ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಟಾಪ್ ಕಂಪನಿಗಳಲ್ಲಿ ತರಬೇತಿ, ಜೊತೆಗೆ ವರ್ಷಕ್ಕೆ 66,000 ರೂ ಕೊಡುಗೆ; ಶಿಕ್ಷಣ, ವಯಸ್ಸು ಇತ್ಯಾದಿ ಅರ್ಹತೆಗಳ ವಿವರ

PM Internship scheme updates: ಪಿಎಂ ಇಂಟರ್ನ್​ಶಿಪ್ ಯೋಜನೆಯಲ್ಲಿ ಒಂದು ಕೋಟಿ ಯುವಕರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಗುರಿ ಇಡಲಾಗಿದೆ. 21 ವರ್ಷದಿಂದ 24 ವರ್ಷದೊಳಗಿನ ವಯಸ್ಸಿನ, ಹಾಗೂ ಇನ್ನೂ ಉದ್ಯೋಗಕ್ಕೆ ಸೇರದ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಈ ಸ್ಕೀಮ್ ತರಲಾಗಿದೆ. ಟಾಪ್ 500 ಕಂಪನಿಗಳಲ್ಲಿ ಇಂಟರ್ನ್ ಮಾಡಬಹುದಾಗಿದ್ದು, ತಿಂಗಳಿಗೆ 5,000 ರೂವರೆಗೆ ಸ್ಟೈಪೆಂಡ್ ಕೂಡ ಸಿಗುತ್ತದೆ.

ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಟಾಪ್ ಕಂಪನಿಗಳಲ್ಲಿ ತರಬೇತಿ, ಜೊತೆಗೆ ವರ್ಷಕ್ಕೆ 66,000 ರೂ ಕೊಡುಗೆ; ಶಿಕ್ಷಣ, ವಯಸ್ಸು ಇತ್ಯಾದಿ ಅರ್ಹತೆಗಳ ವಿವರ
ಪಿಎಂ ಇಂಟರ್ನ್​ಶಿಪ್ ಯೋಜನೆ
Follow us
|

Updated on: Oct 08, 2024 | 11:37 AM

ನವದೆಹಲಿ, ಅಕ್ಟೋಬರ್ 8: ದೇಶದ ಯುವಕರಲ್ಲಿ ಕೌಶಲ್ಯಾಭಿವೃದ್ಧಿಗೊಳಿಸಿ ಉದ್ಯೋಗಾವಕಾಶ ಹೆಚ್ಚಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಪಿಎಂ ಇಂಟರ್ನ್​ಶಿಪ್ ಸ್ಕೀಮ್ ಅನ್ನು ಆರಂಭಿಸಿದೆ. ಓದು ಮುಗಿಸಿ ಇನ್ನೂ ಕೆಲಸಕ್ಕೆ ಸೇರದ ಯುವಕ ಮತ್ತು ಯುವತಿಯರಿಗೆ ಅಗ್ರಮಾನ್ಯ ಕಂಪನಿಗಳಲ್ಲಿ ಇಂಟರ್ನ್ ಆಗಿ ತರಬೇತಿ ಪಡೆಯುವ ಅವಕಾಶ ನೀಡಲಾಗಿದೆ. ಒಂದು ವರ್ಷದ ಇಂಟರ್ನ್​ಶಿಪ್​ನಲ್ಲಿ ಸರ್ಕಾರದಿಂದ ಸ್ಟೈಪೆಂಡ್ ನೀಡಲಾಗುತ್ತದೆ. ಕಂಪನಿಗಳೂ ಕೂಡ ತರಬೇತಿ ಜೊತೆಗೆ ಪ್ರತೀ ತಿಂಗಳು ಹಣ ನೀಡುತ್ತವೆ. ಇಂಟರ್ನ್​ಗಳಿಗೆ ತರಬೇತಿ, ಸಹಾಯಧನದ ಜೊತೆಗೆ ಇನ್ಷೂರೆನ್ಸ್ ಸೌಲಭ್ಯವನ್ನೂ ಒದಗಿಸಲಾಗುತ್ತದೆ.

