಳದಲ್ಲೇ ಹತರಾಗಿದ್ದರು. ಅಂದಿನಿಂದ ಇರಾನ್ ಮತ್ತು ಇರಾಕ್‌ನ ಸಶಸ್ತ್ರ ಗುಂಪುಗಳು ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರಂತರವಾಗಿ ಹೊಂಚು ಹಾಕುತ್ತಿವೆ.

ಕಮಾಂಡೋ ಕಾವಲಿನಲ್ಲಿ ಡೊನಾಲ್ಡ್ ಟ್ರಂಪ್

ಇರಾಕಿ ಸಂಘಟನೆಯ ಈ ಬಹಿರಂಗ ಸುಪಾರಿ ಪ್ರಕಟಣೆಯು ಅಮೆರಿಕದ ಗುಪ್ತಚರ ವಲಯದಲ್ಲಿ ಭಾರಿ ತಲ್ಲಣ ಮೂಡಿಸಿದೆ.

ಅಮೆರಿಕ ರಕ್ಷಣಾ ಪಡೆಗಳ ಅಲರ್ಟ್: ಶ್ವೇತಭವನವಾಗಲಿ ಅಥವಾ ಯುಎಸ್ ರಕ್ಷಣಾ ಇಲಾಖೆಯಾಗಲಿ ಈ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಮತ್ತು ಎಫ್‌ಬಿಐ ಈ ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುತ್ತಲಿನ ಭದ್ರತೆಯನ್ನು ಅಭೂತಪೂರ್ವ ಮಟ್ಟಕ್ಕೆ ಬಿಗಿಗೊಳಿಸಿದೆ.

ಅಮೆರಿಕ ನೆಲದಲ್ಲೇ ಹತ್ಯೆ ಆತಂಕ: ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದ ಚುನಾವಣೆ ಹಾಗೂ ರ‍್ಯಾಲಿಗಳ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಸರಣಿ ಶೂಟೌಟ್ ಹಾಗೂ ಹತ್ಯೆ ಯತ್ನಗಳ ಹಿಂದೆ ಇರಾನ್ ಪ್ರೇರಿತ ‘ಸ್ಲೀಪರ್ ಸೆಲ್’ ಹಂತಕರ ಕೈವಾಡ ಇರಬಹುದೇ ಎಂಬ ಆತಂಕ ಹೆಚ್ಚಾಗಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳು ಇರಾಕ್ ಮೂಲದ ಉಗ್ರಗಾಮಿ ಶಿಬಿರಗಳ ಮೇಲೆ ಮತ್ತಷ್ಟು ಭೀಕರ ವೈಮಾನಿಕ ದಾಳಿಗಳನ್ನು ನಡೆಸುವ ಸಾಧ್ಯತೆ ದಟ್ಟವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