AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rudram Missiles: ಟರ್ಕಿಯ ಕಡುವೈರಿ ದೇಶದ ಮಿಲಿಟರಿಗೆ ಭಾರತದ ರುದ್ರಂ ಕ್ಷಿಪಣಿಗಳ ಮೇಲೆ ಆಸಕ್ತಿ

Greece may buy Rudram missiles from India: ಟರ್ಕಿಯ ಪಕ್ಕದಲ್ಲೇ ಇರುವ ಹಾಗೂ ಸದಾ ಅಪಾಯದಲ್ಲೇ ಇರುವ ಗ್ರೀಸ್ ದೇಶ ತನ್ನ ಮಿಲಿಟರಿಯನ್ನು ಬಲಪಡಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಭಾರತದಿಂದ ರುದ್ರಂ ಶ್ರೇಣಿಯ ಕ್ಷಿಪಣಿಗಳನ್ನು ಪಡೆಯಲು ಅದು ಆಸಕ್ತವಾಗಿದೆ. ತನ್ನಲ್ಲಿರುವ ರಫೇಲ್ ಜೆಟ್​​ಗಳಿಗೆ ಹೊಂದಿಕೆಯಾಗಬಲ್ಲ ಕ್ಷಿಪಣಿಗಳ ಪೈಕಿ ರುದ್ರಂ ಸೂಕ್ತವಿರುವ ಹಿನ್ನೆಲೆಯಲ್ಲಿ ಗ್ರೀಸ್ ಆಲೋಚನೆ ನಡೆಸುತ್ತಿದೆ.

Rudram Missiles: ಟರ್ಕಿಯ ಕಡುವೈರಿ ದೇಶದ ಮಿಲಿಟರಿಗೆ ಭಾರತದ ರುದ್ರಂ ಕ್ಷಿಪಣಿಗಳ ಮೇಲೆ ಆಸಕ್ತಿ
ರುದ್ರಂ ಕ್ಷಿಪಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 15, 2025 | 12:57 PM

Share

ನವದೆಹಲಿ, ಮೇ 15: ಪಾಕಿಸ್ತಾನದ ಆಪ್ತಮಿತ್ರನೆನಿಸಿರುವ ಟರ್ಕಿ ದೇಶವು ಭಾರತಕ್ಕೆ ನೇರವಾಗಿ ಚೂರಿ ಇರಿಯುವ ಕೆಲಸ ಮಾಡುತ್ತಲೇ ಬಂದಿದೆ. ಭಾರತವೇನೂ ನೋಡಿ ಕೈಕಟ್ಟಿ ಕೂತಿಲ್ಲ. ಟರ್ಕಿಯ ವಿರೋಧಿ ಗುಂಪಿನ ಜೊತೆ ಭಾರತದ ಉತ್ತಮ ಬಾಂಧವ್ಯ ಬೆಳೆಸುತ್ತಿದೆ. ಟರ್ಕಿಯ ಅತ್ಯಂತ ಕಡುವೈರಿ ರಾಷ್ಟ್ರ ಎನಿಸಿರುವ ಗ್ರೀಸ್​ ಜೊತೆ ಭಾರತದ ಮಿಲಿಟರಿ ವ್ಯವಹಾರ ಸಂಬಂಧ ಗಾಢವಾಗುತ್ತಿದೆ. ಗ್ರೀಸ್ ದೇಶದ ವಾಯುಪಡೆ (ಹೆಲ್ಲೆನಿಕ್ ಏರ್ ಫೋರ್ಸ್) ಭಾರತದ ರುದ್ರಂ-1 ಮತ್ತು ರುದ್ರಂ-2 ಕ್ಷಿಪಣಿಗಳನ್ನು (Rudram Missiles) ಖರೀದಿಸಲು ಆಸಕ್ತಿ ತೋರುತ್ತಿದೆ ಎನ್ನುವಂತಹ ಸುದ್ದಿ ಕೇಳಿಬಂದಿದೆ.

