AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SIM Cards: ಒಬ್ಬರಿಗೆ ಹೆಚ್ಚು ಸಿಮ್ ಕಾರ್ಡ್​ಗಳು ಸಿಗದು; ಈ ವರ್ಷ ಜಾರಿಗೆ ಬರುವ ಟೆಲಿಕಾಂ ಸುಧಾರಣೆಗಳ ಮುಖ್ಯಾಂಶಗಳನ್ನು ತಿಳಿದಿರಿ

Telecom Reforms in India: ಇನ್ನೆರಡು ತಿಂಗಳಲ್ಲಿ ಟೆಲಿಕಾಂ ವಲಯದ ಸುಧಾರಣೆಗಳು ಜಾರಿಗೆ ಬರುತ್ತವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದರಲ್ಲಿ ಒಂದು ಐಡಿ ಗುರುತಿಗೆ ಕೊಡಲಾಗುವ ಸಿಮ್ ಕಾರ್ಡ್ ಸಂಖ್ಯೆಯನ್ನು 9ಕ್ಕಿಂತ ಕಡಿಮೆಗೆ ಇಳಿಸಿವುದೂ ಒಂದು.

SIM Cards: ಒಬ್ಬರಿಗೆ ಹೆಚ್ಚು ಸಿಮ್ ಕಾರ್ಡ್​ಗಳು ಸಿಗದು; ಈ ವರ್ಷ ಜಾರಿಗೆ ಬರುವ ಟೆಲಿಕಾಂ ಸುಧಾರಣೆಗಳ ಮುಖ್ಯಾಂಶಗಳನ್ನು ತಿಳಿದಿರಿ
ಟೆಲಿಕಾಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 06, 2023 | 4:44 PM

Share

ನವದೆಹಲಿ: ಕೇಂದ್ರ ಸರ್ಕಾರ 2021ರಲ್ಲಿ ಪ್ರಸ್ತಾಪಿಸಿದ್ದ ಟೆಲಿಕಾಂ ವಲಯದ ಸುಧಾರಣಾ ಕ್ರಮಗಳು ಈ ವರ್ಷದೊಳಗೆ ಜಾರಿಯಾಗುವ ಸಾಧ್ಯತೆ ಇದೆ. ಮೊನ್ನೆಯಷ್ಟೇ ಕೇಂದ್ರ ಟೆಲಿಕಾಂ ಸಚಿವ ಎ ವೈಷ್ಣವ್ (Union Minister Ashwini Vaishnaw) ಅವರು ಈ ಬಗ್ಗೆ ಮಾತನಾಡಿ ಮುಂದಿನ ಕೆಲ ತಿಂಗಳಲ್ಲಿ ಟೆಲಕಾಂ ಸುಧಾರಣೆಗಳನ್ನು ಅಳವಡಿಸಲಾಗುವುದು ಎಂದಿದ್ದ್ದಾರೆ. ಬಳಕೆದಾರರ ರಕ್ಷಣೆಗೆ ಆದ್ಯತೆ ಕೊಟ್ಟು ಸುಧಾರಣಾ ಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿರುವ ಅಶ್ವಿನಿ ವೈಷ್ಣವ್, ಒಂದು ಗುರುತಿನ ಚೀಟಿಗೆ ನೀಡಲಾಗುವ ಸಿಮ್ ಕಾರ್ಡ್​ಗಳ ಸಂಖ್ಯೆಯ ಮಿತಿ ಇಳಿಸುವುದೂ ಈ ಸುಧಾರಣಾ ಕ್ರಮಗಳಲ್ಲಿ ಒಂದೆಂದು ಹೇಳಿದ್ದಾರೆ.

ಇದೀಗ ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್ ಹೆಸರಿನಲ್ಲಿ 9 ಸಿಮ್ ಕಾರ್ಡ್​ಗಳನ್ನು ಪಡೆಯಲು ಅವಕಾಶ ಇದೆ. ಮುಂದೆ ಜಾರಿಗೆ ಬರಲಿರುವ ಸುಧಾರಣಾ ಕ್ರಮದಲ್ಲಿ ಈ ಅವಕಾಶದಲ್ಲಿ ಬದಲಾವಣೆ ಮಾಡಲಾಗಲಿದೆ. ಒಂದು ಆಧಾರ್ ಗುರುತಿನ ಚೀಟಿಗೆ ನೀಡಲಾಗುವ ಸಿಮ್ ಕಾರ್ಡ್​ಗಳ ಸಂಖ್ಯೆಯನ್ನು 9ಕ್ಕಿಂತ ಕಡಿಮೆಗೆ ಇಳಿಸುವ ಪ್ರಸ್ತಾಪ ಇದೆ. ಆದರೆ, ಎಷ್ಟು ಸಿಮ್ ಕಾರ್ಡ್​ಗಳನ್ನು ನೀಡಲಾಗುವುದು ಎಂಬುದನ್ನು ತಿಳಿಸಿಲ್ಲ. ಆದರೆ ಭದ್ರತೆ ದೃಷ್ಟಿಯಿಂದ ಸಿಮ್ ಕಾರ್ಡ್ ಸಂಖ್ಯೆ ಕಡಿಮೆಗೊಳಿಸುವ ಆಲೋಚನೆ ಸರ್ಕಾರದ್ದಾಗಿದೆ.

