AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಕೆ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ತಾಂತ್ರಿಕ ದೋಷ: 1,300ಕ್ಕೂ ಹೆಚ್ಚು ವಿಮಾನಗಳು ರದ್ದು, ಲಕ್ಷಾಂತರ ಪ್ರಯಾಣಿಕರ ಪರದಾಟ

ಯುನೈಟೆಡ್ ಕಿಂಗ್‌ಡಂನ ನ್ಯಾಟ್ಸ್ ಸಿಸ್ಟಮ್‌ನಲ್ಲಿನ ಭಾರಿ ತಾಂತ್ರಿಕ ದೋಷದಿಂದ 1,300ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಲಂಡನ್ ಹೀಥ್ರೂ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ರಯಾನ್‌ಏರ್, ಬ್ರಿಟಿಷ್ ಏರ್‌ವೇಸ್‌ನಂತಹ ವಿಮಾನಯಾನ ಸಂಸ್ಥೆಗಳಿಗೆ ಭಾರೀ ನಷ್ಟವಾಗಿದ್ದು, ನ್ಯಾಟ್ಸ್​ ಸಿಇಒ ರಾಜೀನಾಮೆಗೆ ಆಗ್ರಹ ಕೇಳಿಬಂದಿದೆ. ಈ ಹಿಂದೆ ಸಹ ಇಂತಹ ಘಟನೆಗಳು ಸಂಭವಿಸಿದ್ದು, ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ.

ಯುಕೆ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ತಾಂತ್ರಿಕ ದೋಷ: 1,300ಕ್ಕೂ ಹೆಚ್ಚು ವಿಮಾನಗಳು ರದ್ದು, ಲಕ್ಷಾಂತರ ಪ್ರಯಾಣಿಕರ ಪರದಾಟ
ವಿಮಾನImage Credit source: ANI
ನಯನಾ ರಾಜೀವ್
|

Updated on: Sep 09, 2026 | 9:19 AM

Share

ಲಂಡನ್, ಸೆಪ್ಟೆಂಬರ್ 09: ಯುನೈಟೆಡ್ ಕಿಂಗ್‌ಡಂನ (UK) ರಾಷ್ಟ್ರೀಯ ವಾಯು ಸಂಚಾರ ನಿಯಂತ್ರಣ ಸೇವೆ ಒದಗಿಸುವ ಸಂಸ್ಥೆಯಾದ ‘ನ್ಯಾಟ್ಸ್’ (NATS) ಸಿಸ್ಟಮ್‌ನಲ್ಲಿ ಉಂಟಾದ ಭಾರಿ ತಾಂತ್ರಿಕ ದೋಷದಿಂದಾಗಿ ಬ್ರಿಟನ್‌ನಾದ್ಯಂತ 1,300ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ವ್ಯಾಪಕ ಅವ್ಯವಸ್ಥೆ ಸೃಷ್ಟಿಯಾಗಿದೆ. ಲಂಡನ್ ಹೀಥ್ರೂ, ಗ್ಯಾಟ್ವಿಕ್, ಮ್ಯಾಂಚೆಸ್ಟರ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾದು ಸಿಲುಕಿಕೊಂಡಿದ್ದು, ವಿಮಾನಯಾನ ಸಂಸ್ಥೆಗಳು ಆಕ್ರೋಶ ಹೊರಹಾಕಿವೆ.

ವಿಮಾನ ಟ್ರ್ಯಾಕಿಂಗ್ ಸಂಸ್ಥೆ ‘ಫ್ಲೈಟ್‌ರಾಡರ್ 24’ ಪ್ರಕಾರ, ಬ್ರಿಟನ್ ಒಳಗೆ ಮತ್ತು ಹೊರಗೆ ಸಂಚರಿಸಬೇಕಿದ್ದ ಸುಮಾರು 1,300 ವಿಮಾನಗಳು ರದ್ದಾಗಿವೆ. ಹೀಥ್ರೂ ವಿಮಾನ ನಿಲ್ದಾಣದಲ್ಲಿ ಆಗಮನಗಳನ್ನು ತಾತ್ಕಾಲಿಕವಾಗಿ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಏರ್‌ಲೈನ್ಸ್‌ಗಳ ಮೇಲೆ ನೇರ ಹೊಡೆತ: ಬ್ರಿಟಿಷ್ ಏರ್‌ವೇಸ್ 100ಕ್ಕೂ ಹೆಚ್ಚು, ಈಸಿಜೆಟ್ 218, ರಯಾನ್‌ಏರ್ ನೂರಾರು ವಿಮಾನಗಳನ್ನು ರದ್ದುಗೊಳಿಸಿವೆ. ರಯಾನ್‌ಏರ್ ಒಂದರಲ್ಲೇ ಸುಮಾರು 1.5 ಲಕ್ಷ ಪ್ರಯಾಣಿಕರು ಅತಂತ್ರರಾಗಿದ್ದಾರೆ.