ಡಿಆರ್​​ಡಿಒ ಅಭಿವೃದ್ಧಿಪಡಿಸಿದ ಈ ಸೂಪರ್​ಸಾನಿಕ್ ಮತ್ತು ಹೈಪರ್​​ಸಾನಿಕ್ ರುದ್ರಂ ಕ್ಷಿಪಣಿಗಳನ್ನು ಬಿಇಎಲ್, ಭಾರತ್ ಡೈನಾಮಿಕ್ಸ್ ಮತ್ತು ಅದಾನಿ ಡಿಫೆನ್ಸ್ ಕಂಪನಿಗಳು ತಯಾರಿಸುತ್ತಿವೆ. ಈ ಕ್ಷಿಪಣಿಗಳು ಎಆರ್​ಎಂ ಗುಂಪಿಗೆ ಸೇರುತ್ತವೆ. ಅಂದರೆ, ರಾಡಾರ್ ಅನ್ನು ವಂಚಿಸಿ, ಅಥವಾ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಇರುವಂತಹ ಕ್ಷಿಪಣಿಗಳಿವು. ಈ ಮೂಲಕ ಶತ್ರುಗಳ ಡಿಫೆನ್ಸ್ ಸಿಸ್ಟಂ ಅನ್ನು ನಿಷ್ಕ್ರಿಯಗೊಳಿಸಲು ಇವುಗಳನ್ನು ಬಳಕೆ ಮಾಡಲಾಗುತ್ತದೆ. ಇದನ್ನು SEAD (ಶತ್ರುಗಳ ಏರ್​ಡಿಫೆನ್ಸ್ ನಿಷ್​ಕ್ರಿಯಗೊಳಿಸುವುದು) ಮತ್ತು DEAD (ಶತ್ರುಗಳ ಏರ್ ಡಿಫೆನ್ಸ್ ನಾಶ ಮಾಡುವುದು) ಮಿಷನ್ ಎನ್ನಲಾಗುತ್ತದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?

ಇದನ್ನೂ ಓದಿ
Image
ಮೋದಿ ಭಾಷಣ ಎಫೆಕ್ಟ್; ಚೀನಾದ ಚೆಂಗ್ಡು ಷೇರುಬೆಲೆ ಸತತ 3ನೇ ದಿನ ಕುಸಿತ
Image
ಆಪರೇಷನ್ ಸಿಂದೂರದಲ್ಲಿ ಸ್ವಾವಲಂಬಿ, ಪ್ರಬಲ ಭಾರತದ ಅನಾವರಣ
Image
ಬಿಇಎಲ್​​ನ ಆಕಾಶತೀರ ಈಗ ಆಪರೇಷನ್ ಸಿಂದೂರದ ಹೀರೋ
Image
ಡ್ರೋನ್ ಉಡಾಯಿಸಲು ಭಾರತದಿಂದ ಭಾರ್ಗವ ಅಸ್ತ್ರ; ಯಶಸ್ವಿ ಪರೀಕ್ಷೆ

ಅಮೆರಿಕದ ಕ್ಷಿಪಣಿ ಬದಲು ರುದ್ರಂ ಪಡೆಯುತ್ತದಾ ಗ್ರೀಸ್?

ಗ್ರೀಸ್ ದೇಶದಲ್ಲಿ ಸದ್ಯ 24 ರಫೇಲ್ ಜೆಟ್​​ಗಳಿವೆ. ಇದಕ್ಕೆ ಅಳವಡಿಕೆಯಾಗಬಲ್ಲ ಎಆರ್​​ಎಂ ಕ್ಷಿಪಣಿಗಳ ಕೊರತೆ ಇದೆ. ಟರ್ಕಿಯಿಂದ ಸದಾ ಅಪಾಯದ ಪರಿಸ್ಥಿತಿಯಲ್ಲಿರುವ ಗ್ರೀಸ್ ದೇಶವು ಆ್ಯಂಟಿ ರಾಡಾರ್ ಮಿಷನ್​​​ಗಳಿಗೆ ಅಮೆರಿಕದ ಎಜಿಎಂ-88 ಹಾರ್ಮ್ ಮಿಸೈಲ್​​ಗಳನ್ನು (AGM-88 HARM missiles) ನೆಚ್ಚಿಕೊಂಡಿದೆ. ಆದರೆ, ಫ್ರಾನ್ಸ್ ದೇಶದ ಎಂಬಿಡಿಎ ಆರ್​​ಜೆ10 ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆಯಾದರೂ ಇದು ಗ್ರೀಸ್​​​ನಲ್ಲಿರುವ ರಫೇಲ್ ಜೆಟ್​​ಗಳಿಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ, ಅಮೆರಿಕದ ಎಜಿಎಂ-88 ಹಾರ್ಮ್ ಕ್ಷಿಪಣಿಗಳನ್ನು ನೆಚ್ಚಿಕೊಳ್ಳುವಂತಾಗಿದೆ.

