Sign In

By signing in or creating an account, you agree with Associated Broadcasting Company's Terms & Conditions and Privacy Policy.

GST rate hike on textiles: ಜವಳಿ ಮೇಲಿನ ಜಿಎಸ್​ಟಿ ದರ ಏರಿಕೆಗೆ ಹಲವು ರಾಜ್ಯಗಳ ವಿರೋಧ

ಜವಳಿ ಮೇಲಿನ ಸದ್ಯದ ಜಿಎಸ್​ಟಿಯನ್ನು ಶೇ 5ರಿಂದ ಶೇ 12ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಹಲವು ರಾಜ್ಯಗಳು ವಿರೋಧ ಮಾಡಿವೆ. ಆ ಬಗ್ಗೆ ವಿವರ ಇಲ್ಲಿದೆ.

GST rate hike on textiles: ಜವಳಿ ಮೇಲಿನ ಜಿಎಸ್​ಟಿ ದರ ಏರಿಕೆಗೆ ಹಲವು ರಾಜ್ಯಗಳ ವಿರೋಧ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 30, 2021 | 8:01 PM

ಜಿಎಸ್‌ಟಿ ಸಮಿತಿ ಸಭೆಗೆ ಮುನ್ನ, ಜನವರಿ 1ರಿಂದ ಜವಳಿ ಉತ್ಪನ್ನಗಳ ಮೇಲಿನ ಹೆಚ್ಚಿನ ತೆರಿಗೆ ದರವನ್ನು ಗುರುವಾರ ಹಲವು ರಾಜ್ಯಗಳು ವಿರೋಧ ಮಾಡಿವೆ. ದರ ಏರಿಕೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವ ಸಭೆಯಲ್ಲಿ, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಜನವರಿ 1, 2022 ರಿಂದ ಜಾರಿಗೆ ಬರುವಂತೆ ಸದ್ಯಕ್ಕೆ ಇರುವ ಶೇಕಡಾ 5ರಿಂದ ಶೇ 12ಕ್ಕೆ ಹೆಚ್ಚಿಸುವ ನಿರ್ಧಾರದ ಪರವಾಗಿಲ್ಲ ಎಂದು ಹೇಳಿವೆ.

ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡಿರುವ ಜಿಎಸ್‌ಟಿ ಸಮಿತಿಯ 46ನೇ ಸಭೆಯನ್ನು ಡಿಸೆಂಬರ್ 31ರಂದು ನಿಗದಿಪಡಿಸಲಾಗಿದೆ. ದರ ಹೆಚ್ಚಳ “ನಿರ್ಧಾರವನ್ನು ತಡೆಹಿಡಿಯುವ” ಗುಜರಾತ್‌ನ ಬೇಡಿಕೆಯನ್ನು ಪರಿಗಣಿಸುವ, ವಾಣಿಜ್ಯ ಸಮೂಹದಿಂದ ಪಡೆದ ಮನವಿ ಪರಿಗಣಿಸಲು ಒಂದೇ ಕಾರ್ಯಸೂಚಿಯೊಂದಿಗೆ ಈ ಸಭೆ ನಡೆಯಲಿದೆ. ಜವಳಿ ಮೇಲಿನ ಜಿಎಸ್‌ಟಿಯನ್ನು ಶೇ 5ರಿಂದ ಶೇ 12ಕ್ಕೆ ಏರಿಸುವ ಕ್ರಮ ಜನಸ್ನೇಹಿಯಲ್ಲ, ಇದನ್ನು ಹಿಂಪಡೆಯಬೇಕು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಸಾಮಾನ್ಯ ವ್ಯಕ್ತಿ 1000 ರೂಪಾಯಿ ಬಟ್ಟೆ ಖರೀದಿಸಿದರೆ 120 ರೂಪಾಯಿ ಜಿಎಸ್‌ಟಿ ಕಟ್ಟಬೇಕು. ಇದಕ್ಕೆ ದೆಹಲಿ ಪರವಾಗಿಲ್ಲ ಎಂದು ಹಣಕಾಸು ಸಚಿವ ಸಿಸೋಡಿಯಾ ಹೇಳಿದ್ದಾರೆ.

