Operation Sindoor: ಪಾಕಿಸ್ತಾನದ ಮೇಲೆ ಭಾರತದ ದಾಳಿಗೂ ಮುನ್ನ, ನಂತರದ ಸ್ಯಾಟಲೈಟ್ ಚಿತ್ರಗಳು ಇಲ್ಲಿವೆ
ಪಾಕಿಸ್ತಾನದ ಮೇಲೆ ಭಾರತ ದಾಳಿಗೂ ಮುನ್ನ ಹಾಗೂ ನಂತರದ ಸ್ಯಾಟಲೈಟ್ ಚಿತ್ರಗಳು ಮುನ್ನೆಲೆಗೆ ಬಂದಿದ್ದು, ಅದರಲ್ಲಿ ದಾಳಿಯಿಂದ ಪಾಕ್ ಎಷ್ಟು ಹಾನಿಗೊಳಗಾಗಿದೆ ಎಂಬುದನ್ನು ತೋರಿಸುತ್ತದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ದೃಢಪಡಿಸಿವೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಈ ಚಿತ್ರಗಳು, ಬಹಾವಲ್ಪುರದ ಜಾಮಿಯಾ ಮಸೀದಿ ಮತ್ತು ಮುರಿಡ್ಕೆಯ ಸಂಕೀರ್ಣದ ಮೊದಲು ಮತ್ತು ನಂತರದ ನೋಟಗಳನ್ನು ತೋರಿಸುತ್ತವೆ. ಇವೆರಡನ್ನೂ ಭಾರತವು ಭಯೋತ್ಪಾದಕ ಚಟುವಟಿಕೆಯ ಕೇಂದ್ರಗಳೆಂದು ಗುರುತಿಸಿದೆ.

ಇಸ್ಲಾಮಾಬಾದ್, ಮೇ 08: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಡೆಸಿರುವ ಆಪರೇಷನ್ ಸಿಂಧೂರ್(Operation Sindoor) ಬಳಿಕ ಅಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿದೆ. ಸ್ಯಾಟಲೈಟ್ ಚಿತ್ರವೊಂದು ಹೊರಬದ್ದಿದ್ದು, ಭಾರತ ದಾಳಿ ಮಾಡುವ ಮುನ್ನ ಪಾಕ್ ಹೇಗಿತ್ತು, ನಂತರ ಹೇಗಿದೆ ಎಂಬುದನ್ನು ಹೇಳಿದೆ.
ಮ್ಯಾಕ್ಸರ್ ಟೆಕ್ನಾಲಜೀಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ದೃಢಪಡಿಸಿವೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಈ ಚಿತ್ರಗಳು, ಬಹಾವಲ್ಪುರದ ಜಾಮಿಯಾ ಮಸೀದಿ ಮತ್ತು ಮುರಿಡ್ಕೆಯ ಸಂಕೀರ್ಣದ ಮೊದಲು ಮತ್ತು ನಂತರದ ನೋಟಗಳನ್ನು ತೋರಿಸುತ್ತವೆ.
ಇವೆರಡನ್ನೂ ಭಾರತವು ಭಯೋತ್ಪಾದಕ ಚಟುವಟಿಕೆಯ ಕೇಂದ್ರಗಳೆಂದು ಗುರುತಿಸಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತವು ಪಾಕಿಸ್ತಾನದಲ್ಲಿರುವ ಒಂಬತ್ತು ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿ ನಾಶಪಡಿಸಿದೆ.
ಈಗ ಉಪಗ್ರಹ ಚಿತ್ರಗಳು ಪಾಕಿಸ್ತಾನದಲ್ಲಿ ಭಾರತದ ದಾಳಿಯಿಂದ ಉಂಟಾದ ವಿನಾಶವನ್ನು ಬಹಿರಂಗಪಡಿಸಿವೆ. ದಾಳಿಯಲ್ಲಿ ಅನೇಕ ಕಟ್ಟಡಗಳು ನಾಶವಾಗಿವೆ ಎಂಬುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ ಮತ್ತು ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ.
ಮತ್ತಷ್ಟು ಓದಿ: Operation Sindoor: ಭಾರತ ನಡೆಸಿದ ದಾಳಿಯಲ್ಲಿ ಉಗ್ರ ಮಸೂದ್ ಅಜರ್, ಹಫೀಜ್ ಸಯೀದ್ ಸಾವು?
