AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BUSINESS: ವ್ಯಾಪಾರೋದ್ಯಮ ಸದೃಢವಾಗಿ ನೆಲೆಯೂರಲು ಸಹಾಯಕವಾಗುವ ಟಿಪ್ಸ್ ಇಲ್ಲಿದೆ ನೋಡಿ

ಲಾಭದಾಯಕ ವಾಣಿಜ್ಯೋದ್ಯಮಿಗಳು ಯಶಸ್ವಿ ವ್ಯವಹಾರಗಳ ಬಗ್ಗೆ ಮತ್ತು ಅದನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಾಗೂ ಅದರಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡುತ್ತಾರೆ. ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ವ್ಯಾಪಾರದ ಯೋಜನೆಯನ್ನು ರಚಿಸುವುದು ಅವಶ್ಯಕ.

BUSINESS: ವ್ಯಾಪಾರೋದ್ಯಮ ಸದೃಢವಾಗಿ ನೆಲೆಯೂರಲು ಸಹಾಯಕವಾಗುವ ಟಿಪ್ಸ್ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
TV9 Web
| Edited By: Rakesh Nayak Manchi|

Updated on: May 21, 2022 | 12:16 PM

Share

ವ್ಯಾಪಾರ (Business), ವಾಣಿಜ್ಯೋದ್ಯಮ (Entrepreneurship) ಸದೃಢವಾಗಿ ದೀರ್ಘಾವಧಿವರೆಗೆ ನೆಲೆಯೂರಬೇಕಾದರೆ ಒಂದಷ್ಟು ಯೋಜನಾ (Planning) ಕಾರ್ಯಗನ್ನು ಮಾಡಬೇಕಾಗುತ್ತದೆ. ಲಾಭದಾಯಕ ವಾಣಿಜ್ಯೋದ್ಯಮಿಗಳು ಯಶಸ್ವಿ ವ್ಯವಹಾರಗಳ ಬಗ್ಗೆ ಮತ್ತು ಅದನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಾಗೂ ಅದರಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡುತ್ತಾರೆ. ನೀವು ಆರಂಭಿಸುವ ವ್ಯಾಪಾರ ಉದ್ಯಮವು ಭವಿಷ್ಯದಲ್ಲೂ ನೆಲೆಯೂರಬೇಕೆಂದರೆ, ಕೆಲವೊಂದು ಸಿಂಪಲ್ ಟಿಪ್ಸ್ (Tips)​ಗಳನ್ನು ಫಾಲೋ ಮಾಡಬೇಕಾಗುತ್ತದೆ. ಅವುಗಳು ಈ ಕೆಳಗಿನಂತಿವೆ.

