AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಉದ್ಯಮಿಯ ಹೈಟೆಕ್ ವೇಶ್ಯಾಗೃಹ ಹಗರಣ, ಒಂದು ಗಂಟೆ ಸಂಭೋಗಕ್ಕೆ ಬರೋಬ್ಬರಿ 50 ಸಾವಿರ ರೂ.

ಹೈಟೆಕ್ ವೇಶ್ಯಾಗೃಹ ಹಗರಣದಲ್ಲಿ ಗ್ರೇಡಿಯಂಟ್ ಸಿಇಒ ಹಾಗೂ ಭಾರತೀಯ ಮೂಲದ ಉದ್ಯಮಿ ಅನುರಾಗ್ ಬಾಜಪೇಯಿ ಅವರ ಹೆಸರು ಕೇಳಿ ಬರುತ್ತಿದ್ದಂತೆ ಅವರನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಹೌದು, ಅನುರಾಗ್ ಬಾಜಪೇಯಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಒಂದು ಗಂಟೆಗೆ ಐವತ್ತು ಸಾವಿರ ರೂಪಾಯಿ ಪಾವತಿಸುತ್ತಿದ್ದರು. ಅದಲ್ಲದೇ ಇದರಲ್ಲಿ ವಿಶ್ವದ ಖ್ಯಾತ ಉದ್ಯಮಿಗಳು ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತೀಯ ಉದ್ಯಮಿಯ ಹೈಟೆಕ್ ವೇಶ್ಯಾಗೃಹ ಹಗರಣ, ಒಂದು ಗಂಟೆ ಸಂಭೋಗಕ್ಕೆ ಬರೋಬ್ಬರಿ 50 ಸಾವಿರ ರೂ.
ಅನುರಾಗ್ ಬಾಜಪೇಯಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 14, 2025 | 12:23 PM

Share

ವಾಷಿಂಗ್ಟನ್ ಏಪ್ರಿಲ್ 14: ಕೆಲವೊಮ್ಮೆ ಉದ್ಯಮಿ (business man)ಗಳು ಅಕ್ರಮ ವ್ಯವಹಾರ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕಿ ಬೀಳುವುದೇ ಹೆಚ್ಚು. ಒಮ್ಮೆ ಗ್ರಹಚಾರ ಕೆಟ್ಟರೆ ಮುಗಿದೇ ಹೋಯಿತು. ಈ ರೀತಿಯಾದಾಗ ವರ್ಷಾನುಗಟ್ಟಲೆ ಗಳಿಸಿದ ಸ್ಥಾನಮಾನ ಎಲ್ಲವೂ ನೀರಿನಲ್ಲಿ ಹೋಮ ಮಾಡಿದ್ದಂತಾಗುತ್ತದೆ. ಹೌದು, ಭಾರತೀಯ ಮೂಲದ ಉದ್ಯಮಿ ಮತ್ತು ಕ್ಲೀನ್ ವಾಟರ್ ಸ್ಟಾರ್ಟ್‌ಅಪ್ ಗ್ರೇಡಿಯಂಟ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ ಅನುರಾಗ್ ಬಾಜಪೇಯಿ (anurag bajpeyi) ಉನ್ನತ ಮಟ್ಟದ ಐಷಾರಾಮಿ ವೇಶ್ಯಾಗೃಹ ಹಗರಣ (luxury brothel scandal) ದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದ ಉದ್ಯಮಿಯನ್ನು ಅಮೇರಿಕಾ (america) ದಲ್ಲಿ ಬಂಧಿಸಿದ್ದಾರೆ. ಹೌದು, ಹಾರ್ವರ್ಡ್ ವಿಶ್ವವಿದ್ಯಾನಿಲಯ (Harvard university) ದ ಬಳಿ ಇರುವ ಐಷಾರಾಮಿ ಅಪಾರ್ಟ್ಮೆಂಟ್ ಗಳಲ್ಲಿ ಅಕ್ರಮ ವೇಶ್ಯಾಗೃಹ ನಡೆಸುತ್ತಿದ್ದ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿದೆ.

