AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SGB: ಎಫ್​ಡಿ, ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ಕೊಡುವ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ವಿವರ

Sovereign Gold Bond 2023-24 Series IV: ಸಾವರನ್ ಗೋಲ್ಡ್ ಬಾಂಡ್ ಬಹಳ ಹೆಚ್ಚು ಲಾಭ ತರುವಂತಹ ಹೂಡಿಕೆ ಯೋಜನೆಯಾಗಿದೆ. ಚಿನ್ನದ ಬೆಲೆ ಏರಿಕೆಗೆ ಅನುಗುಣವಾಗಿ ಹೂಡಿಕೆಯ ಮೌಲ್ಯ ಬೆಳೆಯುತ್ತದೆ. ಎಸ್​ಜಿಬಿ ಸ್ಕೀಮ್​ನಲ್ಲಿ ಒಂದು ಹಣಕಾಸು ವರ್ಷದಲ್ಲಿ ಎಷ್ಟು ಬೇಕಾದರೂ ಬಾಂಡ್ ಪಡೆಯಬಹುದಾದರೂ ಒಟ್ಟು ಹೂಡಿಕೆ 4 ಕಿಲೋ ಮೀರಬಾರದು. ಆನ್​ಲೈನ್​ನಲ್ಲಿ ಹಣ ಪಾವತಿಸಿದರೆ ಗ್ರಾಮ್​​ಗೆ 50 ರೂ ರಿಯಾಯಿತಿ ಇರುತ್ತದೆ. ಬ್ಯಾಂಕ್​ನ ನೆಟ್​ಬ್ಯಾಂಕಿಂಗ್​ಗೆ ಹೋಗಿ ಗೋಲ್ಡ್ ಬಾಂಡ್ ಖರೀದಿಸಬಹುದು.

SGB: ಎಫ್​ಡಿ, ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ಕೊಡುವ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ವಿವರ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 13, 2024 | 3:12 PM

Share

ಸಾವರನ್ ಗೋಲ್ಡ್ ಬಾಂಡ್ ಯೋಜನೆ ನಿರೀಕ್ಷೆಯಂತೆ ಉತ್ತಮ ಲಾಭ ತಂದುಕೊಡುತ್ತಿದೆ. 2015ರಲ್ಲಿ ಶುರುವಾದ ಈ ಸ್ಕೀಮ್​ನಲ್ಲಿ ಎರಡು ಸರಣಿಗಳು ಈಗಾಗಲೇ ಮೆಚ್ಯೂರ್ ಆಗಿದ್ದು ತನ್ನ ಹೂಡಿಕೆದಾರರಿಗೆ ವಾರ್ಷಿಕ ಶೇ. 11ಕ್ಕಿಂತಲೂ ಹೆಚ್ಚು ಲಾಭ ತಂದುಕೊಟ್ಟಿವೆ. ಈಗ ನಿನ್ನೆಯಿಂದ (ಫೆ. 12) 2023-24ರ ಸಾಲಿನ ನಾಲ್ಕನೇ ಸರಣಿಯ ಬಾಂಡ್​ಗಳನ್ನು ವಿತರಿಸಲಾಗುತ್ತಿದೆ. ಆರ್​ಬಿಐ ಮೂಲಕ ಸರ್ಕಾರ ನಿರ್ವಹಿಸುವ ಸಾವರನ್ ಗೋಲ್ಡ್ ಬಾಂಡ್​ನಲ್ಲಿ (Sovereign Gold Bond) ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 4 ಕಿಲೋ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಎಂಟು ವರ್ಷಕ್ಕೆ ಬಾಂಡ್ ಮೆಚ್ಯೂರ್ ಆಗುವಾಗ ಚಿನ್ನದ ಬೆಲೆ ಎಷ್ಟಿರುತ್ತದೋ ಅದಕ್ಕೆ ಅನುಗುಣವಾಗಿ ಹೂಡಿಕೆಯ ಮೌಲ್ಯ ಹೆಚ್ಚಿರುತ್ತದೆ. ಚಿನ್ನದ ಬೆಲೆ ಏರಿದಷ್ಟೂ ಲಾಭ ಹೆಚ್ಚುತ್ತದೆ.

