AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಲಂಡನ್​​ನ ಅಪಾರ್ಟ್​ಮೆಂಟ್​​ನ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಕಾಪಾಡಿದ ಭಾರತೀಯ ವ್ಯಕ್ತಿ

ಲಂಡನ್‌ನಲ್ಲಿ ಅಪಾರ್ಟ್​ಮೆಂಟ್​ನ ಕಿಟಕಿಯಿಂದ ಬೀಳುತ್ತಿದ್ದ ಮೂರು ವರ್ಷದ ಬಾಲಕಿಯನ್ನು ಭಾರತೀಯ ಮೂಲದ ಮೊಹಮ್ಮದ್ ಜೆಸಿಲ್ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಮಗುವನ್ನು ಉಳಿಸಿದ ಇವರ ಸಾಹಸದ ವಿಡಿಯೋ ವೈರಲ್ ಆಗಿದೆ. ತಂದೆಯಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದ ಜೆಸಿಲ್, ತಮ್ಮ ಮಾನವೀಯತೆಯಿಂದ ನೂರಾರು ಜನರ ಪ್ರಶಂಸೆ ಗಳಿಸಿದ್ದಾರೆ. ಈ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

Video: ಲಂಡನ್​​ನ ಅಪಾರ್ಟ್​ಮೆಂಟ್​​ನ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಕಾಪಾಡಿದ ಭಾರತೀಯ ವ್ಯಕ್ತಿ
ಬಾಲಕಿಯ ಕಾಪಾಡಿದ ವ್ಯಕ್ತಿImage Credit source: Free Press Journal
ನಯನಾ ರಾಜೀವ್
|

Updated on: Jun 14, 2026 | 10:42 AM

Share

ಲಂಡನ್, ಜೂನ್ 14: ಅಪಾರ್ಟ್​ಮೆಂಟ್​ನ ಕಿಟಕಿಯ ಅಂಚಿನಲ್ಲಿ ನೇತಾಡುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗು(Baby)ವನ್ನು ಭಾರತೀಯ ವ್ಯಕ್ತಿಯೊಬ್ಬರು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಲಂಡನ್‌ನ ಇಲ್ಫೋರ್ಡ್ ಹೈ ಸ್ಟ್ರೀಟ್‌ನ ವಾಣಿಜ್ಯ ಸಂಕೀರ್ಣದಲ್ಲಿರುವ ಫ್ಲಾಟ್‌ನ ಕಿಟಕಿಯಿಂದ ಅದ್ಹೇಗೋ ಬಾಲಕಿ ಹೊರಬಂದಿದ್ದಾಳೆ, ಬಳಿಕ ಕಿಟಕಿ ಚೌಕಟ್ಟನ್ನು ಹಿಡಿದು ನೇತಾಡಿದ್ದಾಳೆ.

ಇದನ್ನು ಕಂಡ ರಸ್ತೆಯಲ್ಲಿದ್ದ ನೂರಾರು ಪ್ರೇಕ್ಷಕರು ದಿಗ್ಭ್ರಮೆಗೊಂಡರು. ಪಕ್ಕದ ಕಿಟಕಿಯಿಂದ ಮಹಿಳೆಯೊಬ್ಬಳು ಮಗುವನ್ನು ಎತ್ತಲು ಕೈಚಾಚಿದರೂ ಮಗು ಸಿಗುತ್ತಿರಲಿಲ್ಲ. ಇತ್ತ ಮಗುವಿನ ಕೈಗಳ ಶಕ್ತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿತ್ತು. ಯಾವುದೇ ಕ್ಷಣದಲ್ಲಾದರೂ ಮಗು ಕೆಳಗೆ ಬಿದ್ದು ಪ್ರಾಣ ಹೋಗುವ ಭೀತಿ ಎದುರಾಗಿತ್ತು.

