Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka: ಮತಪತ್ರ ಮುದ್ರಿಸಲು ಹಣ ಇಲ್ಲದೇ ಚುನಾವಣೆ ಮುಂದೂಡಿಕೆ; ಇದು ಲಂಕಾ ವಾಸ್ತವ ಚಿತ್ರವಾ?

No Money To Conduct Elections in Sri Lanka: ಎಂಟು ಸಾವಿರಕ್ಕೂ ಹೆಚ್ಚು ಸದಸ್ಯರ ಆಯ್ಕೆಗೆ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಆಯೋಜನೆಗೆ 1 ಸಾವಿರ ಕೋಟಿ ರೂ ಹಣ ಇಲ್ಲದೇ ಶ್ರೀಲಂಕಾ ಈ ಚುನಾವಣೆಗಳನ್ನೇ ಮುಂದೂಡಿದ ಸಂಗತಿ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

Sri Lanka: ಮತಪತ್ರ ಮುದ್ರಿಸಲು ಹಣ ಇಲ್ಲದೇ ಚುನಾವಣೆ ಮುಂದೂಡಿಕೆ; ಇದು ಲಂಕಾ ವಾಸ್ತವ ಚಿತ್ರವಾ?
ಶ್ರೀಲಂಕಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2023 | 1:19 PM

ಕೊಲಂಬೋ: ಬ್ಯಾಲಟ್ ಪೇಪರ್​ಗಳನ್ನು ಮುದ್ರಿಸಲು ಹಣ ಇಲ್ಲದೇ ಶ್ರೀಲಂಕಾದಲ್ಲಿ ಸ್ಥಳೀಯ ಚುನಾವಣೆಗಳನ್ನೇ (Sri Lanka Local Elections) ಮುಂದೂಡಲಾಗಿದೆ. ಮಾರ್ಚ್ 9ರಂದು ಶ್ರೀಲಂಕಾದ್ಯಂತ ಸ್ಥಳೀಯ ಚುನಾವಣೆಗಳು ನಡೆಯಬೇಕಿತ್ತು. ಚುನಾವಣೆ ಆಯೋಜನೆಗೆ ಹಣ ಬಿಡುಗಡೆ ಮಾಡಬೇಕೆಂದು ಶ್ರೀಲಂಕಾ ಚುನಾವಣಾ ಆಯೋಗ ಮಾಡಿದ ಮನವಿಯನ್ನು ಲಂಕಾ ಹಣಕಾಸು ಇಲಾಖೆ ತಿರಸ್ಕರಿಸಿದೆ. ಇದು ರಾನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಾಗಿದ್ದು, ಅಧ್ಯಕ್ಷರ ಜನಪ್ರಿಯತೆಗೆ ಈ ಚುನಾವಣೆ ಒಂದು ಅಳತೆಗೋಲು ಎಂದೇ ಭಾವಿಸಲಾಗಿತ್ತು. ಈಗ ಮತಪತ್ರ ಮುದ್ರಿಸಲು ಹಣ ಇಲ್ಲವೆಂದು ಸರ್ಕಾರ ನೆವವೊಡ್ಡಿ ಚುನಾವಣೆ ಮುಂದೂಡಲು ಕಾರಣವಾಗಿದೆ ಎಂಬುದು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಲಟ್ ಪೇಪರ್ ಮುದ್ರಣ ಇತ್ಯಾದಿ ಚುನಾವಣಾ ವೆಚ್ಚ 1,000 ಕೋಟಿ ಲಂಕಾ ರೂ (ಭಾರತೀಯ ರೂಪಾಯಿಯಲ್ಲಿ 228ಕೋಟಿ) ಆಗುವ ಅಂದಾಜು ಇದೆ. ಇಷ್ಟು ಹಣ ಬಿಡುಗಡೆಗೆ ಚುನಾವಣಾ ಆಯೋಗ ಮನವಿ ಮಾಡಿತ್ತು. ಆದರೆ, ಈಗಾಗಲೇ ದಿವಾಳಿಯಾಗಿರುವ ಶ್ರೀಲಂಕಾ ಬಳಿ ಇಷ್ಟೂ ಹಣ ಇಲ್ಲದ ಸ್ಥಿತಿ ಇದೆ. ಏಪ್ರಿಲ್​ನಲ್ಲಿ ಕೊಡಬೇಕಿದ್ದ 46 ಬಿಲಿಯನ್ ಡಾಲರ್ (1.6 ಲಕ್ಷ ಕೋಟಿ ಲಂಕಾ ರೂ) ಮೊತ್ತದಷ್ಟು ಬಾಹ್ಯ ಸಾಲದ ಹಣವನ್ನು ಲಂಕಾ ಇನ್ನೂ ಬಾಕಿ ಉಳಿಸಿಕೊಂಡಿದೆ. ಈ ಸಂದರ್ಭದಲ್ಲಿ ಚುನಾವಣೆಗೆ ಖರ್ಚು ಮಾಡುವುದು ಲಂಕಾಗೂ ದುಸ್ತರದ ಸಂಗತಿ ಎನಿಸಿರಬಹುದು.

