ಗಳಿಸಿದ ಹಣ ನಿಲ್ಲುತ್ತಿಲ್ಲವಾ? ನಾವು ಮಾಡುವ ಪ್ರಮುಖ ಹಣಕಾಸು ತಪ್ಪುಗಳೇನು? ಇದಕ್ಕೆ ಪರಿಹಾರವೇನು? ಇಲ್ಲಿದೆ ಅಮೂಲ್ಯ ಮಾಹಿತಿ

4 Points of Wealth Management: ಹಣ ಉಳಿಸುವುದು ಹಣ ಗಳಿಸುವುದಕ್ಕೆ ಸಮ ಎನ್ನುತ್ತಾರೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ನೀವು ಉಳಿಸುವ ಒಂದೊಂದು ಪೈಸೆಯೂ ಬಹಳ ಮುಖ್ಯ ಆಗುತ್ತದೆ. ಇದು ನಿಮಗೆ ದೀರ್ಘಾವಧಿಯಲ್ಲಿ ತಿಳಿಯುವ ಸತ್ಯ. ಹಣದ ನಿರ್ವಹಣೆಗೆ ತಜ್ಞರು 4 ಅಂಶಗಳ ಸೂತ್ರ ಹೇಳುವುದುಂಟು. ಈ ಅಂಶಗಳನ್ನು ಗಣನೆಯಲ್ಲಿಟ್ಟುಕೊಂಡರೆ ಜೀವನ ಬಹುತೇಕ ದುಗುಡ ದುಮ್ಮಾನಗಳಿಂದ ದೂರ ಇರಬಹುದು.

ಗಳಿಸಿದ ಹಣ ನಿಲ್ಲುತ್ತಿಲ್ಲವಾ? ನಾವು ಮಾಡುವ ಪ್ರಮುಖ ಹಣಕಾಸು ತಪ್ಪುಗಳೇನು? ಇದಕ್ಕೆ ಪರಿಹಾರವೇನು? ಇಲ್ಲಿದೆ ಅಮೂಲ್ಯ ಮಾಹಿತಿ
ಹಣ
Follow us
|

Updated on: Sep 01, 2023 | 3:50 PM

ಹಣಕಾಸು ನಿಭಾಯಿಸುವುದು (Wealth Management) ಬಹಳ ಬುದ್ಧಿವಂತಿಕೆಯ ಕಾರ್ಯ. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ಅನ್ನೋ ಗಾದೆ ಮಾತಿನಂತೆ, ನೀವು ವರ್ಷಗಟ್ಟಲೆ ಕಷ್ಟಪಟ್ಟು ಕೂಡಿಟ್ಟ ಹಣ, ಕ್ಷಣಿಕ ಆಸೆಗಳಿಗೆ, ಅಥವಾ ಅನಿರೀಕ್ಷಿತ ಸಂದರ್ಭಗಳಿಗೆ ಸಂಪೂರ್ಣ ಕರಗಿ ಹೋಗಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಬಹಳಷ್ಟು ಜನರು ಸಂಬಳ ಇತ್ಯಾದಿ ಸಾಕಷ್ಟು ಆದಾಯ ಪಡೆಯುತ್ತಿದ್ದರೂ ಅವರ ಸ್ಥಿತಿ ಮಟ್ಟಕ್ಕೆ ಸಮೀಪವೇ ಇರುತ್ತದೆ. ಯಾವ್ಯಾವುದೋ ದಿಢೀರ್ ವೆಚ್ಚ ವಕ್ಕರಿಸಿ ಜೀವನೋತ್ಸಾಹವನ್ನೇ ಕಳೆದುಕೊಳ್ಳುವುದುಂಟು. ಇನ್ನು ಕೆಲವರು, ಕಡಿಮೆ ಸಂಬಳ ಇದ್ದರೂ ಸಾಕಷ್ಟು ಹಣ ಉಳಿಸಿ ಮನೆ, ಮದುವೆ ಇತ್ಯಾದಿ ಜವಾಬ್ದಾರಿಗಳನ್ನು ಪೂರೈಸುತ್ತಾರೆ. ಅದು ಹೇಗೆ ಸಾಧ್ಯ? ಹಣದ ನಿರ್ವಹಣೆ ಸಮಯೋಚಿತವಾಗಿದ್ದರೆ, ಸಮರ್ಪಕವಾಗಿದ್ದರೆ ಇದು ಸಾಧ್ಯ.

