AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಬ್ರಿಟನ್ ಮಧ್ಯೆ ಐತಿಹಾಸಿಕ ಫ್ರೀ ಟ್ರೇಡ್ ಒಪ್ಪಂದ: ಪ್ರಧಾನಿ ಮೋದಿ ಘೋಷಣೆ

Historic milestone of India-UK Free Trade Agreement: ಭಾರತ ಮತ್ತು ಯುನೈಟೆಡ್ ಕಿಂಗ್ಡಂ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಇದು ಐತಿಹಾಸಿಕ ಮೈಲಿಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫ್ರೀ ಟ್ರೇಡ್ ಅಗ್ರೀಮೆಂಟ್ ಜೊತೆಗೆ ಡಬಲ್ ಕಾಂಟ್ರಿಬ್ಯೂಶನ್ ಕನ್ವೆನ್ಷನ್ ಒಪ್ಪಂದವನ್ನೂ ಅಂತಿಮಗೊಳಿಸಲಾಗಿದೆ. ಈ ಒಪ್ಪಂದಗಳು ಎರಡೂ ದೇಶಗಳಿಗೆ ಪರಸ್ಪರ ಅನುಕೂಲಕರ ಎನಿಸಲಿವೆ ಎಂದಿದ್ದಾರೆ.

ಭಾರತ-ಬ್ರಿಟನ್ ಮಧ್ಯೆ ಐತಿಹಾಸಿಕ ಫ್ರೀ ಟ್ರೇಡ್ ಒಪ್ಪಂದ: ಪ್ರಧಾನಿ ಮೋದಿ ಘೋಷಣೆ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 06, 2025 | 7:30 PM

ನವದೆಹಲಿ, ಮೇ 6: ಯುದ್ಧದ ಸುದ್ದಿಗಳ ಮಧ್ಯೆ ಸದ್ದಿಲ್ಲದೆ ಭಾರತವು ಬ್ರಿಟನ್ ಜೊತೆ ಎಫ್​​ಟಿಎ (India-UK Free Trade Agreement) ಒಪ್ಪಂದ ಮಾಡಿಕೊಂಡಿದೆ. ಭಾರತ ಮತ್ತು ಯುನೈಟೆಡ್ ಕಿಂಗ್ಡಂ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿವೆ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಘೋಷಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಅವರು ಇಂದು ದೂರವಾಣಿ ಮೂಲಕ ಮಾತನಾಡಿ, ಈ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ.

ಭಾರತ ಮತ್ತು ಬ್ರಿಟನ್ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಹಾಗೂ ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್ (Double contribution convention) ಕೂಡ ಅಂತಿಮಗೊಂಡಿದೆ. ಇಲ್ಲಿ ಡಬಲ್ ಕಾಂಟ್ರಿಬ್ಯೂಶನ್ ಕನ್ವೆನ್ಷನ್ ಎಂದರೆ, ಒಂದು ದೇಶದ ನಾಗರಿಕರು ಮತ್ತೊಂದು ದೇಶದಲ್ಲಿ ಕೆಲಸ ಮಾಡುತ್ತಿರುವಾಗ ಎರಡೂ ದೇಶಗಳ ಸೋಷಿಯಲ್ ಸೆಕ್ಯುರಿಟಿ ಸ್ಕೀಮ್​​ಗಳಿಗೆ ಕೊಡುಗೆ ನೀಡುವ ಬದಲು ಯಾವುದಾದರೂ ಒಂದು ದೇಶದ ಸ್ಕೀಮ್ ಅನ್ನು ಆಯ್ದುಕೊಳ್ಳಲು ಅವಕಾಶ ನೀಡುತ್ತದೆ.

ಇದನ್ನೂ ಓದಿ
Image
ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್​​​ನಲ್ಲಿ 4 ಸ್ಥಾನ ಮೇಲೇರಿದ ಭಾರತ
Image
ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗುತ್ತಿದೆ ಭಾರತ
Image
ನೀಟ್ ಕೇಂದ್ರದಲ್ಲಿ ಆಧಾರ್ ಫೇಸ್ ಅಥೆಂಟಿಕೇಶನ್ ಪ್ರಯೋಗ
Image
ಉತ್ತಮ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ: ಸಿಇಎ

ಎಫ್​​ಟಿಎ: ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ ನಾಯಕರು

ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಮೈಲಿಗಲ್ಲು ಎಂದು ನರೇಂದ್ರ ಮೋದಿ ಮತ್ತು ಸರ್ ಕೀರ್ ಸ್ಟಾರ್ಮರ್ ಇಬ್ಬರೂ ಬಣ್ಣಿಸಿದ್ದಾರೆ. ಎರಡೂ ಆರ್ಥಿಕತೆಗಳಲ್ಲಿ ವ್ಯಾಪಾರ, ಹೂಡಿಕೆ, ನಾವೀನ್ಯತೆ ಮತ್ತು ಉದ್ಯೋಗಸೃಷ್ಟಿಗೆ ಪುಷ್ಟಿ ಸಿಗುತ್ತದೆ. ಎರಡೂ ದೇಶಗಳ ಮಧ್ಯೆ ಆರ್ಥಿಕ ಕೊಂಡಿಗಳು, ಜನರ ಜನರ ನಡುವಿನ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಉದ್ಯಮಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ವರ್ಣಿಸಲಾಗಿದೆ.

