AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್​ಸೇರ ಎಂಜಿನಿಯರಿಂಗ್​ನ ರಾಮನಗರ ಫ್ಯಾಕ್ಟರಿ ವಿಸ್ತರಣೆಗೆ 2,100 ರೂ ಹೂಡಿಕೆ; 3,500 ಉದ್ಯೋಗಸೃಷ್ಟಿ ಸಾಧ್ಯತೆ

Sansera Engeering signs MoU with Karnataka government: ರಾಮನಗರದ ಹಾರೋಹಳ್ಳಿಯಲ್ಲಿರುವ ತನ್ನ ಫ್ಯಾಕ್ಟರಿಯ ಸಾಮರ್ಥ್ಯ ಹೆಚ್ಚಿಸಲು ಸನ್​ಸೇರ ಎಂಜಿನಿಯರಿಂಗ್ ಸಂಸ್ಥೆ 2,100 ಕೋಟಿ ರೂ ವ್ಯಯಿಸಲಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಜೊತೆ ಸನ್ಸೇರ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ದ್ವಿಚಕ್ರ ವಾಹನ, ಕಮರ್ಷಿಯಲ್ ವಾಹನಗಳ ಎಂಜಿನ್ ಮೊದಲಾದ ಪ್ರಮುಖ ಭಾಗಗಳ ತಯಾರಿಕೆಗೆ ಬೇಕಾದ ಪ್ರಿಸಿಶನ್ ಮೆಟೀರಿಯಲ್​ಗಳನ್ನು ಸನ್​ಸೇರ ಫ್ಯಾಕ್ಟರಿ ತಯಾರಿಸಿಕೊಡುತ್ತದೆ.

ಸನ್​ಸೇರ ಎಂಜಿನಿಯರಿಂಗ್​ನ ರಾಮನಗರ ಫ್ಯಾಕ್ಟರಿ ವಿಸ್ತರಣೆಗೆ 2,100 ರೂ ಹೂಡಿಕೆ; 3,500 ಉದ್ಯೋಗಸೃಷ್ಟಿ ಸಾಧ್ಯತೆ
ಸನ್​ಸೇರ ಎಂಜಿನಿಯರಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2024 | 11:18 AM

Share

ರಾಮನಗರ, ಆಗಸ್ಟ್ 1: ಬೆಂಗಳೂರು ಮೂಲದ ಆಟೊಮೊಬೈಲ್ ಸಾಧನಗಳ ತಯಾರಕ ಸಂಸ್ಥೆಯಾದ ಸನ್​ಸೇರ ಎಂಜಿನಿಯರಿಂಗ್ ರಾಮನಗರದಲ್ಲಿರುವ ತನ್ನ ಫ್ಯಾಕ್ಟರಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ 2,100 ಕೋಟಿ ರೂ ಹೂಡಿಕೆ ಮಾಡಲಿದೆ. ಕರ್ನಾಟಕ ಸರ್ಕಾರದೊಂದಿಗೆ ಅದು ಜುಲೈ 31ರಂದು ತಿಳಿವಳಿಕೆ ಒಪ್ಪಂದ (ಎಂಒಯು) ಮಾಡಿಕೊಂಡಿದೆ. ರಾಮನಗರದ ಹಾರೋಹಳ್ಳಿಯಲ್ಲಿ 55 ಎಕರೆ ಜಾಗದಲ್ಲಿ ಅದರ ಫ್ಯಾಕ್ಟರಿ ಇದ್ದು, ಅದರಲ್ಲಿ ವಿವಿಧ ಯಂತ್ರೋಪಕರಣಗಳನ್ನು ತಯಾರಿಸುತ್ತದೆ.

ಸನ್​ಸೇರ ಎಂಜಿನಿಯರಿಂಗ್​ನ ಫ್ಯಾಕ್ಟರಿ ವಿಸ್ತರಣೆಯಾದರೆ ಅಲ್ಲಿ ಉತ್ಪಾದನಾ ಸಾಮರ್ಥ್ಯ 3,000 ಕೋಟಿ ರೂ ಮೌಲ್ಯದಷ್ಟು ಹೆಚ್ಚಾಗಲಿದೆ. ವಿದೇಶಗಳಿಗೆ ರಫ್ತು ಹೆಚ್ಚಾಗಲಿದೆ. 3,500 ನೇರ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ. ರಾಮನಗರದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಲಿದೆ.

ಸನ್​ಸೇರ ತನ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗಾಗಿ ಟ್ರೈನಿಂಗ್ ಸೆಂಟರ್ ಸ್ಥಾಪಿಸಲು ಯೋಜಿಸಿದೆ. ಸುಧಾರಿತ ತಂತ್ರಜ್ಞಾನ ಮತ್ತು ಅತ್ಯುತ್ತಮ ಕ್ರಮಾವಳಿಗಳನ್ನು ಈ ಫ್ಯಾಕ್ಟರಿಯಲ್ಲಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬರೋಬ್ಬರಿ 15,000 ಉದ್ಯೋಗಿಗಳನ್ನು ಲೇ ಆಫ್ ಮಾಡಲಿದೆ ಇಂಟೆಲ್ ಸಂಸ್ಥೆ

ಸನ್​ಸೇರ ಯಾವ ಉತ್ಪನ್ನಗಳನ್ನು ತಯಾರಿಸುತ್ತದೆ?

1981ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಸನ್​ಸೇರ ಎಂಜಿನಿಯರಿಂಗ್ ಸಂಸ್ಥೆ ಪ್ರಿಸಿಶನ್ ಮೆಷಿನರಿ ಉತ್ಪನ್ನಗಳನ್ನು ತಯಾರಿಸುತ್ತದೆ. ವಾಹನ ಮತ್ತು ವಾಹನೇತರ ಕ್ಷೇತ್ರಗಳಲ್ಲಿ ಇದರ ಎಂಜಿನಿಯರಿಂಗ್ ವಸ್ತುಗಳು ಬಳಕೆ ಆಗುತ್ತವೆ.

ವಾಹನಗಳ ಎಂಜಿನ್, ಟ್ರಾನ್ಸ್​ಮಿಶನ್, ಸಸ್ಪೆನ್ಷನ್, ಬ್ರೇಕಿಂಗ್, ಚಾಸಿಸ್ ಮತ್ತಿತರ ಭಾಗಗಳಿಗೆ ಬೇಕಾದ ಕನೆಕ್ಟಿಂಗ್ ರಾಡ್, ರಾಕರ್ ಆರ್ಮ್, ಕ್ರಾಂಕ್​ಶಾಫ್ಟ್, ಗೇರ್ ಶಿಫ್ಟರ್ ಫೋರ್ಕ್ ಇತ್ಯಾದಿ ವಸ್ತುಗಳನ್ನು ಸನ್​ಸೇರ ತಯಾರಿಸುತ್ತದೆ. ಏರೋಸ್ಪೇಸ್, ಕೃಷಿ, ಆಫ್​ರೋಡ್ ವಾಹನ ಮೊದಲಾದ ಕ್ಷೇತ್ರಗಳಲ್ಲೂ ಇದರ ಪ್ರಿಸಿಶನ್ ವಸ್ತುಗಳು ಬಳಕೆ ಆಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