AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕೌಶಲ್ಯ ಕಲಿತರೆ ಮನೆಯಲ್ಲೇ ಕೂತ ಲಕ್ಷ ಸಂಪಾದನೆ ಸಾಧ್ಯ; ಕೆನರಾ ಬ್ಯಾಂಕ್ RSETI ಯಿಂದ ಮಹಿಳೆಯರಿಗೆ ಉಚಿತ ತರಬೇತಿ

RSETI conducting free Aari Work, Fabric Painting workshop for women: ಕೆನರಾ ಬ್ಯಾಂಕ್​ನ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಾದ RSETI ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ಹಮ್ಮಿಕೊಂಡಿದೆ. ಜುಲೈ ಮೂರನೇ ವಾರದಿಂದ 31 ದಿನಗಳ ಕಾಲ ಆರಿ ವರ್ಕ್ (Aari work) ಮತ್ತು ಫ್ಯಾಬ್ರಿಕ್ ಪೇಂಟಿಂಗ್ ತರಬೇತಿ ನೀಡಲಾಗುತ್ತಿದೆ. ಹೊಲಕೋಟೆಯ ಸೊಣ್ಣಹಳ್ಳಿಪುರದಲ್ಲಿ ಈ ಕಾರ್ಯಾಗಾರ ಇದ್ದು, ಮಹಿಳೆಯರಿಗೆ ಅವಕಾಶ ಇದೆ.

ಈ ಕೌಶಲ್ಯ ಕಲಿತರೆ ಮನೆಯಲ್ಲೇ ಕೂತ ಲಕ್ಷ ಸಂಪಾದನೆ ಸಾಧ್ಯ; ಕೆನರಾ ಬ್ಯಾಂಕ್ RSETI ಯಿಂದ ಮಹಿಳೆಯರಿಗೆ ಉಚಿತ ತರಬೇತಿ
ಸಾಂದರ್ಭಿಕ ಚಿತ್ರImage Credit source: Afriadi Hikmal/NurPhoto via Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2026 | 6:46 PM

Share

ಹೊಸಕೋಟೆ, ಜುಲೈ 3: ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಮಹಿಳೆಯರು ಸ್ವಂತ ಕಾಲಿನ ಮೇಲೆ ನಿಲ್ಲಲು ಕೆನರಾ ಬ್ಯಾಂಕ್ ನೆರವಾಗುತ್ತಿದೆ. ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು (RSETI) ಮಹಿಳೆಯರಿಗಾಗಿ ಒಂದು ತಿಂಗಳ ಅವಧಿಯ ವಿಶೇಷ ಕೌಶಲ್ಯಾಭಿವೃದ್ಧಿ ಶಿಬಿರವನ್ನು ಹಮ್ಮಿಕೊಂಡಿದೆ.

ಸಂಪೂರ್ಣ ಉಚಿತವಾಗಿ ನಡೆಯಲಿರುವ ಈ ಶಿಬಿರದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿರುವ ‘ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೇಂಟಿಂಗ್’ (ವಿವಿಧ ಮಾದರಿಯ ಆರಿ ವರ್ಕ್ ಹಾಗೂ ಸೀರೆ ಕುಚ್ಚು ವಿನ್ಯಾಸ) ಕಲೆಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ. ಜುಲೈ ಮೂರನೇ ವಾರದಿಂದ ತರಗತಿಗಳು ಆರಂಭವಾಗಲಿದ್ದು, ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಇದೇ ಜುಲೈ 6 ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.

ಇದನ್ನೂ ಓದಿ: ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?

