AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

21,000 ಕಿಮೀ ಕಂಬಗಳು, 100 ಕಿಮೀ ಬಟ್ಟೆಗಳು; ವಾಟರ್ ಡ್ರೋನ್, ಎಐ ಕ್ಯಾಮರಾಗಳು… ಅಬ್ಬಬ್ಬ ಅನಿಸುವಂತಿತ್ತು ಮಹಾಕುಂಭಕ್ಕೆ ಮಾಡಿದ ವ್ಯವಸ್ಥೆ

Mahakumbh and big facts: 45-46 ದಿನಗಳ ಕಾಲ ನಡೆದ ಮಹಾಕುಂಭಕ್ಕೆ 66 ಕೋಟಿ ಜನರು ಭೇಟಿ ನೀಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. 7,500 ಕೋಟಿ ರೂ ಬಜೆಟ್​ನಲ್ಲಿ ಆಯೋಜಿಸಲಾದ ಈ ಮಹಾಕುಂಭದಿಂದ ಉತ್ತರಪ್ರದೇಶ ರಾಜ್ಯದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ ಬಿಸಿನೆಸ್ ಸಿಕ್ಕಿದೆ. ಹಜ್ ಯಾತ್ರೆಯಿಂದ ಹಿಡಿದು ರಯೋ ಕಾರ್ನಿವಲ್​ವರೆಗೆ ವಿಶ್ವದ ಯಾವ ಕಾರ್ಯಕ್ರಮಕ್ಕೂ ವರ್ಷಕ್ಕೆ 1 ಕೋಟಿ ಜನರೂ ಪಾಲ್ಗೊಳ್ಳುವುದಿಲ್ಲ.

21,000 ಕಿಮೀ ಕಂಬಗಳು, 100 ಕಿಮೀ ಬಟ್ಟೆಗಳು; ವಾಟರ್ ಡ್ರೋನ್, ಎಐ ಕ್ಯಾಮರಾಗಳು... ಅಬ್ಬಬ್ಬ ಅನಿಸುವಂತಿತ್ತು ಮಹಾಕುಂಭಕ್ಕೆ ಮಾಡಿದ ವ್ಯವಸ್ಥೆ
ಮಹಾಕುಂಭದಲ್ಲಿ ಕಾರ್ಯನಿರತವಾಗಿರುವ ಸ್ವಚ್ಛತಾ ಕಾರ್ಮಿಕ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 27, 2025 | 4:53 PM

ನವದೆಹಲಿ, ಫೆಬ್ರುವರಿ 27: ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ಮುಕ್ತಾಯಗೊಂಡ ಮಹಾಕುಂಭಕ್ಕೆ ಬರೋಬ್ಬರಿ 66 ಕೋಟಿ ಜನರು ಭೇಟಿ ನೀಡಿದ್ದು ಅಂತಿಂಥ ಸಂಗತಿಯಲ್ಲ. ಯಾವುದೇ ಮಾನದಂಡದಲ್ಲೂ ಇದು ವಿಶ್ವದಾಖಲೆಯ ಕಾರ್ಯಕ್ರಮ. ಉತ್ತರಪ್ರದೇಶ ಸರ್ಕಾರ ಮಹಾಕುಂಭದ ವ್ಯವಸ್ಥೆಗೆ 7,500 ಕೋಟಿ ರೂ ಬಜೆಟ್ ಹಾಕಿದಾಗ ಬಹಳಷ್ಟು ಜನರು ಲೇವಡಿ ಮಾಡಿದ್ದುಂಟು. ಅಭಿವೃದ್ಧಿಗೆ ಒತ್ತು ಕೊಡುತ್ತೇವೆನ್ನುವ ಮುಖ್ಯಮಂತ್ರಿ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಸಾವಿರಾರು ಕೋಟಿ ರೂ ವ್ಯಯಿಸುತ್ತಿದ್ದಾರೆ ಎಂದು ವಿರೋಧಿಗಳು ಹೇಳಿದ್ದುಂಟು. ಆದರೆ, ನಂತರ ಆಗಿದ್ದೇ ಬೇರೆ… 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಕ್ಕೆ (Mahakumbh) ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಹರಿದುಬಂದ ಜನಪ್ರವಾಹ ಹಲವರ ಲೆಕ್ಕಾಚಾರವನ್ನೇ ಬದಲಿಸುವಂತೆ ಮಾಡಿತ್ತು.

