AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ ಪ್ರವಾಹ: ಹತ್ತು ದಿನದ ಬಳಿಕ ತ್ರಿಶೂಲಿ ಜಲವಿದ್ಯುತ್ ಸುರಂಗದಿಂದ ಚೀನಾ ಪ್ರಜೆ ಮತ್ತು ಮನೆಯಡಿಯಿದ್ದ ಮಹಿಳೆಯ ರಕ್ಷಣೆ

ನೇಪಾಳದಲ್ಲಿ ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಹತ್ತು ದಿನಗಳ ನಂತರ, ತ್ರಿಶೂಲಿ ಜಲವಿದ್ಯುತ್ ಸುರಂಗದಲ್ಲಿದ್ದ ಚೀನಾ ಪ್ರಜೆ ಮತ್ತು ಮನೆಯ ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಹಿಳೆಯನ್ನು ಪವಾಡಸದೃಶವಾಗಿ ರಕ್ಷಿಸಲಾಗಿದೆ. 1,300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಅಂತಾರಾಷ್ಟ್ರೀಯ ನೆರವು ಹರಿದುಬರುತ್ತಿದೆ.

ನೇಪಾಳ ಪ್ರವಾಹ: ಹತ್ತು ದಿನದ ಬಳಿಕ ತ್ರಿಶೂಲಿ ಜಲವಿದ್ಯುತ್ ಸುರಂಗದಿಂದ ಚೀನಾ ಪ್ರಜೆ ಮತ್ತು ಮನೆಯಡಿಯಿದ್ದ ಮಹಿಳೆಯ ರಕ್ಷಣೆ
ನೇಪಾಳ ಪ್ರವಾಹ Image Credit source: France 24
ನಯನಾ ರಾಜೀವ್
|

Updated on: Sep 05, 2026 | 3:05 PM

Share

ಕಠ್ಮಂಡು, ಸೆಪ್ಟೆಂಬರ್ 05: ನೇಪಾಳದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಸಂಭವಿಸಿ ಹತ್ತು ದಿನಗಳು ಕಳೆದ ನಂತರವೂ ಪವಾಡಸದೃಶ ರೀತಿಯಲ್ಲಿ ಇಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ. ತ್ರಿಶೂಲಿ ಜಲವಿದ್ಯುತ್ ಯೋಜನೆಯ ಆಳವಾದ ಸುರಂಗದಲ್ಲಿ ಸಿಲುಕಿದ್ದ ಚೀನಾ ಪ್ರಜೆ ಹಾಗೂ ಧ್ವಂಸಗೊಂಡ ಮನೆಯ ಅವಶೇಷಗಳಡಿಯಲ್ಲಿದ್ದ ಮಹಿಳೆಯನ್ನು ನೇಪಾಳ ಸೇನೆ ಮತ್ತು ಪರಿಹಾರ ತಂಡಗಳು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಿವೆ. 1,300ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಈ ಜಲಪ್ರಳಯದಲ್ಲಿ ಇನ್ನೂ ನೂರಾರು ಕಾರ್ಮಿಕರು ಸುರಂಗಗಳಲ್ಲಿ ಸಿಲುಕಿರುವ ಆತಂಕವಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.

ತ್ರಿಶೂಲಿ ಸುರಂಗದಿಂದ ಚೀನಾ ಪ್ರಜೆಯ ರಕ್ಷಣೆ: ಶುಕ್ರವಾರವಷ್ಟೇ ತ್ರಿಶೂಲಿ 3ಎ ಜಲವಿದ್ಯುತ್ ಸ್ಥಾವರದ ಸುರಂಗದಿಂದ ಇಬ್ಬರು ನೇಪಾಳಿ ಕಾರ್ಮಿಕರನ್ನು ಜೀವಂತವಾಗಿ ಹೊರತರಲಾಗಿತ್ತು. ಶನಿವಾರ ಮುಂಜಾನೆ ನೇಪಾಳ ಸೇನೆ ಮತ್ತು ದಕ್ಷಿಣ ಕೊರಿಯಾದ ವಿಪತ್ತು ನಿರ್ವಹಣಾ ತಜ್ಞರ ಜಂಟಿ ತಂಡವು ಸತತ ಕಾರ್ಯಾಚರಣೆ ನಡೆಸಿ, 225 ಮೀಟರ್ ಉದ್ದದ ಸುರಂಗದಿಂದ ಚೀನಾ ಪ್ರಜೆಯನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಿದೆ.

ಮನೆಯ ಅವಶೇಷಗಳಡಿಯಿಂದ ಮಹಿಳೆ ಪಾರು: ನುವಾಕೋಟ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕುಸಿದುಬಿದ್ದಿದ್ದ ಮನೆಯೊಂದರ ಕಲ್ಲು-ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ಚಂಡಿಕಾ ಶ್ರೇಷ್ಠಾ ಎಂಬ ಮಹಿಳೆಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬೂದು ಬಣ್ಣದ ಕಂಬಳಿಯಲ್ಲಿ ಸುತ್ತಿ ಅವರನ್ನು ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಕಠ್ಮಂಡುವಿಗೆ ಏರ್‌ಲಿಫ್ಟ್ ಮಾಡಲಾಗಿದೆ.

