AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದರಸಾ ವಿಸ್ತರಣೆಗೆ ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ: ಮಳೆಯಿಂದ ಕುಸಿದಿದೆ ಎಂದ ಸರ್ಕಾರದ ವಿರುದ್ಧ ಆಕ್ರೋಶ

ಪಾಕಿಸ್ತಾನದ ನರೋವಾಲ್‌ನಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯವನ್ನು ಮದರಸಾ ವಿಸ್ತರಣೆಗಾಗಿ ಧ್ವಂಸಗೊಳಿಸಲಾಗಿದೆ. ಸರ್ಕಾರದ 'ಮಳೆಯಿಂದ ಕುಸಿತ' ವಾದವನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತರು ಖಂಡಿಸಿದ್ದಾರೆ. ಅಕ್ರಮ ತೆರವಿಗೆ ಆದೇಶವಿದ್ದರೂ ಸ್ಥಳೀಯ ಆಡಳಿತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ದೇವಾಲಯದ ಪುನರ್ನಿರ್ಮಾಣ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಮದರಸಾ ವಿಸ್ತರಣೆಗೆ ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ: ಮಳೆಯಿಂದ ಕುಸಿದಿದೆ ಎಂದ ಸರ್ಕಾರದ ವಿರುದ್ಧ ಆಕ್ರೋಶ
ಪಾಕಿಸ್ತಾನ
ನಯನಾ ರಾಜೀವ್
|

Updated on: Sep 01, 2026 | 12:58 PM

Share

ಇಸ್ಲಾಮಾಬಾದ್, ಸೆಪ್ಟೆಂಬರ್ 1: ಪಾಕಿಸ್ತಾನ(Pakistan)ದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿದ್ದ ಸುಮಾರು 125 ವರ್ಷಗಳಷ್ಟು ಹಳೆಯ ಐತಿಹಾಸಿಕ ಹಿಂದೂ ದೇವಾಲಯವನ್ನು ಪಕ್ಕದ ಮದರಸಾ ವಿಸ್ತರಣೆಗಾಗಿ ಗುಂಪೊಂದು ನೆಲಸಮ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸುಮಾರು 1 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿದ್ದ ಈ ಪ್ರಾಚೀನ ದೇಗುಲದ ಧ್ವಂಸವನ್ನು ಖಂಡಿಸಿರುವ ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತರು, ಅಲ್ಪಸಂಖ್ಯಾತ ಸಂಘಟನೆಗಳು ಹಾಗೂ ಸ್ಥಳೀಯ ಹಿಂದೂ ಮುಖಂಡರು, ಶೆಹಬಾಜ್ ಷರೀಫ್ ನೇತೃತ್ವದ ಫೆಡರಲ್ ಸರ್ಕಾರ ಹಾಗೂ ಮುಖ್ಯಮಂತ್ರಿ ಮರ್ಯಮ್ ನವಾಜ್ ನೇತೃತ್ವದ ಪಂಜಾಬ್ ಸರ್ಕಾರ ಕೂಡಲೇ ದೇವಾಲಯವನ್ನು ಪುನರ್ನಿರ್ಮಿಸಬೇಕೆಂದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಘಟನೆಯ ವಿವರ ಮತ್ತು ಆರೋಪಗಳು ನಿಷೇಧಿತ ಬಲಪಂಥೀಯ ಇಸ್ಲಾಮಿಕ್ ಸಂಘಟನೆಯ ಸದಸ್ಯರು ಆಗಸ್ಟ್ 21 ರಂದು ದೇವಾಲಯವನ್ನು ಕೆಡವಿ, ಅದರ ಶಿಖರದ ಲೋಹದ ಭಾಗಗಳು ಮತ್ತು ಇಟ್ಟಿಗೆಗಳನ್ನು ದೋಚಿಕೊಂಡು, ಆ ಜಾಗವನ್ನು ಪಕ್ಕದ ಸೆಮಿನರಿಗೆ ಅಕ್ರಮವಾಗಿ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಆದೇಶವಿದ್ದರೂ ಕ್ರಮವಿಲ್ಲ: ದೇವಾಲಯದ ಪಕ್ಕದ ಜಮೀನಿನ ಗುತ್ತಿಗೆಯನ್ನು ಬಾಡಿಗೆ ಪಾವತಿಸದ ಕಾರಣ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಜನವರಿಯಲ್ಲೇ ರದ್ದುಗೊಳಿಸಿತ್ತು. ಅಕ್ರಮ ನಿವಾಸಿಗಳನ್ನು ತೆರವುಗೊಳಿಸಿ ಸೀಲ್ ಮಾಡಲು ಉಪ ಆಡಳಿತಾಧಿಕಾರಿ ಆದೇಶಿಸಿದ್ದರೂ, ಸ್ಥಳೀಯ ಆಡಳಿತ ಮತ್ತು ಪೊಲೀಸರು ಕ್ರಮ ಕೈಗೊಳ್ಳದೆ ದೇಗುಲ ಧ್ವಂಸಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪಾಕಿಸ್ತಾನ್ ಮಸಿಹಾ ಮಿಲ್ಲತ್ ಪಕ್ಷದ (PMMP) ಅಧ್ಯಕ್ಷ ಅಸ್ಲಾಂ ಪರ್ವೇಜ್ ಸಹೋತ್ರಾ ಆರೋಪಿಸಿದ್ದಾರೆ.

