Sign In

By signing in or creating an account, you agree with Associated Broadcasting Company's Terms & Conditions and Privacy Policy.

Australia Beach: ಸಮುದ್ರಕ್ಕೆ ಈಜಲು ಹೋದವನಿಗೆ ಆಕ್ಟೋಪಸ್​ ಜಲಚರಿ ಹೊಡೆದದ್ದು ಈಗ ವೈರಲ್​

ಮಜವಾಗಿ ರಜ ಕಳೆಯೋಣ ಎಂದು ಆಸ್ಟ್ರೇಲಿಯಾದ ಜಿಯಾಗ್ರಫಿ ಬೇ ಬಳಿ ಸಮುದ್ರಕ್ಕೆ ಇಳಿದವನಿಗೆ ಊಹೆಗೂ ಮೀರಿದ ಅನುಭವ ಆಯ್ತು. ಆಕ್ಟೋಪಸ್​ ಜಲಚರಿ ಅವನ ಕೈ ಕುತ್ತಿಗೆ ಮತ್ತು ಬೆನ್ನಿಗೆ ಚೆನ್ನಾಗಿ ಬಾರಿಸಿದ್ದನ್ನು ಆತ ಹೇಳಿಕೊಂಡಿದ್ದು ಈಗ ಎಲ್ಲೆಲ್ಲೂ ವೈರಲ್​ ಆಗಿದೆ.

Australia Beach: ಸಮುದ್ರಕ್ಕೆ ಈಜಲು ಹೋದವನಿಗೆ ಆಕ್ಟೋಪಸ್​ ಜಲಚರಿ ಹೊಡೆದದ್ದು ಈಗ ವೈರಲ್​
ಜಿಯೊಲಾಜಿಸ್ಟ್​ ಲಾ ಕಾರ್ಲ್​ಸನ್ ಹಂಚಿಕೊಂಡಿರುವ ಚಿತ್ರ. (Screengrab/Instagram/la ncekarlson)
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 02, 2021 | 9:25 PM

ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲಿನಷ್ಟೇ ನೀರು ಎಂಬ ಗಾದೆ ನಮ್ಮಲ್ಲಿದೆ. ಅರ್ಥವೇನೆಂದರೆ ಕೆಲವರಿಗೆ, ಎಲ್ಲಿ ಹೋದರೂ ಬ್ಯಾಡ್ ಲಕ್ ಬಿಡಲ್ಲ. ಕೆಲಸದ ಒತ್ತಡ, ಬಾಸ್​ನ ಬಯ್ಗುಳದಿಂದ ದೂರ ಹೋಗಿ ಹಾಯಾಗಿ ರಜೆ ಕಳೆದು ಬರೋಣ ಎಂದವರಿಗೆ ಏನಾದರೂ ಕಂಟಕ ಬಂದರೆ? ಹೀಗೆ ಆಯ್ತು ಇಲ್ಲೊಬ್ಬ ವಿಜ್ಞಾನಿಗೆ. ಲಾನ್ಸ್ ಕಾರ್ಲಸನ್ ಎಂಬ ಭೂ ವಿಜ್ಞಾನಿ ರಜೆ ಕಳೆಯಲು ಆಸ್ಟ್ರೇಲಿಯದ ಜಿಯಾಗ್ರಫಿ ಬೇ ಎಂಬಲ್ಲಿ ಒಂದು ರೆಸಾರ್ಟ್ನಲ್ಲಿ ತನ್ನ ಕುಟುಂಬದೊಂದಿಗೆ ಇಳಿದುಕೊಂಡು ಆರಾಮಾಗಿ ಈಜಲೇಂದು ಸಮುದ್ರಕ್ಕೆ ಹೋಗಿದ್ದ. ಅಲ್ಲಿ ಎಂಟು ಕಾಲಿನ ಜಲಚರ ಆಕ್ಟೋಪಸ್ ಚೆನ್ನಾಗಿ ಬಾರಿಸಿದೆ. ಇದರಿಂದ ಕಂಗಾಲಾದ ಆತ ತಪ್ಪಿಸಿಕೊಳ್ಳಲು ಹೋದರೂ ಬಿಡದ ಅದು. ಅವನ ಕುತ್ತಿಗೆ ಕೈ ಮತ್ತು ಬೆನ್ನಿಗೆ ಚೆನ್ನಾಗಿ ಬಾರಿಸಿದೆ. ಆ ಆಕ್ಟೋಪಸ್ ಆತನಿಗೆ ಹೊಡೆಯುವ ಸುದ್ದಿ ಈಗ ಎಷ್ಟು ಸುದ್ದಿ ಮಾಡಿದೆ ಎಂದರೆ ಬಿಬಿಸಿ ಇದನ್ನು ವಿಶೇಷವಾಗಿ ಪ್ರಕಟಿಸಿದೆ.