ಮತ್ತಷ್ಟು ಓದಿ: ನೇಪಾಳದ ಪ್ರವಾಹ: 17 ಮಂದಿ ಕರ್ನಾಟಕದ ಚಾರಣಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್

ನೇಪಾಳದ ಒಟ್ಟು 12 ಜಲವಿದ್ಯುತ್ ಯೋಜನೆಗಳ ವ್ಯಾಪ್ತಿಯಲ್ಲಿ ಸುಮಾರು 900 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇವರಲ್ಲಿ ಸುಮಾರು 500 ಕಾರ್ಮಿಕರು ವಿವಿಧ ಆಳವಾದ ಸುರಂಗಗಳಲ್ಲಿ ಸಿಲುಕಿರುವ ಶಂಕೆ ಇದ್ದು, ಅವರ ರಕ್ಷಣೆಗಾಗಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಡ್ರಿಲ್ಲಿಂಗ್ ನಡೆಸಲಾಗುತ್ತಿದೆ.

ಹಿಮನದಿ ಕುಸಿತದ ರುದ್ರನರ್ತನ: ಆಗಸ್ಟ್ 26 ರಂದು ನೇಪಾಳ-ಟಿಬೆಟ್ ಗಡಿಭಾಗದ ಲ್ಯಾಂಗ್‌ಟಾಂಗ್ ಪ್ರದೇಶದಲ್ಲಿ ಹಿಮನದಿಯೊಂದು ದಿಢೀರನೆ ಕುಸಿದು ಬಿದ್ದಿದ್ದರಿಂದ ತ್ರಿಶೂಲಿ ನದಿಯಲ್ಲಿ ಸುಮಾರು 200 ಅಡಿಗೂ ಹೆಚ್ಚು ಎತ್ತರದ ಪ್ರವಾಹ ಸೃಷ್ಟಿಯಾಗಿತ್ತು.

ಭಾರಿ ಸಾವು-ನೋವು: ಈ ಜಲಪ್ರಳಯದಲ್ಲಿ ಇದುವರೆಗೆ ಕನಿಷ್ಠ 1,300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 5 ಸಾವಿರಕ್ಕೂ ಅಧಿಕ ಜನರು ಇನ್ನೂ ನಾಪತ್ತೆಯಾಗಿದ್ದಾರೆ. ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಮಾರ್ಗಗಳು ಕೊಚ್ಚಿಹೋಗಿರುವುದರಿಂದ ಹಲವು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ.

ಅಂತಾರಾಷ್ಟ್ರೀಯ ನೆರವು: ಪರಿಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ವಿಶೇಷ ವಿಪತ್ತು ರಕ್ಷಣಾ ತಜ್ಞರ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ವಿಶ್ವಸಂಸ್ಥೆಯು ಸಂತ್ರಸ್ತರ ಪುನರ್ವಸತಿ ಮತ್ತು ತುರ್ತು ನೆರವಿಗಾಗಿ 50 ಮಿಲಿಯನ್ ಡಾಲರ್ ನೆರವಿಗೆ ಮನವಿ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮೊದಲ ಬಾರಿಗೆ ಫ್ಲೈಟ್ ಏರಿದ ಸರ್ಕಾರಿ ಶಾಲಾ ಮಕ್ಕಳು!
ಮೊದಲ ಬಾರಿಗೆ ಫ್ಲೈಟ್ ಏರಿದ ಸರ್ಕಾರಿ ಶಾಲಾ ಮಕ್ಕಳು!
ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ: ಟಾಪರ್ಸ್ ಲಿಸ್ಟ್ ನೋಡಿ ಪೊಲೀಸರೇ ಶಾಕ್
ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ: ಟಾಪರ್ಸ್ ಲಿಸ್ಟ್ ನೋಡಿ ಪೊಲೀಸರೇ ಶಾಕ್
ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್!
ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್!
‘ಪ್ರಜಾಸೇವಾ ಅಭಿಯಾನ’ಕ್ಕೆ ಸಿಎಂ ಚಾಲನೆ: ಲೈವ್ ವಿಡಿಯೋ
‘ಪ್ರಜಾಸೇವಾ ಅಭಿಯಾನ’ಕ್ಕೆ ಸಿಎಂ ಚಾಲನೆ: ಲೈವ್ ವಿಡಿಯೋ
ಮಕ್ಕಳ ನಡವಳಿಕೆ ಬದಲಾವಣೆ ನಿರ್ಲಕ್ಷಿಸಬೇಡಿ, ಮೋದಿ ಕಿವಿಮಾತು
ಮಕ್ಕಳ ನಡವಳಿಕೆ ಬದಲಾವಣೆ ನಿರ್ಲಕ್ಷಿಸಬೇಡಿ, ಮೋದಿ ಕಿವಿಮಾತು
ಶ್ರಾವಣ ಶನಿವಾರ: ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಅದ್ದೂರಿ ಪೂಜೆ
ಶ್ರಾವಣ ಶನಿವಾರ: ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಅದ್ದೂರಿ ಪೂಜೆ
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