46 ದಿನಗಳ ಕಾಲ ನಡೆದ ಮಹಾಕುಂಭಕ್ಕೆ 66 ಕೋಟಿ ಜನರು ಭೇಟಿ ನೀಡಿದ್ದಾರೆ. ಇದರಿಂದ ಆರ್ಥಿಕ ಚಟುವಟಿಕೆಯಾಗಿದ್ದು ಬರೋಬ್ಬರಿ 3 ಲಕ್ಷ ಕೋಟಿ ರೂನಷ್ಟು. 66 ಕೋಟಿ ಜನರು ಒಂದು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದು ಇತಿಹಾಸದಲ್ಲೇ ಅಪೂರ್ವವಾದ ಸಂಗತಿ. ಹಜ್ ಯಾತ್ರೆಗೆ 25 ಲಕ್ಷ, ರಯೋ ಕಾರ್ನಿವಲ್​ಗೆ (Rio carnival) 70 ಲಕ್ಷ, ಅಕ್ಟೋಬರ್​ಫೆಸ್ಟ್​ಗೆ 72 ಲಕ್ಷ ಜನರು ಸರಾಸರಿಯಾಗಿ ಪಾಲ್ಗೊಳ್ಳುತ್ತಾರೆ ಎನ್ನುವ ಅಂಕಿ ಅಂಶ ಇಟ್ಟು ನೋಡಿದಾಗ ಮಹಾಕುಂಭದ್ದು ಅಕ್ಷರಶಃ ದೈತ್ಯ ದರ್ಶನ. ಈ ಹಿಂದೆ ನಡೆದ ಕುಂಭಮೇಳಗಳಲ್ಲಿ 5ರಿಂದ 25 ಕೋಟಿ ಜನರು ಭೇಟಿ ನೀಡಿರುವುದುಂಟು. ಹೀಗಾಗಿ, ಯಾವುದೇ ಕೋನದಲ್ಲೂ 2025ರ ಮಹಾಕುಂಭವು ಮಹತ್ತರದ್ದೆನಿಸುತ್ತದೆ.

66 ಕೋಟಿ ಜನರು ಹಾಗೆ ಬಂದು ಹೀಗೆ ಹೋಗುವುದಿಲ್ಲ. ಇವರಿಂದ ಅದೆಷ್ಟು ಬಿಸಿನೆಸ್ ಸೃಷ್ಟಿಯಾಗಬಹುದು ಎಂದು ಯಾರು ಬೇಕಾದರೂ ಊಹಿಸಬಹುದು. ಪ್ರಯಾಣ ವೆಚ್ಚ, ಹೋಟೆಲ್, ಗೆಸ್ಟ್ ಹೌಸ್, ಕ್ಯಾಂಪ್ ವಸತಿ, ಆಹಾರ, ಧಾರ್ಮಿಕ ವಸ್ತುಗಳು, ಕ್ಯಾಬ್, ಬೋಟ್, ಆಸ್ಪತ್ರೆ ಮತ್ತಿತರ ಹಲವು ವಸ್ತು ಮತ್ತು ಸೇವೆಗಳಿಗೆ ಭಕ್ತರು ಹಣ ವ್ಯಯಿಸುತ್ತಾರೆ. ಬೋಟ್ ಚಾಲಕರು, ಬೈಕ್ ರೈಡರ್​ಗಳು, ಕ್ಯಾಬ್ ಡ್ರೈವರ್​ಗಳಿಗೆ ಸಖತ್ ಆದಾಯವೇ ಸಿಕ್ಕಿದೆ. ಮಹಾಕುಂಭಕ್ಕೆ ಸರ್ಕಾರ ಅಪ್ರತಿಮ ಎನಿಸಬಹುದಾದಂತಹ ವ್ಯವಸ್ಥೆ ಮಾಡಿತ್ತು. ಅದರ ಕೆಲ ಮುಖ್ಯಾಂಶಗಳನ್ನು ನೋಡುವುದಾದರೆ….