ಇದನ್ನೂ ಓದಿ: ಯುಎನ್​​ಡಿಪಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತ 38 ಸ್ಥಾನ ಮೇಲಿರುವ ಭಾರತ

‘ನನ್ನ ಸ್ನೇಹಿತರಾದ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಮಾತನಾಡಿದ್ದು ಖುಷಿಯಾಯಿತು. ಎರಡೂ ದೇಶಗಳಿಗೆ ಪರಸ್ಪರ ಅನುಕೂಲವಾಗುವ, ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಡಬಲ್ ಕಾಂಟ್ರಿಬ್ಯೂಶನ್ ಕನ್ವೆಷನ್ ಒಪ್ಪಂದವನ್ನೂ ಅಂತಿಮಗೊಳಿಸಲಾಗಿದೆ. ಈ ಮಹತ್ವದ ಒಪ್ಪಂದಗಳು ನಮ್ಮ ಸಮಗ್ರ ಸಹಭಾಗಿತ್ವವನ್ನು ಹೆಚ್ಚಿಸಲಿವೆ. ನಮ್ಮ ಎರಡೂ ಆರ್ಥಿಕತೆಗಳಲ್ಲಿ ವ್ಯಾಪಾರ, ಹೂಡಿಕೆ, ಪ್​ರಗತಿ, ಉದ್ಯೋಗಸೃಷ್ಟಿ, ಇನ್ನೋವೇನ್ ಅನ್ನು ಹೆಚ್ಚಿಸಲು ಇದು ಸಹಾಯವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಬರೆದಿದ್ದಾರೆ.

ಇದೇ ವೇಳೆ, ಬ್ರಿಟನ್ ಪ್ರಧಾನಿಯನ್ನು ನರೇಂದ್ರ ಮೋದಿ ಅವರು ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಶೀಘ್ರದಲ್ಲೇ ಸರ್ ಕೀರ್ ಸ್ಟಾರ್ಮರ್ ಅವರು ಭಾರತಕ್ಕೆ ಭೇಟಿ ನೀಡಬಹುದು ಎನ್ನಲಾಗುತ್ತಿದೆ.

ಬ್ರಿಟನ್ ಪ್ರಧಾನಿಗಳೂ ಕೂಡ ಭಾರತದೊಂದಿಗಿನ ಎಫ್​​ಟಿಎ ಬಗ್ಗೆ ಸಂತಸ ಹೊಂದಿದ್ದಾರೆ. ವಿಶ್ವಾದ್ಯಂತ ವಿವಿಧ ಆರ್ಥಿಕತೆಗಳೊಂದಿಗೆ ಇರುವ ವ್ಯಾಪಾರ ತಡೆಗಳನ್ನು ಕಡಿಮೆ ಮಾಡುವುದು, ಮತ್ತು ಮೈತ್ರಿಗಳನ್ನು ಗಟ್ಟಿಗೊಳಿಸುವುದು ತಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಐಎಂಎಫ್ ಡಾಟಾ: 4 ಟ್ರಿಲಿಯನ್ ಡಾಲರ್ ದಾಟಿದ ಭಾರತದ ಜಿಡಿಪಿ; ಜಪಾನ್ ಅನ್ನು ಹಿಂದಿಕ್ಕಲಿರುವ ಭಾರತ

ಏನಿರಬಹುದು ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದದಲ್ಲಿ?

ಕೆಲ ಸರಕುಗಳಿಗೆ ಭಾರತ ಮತ್ತು ಬ್ರಿಟನ್ ದೇಶಗಳು ಸಾಕಷ್ಟು ಆಮದು ಸುಂಕ ವಿಧಿಸುತ್ತವೆ. ಬ್ರಿಟನ್​​ನಿಂದ ಬರುವ ಸ್ಕಾಚ್ ವಿಸ್ಕಿ, ಜಿನ್​​ಗಳಿಗೆ ಭಾರತ ಶೇ. 150 ಸುಂಕ ಹಾಕುತ್ತದೆ. ಬ್ರಿಟನ್​​​ನಲ್ಲಿ ತಯಾರಾಗುವ ಜಾಗ್ವಾರ್, ಲ್ಯಾಂಡ್ ರೋವರ್ ಕಾರುಗಳಿಗೆ ಶೇ. 100 ಟ್ಯಾರಿಫ್ ಇದೆ. ಹೀಗೆ ಇತರ ಕೆಲ ಸರಕುಗಳಿಗೆ ಅಧಿಕ ಸುಂಕ ಜಾರಿಯಲ್ಲಿದೆ. ಇವುಗಳನ್ನು ಕಡಿಮೆ ಮಾಡುವ ಬಗ್ಗೆ ಮಾತುಕತೆ, ಸಂಧಾನಗಳು ನಡೆಯುತ್ತಿದ್ದುವು. ಈಗ ಒಪ್ಪಂದ ಅಂತಿಮಗೊಂಡಿರುವುದನ್ನು ಎರಡೂ ದೇಶಗಳ ಪ್ರಧಾನಿಗಳು ಖಚಿತಪಡಿಸಿದ್ದಾರೆ. ಎಫ್​​ಟಿಎನಲ್ಲಿ ಯಾವುದೆಲ್ಲಾ ಅಂತಿಮಗೊಂಡಿವೆ ಎನ್ನುವ ಮಾಹಿತಿ ಸದ್ಯದಲ್ಲೇ ಬರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್