Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್​ಗಳು, ಮಾರ್ಚ್ 31ರವರೆಗೆ ಲಭ್ಯ

Special FD plans: ಶೇ. 8.05ರವರೆಗೆ ಬಡ್ಡಿ ನೀಡುವಂತಹ ಕೆಲ ಬ್ಯಾಂಕುಗಳ ಸ್ಪೆಷನ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​​ಗಳು ಮಾರ್ಚ್ 31ರವರೆಗೂ ಲಭ್ಯ ಇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಮತ್ತು ಅಮೃತ್ ವೃಷ್ಟಿ ಪ್ಲಾನ್​ಗಳಿವೆ. ಇಂಡಿಯನ್ ಬ್ಯಾಂಕ್​​ನ ಸುಪ್ರೀಂ ಎಫ್​ಡಿ ಪ್ಲಾನ್ ಇದೆ. ಹಾಗೆಯೇ, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಎಚ್​​ಡಿಎಫ್​ಸಿ ಬ್ಯಾಂಕ್​​ನ ಎಫ್​​ಡಿ ಪ್ಲಾನ್​​ಗಳಿವೆ.

ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್​ಗಳು, ಮಾರ್ಚ್ 31ರವರೆಗೆ ಲಭ್ಯ
ಠೇವಣಿ ಪ್ಲಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 24, 2025 | 6:43 PM

ನವದೆಹಲಿ, ಮಾರ್ಚ್ 24: ಕಳೆದ ಐದು ತಿಂಗಳಲ್ಲಿ ಷೇರು ಮಾರುಕಟ್ಟೆ ಕುಸಿದ ಪರಿಣಾಮ ಬಹಳ ಜನರ ಚಿತ್ತ ಫಿಕ್ಸೆಡ್ ಡೆಪಾಸಿಟ್​​ನಂತಹ ಸಾಂಪ್ರದಾಯಿಕ ಹೂಡಿಕೆ ಕಂ ಉಳಿತಾಯ ಯೋಜನೆಗಳತ್ತ ಹೊರಟಿದೆ. ಅಂತೆಯೇ ಎಲ್ಲಾ ಬ್ಯಾಂಕುಗಳು ವಿಶೇಷ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​​ಗಳನ್ನು (Special Fixed Deposits) ನಡೆಸುತ್ತಿವೆ. ಸಾಮಾನ್ಯ ಎಫ್​​ಡಿಗಳು ನಿರಂತರವಾಗಿ ಲಭ್ಯ ಇರುತ್ತವೆ. ವಿಶೇಷ ಎಫ್​​ಡಿಗಳ ಆಫರ್ ಸೀಮಿತ ಅವಧಿಯವರೆಗೆ ಮಾತ್ರ ಇವೆ. ಶೇ. 8ರ ಆಸುಪಾಸಿನಲ್ಲಿ ವಾರ್ಷಿಕವಾಗಿ ರಿಟರ್ನ್ ನೀಡುವ, ಹಾಗೂ ಮಾರ್ಚ್​ 31ರವರೆಗೆ ಆಫರ್ ಇರುವ ಕೆಲ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​​ಗಳ ವಿವರ ಈ ಕೆಳಕಂಡಂತಿವೆ.

ಎಸ್​​ಬಿಐ ಅಮೃತ್ ಕಲಶ್ ಪ್ಲಾನ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಸ್ಕೀಮ್ ಒಂದು ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಆಗಿದೆ. ಎರಡು ವರ್ಷದ ಹಿಂದೆಯೇ ಇದು ಆರಂಭವಾಗಿತ್ತು. ಬೇಡಿಕೆ ಕಾರಣಕ್ಕೆ ಗುಡುವು ವಿಸ್ತರಣೆ ಆಗುತ್ತಲೇ ಬಂದಿದೆ. ಈಗ ಮಾರ್ಚ್ 31ರವರೆಗೂ ಈ ಸ್ಕೀಮ್ ತೆರೆದಿರುತ್ತದೆ.

400 ದಿನಗಳ ಅವಧಿಯ ಠೇವಣಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಶೇ. 7.60ರಷ್ಟು ಬಡ್ಡಿ ನೀಡಲಾಗುತ್ತದೆ. ಇತರರಿಗೆ ಸಿಗುವ ಬಡ್ಡಿ ಶೇ 7.10.

ಇದನ್ನೂ ಓದಿ
Image
ಕ್ರೆಡಿಟ್ ಸ್ಕೋರ್ ಹೊಸ ನಿಯಮಗಳ ಪ್ರಯೋಜನಗಳೇನು?
Image
ಏಪ್ರಿಲ್ 1ರಿಂದ ಹೊಸ ಟಿಡಿಎಸ್ ನಿಯಮಗಳು ಜಾರಿಗೆ
Image
ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳ ಸಾಧಕ-ಬಾಧಕಗಳು
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?