ಇದನ್ನೂ ಓದಿVishnaw: ಒಂದೆರಡು ತಿಂಗಳಲ್ಲಿ ಟೆಲಿಕಾಂ ಸುಧಾರಣೆಗಳು ಜಾರಿ; ಬಳಕೆದಾರ ರಕ್ಷಣೆಗೆ ಆದ್ಯತೆ- ಸಚಿವ ವೈಷ್ಣವ್

ಎರಡು ತಿಂಗಳ ಹಿಂದೆ (ಮೇ 2023) ಕೇಂದ್ರದ ದೂರಸಂಪರ್ಕ ಇಲಾಖೆ ಸಂಚಾರ್ ಸಾಥಿ (Sanchar Sathi Portal) ಹೆಸರಿನ ಪೋರ್ಟಲ್​ವೊಂದನ್ನು ಬಿಡುಗಡೆ ಮಾಡಿತ್ತು. ಆಧಾರ್ ಗುರುತಿನ ಚೀಟಿ ಜೊತೆ ಮೊಬೈಲ್ ನಂಬರ್​ಗಳು ಜೋಡಿತವಾಗಿವೆಯಾ ಎಂಬುದನ್ನು ಈ ಪೋರ್ಟಲ್ ಮೂಲಕ ಪರಿಶೀಲಿಸಬಹುದು. ಹಾಗೆಯೇ, ಮೊಬೈಲ್ ಫೋನ್ ಕಳೆದುಹೋದರೆ ಈ ಪೋರ್ಟಲ್ ಮೂಲಕ ಟ್ರ್ಯಾಕ್ ಮಾಡಲು ಸಾಧ್ಯ. ಇಂಥ ಕೆಲ ವಿಧಾನಾತ್ಮಕ ಹಾಗೂ ರಚನಾತ್ಮಕ ಸುಧಾರಣೆಗಳನ್ನು ಇಲಾಖೆ ಕೈಗೊಂಡಿದೆ.

ಟೆಲಿಕಾಂ ವಲಯದಲ್ಲಿನ ಇತರ ಪ್ರಮುಖ ಸುಧಾರಣಾ ಕ್ರಮಗಳು

  • ಎಜಿಆರ್ ಹಂಚಿಕೆ ನೀತಿ
  • ಬ್ಯಾಂಕ್ ಗ್ಯಾರಂಟಿ (ಬಿಜಿ) ಹಂಚಿಕೆ ನೀತಿ
  • ಬಡ್ಡಿ ದರ ನೀತಿ ಮತ್ತು ದಂಡವಿಧಿಸುವಿಕೆ ಕ್ರಮ ತೆಗೆದುಹಾಕುವುದು
  • ಸ್ಪೆಕ್ಟ್ರಂ ಹರಾಜಿಗೆ ಬ್ಯಾಂಕ್ ಗ್ಯಾರಂಟಿ ಒದಗಿಸುವ ನಿಯಮ ಕೈಬಿಡುವುದು
  • ಮುಂದಿನ ಹರಾಜು ವೇಳೆ ಸ್ಪೆಕ್ಟ್ರಂ ಅವಧಿಯನ್ನು 20ರಿಂದ 30 ವರ್ಷಕ್ಕೆ ಹೆಚ್ಚಿಸುವುದು
  • 10 ವರ್ಷದ ಬಳಿಕ ಸ್ಪೆಕ್ಟ್ರಂ ವಾಪಸ್ ಮಾಡುವ ಅನುಮತಿ ನೀಡುವುದು
  • ಸ್ಪೆಕ್ಟ್ರಂ ಬಳಕೆ ಶುಲ್ಕ (ಎಸ್​ಯುಸಿ) ಒದಗಿಸಬೇಕೆನ್ನುವ ನಿಯಮ ಕೈಬಿಡುವುದು
  • ಕೆಲ ಷರುತ್ತುಗಳಿಗೆ ಅನ್ವಯವಾಗಿ ಟೆಲಿಕಾಂ ವಲಯಕ್ಕೆ ನೂರು ಪ್ರತಿಶತದಷ್ಟು ಎಫ್​ಡಿಐ ಹೂಡಿಕೆಗೆ ಅನುಮತಿ
  • ಸ್ಪೆಕ್ಟ್ರಂ ಹರಾಜುಗಳಿಗೆ ನಿಗದಿತ ಸಮಯ
  • ಸೆಲ್ಫ್ ಕೆವೈಸಿಗೆ ಅನುಮತಿ
  • ಇಕೆವೈಸಿ ಸಲ್ಲಿಕೆಗೆ ಒಂದು ರೂ ದರ
  • ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಸೇವೆ ಅದಲುಬದಲು ಮಾಡಿಕೊಂಡರೆ ಹೊಸದಾಗಿ ಕೆವೈಸಿ ಸಲ್ಲಿಸುವ ಅವಶ್ಯಕತೆ ಇಲ್ಲ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