ಮನೆಯೇ ಉದ್ಯಮದ ಕೇಂದ್ರ: ಗಳಿಕೆಯ ಲೆಕ್ಕಾಚಾರ ಇಲ್ಲಿದೆ

ಬೆಂಗಳೂರಿನಂತಹ ಬೃಹತ್ ಮಾರುಕಟ್ಟೆ ಹಾಗೂ ಫ್ಯಾಷನ್ ಹಬ್ ಪಕ್ಕದಲ್ಲೇ ಇರುವುದರಿಂದ ಈ ತರಬೇತಿ ಪಡೆಯುವ ಮಹಿಳೆಯರಿಗೆ ಸುಲಭವಾಗಿ ಗ್ರಾಹಕರು ಸಿಗುತ್ತಾರೆ. ದಿನಕ್ಕೆ ಕೆಲವೇ ಗಂಟೆಗಳ ಕಾಲ ಶ್ರದ್ಧೆಯಿಂದ ಕೆಲಸ ಮಾಡಿದರೂ ಉತ್ತಮ ಆದಾಯ ಗಳಿಸಲು ಸಾಧ್ಯ. ಆರಂಭದಲ್ಲಿಯೇ ತಿಂಗಳಿಗೆ ₹5,000 ದಿಂದ ₹30,000 ಗಳಿಸಬಹುದು. ಕೈಚಳಕದ ವೇಗ ಮತ್ತು ಅನುಭವ ಹೆಚ್ಚಿದಂತೆ ತಿಂಗಳಿಗೆ ₹70,000 ಕ್ಕೂ ಹೆಚ್ಚು ಆದಾಯ ತಂದುಕೊಡುವ ಬ್ಯುಸಿನೆಸ್ ಸಾಮ್ರಾಜ್ಯವನ್ನು ಮನೆಯಿಂದಲೇ ನಿರ್ಮಿಸಬಹುದಾಗಿದೆ.

ಬಂಡವಾಳ ಮತ್ತು ಲಾಭ: ಮಣಿಗಳು, ಜರ್ದೋಸಿ ದಾರ ಮತ್ತು ಬಟ್ಟೆಯಂತಹ ಕಚ್ಚಾವಸ್ತುಗಳಿಗೆ ಕೇವಲ ₹200 ರಿಂದ ₹800 ರಷ್ಟು ವೆಚ್ಚವಾಗಲಿದ್ದು, ಶೇಕಡಾ 40 ರಿಂದ 60 ರಷ್ಟು ನಿವ್ವಳ ಲಾಭ ನೇರವಾಗಿ ಮಹಿಳೆಯರ ಕೈಸೇರಲಿದೆ.

ಮಾರುಕಟ್ಟೆ ಮೌಲ್ಯ: ಒಂದು ಸಾಮಾನ್ಯ ಆರಿ ವರ್ಕ್ ಬ್ಲೌಸ್ ವಿನ್ಯಾಸಕ್ಕೆ ₹1,000 ದಿಂದ ₹5,000 ವರೆಗೆ, ಹಾಗೂ ಆಕರ್ಷಕ ಸೀರೆ ಕುಚ್ಚು ಅಥವಾ ಬಟ್ಟೆ ಮೇಲಿನ ಪೇಂಟಿಂಗ್‌ಗೆ ₹500 ದಿಂದ ₹3,000 ವರೆಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಬೆಲೆ ಸಿಗುತ್ತದೆ. ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಗ್ರೂಪ್‌ಗಳನ್ನು ಉಪಯೋಗಿಸಿಕೊಂಡು ಆನ್​ಲೈನ್​ನಲ್ಲಿ ಗ್ರಾಹಕರನ್ನು ಆಕರ್ಷಿಸಿ ಮಾರಾಟ ಮಾಡಬಹುದು.

