AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್​​ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ

India prepares to pressurise Pakistan at IMF: ಐಎಂಎಫ್​​ಗೆ ಭಾರತದ ಪ್ರತಿನಿಧಿಯಾಗಿ ಪರಮೇಶ್ವರನ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಮೇ 9ರಂದು ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಐಎಂಎಫ್​​ನಲ್ಲಿ ಭಾರತದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಕೆವಿ ಸುಬ್ರಮಣಿಯನ್ ಅವರನ್ನು ಅವಧಿಗೆ ಮುನ್ನವೇ ಹಿಂಪಡೆಯಲಾಗಿದೆ. ಈಗ ಆ ಸ್ಥಾನಕ್ಕೆ ಆಯ್ಕೆಯಾಗಿರುವ ಅಯ್ಯರ್ ಅವರು ವಿಶ್ವಬ್ಯಾಂಕ್​​​ನಲ್ಲಿ ಭಾರತದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ.

ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್​​ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ
ಪರಮೇಶ್ವರನ್ ಅಯ್ಯರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2025 | 2:56 PM

Share

ನವದೆಹಲಿ, ಮೇ 5: ಐಎಂಎಫ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸ್ಥಾನದಿಂದ ಕೆವಿ ಸುಬ್ರಮಣಿಯನ್ (KV Subramanian) ಹೊರಬಂದ ಬಳಿಕ ಖಾಲಿ ಇರುವ ಅವರ ಜಾಗಕ್ಕೆ ಪರಮೇಶ್ವರನ್ ಅಯ್ಯರ್ (Parameswaran Iyer) ಅವರನ್ನು ಆಯ್ಕೆ ಮಾಡಲಾಗಿದೆ. ಐಎಂಎಫ್​​ನ ಮಂಡಳಿಗೆ ಅಯ್ಯರ್ ಅವರು ಭಾರತದ ನಾಮಿನಿ ಡೈರೆಕ್ಟರ್ ಆಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ವರ್ಲ್ಡ್ ಬ್ಯಾಂಕ್​​ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಪರಮೇಶ್ವರನ್ ಅಯ್ಯರ್ ಅವರಿಗೆ ಐಎಂಎಫ್​​​ನದ್ದು ಹೆಚ್ಚುವರಿ ಜವಾಬ್ದಾರಿಯಾಗಿರುತ್ತದೆ. ಮೇ 9ರಂದು ಮಹತ್ವದ ಐಎಂಎಫ್ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತುರ್ತಾಗಿ ತನ್ನ ಪ್ರತಿನಿಧಿಯನ್ನು ಸೇರಿಸಿದೆ.

ಮೇ 9ರಂದು ನಡೆಯುವ ಐಎಂಎಫ್ ಸಭೆಯ ಮಹತ್ವ ಏನು?

ಐಎಂಎಫ್ ಬಳಿ ಪಾಕಿಸ್ತಾನದ ಎರಡು ಸಾಲಗಳ ಅರ್ಜಿ ವಿಚಾರ ಇದೆ. ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ನೆರವಾಗಲು 1.3 ಬಿಲಿಯನ್ ಡಾಲರ್ ಸಾಲಕ್ಕಾಗಿ ಪಾಕಿಸ್ತಾನ ಒಂದು ಅರ್ಜಿ ಹಾಕಿದೆ. ಹಾಗೆಯೇ, ಪಾಕಿಸ್ತಾನಕ್ಕೆ ನೀಡಲಾಗಿರುವ 7 ಬಿಲಿಯನ್ ಡಾಲರ್ ನೆರವಿನ ಪ್ಯಾಕೇಜ್​​ನ ಮೊದಲ ಪರಾಮರ್ಶೆಯೂ ಇದೆ. ಇವೆರಡೂ ವಿಚಾರಗಳು ಮೇ 9ರಂದು ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಪ್ರಸ್ತಾಪವಾಗಲಿವೆ. ಪಾಕಿಸ್ತಾನಕ್ಕೆ ಸಾಲದ ನೆರವು ನೀಡಬೇಕೋ ಬೇಡವೋ ಎಂಬುದನ್ನು ಅಂದು ನಿರ್ಧರಿಸಲಾಗುತ್ತದೆ.

