AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚ್ 31, ಭಾನುವಾರ ಬ್ಯಾಂಕ್​​ಗಳಿಗೆ ರಜೆ ರದ್ದು; 29ರಿಂದ 31ರವರೆಗೆ ಐಟಿ ಸಿಬ್ಬಂದಿಗೂ ಇಲ್ಲ ರಜೆ; ಕಾರಣ ಇದು

No Bank Holiday On March 31st: ಸರ್ಕಾರದ ಕಾರ್ಯಗಳನ್ನು ನಿರ್ವಹಿಸುವ ಎಲ್ಲಾ ಏಜೆನ್ಸಿ ಬ್ಯಾಂಕುಗಳು ಭಾನುವಾರದ ದಿನವಾದ ಜನವರಿ 31ರಂದು ತೆರೆದಿರಬೇಕು ಎಂದು ಆರ್​ಬಿಐ ನಿರ್ದೇಶನ ನೀಡಿದೆ. ಏಜೆನ್ಸಿ ಬ್ಯಾಂಕ್ ಎನಿಸಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಇದು ಅನ್ವಯ ಆಗುತ್ತದೆ. ಹಣಕಾಸು ವರ್ಷದ ಕೊನೆಯ ದಿನವಾದ್ದರಿಂದ ಸರ್ಕಾರ ಸ್ವೀಕೃತಿ ಮತ್ತು ಪಾವತಿಗಳ ಲೆಕ್ಕವನ್ನು ನೀಡಬೇಕಾಗುತ್ತದೆ. ಈ ಕಾರಣಕ್ಕೆ ಮಾರ್ಚ್ 31ರಂದು ಬ್ಯಾಂಕುಗಳು ತೆರೆದಿರಬೇಕಾಗುತ್ತದೆ.

ಮಾರ್ಚ್ 31, ಭಾನುವಾರ ಬ್ಯಾಂಕ್​​ಗಳಿಗೆ ರಜೆ ರದ್ದು; 29ರಿಂದ 31ರವರೆಗೆ ಐಟಿ ಸಿಬ್ಬಂದಿಗೂ ಇಲ್ಲ ರಜೆ; ಕಾರಣ ಇದು
ಎಚ್​ಡಿಎಫ್​ಸಿ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 21, 2024 | 11:48 AM

Share

ನವದೆಹಲಿ, ಮಾರ್ಚ್ 21: ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳೂ ಮಾರ್ಚ್ 31, ಭಾನುವಾರದಂದು ತೆರೆದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನ ನೀಡಿದೆ. ಹಣಕಾಸು ವರ್ಷದ ಕೊನೆಯಲ್ಲಿ ಸರ್ಕಾರ ಎಲ್ಲಾ ಪಾವತಿ ಮತ್ತು ಸ್ವೀಕೃತಿಗಳ ಲೆಕ್ಕ ಕಲೆಹಾಕಬೇಕಾಗುತ್ತದೆ. ಹೀಗಾಗಿ, ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕುಗಳು ಸರ್ಕಾರಕ್ಕೆ ವರ್ಷದ ಕೊನೆಯಲ್ಲಿ ದತ್ತಾಂಶ ಒದಗಿಸಬೇಕು. ಈ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ಭಾನುವಾರ ಇದೆ. ಭಾನುವಾರ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾ ದಿನವಾದರೂ ಆವತ್ತು ತೆರೆದಿರಬೇಕಾಗುತ್ತದೆ.

ಏಜೆನ್ಸಿ ಬ್ಯಾಂಕುಗಳೆಂದರೆ ಏನು?

ಸರ್ಕಾರದ ಪರವಾಗಿ ಅಥವಾ ಏಜೆಂಟ್​ಗಳಾಗಿ ಬ್ಯಾಂಕಿಂಗ್ ಚಟುವಟಿಕೆ ನಡೆಸಲು ಕೆಲ ಬ್ಯಾಂಕುಗಳಿಗೆ ಅಧಿಕಾರ ನೀಡಲಾಗಿರುತ್ತದೆ. ಅಂಥ ಬ್ಯಾಂಕುಗಳನ್ನು ಏಜೆನ್ಸಿ ಬ್ಯಾಂಕುಗಳೆನ್ನಲಾಗುವುದು. ಸರ್ಕಾರದ ಪಾವತಿಗಳ ಹಂಚಿಕೆ, ತೆರಿಗೆ ಸಂಗ್ರಹ ಇತ್ಯಾದಿ ಕಾರ್ಯಗಳನ್ನು ಈ ಏಜೆನ್ಸಿ ಬ್ಯಾಂಕುಗಳು ಮಾಡುತ್ತವೆ. ಪಿಪಿಎಫ್ ಇತ್ಯಾದಿ ಸರ್ಕಾರಿ ಉಳಿತಾಯ ಯೋಜನೆಗಳನ್ನು ಈ ಬ್ಯಾಂಕುಗಳ ಮೂಲಕ ಮಾಡಲಾಗುತ್ತದೆ.