ಇದನ್ನೂ ಓದಿ: ಆರ್​​ಬಿಐನಿಂದ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಬದಲಾವಣೆ; ಹೊಸ ಸಾಲಗಳ ಮೇಲೆ ಪರಿಣಾಮ; ಇದರ ಸಾಧಕ ಬಾಧಕಗಳಿವು…

ಎಸ್​​ಬಿಐ ಅಮೃತ್ ವೃಷ್ಟಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ವೃಷ್ಟಿ ಎಫ್ಡಿ ಪ್ಲಾನ್ 444 ದಿನಗಳಿಗೆ ಮೆಚ್ಯೂರ್ ಆಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಸೇ. 7.25ರಷ್ಟು ಬಡ್ಡಿ ಸಿಕ್ಕರೆ, ಹಿರಿಯ ನಾಗರಿಕರಿಗೆ ಶೇ. 7.75 ಬಡ್ಡಿ ಇದೆ. ಇದೂ ಕೂಡ ಮಾರ್ಚ್ 31ರವರೆಗೂ ಲಭ್ಯ.

ಇಂಡಿಯನ್ ಬ್ಯಾಂಕ್ ಸುಪ್ರೀಂ 300 ಮತ್ತು 400

ಇಂಡಿಯನ್ ಬ್ಯಾಂಕ್ ಎರಡು ಸ್ಪೆಷಲ್ ಎಫ್​​ಡಿ ಪ್ಲಾನ್​​ಗಳನ್ನು ಆಫರ್ ಮಾಡಿದೆ. ಐಎನ್​​ಡಿ ಸುಪ್ರೀಮ್ ಮತ್ತು ಐಎನ್​​ಡಿ ಸೂಪರ್. ಇದರಲ್ಲಿ ಸುಪ್ರೀಂ ಪ್ಲಾನ್ 300 ದಿನಗಳದ್ದಾದರೆ, ಸೂಪರ್ ಪ್ಲಾನ್ 400 ದಿನಗಳದ್ದು. ಈ ಪೈಕಿ ಐಎನ್​​ಡಿ ಸೂಪರ್ 400 ಪ್ಲಾನ್​​ನಲ್ಲಿ 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ಸ್​​ಗೆ ಶೇ. 8.05ರಷ್ಟು ಬಡ್ಡಿ ನೀಡುತ್ತವೆ. 60 ವರ್ಷ ಮೇಲ್ಪಟ್ಟ ಸಾಮಾನ್ಯ ಹಿರಿಯ ನಾಗರಿಕರಿಗೆ ಶೇ. 7.80, ಇತರರಿಗೆ ಶೇ. 7.30ರಷ್ಟು ಬಡ್ಡಿ ಸಿಗುತ್ತದೆ.

ಎಚ್​​ಡಿಎಫ್​​ಸಿ ಬ್ಯಾಂಕ್ ಎಫ್​​ಡಿ

ಎಚ್​​ಡಿಎಫ್​​ಸಿ ಬ್ಯಾಂಕ್ 35 ತಿಂಗಳ ಅವಧಿಯ ವಿಶೇಷ ನಿಶ್ಚಿತ ಠೇವಣಿ ಪ್ಲಾನ್ ಆಫರ್ ಮಾಡಿದೆ. ಹಿರಿಯ ನಾಗರಿಕರಿಗೆ ಶೇ. 7.85ರಷ್ಟು ಬಡ್ಡಿ ನೀಡಲಾಗುತ್ತದೆ. ಇತರರಿಗೆ ಸಿಗುವ ಬಡ್ಡಿ ಶೇ. 7.35ರಷ್ಟು. ಈ ಪ್ಲಾನ್​​ ಮಾರ್ಚ್ 31ಕ್ಕೆ ಕೊನೆಯಾಗುತ್ತದೆ.

ಇದನ್ನೂ ಓದಿ: New TDS rules: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ

ಹಾಗೆಯೇ, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್​​ನ 333 ದಿನಗಳು, 444 ದಿನಗಳು, 555 ದಿನಗಳು, 777 ದಿನಗಳ ಎಫ್​​ಡಿ ಪ್ಲಾನ್​​ಗಳಿವೆ. ಇದರಲ್ಲಿ 555 ದಿನಗಳ ಪ್ಲಾನ್​​ಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.95ರಷ್ಟು ಬಡ್ಡಿ ಸಿಗುತ್ತದೆ. ಐಡಿಬಿಐ ಬ್ಯಾಂಕು ಉತ್ಸವ್ ಹೆಸರಿನಲ್ಲಿ ಎಫ್​​ಡಿ ಪ್ಲಾನ್​​ಗಳನ್ನು ಆಫರ್ ಮಾಡಿದೆ.

ಈ ಎಲ್ಲವೂ ಕೂಡ 2025ರ ಮಾರ್ಚ್ 31ರವರೆಗೂ ಆಫರ್​​ನಲ್ಲಿ ಇರಲಿವೆ. ಇನ್ನೊಂದು ವಾರ ಮಾತ್ರವೇ ಬಾಕಿ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Mon, 24 March 25

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