ಭಾರತದ ಹಣದುಬ್ಬರ ಐದು ತಿಂಗಳಲ್ಲೇ ಕನಿಷ್ಠ; ಆದರೂ ಸರ್ಕಾರಕ್ಕೆ ಆತಂಕ ತರಿಸಿದೆ ಇನ್​ಫ್ಲೇಶನ್ ಡಾಟಾ

Inflation at 4.85%: ಬೇಸಿಗೆ ಬಿಸಿ ಸರ್ಕಾರಕ್ಕೆ ಆತಂಕ ತಂದಿದೆ. ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಶೇ. 4.85ಕ್ಕೆ ಇಳಿದಿದೆ. ಇದು ಕಳೆದ ಐದು ತಿಂಗಳಲ್ಲೇ ಕನಿಷ್ಠ ಹಣದುಬ್ಬರವಾಗಿದೆ. ಆದರೂ ಕೂಡ ಸರ್ಕಾರಕ್ಕೆ ಸಮಾಧಾನದ ಸ್ಥಿತಿ ಬಂದಿಲ್ಲ. ಇದಕ್ಕೆ ಕಾರಣ, ಈ ಬಾರಿಯ ಉರಿ ಬೇಸಿಗೆ. ಅಲ್ಲದೇ ಮಾರ್ಚ್​ನಲ್ಲಿ ಆಹಾರ ವಸ್ತುಗಳ ಬೆಲೆ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗಿಲ್ಲ. ಬೇಸಿಗೆಯಲ್ಲಿ ಇಳುವರಿ ಇನ್ನಷ್ಟು ಕುಸಿಯಲಿದೆ. ಇದು ಸರ್ಕಾರಕ್ಕೆ ತಲೆನೋವು ತಂದಿದೆ.

ಭಾರತದ ಹಣದುಬ್ಬರ ಐದು ತಿಂಗಳಲ್ಲೇ ಕನಿಷ್ಠ; ಆದರೂ ಸರ್ಕಾರಕ್ಕೆ ಆತಂಕ ತರಿಸಿದೆ ಇನ್​ಫ್ಲೇಶನ್ ಡಾಟಾ
ಹಣದುಬ್ಬರ
Follow us
|

Updated on: Apr 14, 2024 | 11:58 AM

ನವದೆಹಲಿ, ಏಪ್ರಿಲ್ 14: ಮಾರ್ಚ್ ತಿಂಗಳ ಹಣದುಬ್ಬರ (Inflation) ಶೇ. 4.85ರಷ್ಟಿರುವುದು ಮೊನ್ನೆ ಬಿಡುಗಡೆ ಆದ ದತ್ತಾಂಶದಿಂದ ತಿಳಿದುಬಂದಿದೆ. ಕಳೆದ ಐದು ತಿಂಗಳಲ್ಲೇ ಇದು ಕನಿಷ್ಠ ಹಣದುಬ್ಬರ ದರವಾಗಿದೆ. ಹಿಂದಿನ ತಿಂಗಳು, ಅಂದರೆ 2024ರ ಫೆಬ್ರುವರಿಯಲ್ಲಿ ಹಣದುಬ್ಬರ ಶೇ. 5.09 ಇತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ, ಅಂದರೆ 2023ರ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಶೇ. 5.66ರಷ್ಟಿತ್ತು. ಸರ್ಕಾರ ಹಣದುಬ್ಬರವನ್ನು ಕಟ್ಟಿಹಾಕಲು ನಿಗದಿ ಮಾಡಿರುವ ಶೇ. 4ರ ದರಕ್ಕೆ ಇದು ಸಮೀಪ ಹೋಗಿದೆ. ಆದರೆ, ಸರ್ಕಾರಕ್ಕೆ ಹಣದುಬ್ಬರದ ಆತಂಕ ಮಾತ್ರ ಮುಂದುವರಿದಿದೆ.

ಹಣದುಬ್ಬರ ಕಡಿಮೆ ಆಗುತ್ತಿದ್ದರೂ ಸರ್ಕಾರಕ್ಕೆ ಆತಂಕ ಮುಂದುವರಿಯಲು ಕಾರಣವಾಗಿರುವುದು ಆಹಾರ ಹಣದುಬ್ಬರ. ಹಣದುಬ್ಬರದಲ್ಲಿ ಆಹಾರ ವಿಭಾಗ ಪ್ರಮುಖವಾದುದು. ಆಹಾರ ಹಣದುಬ್ಬರ ಶೇ. 8.66ರಿಂದ ಶೇ. 8.52ಕ್ಕೆ ಕಡಿಮೆ ಆಗಿದೆ. ತರಕಾರಿ, ಬೇಳೆ ಕಾಳುಗಳ ಬೆಲೆ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗುತ್ತಿಲ್ಲದಿರುವುದು ಸರ್ಕಾರಕ್ಕೆ ಚಿಂತೆ ಮೂಡಿಸಿದೆ.

