AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತೆಡಬ್ಬಿ : ಕನ್ನಡತಿಯನ್ನು ಕಥೆಗಾತಿಯಾಗಿ ಮೆಚ್ಚಿಕೊಂಡಾಗ..!

ರಂಜನಿ ರಾಘವನ್ ಅವರು ಕತೆ ಹೇಳುವ ರೀತಿಯೆ ಚಂದ ಅನ್ನಿಸ್ತು. ಬೇರೆಲ್ಲೂ ಓದಿದ ರೀತಿ ಅನ್ನಿಸದೆ ತನ್ನದೆ ಸ್ವಂತ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡುತ್ತಾರೆ. ತನ್ನ ನೈಜ ಅಭಿನಯದಂತೆ ಕತೆಯನ್ನು ನೈಜವಾಗಿ, ಸರಳವಾಗಿ, ಚಂದವಾಗಿ ಹೇಳಿ ಮುಗಿಸಿದ್ದಾರೆ.

ಕತೆಡಬ್ಬಿ : ಕನ್ನಡತಿಯನ್ನು ಕಥೆಗಾತಿಯಾಗಿ ಮೆಚ್ಚಿಕೊಂಡಾಗ..!
ರಂಜನಿ ರಾಘವನ್ ಅವರ ಪುಸ್ತಕ
TV9 Web
| Edited By: |

Updated on: Feb 17, 2022 | 9:19 AM

Share

ಅರೆ! ಈಕೆ ಇನ್ನಷ್ಟು ಬರೆಯಬಲ್ಲಳು ಅಂತ ನಿಮಗನಿಸಿದರೆ ಅದೇ ನನ್ನ ಗೆಲುವು ಎಂದು ಪುಸ್ತಕದ ಕೊನೆಯಲ್ಲಿ ಬರೆದಿದ್ದ ಸಾಲುಗಳ ಮೇಲೆ ಮೊದಲು ಕಣ್ಣಾಡಿಸಿದ ನನಗೆ ರಂಜನಿ ರಾಘವನ್ ಅವರ ಕತೆಡಬ್ಬಿಯ ಮುಚ್ಚಳ ತೆಗೆಯವ ತವಕ ಇನ್ನಷ್ಟು ಹೆಚ್ಚಿತು. ರಂಜನಿ ರಾಘವನ್ ಅವರ ನೈಜ ಅಭಿನಯಕ್ಕೆ ನಾನು ಮೊದಲಿನಿಂದಲೇ ಅಭಿಮಾನಿ. ಆದರೆ ಕತೆಡಬ್ಬಿ ಪುಸ್ತಕವನ್ನು ಓದಿದ ಮೇಲೆ ಅವರ ಬರವಣಿಗೆಗೂ ಅಭಿಮಾನಿಯಾದದ್ದು ಮಾತ್ರ ಸುಳ್ಳಲ್ಲ!