ಇದನ್ನೂ ಓದಿ
Image
ಜಿಟಿಗೆ ಇಷ್ಟೊಂದು ಮೌಲ್ಯ; ಆರ್ಸಿಬಿಗೆ ಇನ್ನೆಷ್ಟಿರಬಹುದು ವ್ಯಾಲ್ಯುಯೇಶನ್?
Image
ಭಾರತ, ಅಮೆರಿಕ ಆರ್ಥಿಕತೆಗಳಲ್ಲಿ ಇರುವ ಸಾಮ್ಯತೆಗಳಿವು...
Image
ಅಮೆರಿಕದಲ್ಲಿ ಪೆನ್ನಿ ನಾಣ್ಯ ತಯಾರಿಕೆ ಇನ್ನಿಲ್ಲ
Image
ಎಐ ಪರಿಕರಗಳನ್ನು ಕೃಷಿಗೆ ಬಳಸುವುದು ಹೇಗೆ?

ಇದನ್ನೂ ಓದಿ: 3 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಹಾಕುಂಭ; ಈ ಉತ್ಸವದ ಕುರಿತ 7 ಅಚ್ಚರಿಯ ಸಂಗತಿಗಳಿವು

ಟೆಂಟ್​ಗಳ ನಿರ್ಮಾಣದ ಅಂಕಿ ಅಂಶಗಳು…

ಪ್ರಯಾಗ್​ರಾಜ್​ನಲ್ಲಿ ಟೆಂಟ್ ವಸತಿಗಳೇ ಇರುವ ಬೃಹತ್ ತಾತ್ಕಾಲಿಕ ನಗರವನ್ನೇ ನಿರ್ಮಿಸಲಾಗಿತ್ತು. 48 ಲಕ್ಷ ಮರದ ಕೋಲುಗಳನ್ನು ಇದಕ್ಕೆ ಬಳಸಲಾಗಿದೆ. ಒಂದೊಂದೂ ಕೂಡ ಸರಾಸರಿಯಾಗಿ 10 ಅಡಿ ಎಂದಿಟ್ಟುಕೊಂಡರೂ, ಅವುಗಳೆಲ್ಲವನ್ನೂ ಜೋಡಿಸುತ್ತಾ ಹೋದರೆ ಅದೇ 20,726 ಕಿಮೀಯಷ್ಟಾಗುತ್ತದೆ.

ಟೆಂಟ್ ನಿರ್ಮಾಣಕ್ಕೆ ಬಳಸಲಾದ ಬಟ್ಟೆಯ ಉದ್ದ 100 ಕಿಮೀ ಆಗುತ್ತದೆ. ಹಾಗೆಯೇ, 250 ಟನ್ ಸಿಜಿಐ ಶೀಟ್​ಗಳನ್ನು ಬಳಸಾಗಿದೆ. ಈ ಟೆಂಟ್ ಸಿಟಿ ನಿರ್ಮಿಸಲು 3,000 ಕಾರ್ಮಿಕರು 6 ತಿಂಗಳು ಕೆಲಸ ಮಾಡಿದ್ದಾರೆ.