ಇದಕ್ಕಿಂತ ಹೆಚ್ಚಾಗಿ, ಈ ಬಾರಿಯ ಬೇಸಿಗೆ ಭಯ ಹುಟ್ಟಿಸುವ ರೀತಿ ಇರಲಿದೆ ಎಂಬ ಸುಳಿವು ಈಗಾಗಲೇ ಸಿಕ್ಕಿದೆ. ಏಪ್ರಿಲ್​ನಿಂದ ಜೂನ್​ವರೆಗೆ ದೇಶಾದ್ಯಂತ ತೀವ್ರ ಉಷ್ಣಗಾಳಿಯ ದಾಳಿ ಇರಲಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಮಾರಕ ಪೆಟ್ಟು ಬೀಳಲಿದ್ದು, ಬೆಳೆ ಉತ್ಪನ್ನಗಳು ತೀವ್ರವಾಗಿ ಕುಸಿಯಬಹುದು. ಪರಿಣಾಮವಾಗಿ ಆಹಾರ ಹಣದುಬ್ಬರ ತಾರಕಕ್ಕೇರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ಮೀಸಲು ನಿಧಿ 648 ಬಿಲಿಯನ್ ಡಾಲರ್​ಗೆ ಏರಿಕೆ; ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ

ಹೀಟ್​ವೇವ್ ನಡುವೆಯೂ ಭರವಸೆಯ ಬೆಳಗಾಗಿ, ಭಾರತೀಯ ಹವಾಮಾನ ಇಲಾಖೆ ಈ ಬಾರಿಯ ನೃರುತ್ಯ ಮುಂಗಾರು ಸಹಜವಾಗಿ ಆಗಬಹುದು ಎಂದು ಹೇಳಿದೆ. ಇದೇನಾದರೂ ನಿಜವಾದಲ್ಲಿ ಮುಂಗಾರು ಬೆಳೆಯ ಫಸಲು ಉತ್ತಮವಾಗಿ ಬರಲಿದ್ದು, ಮುಂದಿನ ಹಣಕಾಸು ವರ್ಷಕ್ಕೆ ಆಹಾರ ಹಣದುಬ್ಬರ ತಗ್ಗಲು ಕಾರಣವಾಗಬಹುದು ಎಂದು ತಜ್ಞರು ಪರಿಭಾವಿಸಿದ್ದಾರೆ.

ಪೆಟ್ರೋಲ್ ಬೆಲೆ ಇಳಿಕೆಯಿಂದ ಸಮಾಧಾನ

ತಜ್ಞರು ಮಾರ್ಚ್ ತಿಂಗಳ ಹಣದುಬ್ಬರ ಶೇ. 4.7ಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ತುಸು ಹೆಚ್ಚೇ ಆಗಿದೆ. ಆಹಾರವಸ್ತುಗಳ ಬೆಲೆ ನಿರೀಕ್ಷಿತ ರೀತಿಯಲ್ಲಿ ಕಡಿಮೆ ಆಗಿಲ್ಲ. ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಸಿದ್ದರಿಂದ ಒಟ್ಟಾರೆ ಹಣದುಬ್ಬರ ಶಾಂತಗೊಳ್ಳಲು ಸಹಾಯಕವಾಗಿದೆ. ಇಲ್ಲದಿದ್ದರೆ ಶೇ. 5ಕ್ಕಿಂತಲೂ ಹೆಚ್ಚಿನ ಮೇಲ್ಮಟ್ಟದಲ್ಲಿ ಇರುವ ಸಾಧ್ಯತೆ ಇತ್ತು.

ಇದನ್ನೂ ಓದಿ: ಬೌರ್ನ್‌ವಿಟಾ ಮಕ್ಕಳ ಜೀವಕ್ಕೆ ಕುತ್ತು, ಹೆಲ್ತ್​​​ ಡ್ರಿಂಕ್ಸ್​​​ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಆದೇಶ

ಭಾರತಕ್ಕೆ ಕಳೆದ ಕೆಲ ತಿಂಗಳಿಂದ ಆಹಾರ ವಸ್ತುಗಳ ಬೆಲೆಯೇ ತಲೆನೋವಾಗಿರುವುದು. ಹಣದುಬ್ಬರವನ್ನು ನಿರೀಕ್ಷಿತ ರೀತಿಯಲ್ಲಿ ತಹಬದಿಗೆ ತರಲು ಸಾಧ್ಯ ಆಗದೇ ಹೋಗಲು ಇದೇ ಆಹಾರವಸ್ತುಗಳ ಬೆಲೆ ಏರಿಕೆ ಕಾರಣವಾಗಿದೆ. ಏಪ್ರಿಲ್ ತಿಂಗಳಲ್ಲಿ ಆಹಾರ ಹಣದುಬ್ಬರ ಶೇ. 7ಕ್ಕಿಂತ ಕಡಿಮೆ ಮಟ್ಟಕ್ಕೆ ಬರುವುದಿಲ್ಲ ಎಂದು ಐಸಿಆರ್​ಎ ಅಂದಾಜು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