ಇದನ್ನೂ ಓದಿ: ಅಮೆರಿಕದ ಫೆಡ್ ರಿಸರ್ವ್ ಸಭೆ ಬಳಿಕ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ

ಏಜೆನ್ಸಿ ಸರ್ಕಾರಿ ಬ್ಯಾಂಕುಗಳು

  1. ಬ್ಯಾಂಕ್ ಆಫ್ ಬರೋಡಾ
  2. ಬ್ಯಾಂಕ್ ಆಫ್ ಇಂಡಿಯಾ
  3. ಬ್ಯಾಂಕ್ ಆಫ್ ಮಹಾರಾಷ್ಟ್ರ
  4. ಕೆನರಾ ಬ್ಯಾಂಕ್
  5. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  6. ಇಂಡಿಯನ್ ಬ್ಯಾಂಕ್
  7. ಇಂಡಿಯನ್ ಓವರ್​ಸೀಸ್ ಬ್ಯಾಂಕ್
  8. ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
  9. ಪಂಜಾಬ್ ನ್ಯಾಷನಲ್ ಬ್ಯಾಂಕ್
  10. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  11. ಯುಕೋ ಬ್ಯಾಂಕ್
  12. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಏಜೆನ್ಸಿ ಖಾಸಗಿ ಬ್ಯಾಂಕುಗಳು

  1. ಎಕ್ಸಿಸ್ ಬ್ಯಾಂಕ್
  2. ಸಿಟಿ ಯೂನಿಯನ್ ಬ್ಯಾಂಕ್
  3. ಡಿಸಿಬಿ ಬ್ಯಾಂಕ್
  4. ಫೆಡರಲ್ ಬ್ಯಾಂಕ್
  5. ಎಚ್​ಡಿಎಫ್​ಸಿ ಬ್ಯಾಂಕ್
  6. ಐಸಿಐಸಿಐ ಬ್ಯಾಂಕ್
  7. ಐಡಿಬಿಐ ಬ್ಯಾಂಕ್
  8. ಐಡಿಎಫ್​ಸಿ ಬ್ಯಾಂಕ್
  9. ಇಂಡಸ್​ಇಂಡ್ ಬ್ಯಾಂಕ್
  10. ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್
  11. ಕರ್ಣಾಟಕ ಬ್ಯಾಂಕ್
  12. ಕರೂರ್ ವೈಸ್ಯ ಬ್ಯಾಂಕ್
  13. ಕೋಟಕ್ ಮಹೀಂದ್ರ ಬ್ಯಾಂಕ್
  14. ಆರ್​ಬಿಎಲ್ ಬ್ಯಾಂಕ್
  15. ಸೌತ್ ಇಂಡಿಯನ್ ಬ್ಯಾಂಕ್
  16. ಯೆಸ್ ಬ್ಯಾಂಕ್
  17. ಧನಲಕ್ಷ್ಮೀ ಬ್ಯಾಂಕ್
  18. ಬಂಧನ್ ಬ್ಯಾಂಕ್
  19. ಸಿಎಸ್​ಬಿ ಬ್ಯಾಂಕ್
  20. ತಮಿಳುನಾಡ್ ಮರ್ಸಾಂಟೈಲ್ ಬ್ಯಾಂಕ್
  21. ಡಿಬಿಎಸ್ ಬ್ಯಾಂಕ್

ಇದನ್ನೂ ಓದಿ: ಮೈಕ್ರೋಸಾಫ್ಟ್​ನ ಎಐ ವಿಭಾಗಕ್ಕೆ ಟ್ಯಾಕ್ಸಿ ಚಾಲಕನ ಮಗ ಮುಸ್ತಫಾ ಸಿಇಒ; ಎಐ ತಂತ್ರಜ್ಞಾನದ ನಿಪುಣ ಈತ

ಆದಾಯ ತೆರಿಗೆ ಕಚೇರಿಗಳಿಗೆ 29ರಿಂದ 31ರವರೆಗೆ ಇಲ್ಲ ರಜೆ

ಆದಾಯ ತೆರಿಗೆ ಇಲಾಖೆ ಕೂಡ ವರ್ಷದ ಕೊನೆಯ ಮೂರು ದಿನಗಳಂದು ರಜೆಗಳನ್ನು ರದ್ದು ಮಾಡಿದೆ. ಮಾರ್ಚ್ 29ರಿಂದ 31ರವರೆಗೆ ದೇಶಾದ್ಯಂತ ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ. ಮಾರ್ಚ್ 29 ಶುಕ್ರವಾರ ಮತ್ತು ಮಾರ್ಚ್ 31, ಭಾನುವಾರ ಸಾರ್ವತ್ರಿಕ ರಜೆಗಳಿವೆ. ಆದರೆ, ಈ ಎರಡೂ ದಿನಗಳ ರಜೆಯನ್ನು ರದ್ದು ಮಾಡಲಾಗಿದೆ. ಮಾರ್ಚ್ 26ರಿಂದ 31ರವರೆಗೆ ಐಟಿ ಕಚೇರಿಗಳಿಗೆ ರಜೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?