UPI: ಬೆಂಗಳೂರು ಮತ್ತಿತರ ಕಡೆ ಜಿ20 ದೇಶಗಳ ನಾಗರಿಕರಿಗೆ ಯುಪಿಐ ಸೌಲಭ್ಯ

G20 Delegates To Taste UPI System In India: ಬೆಂಗಳೂರು ಸೇರಿದಂತೆ ವಿವಿಧೆಡೆ ಜಿ20 ಸಭೆಗಳಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲೆಂದು ಯುಪಿಐ ಜೋಡಿತ ವ್ಯಾಲಟ್​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಆರ್​ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

UPI: ಬೆಂಗಳೂರು ಮತ್ತಿತರ ಕಡೆ ಜಿ20 ದೇಶಗಳ ನಾಗರಿಕರಿಗೆ ಯುಪಿಐ ಸೌಲಭ್ಯ
ಭಾರತದ ಪೇಮೆಂಟ್ ವ್ಯವಸ್ಥೆ
Follow us
|

Updated on:Feb 22, 2023 | 10:56 AM

ನವದೆಹಲಿ: ಭಾರತದಲ್ಲಿ ಈಗ ಜಿ20 ಶೃಂಗಸಭೆ (G20 Summit) ನಿಮಿತ್ತ ಬೆಂಗಳೂರು ಸೇರಿದಂತೆ ವಿವಿಧೆಡೆ ಜಿ20 ಸಭೆಗಳು ನಡೆಯುತ್ತಿವೆ. ಸಾವಿರಾರು ಪ್ರತಿನಿಧಿಗಳು ಈ ಸಭೆಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾರೆ, ಬರುತ್ತಿದ್ದಾರೆ. ಇವರಿಗೆ ಹಣಕಾಸು ವಹಿವಾಟು ಸುಲಭವಾಗುಂತೆ ಮಾಡಲು ಆರ್​ಬಿಐ (RBI) ಯುಪಿಐ ಸೇವೆಯ ಅವಕಾಶ ನೀಡಿದೆ. ಇದು ಅತಿಥಿಗಳಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಭಾರತದ ಪೇಮೆಂಟ್ ವ್ಯವಸ್ಥೆ ಎಷ್ಟು ಸಮರ್ಪಕವಾಗಿದೆ ಎಂಬುದನ್ನು ವಿದೇಶಿಗರಿಗೆ ಪರಿಚಯಿಸುವ ಪ್ರಯತ್ನವೂ ಹೌದು.

ಫೆಬ್ರುವರಿ 8ರಂದು ಆರ್​ಬಿಐ ವಿದೇಶೀ ಪ್ರವಾಸಿಗರಿಗೆ ಯುಪಿಐ ಸೌಲಭ್ಯ ಕೊಡುವ ಬಗ್ಗೆ ಮಾಹಿತಿ ನೀಡಿತ್ತು. ನಿನ್ನೆ ಕೂಡ ಆರ್​ಬಿಐ ಜಿ20 ದೇಶಗಳಿಂದ ಬರುವ ಮಂದಿಗೆ ಯುಪಿಐ ಸೇವೆ ವಿಸ್ತರಿಸುವುದಾಗಿ ಘೋಷಣೆ ಮಾಡಿತು. ಮೊದಲಿಗೆ ಕೆಲ ಆಯ್ದ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಯುಪಿಐ ಜೋಡಿತ ವ್ಯಾಲಟ್​ಗಳನ್ನು ಪ್ರವಾಸಿಗರಿಗೆ ಕೊಡಲಿವೆ.

