AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Crime: ಅತ್ತೆಯನ್ನು ಹೊಡೆದು ಕೊಂದು, ಬಿದ್ದು ಮೃತಪಟ್ಟಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ ಸೊಸೆ

ಸೊಸೆಯೊಬ್ಬಳು 86 ವರ್ಷದ ಅತ್ತೆಯನ್ನು ಥಳಿಸಿ ಹತ್ಯೆ(Murder) ಮಾಡಿ ಬಳಿಕ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಬಳಿ ಕಟ್ಟು ಕಥೆ ಕಟ್ಟಿದ್ದಳು.

Delhi Crime: ಅತ್ತೆಯನ್ನು ಹೊಡೆದು ಕೊಂದು, ಬಿದ್ದು ಮೃತಪಟ್ಟಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ ಸೊಸೆ
ದೆಹಲಿ ಪೊಲೀಸ್Image Credit source: NDTV
ನಯನಾ ರಾಜೀವ್
|

Updated on: May 10, 2023 | 9:58 AM

Share

ಸೊಸೆಯೊಬ್ಬಳು 86 ವರ್ಷದ ಅತ್ತೆಯನ್ನು ಥಳಿಸಿ ಹತ್ಯೆ(Murder) ಮಾಡಿ ಬಳಿಕ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಬಳಿ ಕಟ್ಟು ಕಥೆ ಕಟ್ಟಿದ್ದಳು. ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದರು, ಆರಂಭದಲ್ಲಿ ಸೊಸೆ ಹಾಗೂ ಮಗನ ಮಾತು ಸತ್ಯ ಎಂದು ನಂಬಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸತ್ಯ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಥಳಿಸಲಾಗಿದ್ದು, ದೇಹದ ಮೇಲೆ 14 ಗಾಯಗಳಿದ್ದವು, ಇದೆಲ್ಲಾ ಅರಿತು ಬಳಿಕ ಸೊಸೆ ಶರ್ಮಿಷ್ಕಾಳನ್ನು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.

ಏಪ್ರಿಲ್ 28 ರಂದು ಸುರ್ಜಿತ್ ಸೋಮ್ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ದಕ್ಷಿಣ ಜಿಲ್ಲಾ ಡಿಸಿಪಿ ಚಂದನ್ ಚೌಧರಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿದರು. ಹಸಿ ಸೋಮ್ ಅವರ ಮುಖ ಮತ್ತು ತಲೆಯ ಮೇಲೆ ಹಲವಾರು ಗಾಯಗಳಾಗಿವೆ. ಪೊಲೀಸರು ಸ್ಥಳಕ್ಕೆ ಕ್ರೈಂ ತಂಡವನ್ನು ಕರೆಸಿದರು. ಸುರ್ಜಿತ್ ಮತ್ತು ಶರ್ಮಿಷ್ಠಾ ದಂಪತಿಯ 16 ವರ್ಷದ ಮಗಳನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ.

ಸುರ್ಜಿತ್ ತನ್ನ ಫ್ಲಾಟ್ ಚಿಕ್ಕದಾಗಿದೆ, ಆದ್ದರಿಂದ ತನ್ನ ಫ್ಲಾಟ್ ಬಳಿ ತನ್ನ ತಾಯಿಗೆ ಸಣ್ಣ ಫ್ಲಾಟ್ ಅನ್ನು ಬಾಡಿಗೆಗೆ ನೀಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ತಾಯಿಗೆ ಸಂಧಿವಾತವಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮತ್ತೆ ವಿಚಾರಣೆ ಆರಂಭಿಸಿದಾಗ, ಸುರ್ಜಿತ್ ಅವರ ಮಗಳು ತನ್ನ ತಾಯಿ ಮತ್ತು ಅಜ್ಜಿಯ ನಡುವೆ ಉತ್ತಮ ಸಂಬಂಧವಿಲ್ಲ ಎಂದು ಹೇಳಿದ್ದಾಳೆ. ಅಮ್ಮನಿಗೆ ಅಜ್ಜಿ ಇಷ್ಟವಾಗುತ್ತಿರಲಿಲ್ಲ ಎಂದಿದ್ದಾಳೆ.

ಮತ್ತಷ್ಟು ಓದಿ: Odisha Crime: ಅನ್ನ ಮಾಡಿಲ್ಲವೆನ್ನುವ ಕೋಪದಲ್ಲಿ ಪತ್ನಿಯನ್ನೇ ಹತ್ಯೆ ಮಾಡಿದ ಪತಿ

ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಆ ದಿನ ಮನೆಯಲ್ಲಿ ಒಬ್ಬಳೇ ಇದ್ದೆ ಎಂದು ಹೇಳಿದಳು. ಅತ್ತೆಯ ಫ್ಲಾಟ್‌ಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಕೀ ಶರ್ಮಿಷ್ಠಾಳ ಮನೆಯಲ್ಲಿತ್ತು. ಶರ್ಮಿಷ್ಠಾ ಏಪ್ರಿಲ್ 28 ರಂದು ಬೆಳಿಗ್ಗೆ 10:30 ಕ್ಕೆ ತನ್ನ ಅತ್ತೆಯ ಫ್ಲಾಟ್‌ಗೆ ಪ್ರವೇಶಿಸಿದಳು.

ಆ ಸಮಯದಲ್ಲಿ ಅತ್ತೆ ಅಡುಗೆ ಮನೆಯಲ್ಲಿದ್ದರು, ಅವರ ಕೈಯಲ್ಲಿ ಕುಕ್ಕರ್/ಫ್ರೈಪಾನ್ ಇತ್ತು. ಶರ್ಮಿಷ್ಠಾ ತನ್ನ ಅತ್ತೆಯನ್ನು ಹಿಂಬಾಲಿಸಿಕೊಂಡು ಅಡುಗೆ ಕೋಣೆಗೆ ಹೋದಳು ಮತ್ತು ಸಿಸಿಟಿವಿ ಕ್ಯಾಮೆರಾ ವ್ಯಾಪ್ತಿಯಿಂದ ಹೊರಗಿರುವಾಗ, ಅವಳು ತನ್ನ ಅತ್ತೆಯನ್ನು ಕುಕ್ಕರ್/ಫ್ರೈಪಾನ್‌ನಿಂದ ಹಲ್ಲೆ ನಡೆಸಿದ್ದಾಳೆ. ಕೊನೆಯ ಅದನ್ನು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿದ್ದಾಳೆ.

ಪೊಲೀಸರು ಸುರ್ಜಿತ್‌ನನ್ನು ವಿಚಾರಣೆಗೊಳಪಡಿಸಿದಾಗ, ಈ ಘಟನೆಯ ನಂತರ ತಾನು ಸಿಸಿಟಿವಿ ಕ್ಯಾಮೆರಾದ ಮೆಮೊರಿ ಕಾರ್ಡ್ ಅನ್ನು ತೆಗೆದಿದ್ದೇನೆ ಎಂದು ಸುರ್ಜಿತ್ ಹೇಳಿದ್ದಾನೆ. ಪೊಲೀಸರು ಮೆಮೊರಿ ಕಾರ್ಡ್ ವಶಪಡಿಸಿಕೊಂಡಿದ್ದಾರೆ. ವಯಸ್ಸಾದ ಮಹಿಳೆಯ ಮೇಲೆ ಶರ್ಮಿಷ್ಠಾ ಮಾಡಿದ ಹಲ್ಲೆ ಸಿಸಿಟಿವಿ ಕ್ಯಾಮೆರಾದಲ್ಲಿ ಎಲ್ಲಿಯೂ ಕಂಡುಬರಲಿಲ್ಲ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