ಈ ಹೈಟೆಕ್ ವೇಶ್ಯಾಗೃಹದಲ್ಲಿ ವ್ಯಕ್ತಿಗಳು ಸಂಭೋಗಕ್ಕಾಗಿ ಒಂದು ಗಂಟೆಗೆ 600 ಡಾಲರ್ ಅಂದರೆ ಸರಿಸುಮಾರು 50 ಸಾವಿರ ರೂಪಾಯಿ ಮೊತ್ತವನ್ನು ಪಾವತಿಸಬೇಕಾಗಿತ್ತು. ಅದಲ್ಲದೇ ಈ ಹಗರಣದಲ್ಲಿ ವಿಶ್ವದ ಖ್ಯಾತ ಕಂಪನಿಗಳ ಸಿಇಒಗಳು, ವೈದ್ಯರು, ವಕೀಲರು, ಸರ್ಕಾರಿ ಗುತ್ತಿಗೆದಾರರು, ಸಾರ್ವಜನಿಕ ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇದರಲ್ಲಿ ಗ್ರೇಡಿಯಂಟ್ ಎಂಬ ಸ್ವಚ್ಛ ನೀರಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಭಾರತೀಯ ಮೂಲದ ಸಿಇಒ ಅನುರಾಗ್ ಬಾಜಪೇಯಿ ಭಾಗಿಯಾಗಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಅದಲ್ಲದೆ, ಈ ಹೈಟೆಕ್ ವೇಶ್ಯಾಗೃಹಕ್ಕೆ ಬರುವ ವ್ಯಕ್ತಿಗಳು ಗುರುತಿನ ಚೀಟಿ, ಉದ್ಯೋಗದ ವಿವರ ಮತ್ತು ಯಾರ ಶಿಫಾರಸ್ಸಿನ ಮೂಲಕ ಬಂದಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ, ಗರ್ಭಪಾತಕ್ಕೆ ಕಾರಣವಾಯ್ತು

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಅದಲ್ಲದೇ, ಈ ವೇಶ್ಯಾಗೃಹ ಹಗರಣದಲ್ಲಿ ಅನುರಾಗ್ ಬಾಜಪೇಯಿ ಹೆಸರು ಕೇಳಿ ಬರುತ್ತಿದ್ದಂತೆ ಗ್ರೇಡಿಯಂಟ್ ತನ್ನ ಸಿಇಒ ಪರವಾಗಿ ನಿಂತುಕೊಳ್ಳುವ ಮೂಲಕ ಹೇಳಿಕೆ ನೀಡಿದೆ. ಹೌದು, ಗ್ರೇಡಿಯಂಟ್ ಪ್ರತಿನಿಧಿ ಫೆಲಿಕ್ಸ್ ವಾಂಗ್ ಪ್ರತಿಕ್ರಿಯೆ ನೀಡಿದ್ದು “ನಾವು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಡುತ್ತೇವೆ. ಇದು ಸರಿಯಾದ ಸಮಯದಲ್ಲಿ ಅನುಕೂಲಕರವಾಗಿ ಪರಿಹರಿಸಲ್ಪಡುತ್ತದೆ ಎನ್ನುವ ವಿಶ್ವಾಸ ನಮಗಿದೆ. ಅದಲ್ಲದೆ ಗ್ರೇಡಿಯಂಟ್ ತಾಂತ್ರಿಕ ನಾವೀನ್ಯತೆಯಲ್ಲಿ ತನ್ನ ಶ್ರೇಷ್ಠತೆ ಮುಂದುವರಿಸುತ್ತದೆ. ಈ ಮೂಲಕ ಶುದ್ಧ ನೀರನ್ನು ನೀಡುವ ಧ್ಯೇಯದತ್ತ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:23 pm, Mon, 14 April 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