ಸ್ಥಳೀಯ ಚುನಾವಣೆಗಳ ವಿವರ:

ಶ್ರೀಲಂಕಾದ್ಯಂತ 24 ಪುರಸಭೆ, 41 ನಗರ ಪಾಲಿಕೆ ಮತ್ತು 275 ಡಿವಿಶನಲ್ ಕೌನ್ಸಿಲ್​ಗಳು ಒಳಗೊಂಡಂತೆ 340 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯುವುದಿದೆ. ಒಟ್ಟು 8,711 ಸದಸ್ಯರ ಆಯ್ಕೆ ಆಗುವುದಿದೆ. 1.66 ಕೋಟಿ ಮತದಾರರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: China: ಜನಸಂಖ್ಯೆಯನ್ನು ಹೆಚ್ಚಿಸಲು ನವವಿವಾಹಿತರಿಗೆ 30 ದಿನಗಳ ವೇತನ ಸಹಿತ ರಜೆ ನೀಡುತ್ತಿರುವ ಚೀನಾ ಪ್ರಾಂತ್ಯ

2018ರಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಷನಲ್ ಪಾರ್ಟಿ ಕೇವಲ ಶೇ. 10 ಸ್ಥಾನಗಳನ್ನು ಗೆದ್ದಿತ್ತು. ಮಾಜಿ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಎಸ್​ಎಲ್​ಪಿಪಿ ಪಕ್ಷ 231 ಸ್ಥಳೀಯ ಸಂಸ್ಥೆಗಳಲ್ಲಿ ಜಯಭೇರಿ ಭಾರಿಸಿತ್ತು.

ಶ್ರೀಲಂಕಾದ ಒಟ್ಟು ಜಿಡಿಪಿ ಇರುವುದೇ 84 ಬಿಲಿಯನ್ ಡಾಲರ್. ಅದರ ಜಿಡಿಪಿಯ ಅರ್ಧಕ್ಕಿಂತ ಹೆಚ್ಚು ಮೊತ್ತದಷ್ಟು ಬಾಹ್ಯ ಸಾಲವೇ ಇರುವುದು ಗಮನಾರ್ಹ. ಹೀಗಾಗಿ, ಶ್ರೀಲಂಕಾ ದಿವಾಳಿ ಹಂತದಲ್ಲಿದೆ. ಚೀನಾದ ವಿವಿಧ ಹಣಕಾಸು ಸಂಸ್ಥೆಗಳಿಂದ ಶ್ರೀಲಂಕಾ 7.4 ಬಿಲಿಯನ್ ಡಾಲರ್ ಮೊತ್ತದಷ್ಟು ಸಾಲ ಪಡೆದಿದೆ. ಜಪಾನ್ ಮೊದಲಾದ ದೇಶಗಳಿಂದಲೂ ಲಂಕಾ ಸಾಲ ಪಡೆದಿದೆ. ಭಾರತವೂ 4 ಬಿಲಿಯನ್ ಡಾಲರ್​ನಷ್ಟು ಸಾಲವನ್ನು ಶ್ರೀಲಂಕಾಗೆ ನೀಡಿದೆ. ಸಾಲ ತೀರಿಸಲು ಚೀನಾ ಎರಡು ವರ್ಷದವರೆಗೆ ಗಡುವು ಕೊಟ್ಟಿದೆ. ಇದೀಗ ಐಎಂಎಫ್​ನಿಂದ ಸಾಲ ಸಿಕ್ಕರೆ ಶ್ರೀಲಂಕಾ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲಷ್ಟೇ ಸಾಧ್ಯವಾಗುತ್ತದೆ. ಚೀನಾದ ಕೆಲ ಸಾಲ ತೀರಿಸಲಾಗದೇ ಹಂಬನ್​ತೋಟ ಬಂದರನ್ನು ಶ್ರೀಲಂಕಾ ಮಾರಿದೆ. ಮುಂದಿನ ದಿನಗಳಲ್ಲಿ ಸಾಲದ ಕುಣಿಕೆಯೊಡ್ಡಿ ಲಂಕಾದ ಯಾವ್ಯಾವ ಪ್ರದೇಶಗಳ ಮೇಲೆ ಚೀನಾ ಹತೋಟಿ ಸಾಧಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