ಸಾವರನ್ ಗೋಲ್ಡ್ ಬಾಂಡ್​ನಲ್ಲಿ ಚಿನ್ನದ ಬೆಲೆ ನಿಗದಿಯಾಗುವುದು ಹೇಗೆ?

ಸಾವರನ್ ಗೋಲ್ಡ್ ಬಾಂಡ್​ನ ಈ ಬಾರಿಯ ಸರಣಿಯಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 6,263 ರೂ ಎಂದು ನಿಗದಿ ಮಾಡಲಾಗಿದೆ. ಬಾಂಡ್ ಸಬ್​ಸ್ಕ್ರಿಪ್ಷನ್ ಆರಂಭಕ್ಕೆ ಹಿಂದಿನ ವಾರದಲ್ಲಿ ಕೊನೆಯ ಮೂರು ಕಾರ್ಯ ದಿನಗಳಲ್ಲಿನ ಸರಾಸರಿ ಚಿನ್ನದ ಬೆಲೆಯನ್ನು ಆಯ್ಕೆ ಮಾಡಲಾಗುತ್ತದೆ. ಅಂದರೆ ಫೆಬ್ರುವರಿ 7, 8 ಮತ್ತು 9ನೇ ತಾರೀಖಿನಲ್ಲಿದ್ದ 24 ಕ್ಯಾರಟ್ ಚಿನ್ನದ ಬೆಲೆಯ ಸರಾಸರಿ ಗಣಿಸಿ ಬಾಂಡ್ ಬೆಲೆ ನಿಗದಿ ಮಾಡಲಾಗಿದೆ.

ಸಾವರನ್ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ?

ಆಫ್​ಲೈನ್ ಮತ್ತು ಆನ್​ಲೈನ್ ಎರಡೂ ಕಡೆಯಿಂದ ಗೋಲ್ಡ್ ಬಾಂಡ್ ಖರೀದಿಸುವ ಅವಕಾಶ ಇರುತ್ತದೆ. ಎಲ್ಲಾ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್, ಶೆಡ್ಯೂಲ್ಡ್ ಫಾರೀನ್ ಬ್ಯಾಂಕ್, ಅಂಚೆ ಕಚೇರಿ, ಷೇರು ವಿನಿಮಯ ಕೇಂದ್ರಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ (ಎಸ್​ಎಚ್​ಸಿಐಎಲ್) ಮೂಲಕ ಸಾವರನ್ ಗೋಲ್ಡ್ ಬಾಂಡ್ ಖರೀದಿಸಬಹುದು.

ಇದನ್ನೂ ಓದಿ: ಶೇ. 13.6ರಷ್ಟು ರಿಟರ್ನ್; ಈಕ್ವಿಟಿಗಿಂತಲೂ ಹೆಚ್ಚು ಲಾಭ ಕೊಟ್ಟಿದೆ 2016ರ ಸಾವರನ್ ಗೋಲ್ಡ್ ಬಾಂಡ್ ಪ್ಲಾನ್

ಬ್ಯಾಂಕು ಅಥವಾ ಅಂಚೆ ಕಚೇರಿಗೆ ಹೋಗಿ ಇದರ ಒಂದು ಅರ್ಜಿಯನ್ನು ಪಡೆದು ಭರ್ತಿ ಮಾಡಿ ಕೊಡಬೇಕಾಗುತ್ತದೆ. ಆರ್​ಬಿಐ ವೆಬ್​ಸೈಟ್​ನಲ್ಲೂ ಈ ಅರ್ಜಿ ಇದ್ದು ಅದನ್ನು ಡೌನ್​ಲೋಡ್ ಮಾಡಿ, ಭರ್ತಿ ಮಾಡಿ ಬ್ಯಾಂಕು ಅಥವಾ ಅಂಚೆ ಕಚೇರಿಯಲ್ಲಿ ಕೊಡಬೇಕು. ಅರ್ಜಿ ಡೌನ್​ಲೋಡ್ ಲಿಂಕ್ ಇಲ್ಲಿದೆ: rbidocs.rbi.org.in/rdocs/content/pdfs/INS181213AF.pdf