ಪಿಎಂ ಇಂಟರ್ನ್​ಶಿಪ್ ಯೋಜನೆಯಲ್ಲಿ ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ಕೆಲಸದ ತರಬೇತಿ ಕೊಡುವ ಗುರಿ ಇದೆ. ದೇಶದ ಟಾಪ್-500 ಕಂಪನಿಗಳಲ್ಲಿ ತರಬೇತಿ ಸಿಗಲಿದೆ. ಇಲ್ಲಿ ಯಾರಿಗೂ ಕಡ್ಡಾಯವಲ್ಲ. ಕಾರ್ಪೊರೇಟ್ ಸಂಸ್ಥೆಗಳು ಇಂಟರ್ನ್​ಗಳನ್ನು ತೆಗೆದುಕೊಳ್ಳುವುದು ಬಿಡುವುದು ಅವರ ಐಚ್ಛಿಕ. ಈಗಾಗಲೇ 50 ಕಂಪನಿಗಳು ಯೋಜನೆಯಲ್ಲಿ ನೊಂದಾಯಿಸಿಕೊಂಡಿವೆ. ಒಟ್ಟು ಸದ್ಯ ನೂರಕ್ಕೂ ಹೆಚ್ಚು ಕಂಪನಿಗಳು ಆಸಕ್ತಿ ತೋರಿವೆ.

ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಪ್ರತ್ಯೇಕ ಪೋರ್ಟಲ್​ವೊಂದನ್ನು ಅಭಿವೃದ್ದಿಪಡಿಸಲಾಗಿದೆ. ಅದರ ವಿಳಾಸ ಇಂತಿದೆ: pminternship.mca.gov.in

ಇಲ್ಲಿ ಸದ್ಯ ಕಂಪನಿಗಳಿಗೆ ನೊಂದಾಯಿಸಲು ಅವಕಾಶ ಇದೆ. ಶೀಘ್ರದಲ್ಲೇ ಅಭ್ಯರ್ಥಿಗಳ ನೊಂದಾವಣಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

  • ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಕನಿಷ್ಠ ವಯಸ್ಸು 21 ವರ್ಷ. ಗರಿಷ್ಠ ವಯಸ್ಸು 24 ವರ್ಷ.
  • ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಇದೆ. ಪಿಯುಸಿ, ಐಟಿಐ, ಡಿಪ್ಲೊಮಾ, ಡಿಗ್ರಿ (ಬಿಎ, ಬಿಎಸ್ಸಿ, ಬಿಬಿಎ ಇತ್ಯಾದಿ) ಓದಿರುವವರೂ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ

ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಇವರು ಅರ್ಹರಿರುವುದಿಲ್ಲ….

  • ಈಗಾಗಲೇ ಪೂರ್ಣಾವಧಿಯಾಗಿ ಕೆಲಸ ಮಾಡುತ್ತಿರುವಂತಿಲ್ಲ.
  • ಪೂರ್ಣಾವಧಿ ವಿದ್ಯಾಭ್ಯಾಸದಲ್ಲಿ ತೊಡಗಿರುವಂತಿಲ್ಲ.
  • ಸಿಎ, ಎಂಬಿಬಿಎಸ್, ಎಂಬಿಎ ಇತ್ಯಾದಿ ಉನ್ನತ ವ್ಯಾಸಂಗ ಅಥವಾ ವೃತ್ತಿಪರ ಕೋರ್ಸ್ ಮಾಡಿರುವಂತಿಲ್ಲ
  • ಐಐಟಿ, ಐಐಎಂ, ಎನ್​ಐಡಿ ಇತ್ಯಾದಿ ಪ್ರತಿಷ್ಠಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದಿರುವಂತಿಲ್ಲ.
  • ಕುಟುಂಬದ ಯಾವ ಸದಸ್ಯರ ಆದಾಯವು ವರ್ಷಕ್ಕೆ 8 ಲಕ್ಷ ರೂಗಿಂತ ಹೆಚ್ಚಿರುವಂತಿಲ್ಲ
  • ಕುಟುಂಬದಲ್ಲಿ ಯಾರೊಬ್ಬರೂ ಕೂಡ ಸರ್ಕಾರಿ ಉದ್ಯೋಗಿಯಾಗಿರುವಂತಿಲ್ಲ.

