AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಲರಿ ಸ್ಲಿಪ್​ನಲ್ಲಿರುವ ಎಚ್​ಆರ್​ಎ ಮತ್ತು ಅದರ ಟ್ಯಾಕ್ಸ್ ಸೇವಿಂಗ್ ವಿಧಾನ ತಿಳಿಯಿರಿ

HRA as tax saving instrument: ತೆರಿಗೆ ಉಳಿಸುವ ಅಥವಾ ಟ್ಯಾಕ್ಸ್ ಡಿಡಕ್ಷನ್ ಅವಕಾಶಗಳಲ್ಲಿ ಎಚ್​ಆರ್​ಎ ಕೂಡ ಒಂದು. ಈ ಹೌಸ್ ರೆಂಟ್ ಅಲೋಯನ್ಸ್ ಎಂಬುದು ಸಂಬಳದಾರನ ಸ್ಯಾಲರಿ ಸ್ಟ್ರಕ್ಚರ್​ನಲ್ಲಿ ಇರುತ್ತದೆ. ಹಾಗೊಂದು ವೇಳೆ ಅದಿಲ್ಲದಿದ್ದರೆ ಎಚ್​ಆರ್​ಎ ಟ್ಯಾಕ್ಸ್ ಎಕ್ಸೆಂಪ್ಷನ್ ಸಿಗುವುದಿಲ್ಲ. ರೆಂಟಲ್ ರೆಸಿಪ್ಟ್ಸ್ ದಾಖಲೆ ಬಹಳ ಮುಖ್ಯ. ಬಾಡಿಗೆ ಕರಾರು ಪತ್ರದ ದಾಖಲೆ ಸಲ್ಲಿಸಬೇಕಾಗಬಹುದು.

ಸ್ಯಾಲರಿ ಸ್ಲಿಪ್​ನಲ್ಲಿರುವ ಎಚ್​ಆರ್​ಎ ಮತ್ತು ಅದರ ಟ್ಯಾಕ್ಸ್ ಸೇವಿಂಗ್ ವಿಧಾನ ತಿಳಿಯಿರಿ
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2024 | 11:33 AM

Share

ಬೆಂಗಳೂರು, ಜುಲೈ 18: ಐಟಿ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ಎಚ್​ಆರ್​ಎ ವಿಚಾರ ಬಹಳ ಜನರ ಗಮನ ಸೆಳೆಯುತ್ತದೆ. ಇದು ಹೌಸ್ ರೆಂಟ್ ಅಲೋಯನ್ಸ್ ಅಥವಾ ಮನೆ ಬಾಡಿಗೆ ಭತ್ಯೆ. ಈ ಎಚ್​ಆರ್​ಎಗೆ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಹೀಗಾಗಿ, ನಿಮ್ಮ ಒಟ್ಟಾರೆ ಟ್ಯಾಕ್ಸಬಲ್ ಇನ್ಕಮ್​ನಲ್ಲಿ ಒಂದಷ್ಟು ರಿಯಾಯಿತಿ ಸಿಗಲು ಅವಕಾಶ ಒದಗಿಸುತ್ತದೆ. ಎಚ್​ಆರ್​ಎ ಎಂಬುದು ಎಲ್ಲರಿಗೂ ಸಿಗುವುದಿಲ್ಲ. ನಿಮ್ಮ ಉದ್ಯೋಗದಲ್ಲಿ ಸ್ಯಾಲರಿ ಸ್ಟ್ರಕ್ಚರ್​ನಲ್ಲಿ ಅದು ಇದ್ದರೆ ಸೌಲಭ್ಯ ಪಡೆಯಬಹುದು.

ಇಡೀ ಎಚ್​ಆರ್​ಎ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಸಿಗುವುದಿಲ್ಲ ಎಂಬುದು ಗೊತ್ತಿರಲಿ. ಎಷ್ಟು ಡಿಡಕ್ಷನ್ ಸಿಗುತ್ತದೆ ಎಂಬುದಕ್ಕೆ ಕೆಲ ಮಾನದಂಡಗಳಿವೆ. ಈ ಕೆಳಗೆ ಇರುವ ಪಟ್ಟಿಯಲ್ಲಿ ಅತೀ ಕಡಿಮೆ ಮೊತ್ತ ಯಾವುದು ಇರುತ್ತೋ ಅಷ್ಟು ಮಾತ್ರವೇ ಎಚ್​ಆರ್​ಎ ಟ್ಯಾಕ್ಸ್ ಡಿಡಕ್ಷನ್​ಗೆ ಅವಕಾಶ ಇರುತ್ತದೆ. ಇಲ್ಲಿದೆ ಆ ಪಟ್ಟಿ:

  1. ನಿಮ್ಮ ಸಂಬಳದಲ್ಲಿ ನಮೂದಾಗಿರುವ ಇರುವ ಎಚ್​ಆರ್​ಎ ಮೊತ್ತ
  2. ನೀವು ಕಟ್ಟುತ್ತಿರುವ ಮನೆ ಬಾಡಿಗೆ ಹಣ ಮತ್ತು ನಿಮ್ಮ ಶೇ. 10ರಷ್ಟು ಸಂಬಳ
  3. ನಿಮ್ಮ ನಗರದಲ್ಲಿರುವ ಎಚ್​ಆರ್​ಎ ಮಿತಿ