ಆಧಾರ್ ಮತ್ತು ಪ್ಯಾನ್ ಕಾರ್ಡ್ ಪ್ರತಿಗಳನ್ನು ಜೊತೆಗೆ ನೀಡಬೇಕು. ಅರ್ಜಿಯಲ್ಲಿ ನಾಮಿನಿ ಹೆಸರಿಸುವುದು ಕಡ್ಡಾಯ ಇರುತ್ತದೆ.

ಆನ್​ಲೈನ್​ನಲ್ಲಿ ಗೋಲ್ಡ್ ಬಾಂಡ್ ಪಡೆಯುವುದು ಹೇಗೆ?

  • ನೀವು ಬ್ಯಾಂಕ್​ನ ನೆಟ್​ಬ್ಯಾಂಕಿಂಗ್ ಪೋರ್ಟಲ್​ಗೆ ಲಾಗಿನ್ ಆಗಿ.
  • ಇಸರ್ವಿಸಸ್ ಸೆಕ್ಷನ್ ಕ್ಲಿಕ್ ಮಾಡಿ
  • ಅದರಲ್ಲಿ ಸಾವರನ್ ಗೋಲ್ಡ್ ಬಾಂಡ್ ಎಂಬ ಆಯ್ಕೆ ಆರಿಸಿಕೊಳ್ಳಿ.
  • ನಿಬಂಧನೆಗಳಿಗೆ ಒಪ್ಪಿಗೆ ತಿಳಿಸಿ ಪ್ರೊಸೀಡ್ ಕೊಡಿ.
  • ನೊಂದಣಿ ಪ್ರಕ್ರಿಯೆ ಮುಗಿದ ಬಳಿಕ ಸಬ್ಮಿಟ್ ಕ್ಲಿಕ್ ಮಾಡಿ.
  • ಎಷ್ಟು ಗ್ರಾಮ್ ಚಿನ್ನ ಬೇಕೆಂದು ನಮೂದಿಸಿ, ನಾಮಿನಿ ಹೆಸರಿಸಿ.
  • ಅಂತಿಮವಾಗಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.

ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್​ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ

ಇಲ್ಲಿಗೆ ನೀವು ಸಾವರಿನ್ ಗೋಲ್ಡ್ ಬಾಂಡ್ ಚಂದಾರಾಗುತ್ತೀರಿ. ಗಮನಿಸಿ, ನೀವು ಒಂದು ಹಣಕಾಸು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಬಾಂಡ್ ಖರೀದಿಸಬಹುದಾದರೂ ಒಟ್ಟಾರೆ ಹೂಡಿಕೆ 4 ಕಿಲೋ ಮೀರಬಾರದು. ಫೆಬ್ರುವರಿ 16ರವರೆಗೆ, ಅಂದರೆ ಶುಕ್ರವಾರದವರೆಗೆ ಎಸ್​​ಜಿಬಿ ಬಾಂಡ್ ಪಡೆಯಲು ಅವಕಾಶ ಇದೆ. ಆನ್​ಲೈನ್​ನಲ್ಲಿ ಹಣ ಪಾವತಿಸಿದರೆ ಗ್ರಾಮ್​ಗೆ 50 ರೂನಂತೆ ರಿಯಾಯಿತಿ ಸಿಗುತ್ತದೆ. ಬಾಂಡ್ ಖರೀದಿ ಬಳಿಕ ಫೆಬ್ರುವರಿ 21ಕ್ಕೆ ಹೂಡಿಕೆದಾರರಿಗೆ ಸಾವರನ್ ಗೋಲ್ಡ್ ಬಾಂಡ್ ಪ್ರಮಾಣಪತ್ರ ನೀಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Tue, 13 February 24

Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