ಆದರೆ, ಅಮೆರಿಕದ ಈ ಕ್ಷಿಪಣಿಗಳು ದುಬಾರಿ ಎನಿಸಿವೆ. ಈ ಕ್ಷಿಪಣಿಗಳಿಗೆ ಸೂಕ್ತ ಮತ್ತು ಸಮರ್ಥ ಪರ್ಯಾಯ ಎಂದರೆ ಭಾರತದ ರುದ್ರಂ ಕ್ಷಿಪಣಿಗಳು. ಇವು ಮಲ್ಟಿ ಪ್ಲಾಟ್​​ಫಾರ್ಮ್​​ಗಳಿಗೆ ಹೊಂದಿಕೆಯಾಗಬಲ್ಲಂತಹವು. ಗ್ರೀಸ್​​ನಲ್ಲಿರುವ ರಫೇಲ್ ಜೆಟ್​​ಗಳಿಗೂ ಇವು ಹೊಂದಿಕೊಳ್ಳುತ್ತವೆ. ಹೀಗಾಗಿ, ಗ್ರೀಸ್ ದೇಶವು ರುದ್ರಂ ಕ್ಷಿಪಣಿಗಳ ಮೇಲೆ ಆಸಕ್ತವಾಗಿದೆ. ಕೇವಲ ಗ್ರೀಸ್ ಮಾತ್ರವಲ್ಲ, ಯೂರೋಪ್​​ನಲ್ಲಿರುವ ನ್ಯಾಟೋ ಪಡೆಯಲ್ಲಿರುವ ಜರ್ಮನಿ, ಪೋಲ್ಯಾಂಡ್ ಮತ್ತಿತರ ಸದಸ್ಯ ರಾಷ್ಟ್ರಗಳು ಕೂಡ ರುದ್ರಂ ಕ್ಷಿಪಣಿ ಮೇಲೆ ಆಸಕ್ತಗೊಂಡಿವೆ.

ಇದನ್ನೂ ಓದಿ: ಚೀನಾದ ಫೈಟರ್ ಜೆಟ್ ಕಂಪನಿ: ಮೋದಿ ಭಾಷಣದ ಬಳಿಕ ಮೂರು ದಿನದಲ್ಲಿ ಶೇ. 11ರಷ್ಟು ಕುಸಿದಿದೆ ಷೇರುಬೆಲೆ

ರುದ್ರಂ-1 ಕ್ಷಿಪಣಿ 100-250 ಕಿಮೀ ಶ್ರೇಣಿಯ ಸಾಮರ್ಥ್ಯ ಹೊಂದಿದೆ. ರುದ್ರಂ-2 ಕ್ಷಿಪಣಿಯು 300 ಕಿಮೀ ಶ್ರೇಣಿ ಹೊಂದಿದೆ. ಡಿಆರ್​​ಡಿಒ ಈಗ 55 ಕಿಮೀ ಶ್ರೇಣಿ ಸಾಮರ್ಥ್ಯದ ರುದ್ರಂ-3 ಕ್ಷಿಪಣಿ ಅಭಿವೃದ್ಧಿಪಡಿಸಲು ಯೋಜಿಸಿದೆ ಎಂದು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್​​ನ ವೆಬ್​​ಸೈಟ್​​ನಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Thu, 15 May 25

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!