ಅದೇ ರಸ್ತೆಯಲ್ಲಿ ರೆಸ್ಟೋರೆಂಟ್ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಭಾರತ ಮೂಲದ ಮೊಹಮ್ಮದ್ ಜೆಸಿಲ್ ಅವರಿಗೆ ಜನರ ಕಿರುಚಾಟ ಕೇಳಿಸಿದೆ. ಹೊರಗೆ ಬಂದು ನೋಡಿದಾಗ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗು ಕಂಡಿದೆ. ಒಂದು ಕ್ಷಣವೂ ಯೋಚಿಸದ ಜೆಸಿಲ್ ತಕ್ಷಣವೇ ಮಗುವಿನ ರಕ್ಷಣೆಗೆ ಧಾವಿಸಿದರು. ನನಗೆ ಬೇರೆನೂ ಯೋಚನೆ ಬರಲಿಲ್ಲ. ನಾನು ಕೇವಲ ಐದು ತಿಂಗಳ ವಯಸ್ಸಿನ ಅವಳಿ ಮಕ್ಕಳ ತಂದೆ. ಕಷ್ಟದಲ್ಲಿದ್ದ ಆ ಮಗುವನ್ನು ನೋಡಿದಾಗ ನನ್ನೊಳಗಿನ ತಂದೆಯ ಹೃದಯ ಜಾಗೃತವಾಯಿತು. ನಾನು ಹೀರೋ ಅಲ್ಲ, ಒಬ್ಬ ತಂದೆಯಾಗಿ ನನ್ನ ಕರ್ತವ್ಯ ಮಾಡಿದೆ ಎಂದು ಜೆಸಿಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ

ಮಗುವಿನ ಹಿಡಿತ ಸಡಿಲಗೊಳ್ಳುತ್ತಿದ್ದಂತೆ, ಜೆಸಿಲ್ ಮತ್ತು ಅಲ್ಲಿಗೆ ಬಂದಿದ್ದ ಬ್ರಿಟನ್ ಪೊಲೀಸ್ ಅಧಿಕಾರಿಯೊಬ್ಬರು ನೇರವಾಗಿ ಮಗುವಿನ ಕೆಳಭಾಗದಲ್ಲಿ ನಿಂತುಕೊಂಡರು. ದಾರಿಹೋಕರೊಬ್ಬರು ಸಣ್ಣ ಏಣಿಯೊಂದನ್ನು ತಂದು ಬೆಂಬಲವಾಗಿ ನಿಲ್ಲಿಸಿದರು.

ವಿಡಿಯೋ

ಕ್ಷಣಾರ್ಧದಲ್ಲಿ ಮಗು ಕಿಟಕಿಯ ಮೇಲಿಂದ ಕೈಬಿಟ್ಟು ಕೆಳಗೆ ಬಿದ್ದಿದೆ. ಇಡೀ ಜನಸಮೂಹವೇ ಆಘಾತದಿಂದ ಕಣ್ಣು ಮುಚ್ಚಿಕೊಂಡ ಆ ರಣರೋಚಕ ಕ್ಷಣದಲ್ಲಿ, ಜೆಸಿಲ್ ಅತ್ಯಂತ ಜಾಗರೂಕತೆಯಿಂದ ಬೀಳುತ್ತಿದ್ದ ಮಗುವನ್ನು ಗಾಳಿಯಲ್ಲೇ ಸುರಕ್ಷಿತವಾಗಿ ತಮ್ಮ ಕೈಗಳಿಂದ ಹಿಡಿದುಕೊಂಡಿದ್ದಾರೆ! ಪೊಲೀಸ್ ಅಧಿಕಾರಿ ಜೆಸಿಲ್ ಮತ್ತು ಮಗು ಇಬ್ಬರೂ ಕೆಳಗೆ ಬೀಳದಂತೆ ಗಟ್ಟಿಯಾಗಿ ಹಿಡಿದು ಸ್ಥಿರಗೊಳಿಸಿದರು.

ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾದ ಮಗುವಿನ ತಂದೆ, ಭಾರತೀಯ ಯುವಕ ಜೆಸಿಲ್ ಮತ್ತು ಪೊಲೀಸ್ ಅಧಿಕಾರಿಯನ್ನು ‘ನಮ್ಮ ಪಾಲಿನ ರಿಯಲ್ ಹೀರೋಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಲಂಡನ್ ಪೊಲೀಸರು ಮತ್ತು ಅಲ್ಲಿನ ಮಾಧ್ಯಮಗಳು ಭಾರತೀಯ ಯುವಕ ಮೊಹಮ್ಮದ್ ಜೆಸಿಲ್ ಅವರ ಈ ಅಪ್ರತಿಮ ಸಾಹಸ ಹಾಗೂ ಮಾನವೀಯತೆಯನ್ನು ಮುಕ್ತಾಕಂಠದಿಂದ ಪ್ರಶಂಸಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ರಕ್ಷಣೆಯ ವಿಡಿಯೋ ಭಾರಿ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!