ಕಾರ್ಲ್ಸನ್ ನಮ್ಮಂತೆ ಸಾಮಾನ್ಯ ಮನುಷ್ಯ ಅಲ್ಲ. ಸಮುದ್ರ ತಟದಲ್ಲಿ ನೀರಿಗೆ ಬಿದ್ದು ಮುಳುಗುವ ಅಥವಾ ಇನ್ನೇನಾದರೂ ಅನಾಹುತ ಆಗುವಾಗ ಅಂತವರನ್ನು ತಪ್ಪಿಸಲೆಂದೇ ರಕ್ಷಿಸಲು ಇರುವ ಲೈಫ್ ಗಾರ್ಡ್. ಅವರಿಗೇನು ಸಮುದ್ರ ಹೊಸದಲ್ಲ. ಈ ಜೀವಜಂತುಗಳನ್ನು ಕಾಣದೇ ಇರುವವನಲ್ಲ. ತಾನು ಇಳಿದುಕೊಂಡಿದ್ದ ರೆಸಾರ್ಟ್​ ಪಕ್ಕದಲ್ಲಿ ಸಮುದ್ರಕ್ಕೆ ಇಳಿದಿದ್ದ ಆತನಿಗೆ ಮೊದಲು ಇದು ಗೊತ್ತಾಗಲಿಲ್ಲವಂತೆ. ಆತ ಏನು ವಿಚಾರ ಮಾಡಿದ ಅಂದರೆ ಮೃದ್ವಂಗಿ ನೀರು ಬಾತುಕೋಳಿಯನ್ನು ಹಿಮ್ಮೆಟ್ಟಿಸಲು ತನ್ನ ಶಕ್ತಿ ಮೀರಿ ಹೋರಾಟ ಮಾಟುತ್ತಿದೆ ಎಂದುಕೊಂಡ.

ಆದರೆ ಆಗಿದ್ದೇ ಬೇರೆ. ತನ್ನ ಎರಡು ವರ್ಷದ ಮಗಳೊಂದಿಗೆ ಆ ಜೀವಿಯ ಹತ್ತಿರ ಹೋಗಿ ವಿಡಿಯೋ ಶೂಟ್ ಮಾಡತೊಡಗಿದೆ. ಕ್ಷಣ ಮಾತ್ರದಲ್ಲಿ ಆ ಜೀವಿ ಇವರತ್ತ ನುಗ್ಗಿ ಬಂತು. ನನಗೆ ಶಾಕ್ ಆಯ್ತು. ಏಕೆಂದರೆ ನಾನು ಅದನ್ನು ನಿರೀಕ್ಷಿಸಿರಲಿಲ್ಲ. ಕೊನೆಗೆ ಮಗಳನ್ನು ತಿರುಗಿ ರೆಸಾರ್ಟ್​ನಲ್ಲಿ ಬಿಟ್ಟು ಮತ್ತು ಸಮುದ್ರಕ್ಕೆ ಇಳಿದಾಗ ಅದೇ ಆಕ್ಟೋಪಸ್ ಮತ್ತೆ ಇವನನ್ನು ಬೆನ್ನೆತ್ತಿಕೊಂಡು ಬಂತು. ಆಗ ಅದು ಎಬ್ಬಿಸಿದ ಅಬ್ಬರ ಎಷ್ಟಿತ್ತು ಎಂದರೆ ಆತನ ಕನ್ನಡಕ ಕೂಡ ಮಸುಕಾಯಿತು. ಆತನಿಗೆ ಸುತ್ತಲಿನ ಸಮುದ್ರ ಕಾಣದಂತಾಗಿತ್ತು ಎಂದು ಆತ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾನೆ.

ಲಾನ್ಸ್​ಕಾರ್ಲ್​ಸನ್ ಹಂಚಿಕೊಂಡಿರುವ ಆಕ್ರಮಣಕಾರಿ ಆಕ್ಟೋಪಸ್​ನ ವಿಡಿಯೊ ಇಲ್ಲಿದೆ.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

Lance Karlson • Author (@lancekarlson) ರಿಂದ ಹಂಚಲಾದ ಪೋಸ್ಟ್

ಇದನ್ನೂ ಓದಿ:

ಸಮುದ್ರಕ್ಕೆ ಇಳಿಯಲು ಪ್ರಯತ್ನಿಸಿದ ಐವರು ಯುವಕರಿಗೆ ‘ಕೋಳಿ ನಡಿಗೆ’ ಶಿಕ್ಷೆ; ಇಂಥ ವಾಕ್​ ನೀವು ನೋಡಿರಲಿಕ್ಕಿಲ್ಲ !

ಸಮುದ್ರಕ್ಕೆ ರಾಹುಲ್​ ಗಾಂಧಿ ಜಿಗಿದಿದ್ದಾಗಲೀ, ಘಟನೆಯ ಚಿತ್ರೀಕರಣವಾಗಲೀ ಪೂರ್ವನಿಯೋಜಿತವಲ್ಲ

( Man whipped by angry octopus at Australian beach )

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