ದಾಳಿಗೂ ಮುನ್ನ ಗೋಚರಿಸುತ್ತಿದ್ದ ಕಟ್ಟಡಗಳು, ದಾಳಿಯ ನಂತರ ಗೋಚರಿಸುವ ಅವಶೇಷಗಳ ರಾಶಿಗಳಾಗಿ ಮಾತ್ರ ಉಳಿದಿರುವುದು ಚಿತ್ರಗಳಲ್ಲಿ ಗೋಚರಿಸುತ್ತದೆ. ಇದೇ ರೀತಿಯ ಕಟ್ಟಡಗಳ ಭಗ್ನಾವಶೇಷಗಳು ಮತ್ತೊಂದು ಫೋಟೋದಲ್ಲಿ ಗೋಚರಿಸುತ್ತವೆ.
ಭಾರತವು ಮಧ್ಯರಾತ್ರಿ ಮುರಿಡ್ಕೆಯಲ್ಲಿ ಎರಡು ಕ್ಷಿಪಣಿಗಳನ್ನು ಹಾರಿಸಿತು. ಇದಾದ ಸ್ವಲ್ಪ ಸಮಯದ ನಂತರ, ಮತ್ತೆ ಎರಡು ಕ್ಷಿಪಣಿಗಳನ್ನು ಹಾರಿಸಲಾಯಿತು. ಇಡೀ ದಾಳಿ 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆಯಿತು. ಈ ದಾಳಿಯಲ್ಲಿ ನಾಲ್ಕು ಕಟ್ಟಡಗಳು ನಾಶವಾದವು, ಇದರಲ್ಲಿ ಒಂದು ಆಡಳಿತ ಕಟ್ಟಡ, ಒಂದು ಮಸೀದಿ ಮತ್ತು ಎರಡು ವಸತಿ ಕಟ್ಟಡಗಳು ಸೇರಿವೆ ಎಂದು ಪಾಕಿಸ್ತಾನದ ಶೇಖಪುರ ಜಿಲ್ಲೆಯ ಹೆಚ್ಚುವರಿ ಡೆಪ್ಯುಟಿ ಕಮಿಷನರ್ ಉಸ್ಮಾನ್ ಜಲೀಸ್ ಮಾಹಿತಿ ನೀಡಿದ್ದಾರೆ.
ಭಾರತ ನಡೆಸಿದ ಅತಿದೊಡ್ಡ ದಾಳಿ ಬಹವಾಲ್ಪುರದಲ್ಲಿ ನಡೆಯಿತು. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಅಡಗುತಾಣ ಬಹಾವಲ್ಪುರದಲ್ಲಿದೆ. ಭಾರತದ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಾಯಕರ ಹತ್ಯೆಗೆ ಕಾರಣನಾದ ಮಸೂದ್ ಅಜರ್, ತನ್ನ ಕುಟುಂಬ ಸದಸ್ಯರ ಸಾವಿನಿಂದ ತೀವ್ರವಾಗಿ ಅತ್ತಿದ್ದಾನೆ ಎಂದು ವರದಿಯಾಗಿದೆ.
#WATCH | Visuals from Muridke, Pakistan show the terror hotbed in rubble following Indian missile strikes.
(Source: Reuters) pic.twitter.com/ajKwMRLzrR
— ANI (@ANI) May 8, 2025
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಸೇನೆ ಮತ್ತು ಐಎಸ್ಐ ಮಸೂದ್ ಅಜರ್ನನ್ನು ಅಬೋಟಾಬಾದ್ನಲ್ಲಿರುವ ಐಎಸ್ಐ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಿಂದ ಈ ದಾಳಿಯಿಂದ ಅವನು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ಬಹವಾಲ್ಪುರದ ಮರ್ಕಝ್ ಸುಭಾನ್ ಅಲ್ಲಾ, ಮುರಿಡ್ಕೆಯ ಮರ್ಕಝ್ ತೈಬಾ, ಸಿಯಾಲ್ಕೋಟ್ನ ಸರ್ಜಾಲ್ ಕ್ಯಾಂಪ್, ಸಿಯಾಲ್ಕೋಟ್ನ ಮಹಮೂನಾ ಕ್ಯಾಂಪ್, ಬರ್ನಾಲಾ ಭಿಂಬರ್ನಲ್ಲಿ ಅಹ್ಲೆ ಹದೀಸ್, ಕೋಟ್ಲಿಯಲ್ಲಿ ಮರ್ಕಝ್ ಅಬ್ಬಾಸ್, ಕೋಟ್ಲಿಯಲ್ಲಿ ಮಸ್ಕರ್ ರಹೀಲ್ ಶಾಹೀದ್ ಮತ್ತು ಮುಝ್ಫರಾಬಾದ್ ಪ್ರದೇಶದ ಮೇಲೆ ದಾಳಿ ಮಾಡುವ ಮೂಲಕ ಭಾರತವು ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:39 am, Thu, 8 May 25