ಏರ್ ಇಂಡಿಯಾ ಮಾರ್ಗಸೂಚಿ: ಬ್ರಿಟನ್‌ನಲ್ಲಿ ವಿಮಾನಗಳು ಮತ್ತು ಸಿಬ್ಬಂದಿಯ ನಿಯೋಜನೆಯಲ್ಲಿ ಏರುಪೇರಾಗಿರುವುದರಿಂದ ಭಾರತ-ಯುಕೆ ನಡುವಿನ ವಿಮಾನಗಳ ಮೇಲೂ ಪರಿಣಾಮ ಬೀರಬಹುದು ಎಂದು ಏರ್ ಇಂಡಿಯಾ ಎಚ್ಚರಿಸಿದೆ. ನಿಲ್ದಾಣಕ್ಕೆ ಬರುವ ಮುನ್ನ ವಿಮಾನದ ಸ್ಥಿತಿ ಪರಿಶೀಲಿಸುವಂತೆ ಪ್ರಯಾಣಿಕರಿಗೆ ತಿಳಿಸಲಾಗಿದೆ.

ಮತ್ತಷ್ಟು ಓದಿ: ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣ ಜಲಾವೃತ; ಪ್ರಯಾಣಿಕರ ಪರದಾಟ

ಆರ್ಸೆನಲ್ ತಂಡದ ಪಂದ್ಯಕ್ಕೂ ಅಡ್ಡಿ: ಚಾಂಪಿಯನ್ಸ್ ಲೀಗ್ ಪಂದ್ಯಕ್ಕಾಗಿ ಇಟಲಿಯ ನೇಪಲ್ಸ್‌ಗೆ ತೆರಳಬೇಕಿದ್ದ ಜನಪ್ರಿಯ ‘ಆರ್ಸೆನಲ್’ ಫುಟ್‌ಬಾಲ್ ತಂಡದ ವಿಮಾನ ವಿಳಂಬವಾಗಿದ್ದು, ಅವರ ಅಧಿಕೃತ ಪೂರ್ವಭಾವಿ ಪತ್ರಿಕಾಗೋಷ್ಠಿಯನ್ನೇ ರದ್ದುಗೊಳಿಸಬೇಕಾಯಿತು.

ಪದೇಪದೇ ಇಂತಹ ತಾಂತ್ರಿಕ ಲೋಪಗಳು ಸಂಭವಿಸುತ್ತಿರುವುದನ್ನು ಖಂಡಿಸಿರುವ ರಯಾನ್‌ಏರ್ ಸಿಒಒ (COO) ನೀಲ್ ಮೆಕ್‌ಮಹಾನ್, ನ್ಯಾಟ್ಸ್​ ಸಿಇಒ ಮಾರ್ಟಿನ್ ರೋಲ್ಫ್ ಅವರನ್ನು ತಕ್ಷಣ ವಜಾಗೊಳಿಸಬೇಕು ಅಥವಾ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬ್ರಿಟನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಹಿಂದೆಯೂ 2023ರಲ್ಲಿ ಸ್ವಯಂಚಾಲಿತ ಫ್ಲೈಟ್-ಪ್ಲಾನಿಂಗ್ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಬ್ರಿಟನ್‌ನಲ್ಲಿ ನೂರಾರು ವಿಮಾನಗಳು ರದ್ದಾಗಿ 7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಕಳೆದ ವರ್ಷ ಜುಲೈನಲ್ಲೂ ರಾಡಾರ್ ಸಮಸ್ಯೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ದೋಷಕ್ಕೆ ನಿಖರ ಕಾರಣ ತಿಳಿದಿಲ್ಲ: ಮಂಗಳವಾರ ಸಂಜೆಯ ವೇಳೆಗೆ ಸಾಫ್ಟ್‌ವೇರ್ ಸರಿಪಡಿಸಲಾಗಿದೆ ಎಂದು ನ್ಯಾಟ್ಸ್​​ ಘೋಷಿಸಿ, ಕ್ಷಮೆಯಾಚಿಸಿದ್ದರೂ, ಈ ವೈಫಲ್ಯಕ್ಕೆ ಮೂಲ ಕಾರಣವೇನು ಎಂಬುದರ ಬಗ್ಗೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಬ್ರಿಟನ್ ಸಾರಿಗೆ ಕಾರ್ಯದರ್ಶಿ ಹೈಡಿ ಅಲೆಕ್ಸಾಂಡರ್ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?