AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತೆಡಬ್ಬಿ : ಕನ್ನಡತಿಯನ್ನು ಕಥೆಗಾತಿಯಾಗಿ ಮೆಚ್ಚಿಕೊಂಡಾಗ..!

ರಂಜನಿ ರಾಘವನ್ ಅವರು ಕತೆ ಹೇಳುವ ರೀತಿಯೆ ಚಂದ ಅನ್ನಿಸ್ತು. ಬೇರೆಲ್ಲೂ ಓದಿದ ರೀತಿ ಅನ್ನಿಸದೆ ತನ್ನದೆ ಸ್ವಂತ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡುತ್ತಾರೆ. ತನ್ನ ನೈಜ ಅಭಿನಯದಂತೆ ಕತೆಯನ್ನು ನೈಜವಾಗಿ, ಸರಳವಾಗಿ, ಚಂದವಾಗಿ ಹೇಳಿ ಮುಗಿಸಿದ್ದಾರೆ.

ಕತೆಡಬ್ಬಿ : ಕನ್ನಡತಿಯನ್ನು ಕಥೆಗಾತಿಯಾಗಿ ಮೆಚ್ಚಿಕೊಂಡಾಗ..!
ರಂಜನಿ ರಾಘವನ್ ಅವರ ಪುಸ್ತಕ
TV9 Web
| Edited By: |

Updated on: Feb 17, 2022 | 9:19 AM

Share

ಅರೆ! ಈಕೆ ಇನ್ನಷ್ಟು ಬರೆಯಬಲ್ಲಳು ಅಂತ ನಿಮಗನಿಸಿದರೆ ಅದೇ ನನ್ನ ಗೆಲುವು ಎಂದು ಪುಸ್ತಕದ ಕೊನೆಯಲ್ಲಿ ಬರೆದಿದ್ದ ಸಾಲುಗಳ ಮೇಲೆ ಮೊದಲು ಕಣ್ಣಾಡಿಸಿದ ನನಗೆ ರಂಜನಿ ರಾಘವನ್ ಅವರ ಕತೆಡಬ್ಬಿಯ ಮುಚ್ಚಳ ತೆಗೆಯವ ತವಕ ಇನ್ನಷ್ಟು ಹೆಚ್ಚಿತು. ರಂಜನಿ ರಾಘವನ್ ಅವರ ನೈಜ ಅಭಿನಯಕ್ಕೆ ನಾನು ಮೊದಲಿನಿಂದಲೇ ಅಭಿಮಾನಿ. ಆದರೆ ಕತೆಡಬ್ಬಿ ಪುಸ್ತಕವನ್ನು ಓದಿದ ಮೇಲೆ ಅವರ ಬರವಣಿಗೆಗೂ ಅಭಿಮಾನಿಯಾದದ್ದು ಮಾತ್ರ ಸುಳ್ಳಲ್ಲ!