ಕೇಂದ್ರ ಸರ್ಕಾರದ ಪ್ರಮಾಣಪತ್ರದಿಂದ ಬೃಹತ್ ಬಿಸಿನೆಸ್ ಲೀಪ್

31 ದಿನಗಳ ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಅಧಿಕೃತ ಕೌಶಲ್ಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಸರ್ಟಿಫಿಕೇಟ್ ಹೊಂದಿರುವ ಮಹಿಳೆಯರಿಗೆ ಸಿಗುವ ಪ್ರಮುಖ ಆರ್ಥಿಕ ಸೌಲಭ್ಯಗಳು ಇಲ್ಲಿವೆ:

ಸಬ್ಸಿಡಿ ಸಾಲ ಸೌಲಭ್ಯ: PMEGP, DAY-NRLM ನಂತಹ ಪ್ರಮುಖ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಉದ್ಯಮ ಆರಂಭಿಸಲು ಸಬ್ಸಿಡಿ ಸಹಿತ 20 ಲಕ್ಷ ರೂಪಾಯಿವರೆಗೆ ಸುಲಭ ಬ್ಯಾಂಕ್ ಸಾಲ ದೊರೆಯುತ್ತದೆ.

ಸ್ತ್ರೀ ಶಕ್ತಿ ಸಂಘಗಳ ನೆರವು: ಸ್ವೀಕರಿಸಿದ ಪ್ರಮಾಣಪತ್ರದ ಆಧಾರದ ಮೇಲೆ ಸ್ಥಳೀಯ ಸ್ತ್ರೀ ಶಕ್ತಿ ಸಂಘಗಳು (SHG) ಮತ್ತು ಒಕ್ಕೂಟಗಳ ಮೂಲಕ ಆರ್ಥಿಕ ನೆರವು ಪಡೆದು ಸ್ವಂತ ಬುಟಿಕ್ ಅಥವಾ ಗಾರ್ಮೆಂಟ್ಸ್ ಉದ್ಯಮವನ್ನು ವಿಸ್ತರಿಸಬಹುದು.

ಇದನ್ನೂ ಓದಿ: ಮೆಷೀನ್​ಗಿಂತ ಮನುಷ್ಯರೇ ವಾಸಿ; ಎಐ ಕಾರಣ ನೀಡಿ ಮನೆಗೆ ಕಳುಹಿಸಿದ್ದ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ದೊಡ್ಡ ಕಂಪನಿಗಳು

ಪ್ರವೇಶಾತಿ ನಿಯಮಗಳು ಮತ್ತು ಅರ್ಹತೆಗಳು:

  • ವಯೋಮಿತಿ: 18 ವರ್ಷ ತುಂಬಿರಬೇಕು ಮತ್ತು 49 ವರ್ಷ ಮೀರಿರಬಾರದು.
  • ವಿದ್ಯಾರ್ಹತೆ/ಭಾಷೆ: ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು.
  • ಆದ್ಯತೆ: ಕರ್ನಾಟಕದ ಎಲ್ಲಾ ಜಿಲ್ಲೆಗಳ ನಿರುದ್ಯೋಗಿ ಮಹಿಳೆಯರಿಗೂ ಅವಕಾಶವಿದ್ದು, ಗ್ರಾಮೀಣ ಭಾಗದ ಬಿಪಿಎಲ್ (BPL) ರೇಷನ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಸಂದರ್ಶನಕ್ಕೆ ಹಾಜರಾಗುವ ವಿವರ:

ಆಸಕ್ತ ಮತ್ತು ಅರ್ಹ ಮಹಿಳೆಯರು ಇದೇ ಜುಲೈ 6 ರಂದು (ಸೋಮವಾರ) ಬೆಳಿಗ್ಗೆ 10:00 ಗಂಟೆಗೆ ತಮ್ಮ ಎಲ್ಲಾ ಮೂಲ ವಿದ್ಯಾಭ್ಯಾಸದ ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ವಿಳಾಸದ ಪುರಾವೆಗಳೊಂದಿಗೆ ನೇರವಾಗಿ ಸಂಸ್ಥೆಗೆ ಭೇಟಿ ನೀಡಬೇಕು.

ತರಬೇತಿ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಸೊಣ್ಣಹಳ್ಳಿಪುರ, ಹಸಿಗಾಳ ಅಂಚೆ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562114.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 8970476050, 6363139123, 9886935603, 9591514154.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