AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನಿಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ
ಆಸ್ಟ್ರಾಜೆನೆಕಾ ಲಸಿಕೆ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Apr 09, 2021 | 12:11 AM

Share

ಕೊವಿಡ್​ ಸೋಂಕಿನ ವಿರುದ್ಧ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಕೆಲವರಲ್ಲಿ ರಕ್ತ ಹೆಪ್ಪುಗಟ್ಟಿವಿಕೆಯ ದೂರು ವರದಿಯಾದ ನಂತರ ಯುನೈಟೆಡ್​ ಕಿಂಗ್​​ಡಮ್​ನಲ್ಲಿ ಮೂವತ್ತಕ್ಕಿಂತ ಕಡಿಮೆ ವಯಸ್ಸಿನವರಿಗೆ ಅದಕ್ಕೆ ಪರ್ಯಾಯವಾದ ಲಸಿಕೆ ಒದಗಿಸುವುದಾಗಿ ಆ ದೇಶದ ಔಷಧ ನಿಯಂತ್ರಣ ಸಂಸ್ಥೆ ಬುಧವಾರದಂದು ಹೇಳಿದೆ. ಏತನ್ಮಧ್ಯೆ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಈಎಮ್​ಎ) ವ್ಯಾಕ್ಸಿನ್ ಮತ್ತು ರಕ್ತ ಹೆಪ್ಪುಗಟ್ಟುವಿಕೆ ನಡುವೆ ಸಂಬಂಧವಿದೆ ಎಂದು ಹೇಳಿದೆ.

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

ಮಾರ್ಚ್ ಕೊನೆಭಾಗದಲ್ಲಿ ಎಮ್ ಎಚ್ ಆರ್​ ಎ ನಡೆಸಿದ ಒಂದು ಪರಿಶೀಲನೆ ಪ್ರಕಾರ, ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಯುನೈಟೆಡ್​ ಕಿಂಗಡಮ್​​ನಲ್ಲಿ 79 ಜನರಲ್ಲಿ ರಕ್ತ ಹೆಪ್ಪುಗಟ್ಟಿದ್ದು ಕಂಡುಬಂದಿದೆ ಮತ್ತು ಅವರಲ್ಲಿ 19 ಜನ ಮರಣ ಹೊಂದಿದ್ದಾರೆ. ಲಸಿಕೆ ತೆಗೆದುಕೊಂಡ ಕಾರಣ ಅವರಲ್ಲಿ ರಕ್ತ ಹೆಪ್ಪುಗಟ್ಟಿತು ಎನ್ನುವುದಕ್ಕೆ ಪುರಾವೆ ಲಭ್ಯವಾಗಿಲ್ಲ, ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಈ ಲಸಿಕೆಯು ಕೊವಿಡ್-19 ಸೋಂಕಿನಿಂದ ಜನರಿಗೆ ರಕ್ಷಣೆ ನೀಡುತ್ತಿದೆ ಎನ್ನುವುದು ಅದರಿಂದ ಅಪಾಯವಿದೆಯೆನ್ನುವುದು ಸಂಗತಿಯನ್ನು ನಗಣ್ಯವಾಗಿಸುತ್ತದೆ ಎಂದು ಎಮ್ ಎಚ್ ಆರ್​ ಎ ಹೇಳಿದೆ

ಇದನ್ನೂ ಓದಿ: ಆಸ್ಟ್ರಾಜೆನೆಕಾ ಅಡ್ಡಪರಿಣಾಮದ ಬಗ್ಗೆ WHO ಸ್ಪಷ್ಟನೆ; ಲಸಿಕೆ ಬಳಕೆ ಮಾಡಬಹುದು ಎಂದ ವಿಶ್ವ ಆರೋಗ್ಯ ಸಂಸ್ಥೆ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.