AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar biometric: ಐಡಿ ಬೇಕಿಲ್ಲ, ಫಿಂಗರ್ ಒತ್ತಂಗಿಲ್ಲ… ಆಧಾರ್ ಫೇಸ್ ಅಥೆಂಟಿಕೇಶನ್ ಪ್ರಯೋಗ ಯಶಸ್ವಿ

Aadhaar Face authentication system in NEET UG examination centre: ಭಾನುವಾರ ನವದೆಹಲಿಯಲ್ಲಿ ನಡೆದ ನೀಟ್ ಪರೀಕ್ಷೆ ವೇಳೆ ಕೆಲ ಎಕ್ಸಾಮಿನೇಶನ್ ಸೆಂಟರ್​​​ಗಳಲ್ಲಿ ಆಧಾರ್ ಫೇಸ್ ಅಥೆಂಟಿಕೇಶನ್ ಪ್ರಯೋಗ ಮಾಡಲಾಯಿತು. ವಿದ್ಯಾರ್ಥಿಗಳ ಮುಖದ ಚಹರೆಯನ್ನು ನಿಖರವಾಗಿ ಗುರುತಿಸಲಾಯಿತು. ಈ ಪ್ರಯೋಗ ಯಶಸ್ವಿಯಾಯಿತು ಎಂದೆನ್ನಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಈ ಸಿಸ್ಟಂ ಅನ್ನು ಅಳವಡಿಸುವ ಸಾಧ್ಯತೆ ಇದೆ.

Aadhaar biometric: ಐಡಿ ಬೇಕಿಲ್ಲ, ಫಿಂಗರ್ ಒತ್ತಂಗಿಲ್ಲ... ಆಧಾರ್ ಫೇಸ್ ಅಥೆಂಟಿಕೇಶನ್ ಪ್ರಯೋಗ ಯಶಸ್ವಿ
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 06, 2025 | 2:22 PM

ನವದೆಹಲಿ, ಮೇ 6: ಆಧಾರ್ ದಾಖಲೆ ದೃಢೀಕರಣಕ್ಕೆ (Aadhaar authentication) ಫಿಂಗರ್ ಪ್ರಿಂಟ್ ನೀಡುವುದು ಸಾಮಾನ್ಯ. ಈಗ ಫೇಸ್ ದೃಢೀಕರಣದ ಫೀಚರ್ (Face authentication) ಅನ್ನು ಉಪಯೋಗಿಸಲಾಗುತ್ತಿದೆ. ದೆಹಲಿಯಲ್ಲಿ ಇಂಥದ್ದೊಂದು ಪ್ರಯೋಗ ಯಶಸ್ವಿಯಾಗಿದೆ. ದೆಹಲಿಯ ಕೆಲ ನೀಟ್ ಪರೀಕ್ಷಾ ಕೇಂದ್ರಗಳಲ್ಲಿ (NEET UG examination centres) ಯುಐಡಿಎಐನಿಂದ ಆಧಾರ್ ಆಧಾರಿತ ಫೇಸ್ ಅಥೆಂಟಿಕೇಶನ್ ಫೀಚರ್ ಬಳಕೆಗೆ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿತ್ತು. ಇದು ಯಶಸ್ವಿಯಾಗಿರುವುದು ಆಧಾರ್​​​ನ ಉಪಯುಕ್ತತೆಯು ಒಂದು ಸ್ತರ ಮೇಲೆ ಹೋಗಲಿದೆ.

ದೆಹಲಿಯ ಕೆಲ ಆಯ್ದ ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ಈ ಪ್ರಯೋಗ ಮಾಡಲಾಗಿದೆ. ಎನ್​​​ಐಸಿಯ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಮತ್ತು ಎನ್​​ಟಿಎನ ಪರೀಕ್ಷಾ ಆಡಳಿತದ ಪ್ರೋಟೋಕಾಲ್​​ಗಳನ್ನು ಈ ಸೆಂಟರ್​​​ಗಳಲ್ಲಿ ಅಳವಡಿಸಲಾಯಿತು. ಆಧಾರ್ ಫೇಸ್ ಅಥೆಂಟಿಕೇಶನ್ ವ್ಯವಸ್ಥೆ ಬಹಳ ನಿಖರವಾಗಿತ್ತು ಎಂದು ಈ ಪ್ರಯೋಗದ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ಹೇಳಿದ್ದಾರೆ.

ಈ ಆಧಾರ್ ಫೇಸ್ ಅಥೆಂಟಿಕೇಶನ್ ಹೇಗೆ ಕೆಲಸ ಮಾಡುತ್ತದೆ?

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆಧಾರ್ ದಾಖಲೆಗಳನ್ನು ಮುಂಚಿತವಾಗಿ ಪಡೆದು ಅದನ್ನು ಡಾಟಾಬೇಸ್​​​ನಲ್ಲಿ ಅಪ್​​ಡೇಟ್ ಮಾಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳ ಮುಖದ ಡಾಟಾ ಕೂಡ ಇರುತ್ತದೆ. ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಐಡಿ ತೋರಿಸುವ ಅವಶ್ಯಕತೆ ಇರುವುದಿಲ್ಲ. ಅಲ್ಲಿರುವ ಕ್ಯಾಮರಾಗಳು ತನ್ನಂತಾನೆ ಆ ವಿದ್ಯಾರ್ಥಿಯ ಮುಖದ ಗುರುತು ಹಿಡಿದು, ಎಕ್ಸಾಂ ಹಾಲ್​​ಗೆ ಪ್ರವೇಶಿಸಲು ಅನುಮತಿಸುತ್ತದೆ.