ಒಳಗೇನಿದೆ ಅನ್ನೋ ಕುತೂಹಲದಿಂದ ಕತೆಡಬ್ಬಿಯ ಮುಚ್ಚಳವನ್ನು ತೆಗೆದರೆ ‘ನನ್ನೊಳಗೊಂದು ಕನಸಿತ್ತು’ ಎಂಬ ಪ್ರೀತಿಯ ಬರವಣಿಗೆ ಸ್ಪೂರ್ತಿದಾಯಕವಾಗಿ ನನ್ನ ಕನಸಿನ ಕದವನ್ನೊಮ್ಮೆ ಬಡಿದೆಚ್ಚರಿಸಿತು. ‘ಅಪ್ಪನ ಮನೆ ಮಾರಾಟಕ್ಕಿದೆ’ ಎಂಬ ಶೀರ್ಷಿಕೆಯೆ ಓದುಗರನ್ನು ಅದರತ್ತ ಒಯ್ಯುತ್ತದೆ. ರಂಜನಿ ರಾಘವನ್ ಅವರು ಕತೆ ಹೇಳುವ ರೀತಿಯೆ ಚಂದ ಅನ್ನಿಸ್ತು. ಬೇರೆಲ್ಲೂ ಓದಿದ ರೀತಿ ಅನ್ನಿಸದೆ ತನ್ನದೆ ಸ್ವಂತ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡುತ್ತಾರೆ. ತನ್ನ ನೈಜ ಅಭಿನಯದಂತೆ ಕತೆಯನ್ನು ನೈಜವಾಗಿ, ಸರಳವಾಗಿ, ಚಂದವಾಗಿ ಹೇಳಿ ಮುಗಿಸಿದ್ದಾರೆ. ಕತೆಡಬ್ಬಿಯ ಪ್ರತಿ ಪುಟ ತಿರುವಿದಂತೆ ಕುತೂಹಲ ಹೆಚ್ಚುತ್ತಿತ್ತು. ಮುಂದೇನಿದೆ ಎಂಬ ಕುತೂಹಲ, ಅರೆ ಮನೋಜ್ ಇನ್ನೇನು ಅಪ್ಪನ ಮನೆ ಮಾರೆ ಬಿಡ್ತನೋ ಏನೊ ಎಂಬ ಆತಂಕ. ಅಮ್ಮ ಕೋತಿ ತನ್ನ ಕರುಳಬಳ್ಳಿಯನ್ನು ಓಮ್ಮೆ ಸೇರಲಿ ಎಂಬ ಕೋರಿಕೆ.

ರಂಜನಿ ರಾಘವನ್ ಪರಿಚಯಿಸಿದ ‘English ಕೃಷ್ಣನನ್ನು’ ಒಮ್ಮೆ ನನಗೂ ನೊಡಬೇಕಾನಿಸಿದ್ದು ಅವರ ಕತೆಗಿರುವ ಶಕ್ತಿ.’ಚುಚ್ಚುಮದ್ದಿನ ಸೈಡ್ ಎಫೆಕ್ಟ್’, ‘ಯಾರು?’,’ ಕಾಣೆಯಾದವರ ಬಗ್ಗೆ ಪ್ರಕಟಣೆ’,’ಉಪ್ಪಿಲ್ಲದ ಸತ್ಯಾಗ್ರಹ’, ‘ದೇವರು ಕಾಣೆಯಾಗಿದ್ದಾರೆ’ ನಂಜನಗೂಡು to ನ್ಯೂಜರ್ಸಿ, ಹೀಗೆ ೧೪ ಕತೆಗಳಿರುವ ಅವರ ಕತೆಡಬ್ಬಿಯ ಮುಚ್ಚಳ ಮುಚ್ಚಲು ಮನಸಾಗದು. ಪ್ರತಿ ಕತೆಯಲ್ಲು ಮೌಲ್ಯಗಳನ್ನು ತುಂಬಿ, ಅರ್ಥಪೂರ್ಣವಾದ ಸಂಬಂಧಗಳ ಮಹತ್ವವನ್ನ ಓದುಗರ ಮುಂದಿಟ್ಟು ಮತ್ತೆ ಮತ್ತೇ ಒದಬೇಕಾನಿಸಿದ್ದು ಇವರ ಚೊಚ್ಚಲ ಪುಸ್ತಕಕ್ಕೆ ಸಿಕ್ಕ ದೊಡ್ಡ ಗೆಲುವು. ಕನ್ನಡ ಸಾಹಿತ್ಯ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿರುವ ಇವರು ಇನ್ನಷ್ಟು ಬರೆಯಲಿ ಎಂಬುದೇ ಸಾಹಿತ್ಯ ಪ್ರಿಯರೆಲ್ಲರ ಆಶಯ.

ಕೃತಿಕಾ ಸದಾಶಿವ

ವಿವೇಕಾನಂದ ಕಾಲೇಜು ಪುತ್ತೂರು.

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್