ಬೆಂಗಳೂರು, ಮುಂಬೈ ಮತ್ತು ನವದೆಹಲಿಯ ಇಂಟರ್ನ್ಯಾಷನಲ್ ಏರ್​ಪೋರ್ಟ್​​ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿರುತ್ತದೆ. ಸಭೆಗಳಿಗೆ ಪಾಲ್ಗೊಳ್ಳಲು ಬರುವ ಜಿ20 ದೇಶಗಳ ಪ್ರತಿನಿಧಿಗಳಿಗೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್​ಟ್ರೂಮೆಂಟ್ಸ್ (ಪಿಪಿಐ) ವ್ಯಾಲಟ್​​ಗಳನ್ನು ಕೊಡಲಾಗುತ್ತದೆ. ಈ ವ್ಯಾಲಟ್​ಗಳು ಯುನಿಫೈಡ್ ಪೇಮೆಂಟ್ ಸಿಸ್ಟಂ (ಯುಪಿಐ) ಜೊತೆ ಜೋಡಿತವಾಗಿರುತ್ತದೆ. ಈ ವ್ಯಾಲಟ್​ಗಳ ಮೂಲಕ ಪ್ರವಾಸಿಗರು ಹಣಕಾಸು ವಹಿವಾಟು ಮಾಡಬಹುದು ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: UPI PayNow payments : ಸಿಂಗಾಪುರ-ಭಾರತೀಯ ವಲಸಿಗರಿಗೆ ವರದಾನ! ಯುಪಿಐ ಮೂಲಕವೂ ಗಡಿಯಾಚೆ ಹಣ ಪಾವತಿಸುವುದಕ್ಕೆ ಮಂಗಳವಾರದಿಂದ ಅಂಕಿತ

ಪಿಪಿಐ ವ್ಯಾಲಟ್​ಗಳಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಮೊದಲೇ ತುಂಬಲಾಗುತ್ತದೆ. ವಿದೇಶಿ ವಿನಿಯಮ ದರ ಆಧರಿಸಿ ಭಾರತೀಯ ಕರೆನ್ಸಿಗೆ ಪರಿವರ್ತಿಸಿ ವ್ಯಾಲಟ್​ಗೆ ಸೇರಿಸಲಾಗುತ್ತದೆ. ಇನ್ನೊಂದು ಸಂಗತಿ ಎಂದರೆ, ಈ ಪಿಪಿಐ ವ್ಯಾಲಟ್​ನಿಂದ ವ್ಯಕ್ತಿಗಳ ಮೊಬೈಲ್​ಗೆ ಹಣ ಕಳುಹಿಸಲಾಗುವುದಿಲ್ಲ. ವರ್ತಕರಿಗೆ ಮಾತ್ರ ಪಾವತಿ ಮಾಡಲು ಸಾಧ್ಯ.

ಮೊದಲಿಗೆ ಐಸಿಸಿಐ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಹಾಗೂ ಪೈನ್ ಲ್ಯಾಬ್ಸ್ ಪ್ರೈ ಲಿ ಮತ್ತು ಟ್ರಾನ್ಸ್​ಕಾರ್ಪ್ ಇಂಟರ್ನ್ಯಾಷನಲ್ ಲಿ ಸಂಸ್ಥೆಗಳಿಂದ ಮಾತ್ರ ಪ್ರವಾಸಿಗರು ವ್ಯಾಲಟ್ ಪಡೆಯಬಹುದು. ಪೈನ್ ಲ್ಯಾಬ್ಸ್ ಮತ್ತು ಟ್ರಾನ್ಸ್​ಕಾರ್ಪ್ ಸಂಸ್ಥೆಗಳು ಬ್ಯಾಂಕೇತರ ಸಂಸ್ಥೆಗಳಾಗಿವೆ.

ನಿನ್ನೆಯಷ್ಟೇ ಭಾರತ ಮತ್ತು ಸಿಂಗಾಪುರ ಜನರ ಮಧ್ಯೆ ಕ್ರಾಸ್​ಬಾರ್ಡರ್ ಪೇಮೆಂಟ್ ವ್ಯವಸ್ಥೆಗೆ ಚಾಲನೆ ಕೊಡಲಾಗಿತ್ತು. ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ಪಾವತಿ ವ್ಯವಸ್ಥೆಯನ್ನು ಜೋಡಿಸಿ ವಿನೂತನವಾದ ವ್ಯವಸ್ಥೆ ಮಾಡಲಾಗಿದೆ. ಸಿಂಗಾಪುರದಲ್ಲಿರುವ ಹಲವು ಅನಿವಾಸಿ ಭಾರತೀಯರಿಗೆ ತಮ್ಮ ಊರಿನ ಜನರಿಗೆ ಹಣ ಕಳುಹಿಸುವುದು ಸುಲಭವಾಗಲಿದೆ. ವೆಚ್ಚವೂ ಕಡಿಮೆ ಆಗಲಿದೆ. ಭಾರತದ ಯುಪಿಐ ವ್ಯವಸ್ಥೆ ಸಿಂಗಾಪುರಕ್ಕೂ ಪರಿಚಯ ಆಗಲಿದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Wed, 22 February 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