AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಟರ್ನೆಟ್​​ನಲ್ಲಿ ಸಂಚಲನ ಸೃಷ್ಟಿಸಿರುವ ಕಿಂಗ್ ಚಾರ್ಲ್ಸ್‌ನ ಈ ಅಂಗರಕ್ಷಕ ಯಾರು?

ಅನೇಕರು ಆ ವ್ಯಕ್ತಿಯನ್ನನು ಕಾಲಿನ್ ಫಿರ್ತ್‌ನ ಕಿಂಗ್ಸ್‌ಮನ್‌ನ ಹ್ಯಾರಿ ಹಾರ್ಟ್‌ಗೆ ಹೋಲಿಸಿದ್ದಾರೆ. ಅವನ ಛತ್ರಿಯನ್ನು 'ಗನ್‌ಬ್ರೆಲ್ಲಾ' ಎಂದು ಹೇಳುತ್ತಿದ್ದಾರೆ.

ಇಂಟರ್ನೆಟ್​​ನಲ್ಲಿ ಸಂಚಲನ ಸೃಷ್ಟಿಸಿರುವ ಕಿಂಗ್ ಚಾರ್ಲ್ಸ್‌ನ ಈ ಅಂಗರಕ್ಷಕ ಯಾರು?
ಕಿಂಗ್ ಚಾರ್ಲ್ಸ್ ಬಾಡಿಗಾರ್ಡ್
ರಶ್ಮಿ ಕಲ್ಲಕಟ್ಟ
|

Updated on:May 06, 2023 | 7:21 PM

Share

ಏಳು ದಶಕಗಳಲ್ಲಿ ವಿಧ್ಯುಕ್ತ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್ III(King Charles III )ಇಂದು ಬ್ರಿಟನ್ ರಾಜನಾಗಿ ಪಟ್ಟಾಭಿಷಿಕ್ತರಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ತಾಯಿ ರಾಣಿ ಎಲಿಜಬೆತ್ IIರ (Queen Elizabeth II) ಮರಣದ ನಂತರ ಕಿಂಗ್ ಚಾರ್ಲ್ಸ್ ಯುಕೆ ಮತ್ತು 14 ಇತರ ರಾಜ್ಯಗಳ ರಾಜರಾದರು. ಕಿಂಗ್ ಚಾರ್ಲ್ಸ್ ಅವರು ತಮ್ಮ ತಾಯಿಯಿಂದ ಆನುವಂಶಿಕವಾಗಿ ಪಡೆದ ಭದ್ರತಾ ತಂಡದೊಂದಿಗೆ ಇರುತ್ತಾರೆ. ಈ ತಂಡದ ಒಬ್ಬ ಸದಸ್ಯ, ನಿರ್ದಿಷ್ಟವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಮೆಟ್ರೋ ವರದಿಯ ಪ್ರಕಾರ, ಅಧಿಕೃತವಾಗಿ ಹೆಸರಿಸದ ಗಡ್ಡವಿರುವ ಈ ಅಂಗರಕ್ಷಕನನ್ನು ಸೆಪ್ಟೆಂಬರ್ 8, 2022 ರಂದು ರಾಣಿಯ ಸಾವಿನ ಸಮಯದಲ್ಲಿ ಮೊದಲು ಗುರುತಿಸಲಾಯಿತು.

ಕಳೆದ ವರ್ಷ ಈ ಅಂಗರಕ್ಷಕ ರಾಜನ ವಿಡಿಯೊ ಚಿತ್ರೀಕರಿಸುತ್ತಿದ್ದ ಮಹಿಳೆಯ ಫೋನ್ ಅನ್ನು ಕೆಳಗೆ ತಳ್ಳುವುದು ಕಂಡುಬಂದಿದೆ. ಮಹಿಳೆಯಲ್ಲಿ, ಫೋನ್‌ ಕೆಳಗೆ ಇರಿಸಿ. ಈ ಕ್ಷಣವನ್ನು ಆನಂದಿಸಿ ಎಂದು ಹೇಳಿದ್ದಾರೆ ಇವರು.

ಅಂದಿನಿಂದ ಈ ಸೆಕ್ಯುರಿಟಿ ಗಾರ್ಡ್ ರಾಜನ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಲ್ಲಿದ್ದಾನೆ. ಇತ್ತೀಚೆಗೆ, ಅವರು ಬಕಿಂಗ್ ಹ್ಯಾಮ್ ಅರಮನೆಯ ಒಳಗೆ ಮತ್ತು ಹೊರಗೆ ಅಲಂಕಾರಿಕ ಛತ್ರಿಯೊಂದಿಗೆ ನಡೆದುಕೊಂಡು ಹೋಗುತ್ತಿರುವ ಅನೇಕ ವೀಡಿಯೊಗಳು ಟಿಕ್ ಟಾಕ್ ನಲ್ಲಿ ಕಾಣಿಸಿವೆ.

ಅನೇಕರು ಆ ವ್ಯಕ್ತಿಯನ್ನನು ಕಾಲಿನ್ ಫಿರ್ತ್‌ನ ಕಿಂಗ್ಸ್‌ಮನ್‌ನ ಹ್ಯಾರಿ ಹಾರ್ಟ್‌ಗೆ ಹೋಲಿಸಿದ್ದಾರೆ. ಅವನ ಛತ್ರಿಯನ್ನು ‘ಗನ್‌ಬ್ರೆಲ್ಲಾ’ ಎಂದು ಹೇಳುತ್ತಿದ್ದಾರೆ.ಆತ ಛತ್ರಿಯಲ್ಲಿ ಗನ್ ಇಟ್ಟುಕೊಂಡಿದ್ದಾರೆ ಎಂದು ಕೆಲವರು ಅನುಮಾನಿಸಿದ್ದಾರೆ.ಅವರು ರಹಸ್ಯ ದಳದ ವ್ಯಕ್ತಿ ಎಂದು ಕೆಲವರು ಹೇಳಿದರೆ,ಇನ್ನು ಕೆಲವರು ಅವರ ಲುಕ್ ಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ: King Charles IIIs coronation: ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಪಟ್ಟಾಭಿಷೇಕ; ಕಿಂಗ್ ಚಾರ್ಲ್ಸ್ III ಬ್ರಿಟನ್‌ನ ರಾಜ

ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಮುಂದಿನ ಜೇಮ್ಸ್ ಬಾಂಡ್ ಆಗಿರಬೇಕು. ಅಂತಹ ಅದ್ಭುತ ವ್ಯಕ್ತಿ ಎಂದು ಅವರು ಒಬ್ಬರು ಕಾಮೆಂಟಿಸಿದ್ದು, ಇನ್ನೊಬ್ಬರು ಅವರು ತುಂಬಾ ಸುಂದರವಾಗಿದ್ದಾರೆ! ಕಂಪ್ಲೀಟ್ ಜೆಂಟಲ್ ಮೆನ್ ಎಂದಿದ್ದಾರೆ. ಮೂರನೆಯವರೊಬ್ಬರು,ಅವರು ಗಡ್ಡ ನಿರ್ವಹಣೆ ಸಲಹೆಗಳನ್ನು ನೀಡುತ್ತಾರೆಯೇ? ಎಂದು ಕೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Sat, 6 May 23

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?