ತಮಿಳುನಾಡು ಹಣಕಾಸು ಸಚಿವ ಪಿ. ತ್ಯಾಗರಾಜನ್, “ಇದು ಒಂದು ಅಂಶದ ಕಾರ್ಯಸೂಚಿ (ನಾಳಿನ ಕೌನ್ಸಿಲ್ ಸಭೆಗೆ). ಇದು ಅನೇಕ ರಾಜ್ಯಗಳು ಎತ್ತಿರುವ ಕಾರ್ಯಸೂಚಿ ಆಗಿದೆ. ಈ ಅಜೆಂಡಾ ಐಟಂನಲ್ಲಿ ಅದು ಗುಜರಾತ್​ನಿಂದ ಎತ್ತಲಾಗಿದೆ ಎಂದು ಹೇಳುತ್ತದೆ. ಆದರೆ ಹಲವು ರಾಜ್ಯಗಳು ಎತ್ತಿವೆ ಎಂದು ನನಗೆ ತಿಳಿದಿದೆ. ಅದನ್ನು ಏರಿಸಲಾಗಿದ್ದು, ಸ್ಥಗಿತಗೊಳಿಸಬೇಕು (ಜವಳಿ ಮೇಲಿನ ಜಿಎಸ್‌ಟಿ ದರವನ್ನು ಹೆಚ್ಚಿಸುವ ಕ್ರಮ),” ಎಂದಿದ್ದಾರೆ. ಶುಕ್ರವಾರದ ಜಿಎಸ್‌ಟಿ ಕೌನ್ಸಿಲ್ ಸಭೆಯು ಪಾದರಕ್ಷೆಗಳು ಮತ್ತು ಜವಳಿಗಳ ಮೇಲಿನ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ರಾಜಸ್ಥಾನದ ಶಿಕ್ಷಣ ಸಚಿವ ಸುಭಾಷ್ ಗರ್ಗ್ ಹೇಳಿದ್ದಾರೆ. ಮತ್ತು ವಿಶೇಷವಾಗಿ ಬಾಂಗ್ಲಾದೇಶದಂತಹ ದೇಶಗಳು ಅಂತಹ ವಲಯದಲ್ಲಿ ನಮಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿರುವಾಗ ಜವಳಿ ಮೇಲಿನ ದರವನ್ನು ಹಿಂಪಡೆಯಬೇಕು ಎಂದು ರಾಜಸ್ಥಾನ ನಂಬುತ್ತದೆ ಎಂದಿದ್ದಾರೆ.

ಸಮಿತಿಯು ತನ್ನ ಹಿಂದಿನ ಸಭೆಯಲ್ಲಿ ಸೆಪ್ಟೆಂಬರ್ 17ರಂದು ಪಾದರಕ್ಷೆ ಮತ್ತು ಜವಳಿ ವಲಯಗಳಲ್ಲಿನ ಇನ್ವರ್ಟೆಡ್ ಸುಂಕ ರಚನೆಯನ್ನು ಸರಿಪಡಿಸಲು ನಿರ್ಧರಿಸಿತ್ತು. ಜನವರಿ 1, 2022ರಿಂದ ಜಾರಿಗೆ ಬರುವಂತೆ, ಎಲ್ಲ ಪಾದರಕ್ಷೆಗಳು ಬೆಲೆಗಳನ್ನು ಲೆಕ್ಕಿಸದೆ ಶೇಕಡಾ 12ರಷ್ಟು ಜಿಎಸ್​ಟಿಯನ್ನು ವಿಧಿಸುತ್ತದೆ ಮತ್ತು ಸಿದ್ಧ ಉಡುಪುಗಳು ಸೇರಿದಂತೆ ಹತ್ತಿಯನ್ನು ಹೊರತುಪಡಿಸಿ ಎಲ್ಲ ಜವಳಿ ಉತ್ಪನ್ನಗಳಿಗೆ ಶೇ 12 ಜಿಎಸ್​ಟಿ ಇರುತ್ತದೆ. ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಪ್ರಸ್ತುತ ಸಲಹೆಗಾರ ಅಮಿತ್ ಮಿತ್ರಾ ಅವರು ಈ ಹಿಂದೆ ಕೇಂದ್ರವನ್ನು ಒತ್ತಾಯಿಸಿ, ಜವಳಿ ಮೇಲಿನ ಪ್ರಸ್ತಾವಿತ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಇದು ಸುಮಾರು 1 ಲಕ್ಷ ಜವಳಿ ಘಟಕಗಳು ಮತ್ತು 15 ಲಕ್ಷ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ತೆಲಂಗಾಣ ಕೈಗಾರಿಕೆ ಸಚಿವ ಕೆ.ಟಿ. ರಾಮರಾವ್ ಕೂಡ ಜಿಎಸ್‌ಟಿ ದರಗಳನ್ನು ಹೆಚ್ಚಿಸುವ ಉದ್ದೇಶಿತ ಯೋಜನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಉದ್ಯಮವು ಕೂಡ ತೆರಿಗೆಯನ್ನು ಶೇಕಡಾ 5ರಿಂದ ಹೆಚ್ಚಿಸುವುದನ್ನು ವಿರೋಧಿಸಿದೆ. ವಿಶೇಷವಾಗಿ ಅಸಂಘಟಿತ ವಲಯ ಮತ್ತು MSMEಗಳಿಗೆ ಹೆಚ್ಚಿನ ನಿಯಮಾವಳಿ ವೆಚ್ಚವನ್ನು ಉಲ್ಲೇಖಿಸಿ ಬಡವರ ಉಡುಪುಗಳನ್ನು ದುಬಾರಿಯನ್ನಾಗಿ ಮಾಡುತ್ತದೆ.

ಇದನ್ನೂ ಓದಿ: GST: ಪರೋಕ್ಷ ತೆರಿಗೆ ಪದ್ಧತಿ ಬಿಗಿ ಮಾಡುವ ಸಲುವಾಗಿ ಜನವರಿಯಿಂದ ಜಿಎಸ್​ಟಿಯಲ್ಲಿ ಹತ್ತಕ್ಕೂ ಹೆಚ್ಚು ಬದಲಾವಣೆ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