ಇದನ್ನೂ ಓದಿ: ನೀವು ನಕಲಿ ರೆಂಟ್ ರೆಸಿಪ್ಟ್ ಸಲ್ಲಿಸಿದ್ರೆ ಸರ್ಕಾರಕ್ಕೆ ಗೊತ್ತಾಗುತ್ತೆ ಹುಷಾರ್..! ಇಲಾಖೆ ನೆರವಿಗೆ ಎಐ ಟೆಕ್ನಾಲಜಿ

ಇಲ್ಲಿ ಎರಡನೇ ಅಂಶವನ್ನು ನೋಡುವುದಾದರೆ, ನಿಮ್ಮ ಸಂಬಳ 50,000 ರೂ ಎಂದಿಟ್ಟುಕೊಳ್ಳಿ. ಶೇ. 10 ಎಂದರೆ 5,000 ರೂ ಆಗುತ್ತದೆ. ನೀವು ಕಟ್ಟುತ್ತಿರುವ ಮನೆ ಬಾಡಿಗೆ ಮೊತ್ತ 12,000 ರೂ ಆಗಿತ್ತೆಂದರೆ ಆಗ 12,000 – 5,000 = 7,000 ರೂ ಆಗುತ್ತದೆ. ವರ್ಷಕ್ಕೆ 84,000 ರೂ ಆಗುತ್ತದೆ.

ಇನ್ನು, ಮೂರನೇ ಅಂಶ ನೋಡುವುದಾದರೆ, ನಾಲ್ಕು ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಕೆಲಸ ಮಾಡುವವರ ಬೇಸಿಕ್ ಸ್ಯಾಲರಿಯ ಶೇ 50ರಷ್ಟು ಮೊತ್ತ ಮತ್ತು ಡಿಎ ಹಣವು ಎಚ್​ಆರ್​ಎ ಮಿತಿ ಆಗಿರುತ್ತದೆ.

ಬೆಂಗಳೂರು ಇತ್ಯಾದಿ ಮೆಟ್ರೋ ಅಲ್ಲದ ನಗರಗಳ ಸಂಬಳದಾರರ ಶೇ. 40ರಷ್ಟು ಮೂಲ ಸಂಬಳ ಮತ್ತು ಡಿಎ ಮೊತ್ತವನ್ನು ಎಚ್​ಆರ್​ಎ ಲಿಮಿಟ್ ಎಂದು ಪರಿಗಣಿಸಲಾಗುತ್ತದೆ.

ಎಚ್​ಆರ್​ಎ ಡಿಡಕ್ಷನ್ ಕ್ಲೇಮ್ ಮಾಡಲು ಈ ದಾಖಲೆಗಳು ಬೇಕಾಗಬಹುದು

  • ರೆಂಟ್ ಅಗ್ರೀಮೆಂಟ್
  • ರೆಂಟ್ ರೆಸಿಪ್ಟ್ಸ್
  • ಮನೆ ಮಾಲಕರ ಪ್ಯಾನ್ ಕಾರ್ಡ್
  • ಪಾವತಿಗೆ ದಾಖಲೆ

ಇದನ್ನೂ ಓದಿ: ಆದಾಯ ತೆರಿಗೆ ಸ್ಲ್ಯಾಬ್ ದರ, ಎಕ್ಸೆಂಪ್ಷನ್ ಮಿತಿಯಲ್ಲಿ ಬದಲಾವಣೆ ನಿರೀಕ್ಷಿಸುತ್ತಿರುವವರಿಗೆ ಕಾದಿದೆ ನಿರಾಸೆ

ಮನೆ ಬಾಡಿಗೆ ವರ್ಷಕ್ಕೆ ಒಂದು ಲಕ್ಷ ರೂಗಿಂತ ಕಡಿಮೆ ಇದ್ದರೆ ಮನೆ ಮಾಲೀಕರ ಪ್ಯಾನ್ ಕಾರ್ಡ್ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಒಂದು ಲಕ್ಷ ಹಾಗೂ ಅಧಿಕ ಬಾಡಿಗೆ ಇದ್ದರೆ ಪ್ಯಾನ್ ಕಾರ್ಡ್ ಕೊಡಬೇಕಾಗುತ್ತದೆ. ನೀವು ಕ್ಯಾಷ್​ನಲ್ಲಿ ಹಣ ಕೊಟ್ಟಿದ್ದರೆ ರೆಂಟ್ ರೆಸಿಪ್ಟ್ ಅತ್ಯವಶ್ಯ. ಇಲ್ಲದಿದ್ದರೆ ಆನ್ಲೈನ್​ನಲ್ಲಿ ಹಣ ಪಾವತಿಸಿರುವುದಕ್ಕೆ ಪೇಮೆಂಟ್ ದಾಖಲಾತಿ ಕೊಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