ಹಣ ನಿರ್ವಹಣೆಗೆ 4 ಅಂಶಗಳ ಸೂತ್ರ

  1. ಹಣ ಗಳಿಕೆ
  2. ಹಣ ಉಳಿತಾಯ
  3. ಹಣಕ್ಕೆ ರಕ್ಷಣೆ
  4. ಹಣದಿಂದ ಹಣ ಬೆಳೆಸುವಿಕೆ

ಇಲ್ಲಿ ಹಣ ಗಳಿಕೆ ಎಂಬುದು ಸಂಬಳ, ಉದ್ದಿಮೆ ಇತ್ಯಾದಿ ಮೂಲಕ ಹಣ ಸಂಪಾದಿಸುವುದು. ಎರಡನೆ ಅಂಶವಾದ ಹಣ ಉಳಿತಾಯ ಎಂದರೆ, ವೆಚ್ಚವನ್ನು ನಿಯಂತ್ರಿಸಿ ಸಾಧ್ಯವಾದಷ್ಟು ಹಣ ಉಳಿತಾಯ ಮಾಡುವುದು. ಇನ್ನು, ಮೂರನೇ ಅಂಶವಾದ ಹಣಕ್ಕೆ ರಕ್ಷಣೆ ಎಂದರೆ ಅದು ಆರೋಗ್ಯ ಮತ್ತು ಜೀವ ವಿಮೆ ಎಂದು ಭಾವಿಸಬಹುದು. ಆರೋಗ್ಯ ಸಮಸ್ಯೆ ಇತ್ಯಾದಿ ಅನಿರೀಕ್ಷಿತ ಅವಘಡಗಳು ಬಂದುಬಿಟ್ಟರೆ ನಮ್ಮ ಹಣ ಬಹುತೇಕ ಕರಗಿಹೋಗಿಬಿಡಬಹುದು. ಹೀಗಾಗಿ, ಇನ್ಷೂರೆನ್ಸ್ ಬಹಳ ಮುಖ್ಯ.

ಇದನ್ನೂ ಓದಿ: ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ? ತಿಳಿಯುವ ಸುಲಭ ವಿಧಾನ ಇಲ್ಲಿದೆ

ಇನ್ನು, ನಾಲ್ಕನೇ ಅಂಶವು ನಮ್ಮ ಸಂಪತ್ತನ್ನು ಬಳಸಿ ಅದರಿಂದ ಆದಾಯ ವೃದ್ಧಿಸುವುದು. ಮ್ಯೂಚುವಲ್ ಫಂಡ್, ಪಿಪಿಎಫ್, ಎಫ್​ಡಿ ಇತ್ಯಾದಿ ಸಾಧನಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಅದರಿಂದ ಗರಿಷ್ಠ ಲಾಭ ಪಡೆಯಲು ಯತ್ನಿಸುವುದು.

ಈ ಮೂರೂ ಅಂಶಗಳು ಸಮರ್ಪಕವಾಗಿ ಚಾಲನೆಯಲ್ಲಿದ್ದರೆ ಜೀವನದಲ್ಲಿ ಹೆಚ್ಚು ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ.

ಗಳಿಸಿದ ಹಣ ನಿಲ್ಲುತ್ತಿಲ್ಲ, ಏನು ಮಾಡುವುದು?

ನಿಮಗೆ ಸಾಕಷ್ಟು ಮೊತ್ತದ ಸಂಬಳ ಬರುತ್ತಿದ್ದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲವಲ್ಲ ಎಂದನಿಸಬಹುದು. ಅದಕ್ಕೆ ಕಾರಣ ನಿಮ್ಮ ವೆಚ್ಚದ ಮೇಲೆ ನಿಮಗೆ ಹಿಡಿತ ಇಲ್ಲದೇ ಇರುವುದು. ಅದಕ್ಕೆ ನಿಮ್ಮ ದೈನಂದಿನ ವೆಚ್ಚದ ಪೈಸೆ ಪೈಸೆ ಲೆಕ್ಕವನ್ನೂ ಬರೆದಿಟ್ಟುಕೊಳ್ಳಿ. ತಿಂಗಳ ಕೊನೆಯಲ್ಲಿ ಎಲ್ಲಾ ವೆಚ್ಚಗಳನ್ನು ಕ್ರೋಢೀಕರಿಸಿ, ವರ್ಗೀಕರಿಸಿ ನೋಡಿ. ಯಾವ್ಯಾವ ವೆಚ್ಚಕ್ಕೆ ಎಷ್ಟು ಖರ್ಚಾಗಿದೆ ಎಂಬ ನಿಖರ ಲೆಕ್ಕ ನಿಮಗೆ ಸಿಗುತ್ತದೆ. ಅದರಲ್ಲಿ ಆದ್ಯತೆ ಅಲ್ಲದವುಗಳಿಗೆ ವೆಚ್ಚ ನಿಲ್ಲಿಸಿ.

ಇದನ್ನೂ ಓದಿ: Maternity Insurance: ಮಾತೃತ್ವದ ವಿಮೆ ಎಷ್ಟು ಲಾಭದಾಯಕ? ಯಾವುದು ಅತ್ಯುತ್ತಮ ಆಯ್ಕೆ?

ತಿಂಗಳಿಗೆ 5,000 ರೂ ಉಳಿಸಿದರೂ ಅದು ನಿಜಕ್ಕೂ ಉಪಯುಕ್ತ ಎನಿಸುತ್ತದೆ. ಹಾಗೆಯೇ, ನಿಮ್ಮ ಮೇಲೆ ಅವಲಂಬಿತರಾಗಿರುವವರೆಲ್ಲರಿಗೂ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಲು ಮರೆಯದಿರಿ.

ಇನ್ನು ನಿಮ್ಮ ಹೆಚ್ಚಿನ ಉಳಿತಾಯ ಹಣವನ್ನು ಮ್ಯೂಚುವಲ್ ಫಂಡ್ ಎಸ್​ಐಪಿ ಇತ್ಯಾದಿಗೆ ಹೂಡಿಕೆ ಮಾಡಿ. ಹಾಗೆಯೇ, ಪಿಪಿಎಫ್ ಇತ್ಯಾದಿ ಯೋಜನೆಗಳಲ್ಲೂ ಒಂದಷ್ಟು ಪ್ರಮಾಣದ ಉಳಿತಾಯ ಹಣ ಹಾಕಬಹುದು. ಎಂಎಫ್​ಗಳಿಂದ ವರ್ಷಕ್ಕೆ 10ಕ್ಕಿಂತಲೂ ಹೆಚ್ಚು ರಿಟರ್ನ್ಸ್ ನಿರೀಕ್ಷಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