ಪಿಎಂ ಆವಾಸ್ ಯೋಜನೆ: ಕೇಂದ್ರದಿಂದ ವಸತಿ ಯೋಜನೆ; ಫಲಾನುಭವಿಗಳು ಯಾರು? ಇಲ್ಲಿದೆ ಡೀಟೇಲ್ಸ್

PM Awas Yojana: 2015ರಲ್ಲಿ ಆರಂಭವಾದ ಪ್ರಧಾನಮಂತ್ರಿ ಆವಾಸ್ ಯೋಜನೆ 2024ರವರೆಗೂ ಲಭ್ಯ ಇದೆ. ಈ ಯೋಜನೆಯಲ್ಲಿ ಫಲಾನುಭವಿಗಳು ಯಾರು, ಯೋಜನೆಗೆ ಅನರ್ಹರು ಯಾರು ಎಂಬ ವಿವರ ಇಲ್ಲಿದೆ.

ಪಿಎಂ ಆವಾಸ್ ಯೋಜನೆ: ಕೇಂದ್ರದಿಂದ ವಸತಿ ಯೋಜನೆ; ಫಲಾನುಭವಿಗಳು ಯಾರು? ಇಲ್ಲಿದೆ ಡೀಟೇಲ್ಸ್
ಪಿಎಂ ಆವಾಸ್ ಯೋಜನೆ

Updated on: Aug 21, 2023 | 5:29 PM

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಬಡವರಿಗೆ ಕಡಿಮೆ ದರದಲ್ಲಿ ಮನೆ ಸಿಗುವಂತೆ ಮಾಡುವ ಕೇಂದ್ರದ ಸ್ಕೀಮ್ ಆಗಿದೆ. 2015ರಲ್ಲಿ ಆರಂಭಗೊಂಡ ಪಿಎಂ ಆವಾಸ್ ಯೋಜನೆ 2024ರ ಡಿಸೆಂಬರ್​ವರೆಗೂ ವಿಸ್ತರಣೆ ಆಗಿದೆ. ಅರ್ಹರಿಗೆ ವಸತಿಗಳನ್ನು ಅನುಮೋದಿಸುವ ಅಧಿಕಾರ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದೆ. ಈ ಯೋಜನೆ ಅಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಸಿಗುತ್ತದೆ. ಬಡ್ಡಿಯೂ ಬಹಳ ಕಡಿಮೆ. ಸರ್ಕಾರದಿಂದಲೂ ಧನಸಹಾಯ ಇರುತ್ತದೆ. ಈ ಯೋಜನೆಗೆ ಅರ್ಹರು ಯಾರು, ಅನರ್ಹರು ಯಾರು ಎಂಬ ವಿವರ ಇಲ್ಲಿದೆ…

ಪಿಎಂ ಆವಾಸ್ ಯೋಜನೆಗೆ (ನಗರ) ಅರ್ಹ ಫಲಾನುಭವಿಗಳು ಯಾರು?

  • ವ್ಯಕ್ತಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್) ಸೇರಿದವರಾಗಿರಬೇಕು. ವಾರ್ಷಿಕ ಆದಾಯ 3 ಲಕ್ಷ ರೂಗಿಂತ ಹೆ್ಚ್ಚಿರಬಾರದು.
  • ಕೆಳ ಆದಾಯ ಗುಂಪಿನವರು (ಎಲ್​​ಐಜಿ): ಇವರ ವಾರ್ಷಿಕ ಆದಾಯ 3ರಿಂದ 6 ಲಕ್ಷ ರು.
  • ಮಧ್ಯಮ ಆದಾಯ ಗುಂಪಿನವರು (ಎಂಐಜಿ-1): ವಾರ್ಷಿಕ ಆದಾಯ 6ರಿಂದ 12 ಲಕ್ಷ ರೂ
  • ಮಧ್ಯಮ ಆದಾಯ ಗುಂಪಿನವರು (ಎಂಐಜಿ-2): ವಾರ್ಷಿಕ ಆದಾಯ 12ಲಕ್ಷರಿಂದ 18 ಲಕ್ಷ ರೂ

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್​ನ ಯಶೋಗಾಥೆ

ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್ ಕಾರಿನ ವಿಶೇಷತೆಗಳೇನು?
ಹ್ಯಾಪಿ ಬರ್ತ್ ಡೇ MSD
ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ 

ಪಿಎಂ ಆವಾಸ್ ಯೋಜನೆಗೆ (ಗ್ರಾಮೀಣ) ಇವರು ಅನರ್ಹರು

  • ಮೋಟಾರು ವಾಹನ, ಎರಡಕ್ಕಿಂತ ಹೆಚ್ಚು ಬೈಕ್, ಸ್ಕೋಟರ್, ಒಂದು ಟ್ರೈಸೈಕಲ್ ಮತ್ತು ಕೃಷಿ ಯಂತ್ರೋಪಕರಣವನ್ನು ಹೊಂದಿದವರು.
  • ರೂ 50,000 ಹಾಗು ಅದಕ್ಕಿಂತ ಹೆಚ್ಚು ಲಿಮಿಟ್ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರು.
  • ರಿಫ್ರಿಜರೇಟರ್, ಲ್ಯಾಂಡ್​ಲೈನ್ ಫೋನ್ ಹೊಂದಿದವರು.
  • ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವವರು.
  • ಫಲಾನುಭವಿಯ ಕುಟುಂಬದ ಯಾವುದೇ ಸದಸ್ಯನಿಗೂ ದೇಶದಲ್ಲಿ ಎಲ್ಲಿಯಾದರೂ ಮನೆ ಇದ್ದರೆ

ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಎಂದು ಪ್ರತ್ಯೇಕಗೊಳಿಸಲಾಗಿದೆ. ಫಲಾನುಭವಿಗಳಿಗೆ ಅರ್ಹತಾ ಮಾನದಂಡಗಳನ್ನೂ ಬದಲಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Mon, 21 August 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us