ಭಯದ ವಾತಾವರಣ: ನರೋವಲ್ ಜಿಲ್ಲಾ ಶಾಂತಿ ಸಮಿತಿಯ ಹಿಂದೂ ಸದಸ್ಯ ರತ್ತನ್ ಲಾಲ್ ಮಾತನಾಡಿ, “ಮದರಸಾ ಒತ್ತುವರಿಯಿಂದಾಗಿ ಸ್ಥಳೀಯ ಹಿಂದೂಗಳು ಆ ಜಾಗಕ್ಕೆ ಭೇಟಿ ನೀಡಲು ಸಹ ಭಯಪಡುವಂತಾಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನದ ಪರ ತೀರ್ಪು ನೀಡಿದ ಮಧ್ಯಸ್ಥಿಕೆ ನ್ಯಾಯಾಲಯ; ಆದೇಶ ತಿರಸ್ಕರಿಸಿದ ಭಾರತ

ಸರ್ಕಾರದ ವಾದ ಮತ್ತು ಮುಖಾಮುಖಿ

ಮಳೆಯಿಂದ ಕುಸಿದಿದೆ ಎಂದ ಇಟಿಪಿಬಿ: ಇಟಿಪಿಬಿಯ ಹಿರಿಯ ಅಧಿಕಾರಿ ರಾಣಾ ಇಫ್ತಿಕರ್ ಈ ಆರೋಪಗಳನ್ನು ನಿರಾಕರಿಸಿದ್ದು, 100-125 ವರ್ಷಗಳಷ್ಟು ಹಳೆಯದಾದ ಈ ರಚನೆಯು ಧಾರಾಕಾರ ಮಳೆಯಿಂದಾಗಿ ಶಿಥಿಲಗೊಂಡು ತಾನಾಗಿಯೇ ಕುಸಿದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಗುಪ್ತಚರ ಎಚ್ಚರಿಕೆ ನಿರ್ಲಕ್ಷ್ಯ: ಆದರೆ ಏಪ್ರಿಲ್ 11 ರ ಪೊಲೀಸ್ ವರದಿಯಲ್ಲೇ ಈ ದೇವಾಲಯದ ಭದ್ರತಾ ಅಪಾಯ ಮತ್ತು ಕಿಡಿಗೇಡಿಗಳಿಂದ ಹಾನಿಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂಬುದು ಬಯಲಾಗಿದೆ.

ಧಾರ್ಮಿಕ ಸ್ಥಳಗಳ ಮೇಲಿನ ಸರಣಿ ದಾಳಿ: ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಪೂಜಾ ಸ್ಥಳಗಳ ಮೇಲೆ ಅಕ್ರಮ ಒತ್ತುವರಿ ಮತ್ತು ದಾಳಿಗಳು ನಿರಂತರವಾಗಿ ವರದಿಯಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಡಜನ್‌ಗೂ ಹೆಚ್ಚು ಪುರಾತನ ಮಂದಿರಗಳು ಧ್ವಂಸಗೊಂಡಿವೆ.

ಅಂತಾರಾಷ್ಟ್ರೀಯ ಆಕ್ಷೇಪ: ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ಸೇರಿದಂತೆ ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಆಸ್ತಿಗಳ ರಕ್ಷಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪದೇಪದೇ ಕಳವಳ ವ್ಯಕ್ತಪಡಿಸುತ್ತಲೇ ಬಂದಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕಬಿನಿ ಜಲಾಶಯಕ್ಕೆ ರೈತರ ಮುತ್ತಿಗೆ
ಕಬಿನಿ ಜಲಾಶಯಕ್ಕೆ ರೈತರ ಮುತ್ತಿಗೆ
ಪಾದಯಾತ್ರೆಗೂ ಮುನ್ನ ಗುರುಗುಂಟ ಅಮರೇಶ್ವರ ದೇವಸ್ಥಾನಕ್ಕೆ ವಿಜಯೇಂದ್ರ ಭೇಟಿ
ಪಾದಯಾತ್ರೆಗೂ ಮುನ್ನ ಗುರುಗುಂಟ ಅಮರೇಶ್ವರ ದೇವಸ್ಥಾನಕ್ಕೆ ವಿಜಯೇಂದ್ರ ಭೇಟಿ
ಸಿಕ್ಸ್​ ಪ್ಯಾಕ್​, ಟ್ಯಾಟು, ಶೋಕಿ ಜೀವನ: ಈತ ಯಾರೋ ಸೆಲೆಬ್ರಿಟಿ ಅಲ್ಲ, PDO
ಸಿಕ್ಸ್​ ಪ್ಯಾಕ್​, ಟ್ಯಾಟು, ಶೋಕಿ ಜೀವನ: ಈತ ಯಾರೋ ಸೆಲೆಬ್ರಿಟಿ ಅಲ್ಲ, PDO
‘ಟಾಕ್ಸಿಕ್’ನಿಂದ ಅರ್ಧಕ್ಕೆ ಹೊರಬಂದೆ’; ಬಿಗ್ ಬಾಸ್ ಮಾಜಿ ಸ್ಪರ್ಧಿಯ ಹೇಳಿಕೆ
‘ಟಾಕ್ಸಿಕ್’ನಿಂದ ಅರ್ಧಕ್ಕೆ ಹೊರಬಂದೆ’; ಬಿಗ್ ಬಾಸ್ ಮಾಜಿ ಸ್ಪರ್ಧಿಯ ಹೇಳಿಕೆ
ದಾವಣಗೆರೆ ಬಂದ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಬಸ್ ಸಂಚಾರಕ್ಕೆ ತಡೆ
ದಾವಣಗೆರೆ ಬಂದ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಬಸ್ ಸಂಚಾರಕ್ಕೆ ತಡೆ
ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!
ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