ಇಂಟರ್ನ್ ಆದರೆ ಏನು ಉಪಯೋಗ?

  • ಪಿಎಂ ಇಂಟರ್ನ್​ಶಿಪ್ ಯೋಜನೆಗೆ ನೀವು ಆಯ್ಕೆಯಾದರೆ ಹಲವು ಪ್ರಯೋಜನಗಳಿವೆ.
  • ಕಂಪನಿಗಳಲ್ಲಿ ನೈಜ ಕೆಲಸದ ವಾತಾವರಣದಲ್ಲಿ ಕೆಲಸ ಮಾಡಿದ ಅನುಭವ ಸಿಗುತ್ತದೆ. ಕೆಲಸಕ್ಕೆ ಬೇಕಾದ ನೈಜ ಕೌಶಲ್ಯ ಸಿಗುತ್ತದೆ.
  • ಇಂಟರ್ನ್ ಆದವರಿಗೆ ಸರ್ಕಾರವು ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ, ಪಿಎಂ ಸುರಕ್ಷಾ ಬಿಮಾ ಯೋಜನೆಗೆ 6,000 ರೂ ಒದಗಿಸುತ್ತದೆ.
  • ಅಭ್ಯರ್ಥಿಗೆ ಪ್ರತೀ ತಿಂಗಳು 4,500 ರೂ ಸ್ಟೈಪೆಂಡ್ ನೀಡುತ್ತದೆ.
  • ಕಂಪನಿ ವತಿಯಿಂದಲೂ ಅಭ್ಯರ್ಥಿಗೆ ತಿಂಗಳಿಗೆ 500 ರೂ ಸಿಗುತ್ತದೆ. ಒಟ್ಟು ತಿಂಗಳಿಗೆ 6,000 ರೂ ಸಿಗುತ್ತದೆ.
  • ಇಂಟರ್ನ್​ಶಿಪ್ ಅವಧಿ 12 ತಿಂಗಳು ಇರುತ್ತದೆ. ಅಭ್ಯರ್ಥಿಗೆ ಈ ಒಂದು ವರ್ಷದಲ್ಲಿ 66,000 ರೂ ಸಹಾಯಧನ ಸಿಕ್ಕಂತಾಗುತ್ತದೆ.
  • ಇಂಟರ್ನ್​ಶಿಪ್ ಅವಧಿಯಲ್ಲಿ ಕನಿಷ್ಠ ಶೇ. 50ರಷ್ಟು ಸಮಯ ಕಂಪನಿಯ ಕೆಲಸಗಳಲ್ಲಿ ತೊಡಗಿರಬೇಕು ಎನ್ನುವ ನಿಯಮ ಇದೆ. ತರಬೇತಿ ವೇಳೆ ಅಗತ್ಯಬಿದ್ದರೆ ತರಗತಿಗಳೂ ಇರುತ್ತವೆ.

ಇದನ್ನೂ ಓದಿ: ‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ

ಒಂದು ವರ್ಷದ ಬಳಿಕ ಏನಾಗುತ್ತದೆ?

ಇಂಟರ್ನ್​ಶಿಪ್ ಅವಧಿ ಒಂದು ವರ್ಷ ಇರುತ್ತದೆ. ಅದಾದ ಬಳಿಕ ಕಂಪನಿಗಳು ತಮಗೆ ಸೂಕ್ತ ಎನಿಸುವ ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬಹುದು. ಅದು ಕಂಪನಿಗಳಿಗೆ ಇರುವ ಆಯ್ಕೆ. ಒಂದು ವೇಳೆ ಕೆಲಸಕ್ಕೆ ಆಯ್ಕೆ ಆಗದೇ ಹೋದರೂ ಅಭ್ಯರ್ಥಿಗಳಿಗೆ ನೈಜ ಕೆಲಸದ ಅನುಭವ ಸಿಗುತ್ತದೆ. ಇಂಟರ್ನ್​ಶಿಪ್ ಮಾಡಿದ ಪ್ರಮಾಣಪತ್ರವೂ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್