ಇದನ್ನೂ ಓದಿ
Image
ಪೋಸ್ಟ್ ಆಫೀಸ್​​​ನಲ್ಲಿ ಆಧಾರ್ ಬಯೋಮೆಟ್ರಿಕ್; ಪ್ರಕ್ರಿಯೆ ಸುಗಮ
Image
ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್
Image
ಹೊಸ ಆಧಾರ್ ಕಾನೂನು ತಯಾರಿಕೆಗೆ ಸರ್ಕಾರ ಮುಂದು
Image
ಇನ್ಮುಂದೆ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಬೇಕಿಲ್ಲ; ಹೊಸ ಆ್ಯಪ್​ ಬಿಡುಗಡೆ

ಇದನ್ನೂ ಓದಿ: ಟಿಸಿಎಸ್​​​ನಲ್ಲಿ ಭತ್ಯೆ ಧಮಾಕ; ಶೇ. 70 ಉದ್ಯೋಗಿಗಳಿಗೆ ಶೇ. 100 ಭತ್ಯೆ; ವರ್ಕ್ ಫ್ರಂ ಹೋಮ್​​ನವರಿಗೆ ಇಲ್ಲ ಭಾಗ್ಯ

ಭಾರತದಲ್ಲಿ ಎಕ್ಸಾಮಿನೇಶನ್ ಸೆಂಟರ್​​​ನಲ್ಲಿ ಆಧಾರ್ ಆಧಾರಿತವಾದ ಈ ಸುಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯ ಪ್ರಯೋಗ ನಡೆದಿರುವುದು ಇದೇ ಮೊದಲು. ಪರೀಕ್ಷಾ ಕೇಂದ್ರಗಳಲ್ಲಿ ನಕಲಿ ವ್ಯಕ್ತಿಗಳು ಬರುವುದನ್ನು ತಪ್ಪಿಸಲು ಇದು ಪರಿಣಾಮಕಾರಿ ಎನಿಸುತ್ತದೆ. ಹಾಗೆಯೇ, ಪರೀಕ್ಷಾ ಕೇಂದ್ರಗಳ ನಿರ್ವಹಣೆಯನ್ನೂ ಸುಗಮಗೊಳಿಸುತ್ತದೆ.

ದೆಹಲಿಯಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ದೇಶದ ಇತರೆಡೆ ನಡೆಯುವ ಇತರ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರುವ ಆಲೋಚನೆ ಸರ್ಕಾರದ್ದಾಗಿದೆ.

ಏರ್​​ಪೋರ್ಟ್​​ಗಳಲ್ಲೂ ಇದೆ ಇಂಥ ವ್ಯವಸ್ಥೆ…

ಬೆಂಗಳೂರು, ಹೈದರಾಬಾದ್, ದೆಹಲಿ, ವಾರಾಣಸಿ ಏರ್​​ಪೋರ್ಟ್​​ಗಳಲ್ಲಿ ಪ್ರಯಾಣಿಕರನ್ನು ಸ್ವಯಂಚಾಲಿತವಾಗಿ ಚಹರೆ ಗುರುತಿಸುವ ವ್ಯವಸ್ಥೆ ಇದೆ. ಅದಕ್ಕೆಂದೇ ಡಿಜಿಯಾತ್ರಾ ಆ್ಯಪ್ ನಿರ್ಮಿಸಲಾಗಿದೆ. ವಿಮಾನ ಪ್ರಯಾಣಕ್ಕೆ ಟಿಕೆಟ್ ಪಡೆದವರು ಡಿಜಿಯಾತ್ರಾ ಆ್ಯಪ್​​​ನಲ್ಲಿ ಆಧಾರ್ ಮತ್ತು ಸೆಲ್ಫಿ ಮೂಲಕ ನೊಂದಾಯಿಸಬಹುದು. ಈ ಡಾಟಾ ಎನ್​​ಕ್ರಿಪ್ಟ್ ಆಗಿ ಸಿಸ್ಟಂನಲ್ಲಿ ಸ್ಟೋರ್ ಆಗುತ್ತದೆ.

ಇದನ್ನೂ ಓದಿ: ಎಕ್ಸ್​​ಪ್ರೆಸ್​​ವೇ ನಿರ್ಮಾಣದಲ್ಲಿ ಚೀನಾ ಕಿಂಗ್; 10 ವರ್ಷದಲ್ಲಿ ಯುಕೆ ಕಟ್ಟಿದ್ದು 105 ಕಿಮೀ ಮಾತ್ರ; ಭಾರತ ನಿರ್ಮಿಸಿದ್ದು ಎಷ್ಟು ರಸ್ತೆ?

ಪ್ರಯಾಣಿಕರು ಏರ್​​ಪೋರ್ಟ್​​ನ ಪ್ರವೇಶ ದ್ವಾರಕ್ಕೆ ಬಂದಾಗ ಅಲ್ಲಿರುವ ಕ್ಯಾಮೆರಾ ಆ ವ್ಯಕ್ತಿಯ ಮುಖವನ್ನು ಸ್ಕ್ಯಾನ್ ಮಾಡುತ್ತದೆ. ಸಂಗ್ರಹವಾಗಿರುವ ಡಾಟಾಗೆ ಅದು ಹೊಂದಿಕೆಯಾದರೆ, ಗೇಟ್ ತನ್ನಂತಾನೆ ತೆರೆಯುತ್ತದೆ. ಬೋರ್ಡಿಂಗ್ ಪಾಸ್ ತೋರಿಸುವ ಅವಶ್ಯಕತೆ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?