ಒಳಗೇನಿದೆ ಅನ್ನೋ ಕುತೂಹಲದಿಂದ ಕತೆಡಬ್ಬಿಯ ಮುಚ್ಚಳವನ್ನು ತೆಗೆದರೆ ‘ನನ್ನೊಳಗೊಂದು ಕನಸಿತ್ತು’ ಎಂಬ ಪ್ರೀತಿಯ ಬರವಣಿಗೆ ಸ್ಪೂರ್ತಿದಾಯಕವಾಗಿ ನನ್ನ ಕನಸಿನ ಕದವನ್ನೊಮ್ಮೆ ಬಡಿದೆಚ್ಚರಿಸಿತು. ‘ಅಪ್ಪನ ಮನೆ ಮಾರಾಟಕ್ಕಿದೆ’ ಎಂಬ ಶೀರ್ಷಿಕೆಯೆ ಓದುಗರನ್ನು ಅದರತ್ತ ಒಯ್ಯುತ್ತದೆ. ರಂಜನಿ ರಾಘವನ್ ಅವರು ಕತೆ ಹೇಳುವ ರೀತಿಯೆ ಚಂದ ಅನ್ನಿಸ್ತು. ಬೇರೆಲ್ಲೂ ಓದಿದ ರೀತಿ ಅನ್ನಿಸದೆ ತನ್ನದೆ ಸ್ವಂತ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡುತ್ತಾರೆ. ತನ್ನ ನೈಜ ಅಭಿನಯದಂತೆ ಕತೆಯನ್ನು ನೈಜವಾಗಿ, ಸರಳವಾಗಿ, ಚಂದವಾಗಿ ಹೇಳಿ ಮುಗಿಸಿದ್ದಾರೆ. ಕತೆಡಬ್ಬಿಯ ಪ್ರತಿ ಪುಟ ತಿರುವಿದಂತೆ ಕುತೂಹಲ ಹೆಚ್ಚುತ್ತಿತ್ತು. ಮುಂದೇನಿದೆ ಎಂಬ ಕುತೂಹಲ, ಅರೆ ಮನೋಜ್ ಇನ್ನೇನು ಅಪ್ಪನ ಮನೆ ಮಾರೆ ಬಿಡ್ತನೋ ಏನೊ ಎಂಬ ಆತಂಕ. ಅಮ್ಮ ಕೋತಿ ತನ್ನ ಕರುಳಬಳ್ಳಿಯನ್ನು ಓಮ್ಮೆ ಸೇರಲಿ ಎಂಬ ಕೋರಿಕೆ.

ರಂಜನಿ ರಾಘವನ್ ಪರಿಚಯಿಸಿದ ‘English ಕೃಷ್ಣನನ್ನು’ ಒಮ್ಮೆ ನನಗೂ ನೊಡಬೇಕಾನಿಸಿದ್ದು ಅವರ ಕತೆಗಿರುವ ಶಕ್ತಿ.’ಚುಚ್ಚುಮದ್ದಿನ ಸೈಡ್ ಎಫೆಕ್ಟ್’, ‘ಯಾರು?’,’ ಕಾಣೆಯಾದವರ ಬಗ್ಗೆ ಪ್ರಕಟಣೆ’,’ಉಪ್ಪಿಲ್ಲದ ಸತ್ಯಾಗ್ರಹ’, ‘ದೇವರು ಕಾಣೆಯಾಗಿದ್ದಾರೆ’ ನಂಜನಗೂಡು to ನ್ಯೂಜರ್ಸಿ, ಹೀಗೆ ೧೪ ಕತೆಗಳಿರುವ ಅವರ ಕತೆಡಬ್ಬಿಯ ಮುಚ್ಚಳ ಮುಚ್ಚಲು ಮನಸಾಗದು. ಪ್ರತಿ ಕತೆಯಲ್ಲು ಮೌಲ್ಯಗಳನ್ನು ತುಂಬಿ, ಅರ್ಥಪೂರ್ಣವಾದ ಸಂಬಂಧಗಳ ಮಹತ್ವವನ್ನ ಓದುಗರ ಮುಂದಿಟ್ಟು ಮತ್ತೆ ಮತ್ತೇ ಒದಬೇಕಾನಿಸಿದ್ದು ಇವರ ಚೊಚ್ಚಲ ಪುಸ್ತಕಕ್ಕೆ ಸಿಕ್ಕ ದೊಡ್ಡ ಗೆಲುವು. ಕನ್ನಡ ಸಾಹಿತ್ಯ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿರುವ ಇವರು ಇನ್ನಷ್ಟು ಬರೆಯಲಿ ಎಂಬುದೇ ಸಾಹಿತ್ಯ ಪ್ರಿಯರೆಲ್ಲರ ಆಶಯ.

ಕೃತಿಕಾ ಸದಾಶಿವ

ವಿವೇಕಾನಂದ ಕಾಲೇಜು ಪುತ್ತೂರು.

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!