  1. ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ವ್ಯಾಪಾರದ ಯೋಜನೆಯನ್ನು ರಚಿಸಬೇಕು. ಸಂಶೋಧನೆಯ ಪ್ರಕಾರ, ಕಾರ್ಯತಂತ್ರದ ಯೋಜನೆ ಪ್ರಕ್ರಿಯೆಯು ದೀರ್ಘಾವಧಿಯ ವ್ಯಾಪಾರಕ್ಕೆ ಫಲ ನೀಡುತ್ತದೆ. ಇಕ್ವಿಟಿ ಷೇರುದಾರರು ಕಂಪನಿಯ ಯೋಜನೆಯನ್ನು ಮಾಡುತ್ತಾರೆ ಮತ್ತು ಇತರೆ ನ್ಯೂನತೆಗಳನ್ನು ಹುಡುಕುತ್ತಾರೆ.
  2. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಲೆಕ್ಕಾಚಾರದ ಅಪಾಯಗಳನ್ನು ತೆಗೆದುಕೊಳ್ಳುವುದು. ವ್ಯಾಪಾರದಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಪ್ರತಿಯೊಂದು ಸಂಸ್ಥೆಯು ವೈಫಲ್ಯದ ಅಪಾಯವನ್ನು ಎದುರಿಸುತ್ತಿದೆ. ವ್ಯಾಪಾರವನ್ನು ಸ್ಥಾಪಿಸುವ ಮತ್ತು ಪ್ರಾರಂಭಿಸುವ ಪ್ರಯತ್ನದಲ್ಲಿ ಅನೇಕ ಉದ್ಯಮಿಗಳು ಎಡವುತ್ತಾರೆ. ಯಾವುದೇ ಖಾತರಿಯ ಫಲಿತಾಂಶವಿಲ್ಲದ ಹಣವು ಈ ಅಪಾಯಕ್ಕೆ ತಳ್ಳಬಹುದು. ಸೋಲು ಸೋಲನ್ನು ಸೂಚಿಸುವುದಿಲ್ಲ. ಅದು ತಿದ್ದಿಕೊಳ್ಳಬೇಕಾದದ್ದನ್ನು ತೋರಿಸಿಕೊಡುತ್ತದೆ. ಹೊಂದಾಣಿಕೆಗಳನ್ನು ಮಾಡುವುದು ಮತ್ತು ತಪ್ಪುಗಳಿಂದ ಕಲಿಯುವುದು ಮುಂದಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಾವಧಿಯ ಸಾಧನೆಗೆ ಕಾರಣವಾಗಬಹುದು.
  3. ಒಬ್ಬ ಉದ್ಯಮಿಗೆ ಹಣಕಾಸಿನ ವಿವೇಕ ಇರಬೇಕು. ಅದನ್ನು ಹೇಗೆ ಕಾಪಾಡಬೇಕು ಎಂದು ತಿಳಿದಿರಬೇಕು. ಇಲ್ಲದಿದ್ದರೆ ಹಣಕಾಸಿನ ಅಭಾವ ಎದುರಾಗಿ ಸಂಪನ್ಮೂಲಗಳ ಕೊರತೆ ಉಂಟಾಗಿ ವ್ಯಾಪಾರವು ನೆಲಕಚ್ಚಬಹುದು.  ತಮ್ಮ ಕಂಪನಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇರಿಸಿಕೊಳ್ಳಲು ಹಣಕಾಸಿನ ವಿವೇಕವು ಅನುವು ಮಾಡಿಕೊಡುತ್ತದೆ. ಅಲ್ಲದೆ, ಅನಿರೀಕ್ಷಿತ ಅವಕಾಶಗಳು ಅಥವಾ ವಿಪತ್ತುಗಳಿಗೆ ಹಣವನ್ನು ಉಳಿತಾಯ ಮಾಡಲು ಸಹಕಾರಿಯಾಗಲಿದೆ.
  4. ಒಬ್ಬ ವಾಣಿಜ್ಯ ಉದ್ಯಮಿಗೆ ಮಾರ್ಗದರ್ಶನ ಅವಶ್ಯಕವಾಗಿದೆ. ಫೋರ್ಬ್ಸ್ ಅಧ್ಯಯನದ ಪ್ರಕಾರ, ಪೋಲ್ ಮಾಡಿದ 90% ಕ್ಕಿಂತ ಹೆಚ್ಚು ಸಣ್ಣ ವ್ಯಾಪಾರ ಮಾಲೀಕರು ತಮ್ಮ ಕಂಪನಿಯ ಬೆಳವಣಿಗೆ ಮತ್ತು ಬದುಕುಳಿಯುವಿಕೆಯ ಮೇಲೆ ಮಾರ್ಗದರ್ಶಕರು ಗಂಭೀರ ಪ್ರಭಾವವನ್ನು ಹೊಂದಿದ್ದಾರೆ. ಅವರು ತಮ್ಮ ಅನುಭವಗಳ ಆಧಾರದ ಮೇಲೆ ವಸ್ತುನಿಷ್ಠ ಹೊರಗಿನ ಒಳನೋಟಗಳನ್ನು ನೀಡಬಹುದು. ಮಾರ್ಗದರ್ಶಕರನ್ನು ಹುಡುಕಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ಲಾಭಾಂಶವನ್ನು ನೀಡಬಹದು.

ಇದನ್ನೂ ಓದಿ: ವಾಣಿಜ್ಯ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ

ಇದನ್ನೂ ಓದಿ: ಯುಟರ್ನ್ ಹೊಡೆದ ಸರ್ಕಾರ; ಮತ್ತೆ ಭಗತ್ ಸಿಂಗ್ ಪಠ್ಯ ಸೇರಿಸಲು ಮುಂದಾದ ಶಿಕ್ಷಣ ಇಲಾಖೆ

ಇದನ್ನೂ ಓದಿ:ನೀವು ಹೊಸದಾಗಿ ಉದ್ಯಮ ಆರಂಭಿಸಬೇಕೆಂದಿದ್ದೀರಾ? ಹಾಗಿದ್ದರೆ ತಪ್ಪದೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

ಇದನ್ನೂ ಓದಿ: Savings Money: ಏರುಮುಖವಾಗಿ ಸಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ: ಹಣದುಬ್ಬರದ ಪರಿಸ್ಥಿತಿಯಲ್ಲಿ ಉಳಿತಾಯ ಮಾಡಲು ಇಲ್ಲಿದೆ ಟಿಪ್ಸ್​

ಮತ್ತಷ್ಟು ಸಿದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!