ನೀರೊಳಗೆ ಡ್ರೋನ್​ಗಳು, ಎಐ ಕ್ಯಾಮರಾಗಳು

ಮಹಾಕುಂಭಕ್ಕೆ ಭದ್ರತಾ ವ್ಯವಸ್ಥೆ ಸಮರ್ಪಕವಾಗಿತ್ತು. 50,000 ಪೊಲೀಸರನ್ನು ನಿಯೋಜಿಸಲಾಗಿತ್ತು. ವಿವಿಧೆಡೆ 2,700 ಎಐ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಪ್ರಯಾಗ್​ರಾಜ್ ಜಿಲ್ಲೆಗೆ ಸಂಪರ್ಕಿಸುವ ಏಳು ಮಾರ್ಗಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಯಾಗಿತ್ತು.

ಇದನ್ನೂ ಓದಿ: ಮಹಾಕುಂಭಕ್ಕೆ ನಿರೀಕ್ಷೆಮೀರಿದ ಜನಸಾಗರ; ವ್ಯಾಪಾರ ವಹಿವಾಟು ಮೂರು ಲಕ್ಷ ಕೋಟಿ ರೂ ಮುಟ್ಟುವ ನಿರೀಕ್ಷೆ

ನದಿಯ ಜಲಮಾರ್ಗದಲ್ಲಿ 113 ಅಂಡರ್​ವಾಟರ್ ಡ್ರೋನ್​ಗಳನ್ನು ಇಡಲಾಗಿತ್ತು. ಈ ಡ್ರೋನ್​ಗಳು ನೀರೊಳಗೆ 100 ಮೀಟರ್ ಆಳದವರೆಗೂ ಹೋಗಿ ದೃಶ್ಯಗಳನ್ನು ಸೆರೆಹಿಡಿಯಬಲ್ಲುವಾಗಿವೆ.

ಸುರಕ್ಷತೆ ಮತ್ತು ಸ್ವಚ್ಛತೆ

ಕೋಟ್ಯಂತರ ಜನರು ಬಂದು ಹೋಗುತ್ತಾರೆ ಎಂದರೆ ಅಲ್ಲಿ ಸ್ವಚ್ಛತೆ ಪಾಲನೆ ಬಹಳ ಕಷ್ಟವಾಗುತ್ತದೆ. ಆದರೆ, ಮಹಾಕುಂಭದಲ್ಲಿ ಎಲ್ಲಿಯೂ ಗಲೀಜು ಆಗದಂತೆ ಎಚ್ಚರ ವಹಿಸಲಾಗಿತ್ತು. ಸಾಕಷ್ಟು ಸ್ವಚ್ಛ ಕಾರ್ಮಿಕರನ್ನು ವಿವಿಧೆಡೆ ನಿಯೋಜಿಸಲಾಗಿದ್ದು, ರಿಯಲ್ ಟೈಮ್​ನಲ್ಲಿ ಅವರು ಕಸ ಕಡ್ಡಿಗಳನ್ನು ಹೆಕ್ಕುವ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ಕೂಡ ಸ್ವಚ್ಛತೆ ಪಾಲನೆ ಬಗ್ಗೆ ತಿಳಿಹೇಳಲಾಗಿತ್ತು. ಹೀಗಾಗಿ, ಮಹಾಕುಂಭವು ಕೋಟ್ಯಂತರ ಜನರ ಆಗಮನವಾದರೂ ಕೊಂಪೆ ಎನಿಸಲಿಲ್ಲ.

ವಿಪತ್ತು ನಿರ್ವಹಣೆಗೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದ ಉತ್ತರಪ್ರದೇಶ ಪೊಲೀಸರು, ಅಗ್ನಿಅವಘಡ ಇತ್ಯಾದಿ ವಿಪತ್ತುಗಳನ್ನು ಎದುರಿಸಲು ಅಗತ್ಯ ಉಪಕರಣಗಳ ಖರೀದಿಗೆ 200 ಕೋಟಿ ರೂ ವ್ಯಯಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Thu, 27 February 25

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?