ಪಹಲ್ಗಾಂನಲ್ಲಿ ಉಗ್ರರ ದಾಳಿ ಘಟನೆ ನಡೆದ ಬಳಿಕ ಪಾಕಿಸ್ತಾನವನ್ನು ಭಾರತ ವಿವಿಧ ಸ್ತರಗಳಲ್ಲಿ ಒತ್ತಡಕ್ಕೆ ಸಿಲುಕಿಸಲು ಯತ್ನಿಸುತ್ತಿದೆ. ಪಾಕಿಸ್ತಾನಕ್ಕೆ ಸಾಲ ನೀಡಿದರೆ ಆ ಹಣವು ಭಯೋತ್ಪಾದನೆಗೆ ದುರ್ಬಳಕೆ ಆಗುತ್ತದೆ ಎಂಬುದು ಭಾರತದ ಆಕ್ಷೇಪ. ಹೀಗಾಗಿ, ಪಾಕಿಸ್ತಾನಕ್ಕೆ ಸಾಲ ಸಿಗದಂತೆ ತೊಡರುಗಾಲು ಹಾಕಲು ಭಾರತ ಯತ್ನಿಸುತ್ತಿದೆ. ಹೀಗಾಗಿ, ಕೆವಿ ಸುಬ್ರಮಣಿಯನ್ ಅವರ ನಿರ್ಗಮನದಿಂದ ತೆರವಾದ ಕಾರ್ಯವಾಹಕ ನಿರ್ದೇಶಕ ಸ್ಥಾನಕ್ಕೆ ಪರಮೇಶ್ವರನ್ ಅಯ್ಯರ್ ಅವರನ್ನು ತುರ್ತಾಗಿ ಮತ್ತು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ
Image
38,000 ಕೋಟಿ ರೂ ಭೂಷಣ್ ಪವರ್ ಹಗರಣ, ಏನಿದು?
Image
ಯುದ್ಧಕ್ಕೆ ನಿಂತ್ರೆ ಪಾಕಿಸ್ತಾನ ಬದುಕೋದು 4 ದಿನ ಮಾತ್ರ?
Image
ಪಾಕಿಸ್ತಾನ ವಿರುದ್ಧ ಒಂದೇ ದಿನ 3 ಅಸ್ತ್ರ ಬಿಟ್ಟ ಭಾರತ
Image
ಪಾಕಿಸ್ತಾನಕ್ಕೆ ಸಾಲ ಬೇಡ: ಐಎಂಎಫ್​​ಗೆ ಭಾರತ ಮನವಿ

ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ: ಐಎಂಎಫ್​​​ಗೆ ಭಾರತ ಮನವಿ; ಈ ಸಾಲ ತಪ್ಪಿದರೆ ಪಾಕಿಸ್ತಾನಕ್ಕೆ ಏನು ಸಮಸ್ಯೆ?

ಈ ಮುಂಚೆ ಐಎಂಎಫ್​​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸ್ಥಾನದಲ್ಲಿದ್ದ ಕೆವಿ ಸುಬ್ರಮಣಿಯನ್ ಅವರ ಅವಧಿ ಮುಗಿಯಲು ಇನ್ನೂ ಆರು ತಿಂಗಳಿತ್ತು. ಆದರೆ, ಭಾರತವು ಅವರನ್ನು ಹಿಂಪಡೆದುಕೊಂಡಿದ್ದು ಯಾಕೆ ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಕೆಲ ಮಾಧ್ಯಮಗಳಲ್ಲಿ ಬಂದ ಮಾಹಿತಿ ಪ್ರಕಾರ, ಕೆವಿ ಸುಬ್ರಮಣಿಯನ್ ಅವರು ಐಎಂಎಫ್​​ನ ದತ್ತಾಂಶ ಸಂಗ್ರಹ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು, ಅಪಸ್ವರ ಎತ್ತಿದ್ದರು. ಇದು ಐಎಂಎಫ್​​ನ ಮುಂದಾಳುಗಳಿಗೆ ಪಥ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಐಎಂಎಫ್ ಕಾರ್ಯವಾಹಕ ಮಂಡಳಿ ಸಭೆಯಲ್ಲಿ ಭಾರತದ ಪ್ರತಿನಿಧಿ ಇಲ್ಲದೇ ಹೋಗಿದ್ದರೆ ಶ್ರೀಲಂಕಾದ ಹರಿಷ್ಚಂದ್ರ ಗೆದರ ಅವರು ಕರ್ತವ್ಯ ನಿಭಾಯಿಸುತ್ತಿದ್ದರು.

ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಯಾರು ಇರುತ್ತಾರೆ?

ಐಎಂಎಫ್ ಬೋರ್ಡ್​​​ನಲ್ಲಿ 25 ಎಕ್ಸಿಕ್ಯೂಟಿವ್ ಡೈರೆಕ್ಟರ್​​​ಗಳು ಇದ್ದಾರೆ. ಅಮೆರಿಕ, ಜಪಾನ್, ಚೀನಾ, ಜರ್ಮನಿ, ಫ್ರಾನ್ಸ್, ಬ್ರಿಟನ್, ಸೌದಿ ಅರೇಬಿಯಾ, ರಷ್ಯಾ ದೇಶಗಳು ಸ್ವತಂತ್ರ ಎಕ್ಸಿಕ್ಯೂಟಿವ್ ಡೈರೆಕ್ಟರ್ಸ್ ಹೊಂದಿವೆ. ಉಳಿದ ನಿರ್ದೇಶಕರು ಬೇರೆ ಬೇರೆ ಸಮೂಹಗಳನ್ನು ಪ್ರತಿನಿಧಿಸುತ್ತಾರೆ.

ಉದಾಹರಣೆಗೆ, ಸೌತ್ ಏಷ್ಯಾ ಕ್ಷೇತ್ರದಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭೂತಾನ್ ದೇಶಗಳಿವೆ. ಈ ನಾಲ್ಕು ದೇಶಗಳನ್ನು ಭಾರತದ ಸದಸ್ಯರೊಬ್ಬರು ಐಎಂಎಫ್​​​ನಲ್ಲಿ ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ

ಹಾಗೆಯೇ, ಪಾಕಿಸ್ತಾನ ಇರುವ ಗುಂಪಿನಲ್ಲಿ ಇರಾನ್, ಆಲ್ಜೀರಿಯಾ, ಮೊರಾಕ್ಕೋ, ಟುನಿಶಿಯಾ, ಅಫ್ಘಾನಿಸ್ತಾನ್, ಘಾನಾ ಮತ್ತು ಲಿಬಿಯಾ ಇವೆ.

ಒಟ್ಟಾರೆ ಅಮೆರಿಕದ ಮತಕ್ಕೆ ಅತಿಹೆಚ್ಚು ವೈಟೇಜ್ ಇದೆ. ಶೇ. 16.49ರಷ್ಟು ವೇಟೇಜ್ ಇದೆ. ನಂತರದ ಸ್ಥಾನ ಶೇ. 6.14ರಷ್ಟು ವೈಟೇಜ್ ಇರುವ ಜಪಾನ್ ಬರುತ್ತದೆ. ಚೀನಾ ಶೇ. 6.08, ಜರ್ಮನಿ ಶೇ. 5.31, ಫ್ರಾನ್ಸ್ ಶೇ. 4.03, ಯುಕೆ ಶೇ. 4.03 ವೇಟೇಜ್ ಹೊಂದಿವೆ. ಭಾರತ ಪ್ರತಿನಿಧಿಸುವ ಸೌತ್ ಏಷ್ಯಾ ಬ್ಲಾಕ್​​ನ ವೈಟೇಜ್ ಶೇ. 3.05 ಇದೆ.

ಇಲ್ಲಿ ಪಾಕಿಸ್ತಾನಕ್ಕೆ ಸಾಲ ಮಂಜೂರು ಆಗಬೇಕೆಂದರೆ ಮತದಾನದಲ್ಲಿ ಸರಳ ಬಹುಮತ ಸಿಕ್ಕರೆ ಸಾಕಾಗಬಹುದು. ಈಗ ಅಂತಾರಾಷ್ಟ್ರೀಯ ಸ್ತರದಲ್ಲಿ ಪಾಕಿಸ್ತಾನದ ಉಗ್ರಪರ ಚಟುವಟಿಕೆಗಳ ಬಗ್ಗೆ ಭಾರತ ಸಾಕಷ್ಟು ಧ್ವನಿ ಎತ್ತುತ್ತಿದ್ದು, ಇದು ಐಎಂಎಫ್​​ನ ಮೇ 9ರ ಸಭೆಯಲ್ಲಿ ಪರಿಣಾಮ ಬೀರದೇ ಇರಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